ಹೆಸರೇ ಹೇಳುವಂತೆ ಇದೊಂದು ಅಡುಗೆ ಪುಸ್ತಕ. ಚಪಾತಿಗೆ ಸೂಕ್ತವೆನಿಸುವ ೧೦೦ ಕರಿಗಳನ್ನು ಅಥವಾ ಮೇಲೋಗರಗಳನ್ನು ಲೇಖಕಿಯವರು ಈ ಪುಸ್ತಕದಲ್ಲಿ ನೀಡಿದ್ದಾರೆ. ದಿನಕ್ಕೊಂದು ಕರಿಯನ್ನು ಮಾಡಿದರೂ ನೂರು ದಿನಕ್ಕೆ ತೊಂದರೆಯಿಲ್ಲ.
ಕರ್ನಾಟಕ ಸರಕಾರದಲ್ಲಿ ಸಚಿವೆಯಾಗಿದ್ದ ರಾಣಿ ಸತೀಶ್ ಅವರು ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ “ ಹದವರಿತು ಅಡುಗೆ ಮಾಡುವುದು ಒಂದು ಕಲೆ. ಅಡುಗೆಯಲ್ಲಿ ವೈವಿಧ್ಯತೆಯನ್ನು ಕಾಣಿಸುವ ಕಲಾವಂತಿಕೆಯ ಜೊತೆಗೆ ಬದುಕಿಗೆ ಶಕ್ತಿ ಕೊಡುವ, ಆರೋಗ್ಯವನ್ನು ಕಾಪಾಡಿಕೊಳ್ಳುವ ಯುಕ್ತಿಯನ್ನು ಕಲಿತರೆ ‘ಊಟ ಬಲ್ಲವನಿಗೆ ರೋಗವಿಲ್ಲ' ಎನ್ನುವ ಉಕ್ತಿಯ ಶಕ್ತಿಯನ್ನು ನಮ್ಮದಾಗಿಸಿಕೊಳ್ಳಬಹುದು.
…