ಭಾರತ ರತ್ನ ಡಾ. ಭೀಮಸೇನ ಜೋಶಿಯವರ ಕುರಿತಾದ ಈ ಪುಸ್ತಕವನ್ನು ಬರೆದವರು ಶಿರೀಷ್ ಜೋಶಿ ಇವರು. ಭೀಮಸೇನ ಜೋಶಿಯವರ ಬದುಕು-ಸಂಗೀತ ಸಾಧನೆಯ ಎತ್ತರಗಳನ್ನು ಪರಿಚಯಿಸುವ ಕೃತಿ ಇದು. ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳದವರಾದ ಭೀಮಸೇನ ಜೋಶಿ ಅವರು ಬಾಲ್ಯದಿಂದಲೇ ಸಂಗೀತದ ಹುಚ್ಚು ಹಚ್ಚಿಕೊಂಡು, ಉತ್ತರ ಭಾರತದ ವಿವಿದೆಡೆಯೂ ಸಂಚರಿಸಿ, ಗುರುಗಳನ್ನು ಹುಡುಕಾಡಿ ಸಂಗೀತ ಕಲಿತರು. ನಂತರ ಅವರು ಮುಂಬೈನಲ್ಲಿ ಖಾಯಂ ಆಗಿ ನೆಲೆಸಿ, ಭಾರತದಾದ್ಯಂತ ಸಂಗೀತ ಕ್ಷೇತ್ರವನ್ನು ಆಸಕ್ತರಿಗೆ ಆತ್ಮೀಯವಾಗಿಸಿದ್ದರು. ಇಂದಿಗೂ ಅವರ ಗಾಯನ ಕೇಳುವ ಆಸಕ್ತರು ಅಸಂಖ್ಯಾತ. ಇಂತಹ ಹಲವಾರು ಸಂಗತಿಗಳನ್ನು ಈ ಕೃತಿ ತಿಳಿಸುತ್ತದೆ.
ಲೇಖಕರಾದ ಪಂ. ಗಣಪತಿ ಭಟ್, ಹಾಸಣಗಿಯವರು ತಮ್ಮ ಮುನ್ನುಡಿಯಲ್ಲಿ “…