‘ಪನ್ನೀರು' ಹನಿಗವಿತೆಗಳ ಪುಸ್ತಕವನ್ನು ರಚಿಸಿದವರು ಶಿಕ್ಷಕರಾದ ಪರಮೇಶ್ವರಪ್ಪ ಕುದರಿಯವರು. ಇವರ ಬಗ್ಗೆ ಬೆಂಗಳೂರಿನ ಸಾಹಿತಿ ವೈ.ಬಿ.ಎಚ್. ಜಯದೇವ್ ಅವರು ತಮ್ಮ ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ- “ ಕನ್ನಡ ಸಾರಸ್ವತ ಲೋಕದಲ್ಲಿ ಸುಮಾರು ಮೂರು ದಶಕಗಳಿಂದಲೂ ಕವಿಯಾಗಿ, ಸಾಹಿತಿಯಾಗಿ ತಮ್ಮನ್ನು ಗುರುತಿಸಿಕೊಂಡಿರುವ ಶ್ರೀ ಪರಮೇಶ್ವರಪ್ಪ ಕುದರಿ ಅವರು ಹಳ್ಳಿಯ ಬಡನೆಂಟನಂತಹಾ ಸ್ನೇಹ ಜೀವಿ. ಕಲಾವಿದನಾಗಿ, ಹಾಡುಗಾರರಾಗಿ, ಉತ್ತಮ ಸಂಘಟಕರಾಗಿ, ಪ್ರಕಾಶಕರಾಗಿ ಹೀಗೆ ಬಹುಶ್ರುತ ವ್ಯಕ್ತ್ವಿತ್ವದ ಈ ಜೇನುಗಾರ ಮಿತ್ರ ವೃತ್ತಿಯಿಂದ ಸರ್ಕಾರಿ ಶಾಲೆಯ ಶಿಕ್ಷಕರು.
ಈಗಾಗಲೇ ಮಕ್ಕಳಿಗಾಗಿ ‘ಕೋತಿ ಮತ್ತು ಫೋನು', ‘ಬಗೆ ಬಗೆ ಆಟ', 'ಕೈಲಾಸದಲ್ಲಿ ಕ್ರಿಕೆಟ್' ಮಕ್ಕಳ ಪದ್ಯ ಸಂಕಲನ…