ಪುಸ್ತಕ ಸಂಪದ

  • ಭಾರತ ರತ್ನ ಡಾ. ಭೀಮಸೇನ ಜೋಶಿಯವರ ಕುರಿತಾದ ಈ ಪುಸ್ತಕವನ್ನು ಬರೆದವರು ಶಿರೀಷ್ ಜೋಶಿ ಇವರು. ಭೀಮಸೇನ ಜೋಶಿಯವರ ಬದುಕು-ಸಂಗೀತ ಸಾಧನೆಯ ಎತ್ತರಗಳನ್ನು ಪರಿಚಯಿಸುವ ಕೃತಿ ಇದು. ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳದವರಾದ ಭೀಮಸೇನ ಜೋಶಿ ಅವರು ಬಾಲ್ಯದಿಂದಲೇ ಸಂಗೀತದ ಹುಚ್ಚು ಹಚ್ಚಿಕೊಂಡು, ಉತ್ತರ ಭಾರತದ ವಿವಿದೆಡೆಯೂ ಸಂಚರಿಸಿ, ಗುರುಗಳನ್ನು ಹುಡುಕಾಡಿ ಸಂಗೀತ ಕಲಿತರು. ನಂತರ ಅವರು ಮುಂಬೈನಲ್ಲಿ ಖಾಯಂ ಆಗಿ ನೆಲೆಸಿ, ಭಾರತದಾದ್ಯಂತ ಸಂಗೀತ ಕ್ಷೇತ್ರವನ್ನು ಆಸಕ್ತರಿಗೆ ಆತ್ಮೀಯವಾಗಿಸಿದ್ದರು. ಇಂದಿಗೂ ಅವರ ಗಾಯನ ಕೇಳುವ ಆಸಕ್ತರು ಅಸಂಖ್ಯಾತ. ಇಂತಹ ಹಲವಾರು ಸಂಗತಿಗಳನ್ನು ಈ ಕೃತಿ ತಿಳಿಸುತ್ತದೆ.

    ಲೇಖಕರಾದ ಪಂ. ಗಣಪತಿ ಭಟ್, ಹಾಸಣಗಿಯವರು ತಮ್ಮ ಮುನ್ನುಡಿಯಲ್ಲಿ “…

  • “ಒಬ್ಬ ತನ್ನ ಅಂಗಡಿಯಲ್ಲಿ ಕತ್ತಿಗಳನ್ನೂ ಮಾರುತ್ತಿದ್ದ, ಗುರಾಣಿಗಳನ್ನೂ ಮಾರುತ್ತಿದ್ದ. ‘ನನ್ನ ಗುರಾಣಿಗಳು ಎಷ್ಟು ಗಟ್ಟಿಯಾಗಿವೆ ಎಂದರೆ, ಇವುಗಳನ್ನು ಯಾವ ಕತ್ತಿಯಿಂದಲೂ ಭೇದಿಸಲು ಸಾಧ್ಯವಿಲ್ಲ’ ಎನ್ನುತ್ತಿದ್ದ, ಮತ್ತೆ ಅವನೇ ‘ನನ್ನ ಕತ್ತಿಗಳು ಎಷ್ಟು ಹರಿತವಾಗಿವೆ ಎಂದರೆ, ಇವು ಎಂಥ ಗುರಾಣಿಯನ್ನಾದರೂ ಭೇದಿಸಬಲ್ಲುವು' ಎನ್ನುತ್ತಿದ್ದ.

    ಒಂದು ದಿವಸ ಯಾವನೋ ಒಬ್ಬ ‘ನಿನ್ನ ಗುರಾಣಿಯನ್ನು ನಿನ್ನ ಕತ್ತಿಯಿಂದಲೇ ಹೊಡೆದರೆ?’ ಎಂದು ಕೇಳಿಬಿಟ್ಟ.

    ಅಂಗಡಿಯವನು ಅದಕ್ಕೆ ಏನು ಉತ್ತರ ಹೇಳಿಯಾನು? ಪೆದ್ದು ಪೆದ್ದಾಗಿ ಕಣ್ಣು ಕಣ್ಣು ಬಿಟ್ಟ.” 

    ‘ಅತಿ ಜಾಣ' ಎಂಬ ಹೆಸರಿನ ಈ ಕಥೆ ಚೀನಾ ದೇಶದ್ದು.…

  • ‘ಕುಟಿಲೆಯ ಕುತಂತ್ರ' ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು. ಅಕ್ಷರ ಸೌಲಭ್ಯವಂಚಿತ ಕುಟುಂಬದಿಂದ ಬಂದ ಇವರ ಬರಹಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಟಿತ ಗೌರವ ಪ್ರಶಸ್ತಿ ದೊರೆತಿದೆ. ಇಷ್ಟೊಂದು ಪುಸ್ತಕಗಳನ್ನು ಬರೆದರೂ ಬಡತನದಿಂದಲೇ ಬದುಕಿ ಬಾಳಿದವರು. 

    ೬೦-೭೦ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಯನ್ನು ಅದೂ ಪತ್ತೇದಾರಿ ಸಾಹಿತ್ಯವನ್ನು ಬರೆದು ಜನರಿಗೆ ಓದುವುದರ ಚಟವನ್ನು ಹಿಡಿಸಿದವರು ನರಸಿಂಹಯ್ಯನವರು…

  • ಈ ಪುಸ್ತಕವೊಂದು ಕರ್ನಾಟಕದ ಪಾಪಿಗಳ ಲೋಕದ ಡೈಜೆಸ್ಟ್ ಎನ್ನಬಹುದಾಗಿದೆ. ಇದರಲ್ಲಿ ಪ್ರಮುಖವಾದ ಮೂರು ಸರಣಿ ಹಂತಕರ ಕೇಸ್ ವಿವರಗಳನ್ನು ಸವಿಸ್ತಾರವಾಗಿ ನೀಡಲಾಗಿದೆ. ದಕ್ಷಿಣ ಭಾರತದಲ್ಲೇ ಕುಖ್ಯಾತವಾಗಿದ್ದ ದಂಡುಪಾಳ್ಯ ಕ್ರಿಮಿನಲ್ ಗ್ಯಾಂಗ್, ಸೈನೈಡ್ ಕಿಲ್ಲರ್ ಮಲ್ಲಿಕಾ, ಸನೈಡ್ ಕಿಲ್ಲರ್ ಹೆಣ್ಣು ಬಾಕ ಮೋಹನ್ ಇವರ ಬಗ್ಗೆ ಸವಿವರವಾದ ಮಾಹಿತಿ ನೀಡಲಾಗಿದೆ. 

    ಕುಖ್ಯಾತ ದಂಡುಪಾಳ್ಯದ ಬಗ್ಗೆ ನಿಮಗೆ ಈಗಾಗಲೇ ಅದೇ ಹೆಸರಿನ ಚಲನ ಚಿತ್ರ ಬಿಡುಗಡೆಯಾಗಿರುವುದರಿಂದ ಬಹಳಷ್ಟು ವಿಷಯ ತಿಳಿದಿದ್ದರೂ ರಾಜ್ಯದಾದ್ಯಂತ ೬೫ ಕಡೆಗಳಲ್ಲಿ ಅವರ ತಂಡದ ಮೇಲೆ ದಾಖಲಾಗಿರುವ ಕೇಸ್ ಗಳ ಸಂಪೂರ್ಣ ವಿವರ ಇಲ್ಲಿ ನೀಡಲಾಗಿದೆ. ದಂಡು ಪಾಳ್ಯದ ಹಂತಕರ ಹಿನ್ನಲೆ ಬಗ್ಗೆ ಸ್ವಲ್ಪ ವಿವರಗಳನ್ನೂ…

  • ಮಹಿಳೆಯ ಬದುಕಿನ ವಿವಿಧ ಮುಖಗಳನ್ನು ಹಾಗೂ ಭಾವಲೋಕದ ವಿವಿಧ ಬಣ್ಣಗಳನ್ನು ಚಿತ್ರಿಸುವ ಹದಿಮೂರು ಕತೆಗಳು ಸುಮಂಗಲಾ ಅವರ ಈ ಕಥಾ ಸಂಕಲನದಲ್ಲಿವೆ. “ಮುತ್ತಿನ ಬುಗುಡಿ” ಎಂಬ ಮೊದಲ ಕತೆ, ತನ್ನ ಕೊನೆಯ ದಿನಗಳಲ್ಲಿ ಕ್ಯಾನ್ಸರಿನಿಂದ ಜರ್ಝರಿತಳಾಗುವ ಅಜ್ಜಿಯೊಬ್ಬಳದು. ತನ್ನ ಅಂತ್ಯ ಸಮೀಪಿಸುತ್ತಿದ್ದಂತೆ, ಬದುಕಿನುದ್ದಕ್ಕೂ ತನ್ನ ಕಿವಿಯಲ್ಲಿದ್ದ ಮುತ್ತಿನ ಬುಗುಡಿಯನ್ನು ಅಚಾನಕ್ಕಾಗಿ ಎರಡನೆಯ ಮಗನ ಸ್ನೇಹಿತೆಗೆ ದಾನ ಮಾಡ್ತಾಳೆ. ಮೊದಲ ಸೊಸೆಗೆ ಅಥವಾ ಎರಡನೇ ಸೊಸೆಗೆ ಕೊಡಬಹುದಾಗಿತ್ತು. ಈ ಕ್ರಿಯೆಯ ಜಿಜ್ನಾಸೆ ಮತ್ತು ಆಕೆಯ ಮರಣಾ ನಂತರದ ಘಟನಾವಳಿಗಳು ಕತೆಯ ಹೂರಣ.

    ಎರಡನೇ ಕತೆ ಸಂಕಲನದ ಶೀರ್ಷಿಕೆ “ಕಾಲಿಟ್ಟಲ್ಲಿ ಕಾಲುದಾರಿ”. ಕೆಲವು ದಿನಗಳ ರಜೆಯಲ್ಲಿ ದೂರದೂರಿನಿಂದ ತನ್ನೂರಿಗೆ ಮರಳಿದ ಯುವತಿ ತೆರೆದಿಡುವ ಕಥನ. ಅಲ್ಲಿ, ಅಪ್ಪ ಮತ್ತು…

  • ಮಕ್ಕಳಿಗಾಗಿ ‘ಬಾಲ ಸಾಹಿತ್ಯ ಮಾಲೆ' ಯ ಮುಖಾಂತರ ಹಲವಾರು ಅಪರೂಪದ ಸಾಹಿತ್ಯವನ್ನು ಉಣಬಡಿಸಿದ್ದಾರೆ ಸಪ್ನ ಬುಕ್ ಹೌಸ್ ಇವರು. ಆಂಗ್ಲ ಭಾಷೆಯಲ್ಲಿ ಪ್ರಕಟವಾದ ‘ಶೆರ್ಲಾಕ್ ಹೋಮ್ಸ್' ಎಂಬ ಕಾಲ್ಪನಿಕ ಪತ್ತೇದಾರಿಯ ರೋಚಕ ಕಥೆಗಳನ್ನು ಮಕ್ಕಳಿಗಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ನಳಿನಿ ರಾಮು ಅವರು. ಸರ್ ಆರ್ಥರ್ ಕಾನನ್ ಡಾಯಲ್ ಇವರ ಕಾಲ್ಪನಿಕ ಪತ್ತೇದಾರ ಶೆರ್ಲಾಕ್ ಹೋಮ್ಸ್. ಹಲವಾರು ಕಥೆಗಳನ್ನು ಬರೆದು ಪತ್ತೇದಾರಿ ಸಾಹಿತ್ಯವನ್ನು ಶ್ರೀಮಂತವಾಗಿಸಿದವರು ಕೆನಾನ್ ಡಾಯಲ್ ಇವರು. ಕನ್ನಡದಲ್ಲಿ ಈ ಕೆಲಸ ಮಾಡಿದವರು ಪತ್ತೇದಾರ ಪಿತಾಮಹ ಎಂದೇ ಖ್ಯಾತರಾದ ಎನ್ .ನರಸಿಂಹಯ್ಯ. 

    ಬಾಲ ಸಾಹಿತ್ಯ ಮಾಲೆಯಾದುದರಿಂದ ಬಹುಷಃ ಯಾವುದೇ ಮುನ್ನುಡಿಯನ್ನು ಪುಸ್ತಕದಲ್ಲಿ ಬರೆಯಲಾಗಿಲ್ಲ.…

  • ಆಂಗ್ಲ ಭಾಷೆಯ ಖ್ಯಾತ ಬರಹಗಾರರಲ್ಲಿ ಖುಷ್ವಂತ್ ಸಿಂಗ್ ಒಬ್ಬರು. ಇವರ ಹಲವಾರು ಕೃತಿಗಳು ಕನ್ನಡಕ್ಕೆ ಅನುವಾದಗೊಂಡು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಇವರ ಖ್ಯಾತ ಕಾದಂಬರಿ ‘ಟ್ರೈನ್ ಟು ಪಾಕಿಸ್ತಾನ್'. ಇದನ್ನು ಡಾ. ಎಂ.ಬಿ.ರಾಮಮೂರ್ತಿ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಪುಸ್ತಕಕ್ಕೆ ಪಿ. ಲಂಕೇಶ್ ಅವರು ಬೆನ್ನುಡಿ ಬರೆದಿದ್ದಾರೆ. ಅವರು ಹೇಳುವಂತೆ “ಈ ಸರ್ದಾರ್ಜಿ (ಖುಷ್ವಂತ್ ಸಿಂಗ್) ಬಗ್ಗೆ ವಿಶೇಷವೇನೆಂದರೆ, ಜೀವನವನ್ನು ಬಹುವಾಗಿ ಪ್ರೀತಿಸುವ ಈತ ಎಲ್ಲ ಜಾತಿಯ ಜನರನ್ನು ಪ್ರೀತಿಸುತ್ತಾನೆ. ಎಲ್ಲ ಜಾತಿಯ ಜನರ ದೌರ್ಬಲ್ಯ, ಪ್ರೀತಿ, ದಾಕ್ಷಿಣ್ಯ ಎಲ್ಲವನ್ನೂ ಬಲ್ಲ. ನಿರೀಶ್ವರವಾದಿಯಾದ್ದರಿಂದ ಈತನಿಗೆ ಧರ್ಮದ ಮಿತಿ ಗೊತ್ತು; ಜನಸಾಮಾನ್ಯರಿಗೆ ಧರ್ಮ ಎಷ್ಟು ಮುಖ್ಯ ಎಂಬುದೂ ಗೊತ್ತು. ಹೀಗಾಗಿ…

  • “ಯಾವುದೇ ಗಿಮಿಕ್ ಇಲ್ಲದೆ, ಗದ್ದಲವಿಲ್ಲದೆ, ಆಟಾಟೋಪವಿಲ್ಲದೆ, ಅಡಕೆ ತೋಟಗಳ ತಗ್ಗುಗಳಲ್ಲಿ ಸಣ್ಣ ಸಪ್ಪಳ ಮಾಡುತ್ತಾ ಹರಿಯುವ ಚಿಲುಮೆ ನೀನಿನ ಹಾಗೆ ಕತೆಗಳಿವೆ. ಓದಿ ಮುಗಿಸಿದಾಗ ಒಂದು ಧನ್ಯತೆ, ಒಂದು ಹೂನಗೆ; ಒಂದು ಭಾವ ಸ್ಪಂದನ...ಕತೆ ನೆನಪಾಗಿ ಉಳಿಯುತ್ತದೆ" ಎಂದು ‘ನವಿಲೆಸರ’ ಪುಸ್ತಕದ ಬೆನ್ನುಡಿಯಲ್ಲಿ ಅಭಿಪ್ರಾಯ ಪಡುತ್ತಾರೆ ಖ್ಯಾತ ಕಥೆಗಾರ ನಾ. ಡಿಸೋಜ ಇವರು. ಈ ಮಾತುಗಳು ಇವರದ್ದು ಮಾತ್ರವಲ್ಲ, ಪುಸ್ತಕ ಓದಿದ ಬಳಿಕ ನಮ್ಮೆಲ್ಲರದ್ದು ಎಂದು ದನಿಗೂಡಿಸಿದ್ದಾರೆ ಸಾಹಿತಿಗಳಾದ ಗಿರಡ್ಡಿ ಗೋವಿಂದರಾಜು, ಕೇಶವ ಮಳಗಿ ಹಾಗೂ ನಾ. ಮೊಗಸಾಲೆ ಇವರುಗಳು. ನೀವು ಓದಿದ ಬಳಿಕ ನಿಮ್ಮ ಅಭಿಪ್ರಾಯವೂ ಇದಕ್ಕಿಂತ ಭಿನ್ನವಾಗಿಯೇನೂ ಇರಲಿಕ್ಕಿಲ್ಲ ಎನ್ನುವುದು ನನ್ನ ಅಭಿಪ್ರಾಯ.

    ಅಲಕ…

  • ಕನ್ನಡನಾಡಿನಲ್ಲಿ ಮನೆಮಾತಾಗಿರುವ ಕವಿ ಎಚ್. ಎಸ್. ವೆಂಕಟೇಶಮೂರ್ತಿ ಅವರ ಕವನ ಸಂಕಲನ ಇದು. ಮಡದಿ ತೀರಿಕೊಂಡ ನಂತರ, ಆ ಅಗಲಿಕೆಯ ನೋವಿನಲ್ಲಿ ೬ ಜನವರಿ ೨೦೦೭ರಿಂದ ೨೬ ಎಪ್ರಿಲ್ ೨೦೦೮ರ ಅವಧಿಯಲ್ಲಿ ಅವರು ಬರೆದ ೨೪ ಭಾಗಗಳ “ಉತ್ತರಾಯಣ" ಮತ್ತು ಇತರ ಹಲವು ಚಿಂತನೆಗೆ ಹಚ್ಚುವ ಕವನಗಳು ಇದರಲ್ಲಿವೆ.

    ಈ ಹಿನ್ನೆಲೆಯಲ್ಲಿ, ಕವನ ಸಂಕಲನದ ಆರಂಭದಲ್ಲಿ ಕವಿ ಬರೆದುಕೊಂಡಿರುವ ಮಾತುಗಳ ಆಯ್ದ ಭಾಗ ಹೀಗಿದೆ: “ಬದುಕಿನುದ್ದಕ್ಕೂ ಅಭೇದ್ಯ ಎನ್ನುವಂತೆ ಅಂಟಿಕೊಂಡಿದ್ದ ಆಪ್ತಜೀವ ಶಾಶ್ವತವಾಗಿ ಅಗಲಿಬಿಟ್ಟಾಗ ಶೂನ್ಯಕ್ಕೆ ಬೇರೆಯದೇ ಅರ್ಥ ಹೊಳೆದಂತಾಯಿತು. ಲಕ್ಷೋಪಲಕ್ಷ ನಕ್ಷತ್ರಗಳಿಗೆ ಆಸರೆ ನೀಡಿರುವ ಆಕಾಶವನ್ನು ಶೂನ್ಯವೆಂದು ಕರೆಯಲಾದೀತೆ? ಬೆಳಗ್ಗೆ ಖಾಲಿ ನೀಲಿಯಾಗಿದ್ದ ಗಗನ, ರಾತ್ರಿ ಎಣಿಸಲಾಗದಷ್ಟು ನಕ್ಷತ್ರಗಳನ್ನು ಮಿನುಗಿಸುತ್ತಾ ಶೂನ್ಯದ…

  • ಸ್ವಾಮಿ ವಿವೇಕಾನಂದರ ಬಗ್ಗೆ ಸಾವಿರಾರು ಪುಸ್ತಕಗಳು ಹೊರಬಂದಿವೆ. ಅವರ ಭಾಷಣಗಳ ಬಗ್ಗೆ, ಜೀವನದ ಬಗ್ಗೆ, ಚಿಂತನೆಗಳ ಬಗ್ಗೆ ಹಲವಾರು ಮಂದಿ ಪ್ರಖ್ಯಾತ ಲೇಖಕರು ತಮ್ಮ ಕೃತಿಗಳನ್ನು ರಚನೆ ಮಾಡಿದ್ದಾರೆ. ಅಂತಹ ಒಂದು ಕೃತಿ ಡಾ. ಪ್ರಭು ಶಂಕರ ಇವರು ಬರೆದ ‘ಸ್ವಾಮಿ ವಿವೇಕಾನಂದ’.

    ಲೇಖಕರು ತಮ್ಮ ಮುನ್ನುಡಿ ‘ಪ್ರವೇಶ' ದಲ್ಲಿ “ ಇದು ಒಂದು ದೊಡ್ಡ ಜೀವದ ಕತೆ. ಭರತಖಂಡಕ್ಕಾಗಿ ಎದೆಯ ರಕ್ತವನ್ನು ಬಸಿದ ಉಜ್ವಲ ದೇಶಭಕ್ತನ ಕತೆ. ಸನಾತನ ಧರ್ಮವನ್ನು ಸಿಂಹ ಗರ್ಜನೆಯಿಂದ ದೇಶ ವಿದೇಶಗಳಲ್ಲಿ ಸಾರಿದ ವೇದಾಂತ ಕೇಸರಿಯ ಕತೆ. ಆತ್ಮಾನುಭವದ ಆನಂದದಲ್ಲಿ ಹಗಲಿರುಳೂ ತನ್ಮಯರಾಗಿದ್ದೂ ಜಗತ್ತಿಗೆ ಆ ಅನುಭವವನ್ನು ಸೂರೆ ಚೆಲ್ಲಿದ ಮಹಾಯೋಗಿಯ ಕತೆ.