ಪುಸ್ತಕ ಸಂಪದ

  • ಹುಣಸೆ ಮರದ ದೆವ್ವ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು. ಅಕ್ಷರ ಸೌಲಭ್ಯವಂಚಿತ ಕುಟುಂಬದಿಂದ ಬಂದ ಇವರ ಬರಹಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಟಿತ ಗೌರವ ಪ್ರಶಸ್ತಿ ದೊರೆತಿದೆ. ಇಷ್ಟೊಂದು ಪುಸ್ತಕಗಳನ್ನು ಬರೆದರೂ ಬಡತನದಿಂದಲೇ ಬದುಕಿ ಬಾಳಿದವರು. 

    ೬೦-೭೦ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಯನ್ನು ಅದೂ ಪತ್ತೇದಾರಿ ಸಾಹಿತ್ಯವನ್ನು ಬರೆದು ಜನರಿಗೆ ಓದುವುದರ ಚಟವನ್ನು ಹಿಡಿಸಿದವರು ನರಸಿಂಹಯ್ಯನವರು. ಇವರು ಹಲವಾರು ಕಾಲ್ಪನಿಕ ಪತ್ತೇದಾರರಿಗೆ ಜನ್ಮದಾತರು.…

  • ಪತ್ನಿ, ಮಕ್ಕಳು ಸಂಪಾದಿಸಿದ ಸಂಸ್ಮರಣಾ ಗ್ರಂಥ "ಬಾಲಕೃಷ್ಣ ಆಚಾರ್ಯರ ಸ್ಮೃತಿ ಸೌರಭ"

    "ಬಾಲಕೃಷ್ಣ ಆಚಾರ್ಯರ ಸ್ಮೃತಿ ಸೌರಭ", ಆಚಾರ್ಯರ ಪತ್ನಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕಿ ವಾಣಿ ಬಿ. ಆಚಾರ್ಯ ಹಾಗೂ ಇವರ ಮಕ್ಕಳಾದ ಗುರುಚರಣ ಆಚಾರ್ಯ, ಶ್ರೀಮತಿ ಪಲ್ಲವಿ ಪಿ. ಭಟ್ ಇವರು ಸಂಪಾದಿಸಿ ತಮ್ಮದೇ ಆದ ಉಡುಪಿಯ 'ಸೌರಭ ಪ್ರಕಾಶನ, ಕೊರಂಗ್ರಪಾಡಿ, ಉಡುಪಿ- 576118' ಪ್ರಕಾಶನ ಸಂಸ್ಥೆಯ ಮೂಲಕ ಪ್ರಕಟಿಸಿದ ಹಲವು ಸಿದ್ಧಿಗಳ ಸಾಧಕರಾದ ಕೆ. ಬಾಲಕೃಷ್ಣ ಆಚಾರ್ಯರ ಬದುಕು, ಬರಹಗಳು ಮತ್ತು ಸಾಧನೆಗಳ ಮೇಲೆ ಬೆಳಕು ಚೆಲ್ಲುವ ಕೃತಿ. 2019ರಲ್ಲಿ ಪ್ರಕಟವಾದ, 26 + 342 ಪುಟಗಳ ಇದರ ಬೆಲೆ 200 ರೂಪಾಯಿ.

    ಅರುವತ್ತರಷ್ಟು ಅಮೂಲ್ಯ ಛಾಯಾಚಿತ್ರಗಳಿರುವ ಕೃತಿಯ ಆರಂಭದಲ್ಲಿ ವಾಣಿ ಬಿ. ಆಚಾರ್ಯರ 'ನಿವೇದನೆ' ಮತ್ತು ಕೆಲವು…

  • ಬಿಟ್ ಕಾಯಿನ್ ಮತ್ತು ಬ್ಲಾಕ್ ಚೈನ್ ತಂತ್ರಜ್ಞಾನದ ಬಗ್ಗೆ ಈಗೀಗ ಬಹಳಷ್ಟು ಮಾತುಗಳು ಕೇಳಿ ಬರುತ್ತಿವೆ. ಬಿಟ್ ಕಾಯಿನ್ಸ್ ಬಗ್ಗೆ ಜನ ಸಾಮಾನ್ಯರಿಗೆ ಏನೇನೂ ತಿಳಿದಿಲ್ಲ. ಸುಮ್ಮನೇ ವಿವರಗಳನ್ನು ಕೊಡುತ್ತಾ ಹೋದರೆ ಅರ್ಥವೂ ಆಗಲಾರದು. ಅದಕ್ಕಾಗಿಯೇ ವಿಠಲ್ ಶೆಣೈ ಅವರು ಕಾದಂಬರಿ ರೂಪದಲ್ಲಿ ‘ನಿಗೂಢ ನಾಣ್ಯ' ಎಂಬ ಪುಸ್ತಕವನ್ನು ಬರೆದು ಓದುಗ ಪ್ರಭುವಿನ ಮಡಿಲಿಗೆ ಹಾಕಿದ್ದಾರೆ. ‘ನಿಗೂಢ ನಾಣ್ಯ' ಬಹಳ ಹಿಂದೆಯೇ ‘ಮೈಲ್ಯಾಂಗ್ ಬುಕ್ಸ್’ ಎಂಬ ಇ-ಬುಕ್ಸ್ ಮತ್ತು ಆಡಿಯೋ ಬುಕ್ಸ್ ಮಾರುವ ಸಂಸ್ಥೆಯ ಮೂಲಕ ಪ್ರಕಟವಾಗಿತ್ತು. ಬಹಳಷ್ಟು ಜನಪ್ರಿಯವೂ ಆಗಿತ್ತು. ತಂತ್ರಜ್ಞಾನದ ಅರಿವು ಇದ್ದವರು ಮಾತ್ರವೇ ಇ ಪುಸ್ತಕವನ್ನು ಓದಲು ಇಷ್ಟ ಪಡುತ್ತಾರೆ, ಕಂಪ್ಯೂಟರ್ ಅಥವಾ ಮೊಬೈಲ್ ಪರದೆಯ ಮೇಲೆ ಪುಸ್ತಕವನ್ನು ಓದುವುದು ತ್ರಾಸದಾಯಕ ಎಂದು ಕೆಲವರಿಗೆ ಅನಿಸಿದ್ದಿದೆ…

  • ಅಲ್ಲಮಪ್ರಭು ಪೀಠ, ಕಾಂತಾವರ ಇವರು ಪ್ರಕಾಶಿಸಿರುವ ಕರಣ ಕಾರಣ ಸರಣಿಯ ೭ನೇ ಪುಸ್ತಕ ಇದು. ಅನುಭವದ ನಡೆ- ಅನುಭಾವದ ನುಡಿ ಸರಣಿಯ ೨೦೧೮ರ ಉಪನ್ಯಾಸಗಳು. ಈ ಪುಸ್ತಕವನ್ನು ಉಪನ್ಯಾಸಕರಾದ ಡಾ. ರಾಜಶೇಖರ ಜಮದಂಡಿಯವರು ಸಂಪಾದಿಸಿದ್ದಾರೆ. ಮೌಲ್ಯಯುತವಾದ ೧೦ ಲೇಖನಗಳು ಈ ಪುಸ್ತಕದಲ್ಲಿವೆ. ತಮ್ಮ ಸಂಪಾದಕೀಯದಲ್ಲಿ ಜಮದಂಡಿಯವರು ಅಲ್ಲಮಪ್ರಭುಗಳ ಬಗ್ಗೆ ಬಹಳಷ್ಟು ಮಾಹಿತಿ ನೀಡಿದ್ದಾರೆ. ಅವರು ಬರೆಯುತ್ತಾರೆ ‘ಅಲ್ಲಮ ಪ್ರಭು ವಿಶ್ವದ ಶ್ರೇಷ್ಟ ದಾರ್ಶನಿಕ ಮಹಾಜ್ಞಾನಿ. ಮಾನವನಾದಿಯಾಗಿ ಸಕಲ ಜೀವಿಗಳ ಕುಲೋದ್ಧಾರದ ಮಹಾಚಿಂತಕ. ಭಾವುಕವಲ್ಲದ ವೈಚಾರಿಕ ದೃಷ್ಟಿಯಲ್ಲಿ ಆಧ್ಯಾತ್ಮಿಕ ಸಾಧನೆಯಿಂದ ಲೋಕವನ್ನೇ ಬೆರಗುಗೊಳಿಸಿದ ಅಪ್ರತಿಮ ಅನುಭಾವಿ. ಸತ್ಯದ ಪೂರ್ಣ ಸ್ವರೂಪವನ್ನು ಅರಿಯಲು ಬಾಹ್ಯ ಅನುಭವಗಳಿಗಿಂತ ಅಂತರಂಗದ ಅರಿವಿಗೆ ಪ್ರಾಮುಖ್ಯತೆ ನೀಡಿದ…

  • *ಆರ್. ರಂಗಸ್ವಾಮಿಯವರ "ಮಲೆನಾಡಿನಲ್ಲಿ ಸುತ್ತಾಡಿದಾಗ"*

     "ಮಲೆನಾಡಿನಲ್ಲಿ ಸುತ್ತಾಡಿದಾಗ", ಮೈಸೂರಿನ ಆರ್. ರಂಗಸ್ವಾಮಿ (" ರವಿ - ಕಿರಣ್") ಇವರ ಪ್ರವಾಸನುಭವದ ಕೃತಿ. ಇದು ಲೇಖಕರ ಮೊದಲ ಕೃತಿಯೂ ಹೌದು. 2013ರಲ್ಲಿ ಲೇಖಕರ ಪತ್ರಮಿತ್ರ ಮಂಗಳೂರು ಪದವಿನಂಗಡಿಯ ಕೆ. ಪಿ. ಅಶ್ವಿನ್ ರಾವ್ ಅವರು ಹಾಗೂ ಲೇಖಕರು ಜೊತೆಯಾಗಿ ಪ್ರಕಾಶಿಸಿದ, 80 + 4 ಪುಟಗಳ ಕೃತಿಗೆ ಸಾಂಕೇತಿಕವಾಗಿ ಹತ್ತು ರೂಪಾಯಿ ಬೆಲೆ. ಕೃತಿಯಲ್ಲಿ ಲೇಖಕರ "ಸ್ನೇಹದ ನುಡಿಗಳು" ಇವೆ. ಅಶ್ವಿನ್ ರಾವ್ ಅವರ ಬೆನ್ನುಡಿ ಇವೆ. ಇವೆರಡನ್ನೂ ಓದಿದರೆ ಮಾತ್ರ ಕೃತಿ ಮತ್ತು ಕೃತಿಗಾರರು ಹೆಚ್ಚು ಅರ್ಥವಾಗಲು ಸಾಧ್ಯ.

    ಕೃತಿಯಲ್ಲಿ ಒಟ್ಟು ಒಂಭತ್ತು ಸರಣಿ ಲೇಖನಗಳಿವೆ. ವಿಶೇಷವೆಂದರೆ, ಇಲ್ಲಿರುವ ಯಾವುದೇ ಲೇಖನವನ್ನು ಲೇಖಕರು ಕೃತಿ ಪ್ರಕಟಣೆಗಾಗಿ ಸಿದ್ದಪಡಿಸಿದ ಲೇಖನವಲ್ಲ…

  • ಅಯೋಧ್ಯಾ ಪ್ರಕಾಶನದ ೧೪ ನೇ ಪುಸ್ತಕವಾಗಿ ಹೊರಬಂದಿರುವ ‘ಗಣಿತಜ್ಞರ ರಸಪ್ರಸಂಗಗಳು' ಬರೆದಿರುವವರು ಸ್ವತಃ ಗಣಿತ ಬೋಧಕರಾದ ರೋಹಿತ್ ಚಕ್ರತೀರ್ಥ ಇವರು. ಗಣಿತ ಬಹುತೇಕ ಮಂದಿಗೆ ಕಬ್ಬಿಣದ ಕಡಲೆಯೇ. ಪಿಯುಸಿಯಿಂದ ಪದವಿಯವರೆಗೆ ನಾನೂ ಗಣಿತವನ್ನೇ ಒಂದು ವಿಷಯವಾಗಿ ಕಲಿತರೂ ನನಗಿನ್ನೂ ಗಣಿತ ಅರ್ಥವೇ ಆಗಿಲ್ಲ. ಇದು ನನ್ನ ವೈಯಕ್ತಿಕ ಸಮಸ್ಯೆ. ಆದರೆ ಗಣಿತದಲ್ಲಿ ಬರೆದದ್ದು ಸರಿಯಾದರೆ ನೂರಕ್ಕೆ ನೂರು ಅಂಕ ಗ್ಯಾರಂಟಿ ಎಂದು ಆಗ ಪ್ರಚಲಿತವಾಗಿದ್ದ ಮಾತು. (ಆದರೆ ಈಗ ಭಾಷಾ ವಿಷಯದಲ್ಲೂ ಶೇಕಡಾ ನೂರು ಅಂಕಗಳನ್ನು ಕೊಡುತ್ತಾರೆ). ಸುಮಾರು ೫೦ಕ್ಕೂ ಮಿಕ್ಕಿದ ಖ್ಯಾತ ಗಣಿತಜ್ಞರ ರಸನಿಮಿಷಗಳನ್ನು ಕಟ್ಟಿಕೊಡುವ ಕೆಲಸ ರೋಹಿತ್ ಮಾಡಿದ್ದಾರೆ. ಅವರು ಗಣಿತವನ್ನೇ ಬೋಧಿಸುವುದರಿಂದ ಈ ಕೆಲಸ ಅವರಿಗೆ ಸ್ವಲ್ಪ ಸುಲಭವಾಗಿರಬಹುದು. 

    ರೋಹಿತ್ ಅವರೇ ತಮ್ಮ ‘…

  • ಖ್ಯಾತ ಪತ್ರಕರ್ತ, ಲೇಖಕ ರವಿ ಬೆಳಗೆರೆಯವರು ಉಗ್ರರ ಪುಲ್ವಾಮಾ ದಾಳಿಯ ಬಳಿಕ ನಡೆದ ಸರ್ಜಿಕಲ್ ಸ್ಟ್ರೈಕ್, ನಮ್ಮ ಧೀರ ಯೋಧ ವಿಂಗ್ ಕಮಾಂಡರ್ ಅಭಿನಂದನ್ ಅವರ ದಾಳಿ ಹಾಗೂ ಶತ್ರು ದೇಶವಾದ ಪಾಕಿಸ್ತಾನದಲ್ಲಿ ಸೆರೆ ಸಿಕ್ಕಾಗ ತೋರಿದ ಕೆಚ್ಚು ಇವುಗಳ ಬಗ್ಗೆ ಬರೆದ ಒಂದು ಫುಟ್ಟ ಪುಸ್ತಕವೇ ‘ಫ್ರಮ್ ಪುಲ್ವಾಮಾ’. ಪುಸ್ತಕದ ರಕ್ಷಾಪುಟದಲ್ಲೇ ವಿಂಗ್ ಕಮಾಂಡರ್ ಅಭಿನಂದನ್ ಅವರ ಭಾವಚಿತ್ರವನ್ನು ಮುದ್ರಿಸಿ ಅದಕ್ಕೆ ಧೀರಾಭಿನಂದನ್ ಎಂದು ಗೌರವ ಸಲ್ಲಿಸಿದ್ದಾರೆ. ಆ ಸಮಯ ಕನ್ನಡದ ನ್ಯೂಸ್ ಚಾನೆಲ್ ಆಗಿರುವ ದಿಗ್ವಿಜಯ ನ್ಯೂಸ್ ನ ಸಹಕಾರದಿಂದ ಪುಲ್ವಾಮಾಗೆ ತೆರಳಿದ ರವಿ ಬೆಳಗೆರೆ ವರದಿಯನ್ನೂ ಮಾಡಿದ್ದರು. ಅದರ ಮಾಹಿತಿಯೂ ಈ ಪುಸ್ತಕದಲ್ಲಿ ಒಳಗೊಂಡಿದೆ. 

    ಈ ಹಿಂದೆ ಕಾರ್ಗಿಲ್ ಯುದ್ಧವಾದಾಗಲೂ ಅಲ್ಲಿಗೆ ಹೋಗಿ ವರದಿಯನ್ನು ಮಾಡಿ ಕಾರ್ಗಿಲ್ ನಲ್ಲಿ ೨೦…

  • *ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಸಂಪಾದಿತ ಸಂಕಲನ "ಅಪ್ಪೆಗ್ ಬಾಲೆದ ಓಲೆ"*

    # 1993ರಲ್ಲಿ ವಿಟ್ಲದಲ್ಲಿ ಅಸ್ತಿತ್ವಕ್ಕೆ ಬಂದ " ತುಳುಕೂಟೊ ಇಟ್ಟೆಲ್"ಎಂಬ ಸಂಸ್ಥೆಯು 1997ರಲ್ಲಿ "ಬಂಟ್ವಾಳ ತಾಲೂಕು ತುಳು ಸಾಹಿತ್ಯ ಪರಿಷತ್" ಎಂಬ ಹೊಸನಾಮಧೇಯ ಪಡೆದುಕೊಂಡು ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ಆಚಾರ ವಿಚಾರಗಳ ಮೇಲೆ ಸಕ್ರಿಯವಾಗಿ ಕೆಲಸ ಮಾಡುತ್ತಿತ್ತು. ಈ ಸಂಸ್ಥೆಯು ತನ್ನ ಹತ್ತನೇ ವರ್ಷದ ಸದವಸರದಲ್ಲಿ ನಡೆಸಿದ ಸ್ಪರ್ಧೆಯಾಗಿತ್ತು "ಅಪ್ಪೆಗ್ ಬಾಲೆದ ಓಲೆ".

    ಸ್ಪರ್ಧೆಯಲ್ಲಿ ಬಹುಮಾನ ಪಡೆದ, ಮೆಚ್ಚುಗೆ ಗಳಿಸಿದ ಮತ್ತು ಕೆಲವು ಆಯ್ದ ಓಲೆಗಳ ಸಹಿತ ಒಟ್ಟು 102 ಓಲೆಗಳನ್ನು ಸೇರಿಸಿ ಸಂಕಲನವಾಗಿ ಸಂಪಾದಿಸಿದವರು ಪರಿಷತ್ ನ ಅಧ್ಯಕ್ಷರಾಗಿದ್ದ ವಿಜಯಕುಮಾರ್ ಭಂಡಾರಿಯವರು.2002ರಲ್ಲಿ ಮೊದಲ ಮುದ್ರಣವಾಗಿ ಪ್ರಕಟವಾದ "ಅಪ್ಪೆಗ್…

  • ಆಫ್ ದಿ ರೆಕಾರ್ಡ್ ಅನ್ನುವುದು ಪತ್ರಕರ್ತರ ವೃತ್ತಿ ಜೀವನದಲ್ಲಿ ಸದಾ ಕೇಳುವ ಪದ. ಸಮಾಜದ ಗಣ್ಯ ವ್ಯಕ್ತಿಗಳು ಪತ್ರಕರ್ತರ ಜೊತೆ ಮಾತನಾಡುವಾಗ ಗುಟ್ಟಾಗಿ ಕೆಲವು ವಿಷಯಗಳನ್ನು ಹೇಳಿ ಬಿಡುತ್ತಾರೆ. ಅವರದ್ದೇ ಓರಗೆಯ ಪತ್ರಕರ್ತರಾದ ಬಿ.ಗಣಪತಿಯವರು ಈ ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ. ಅದರಲ್ಲಿ ‘ಪತ್ರಕರ್ತರಾದ ಗಣೇಶ್ ಕಾಸರಗೋಡು ಅವರಿಗೆ ವೃತ್ತಿ ಜೀವನದ ಮೂರು ದಶಕಗಳ ಸಂಭ್ರಮ. ಸಿನೆಮಾ ಪ್ರಪಂಚಕ್ಕೆ ಒಬ್ಬ ಬೆರಗುಗಣ್ಣಿನ ಪತ್ರಕರ್ತನಾಗಿ ಅಡಿ ಇಟ್ಟ ಗಣೇಶರು ಇಂದು ಸಿನೆಮಾ ಲೋಕವೇ ಬೆರಗುಗಣ್ಣಿನಿಂದ ನೋಡುವಂತಹ ಪತ್ರಿಕಾ ಸಂಪಾದಕರಾಗಿ ಬೆಳೆದು ನಿಂತಿದ್ದಾರೆ. ಇದು ಅದೃಷ್ಟದ, ಜಾತಕದ ಮಹಿಮೆಯಲ್ಲ. ಅಕ್ಷರ ಪ್ರೀತಿ ಕೊಟ್ಟ ಆಸ್ತಿ. ಬರಹವನ್ನೇ ಬದುಕೆಂದು ಭಾವಿಸಿದ ನಿಷ್ಟೆಗೆ ಸಿಕ್ಕ ಪ್ರತಿಫಲ.’

    ಗಣೇಶ್ ಕಾಸರಗೋಡು ಪತ್ರಕರ್ತರಾಗಿ…

  • ‘ಕೂರ್ಗ್ ರೆಜಿಮೆಂಟ್’ ಕಥಾ ಸಂಕಲನವು ನಿವೃತ್ತ ಮೇಜರ್ ಡಾ. ಕುಶ್ವಂತ್ ಕೋಳಿಬೈಲ್ ಇವರ ಮೊದಲ ಕೃತಿ. ಕೊಡಗಿನ ಭಾಗಮಂಡಲದಲ್ಲಿ ಜನಿಸಿದ ಇವರು ತಮ್ಮ ಬಾಲ್ಯವನ್ನು ಭಾಗಮಂಡಲದಲ್ಲೇ ಕಳೆದರು. ನಂತರದ ಶಾಲಾ ದಿನಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಮುಗಿಸಿದರು. ಮಂಗಳೂರಿನ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದ ಕುಶ್ವಂತ್, ೨೦೦೯ರಲ್ಲಿ ಭಾರತೀಯ ಸೇನೆಯ ಆರ್ಮಿ ಮೆಡಿಕಲ್ ಕೋರ್ ವಿಭಾಗಕ್ಕೆ ಸೇರಿಕೊಳ್ಳುತ್ತಾರೆ. ಭಾರತದ ಗಡಿಭಾಗಗಳಲ್ಲಿ ಇವರು ಸಲ್ಲಿಸಿದ ಸೇವೆ ಅನನ್ಯ. ೨೦೧೯ರಲ್ಲಿ ಮಕ್ಕಳ ತಜ್ಞರ ಕಲಿಕೆಯನ್ನು ಮುಗಿಸಿ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಾರೆ. ಪ್ರಸ್ತುತ ಪುಣೆಯಲ್ಲಿನ ಖಾಸಗಿ ವೈದ್ಯಕೀಯ ಸಂಸ್ಥೆಯೊಂದರಲ್ಲಿ ಮಕ್ಕಳ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಕಥೆ, ಕವಿತೆಗಳ…