ಪುಸ್ತಕ ಸಂಪದ

  • ‘ಕಪಿಧ್ವಜ ಮೊದಲಾದ ಕೆಲವು ಸತ್ಯಸಾಯೀ ಕತೆಗಳು' ಈ ಕೃತಿಯನ್ನು ರಚಿಸಿದವರು ಖ್ಯಾತ ಸಾಹಿತಿ ಜಿ.ಪಿ.ರಾಜರತ್ನಂ ಅವರು. ಇವರು ಮಕ್ಕಳ ಸಾಹಿತಿ ಎಂದೂ ಖ್ಯಾತಿಯನ್ನು ಪಡೆದಿದ್ದಾರೆ. ಭಗವಾನ್ ಶ್ರೀ ಸತ್ಯಸಾಯಿಬಾಬಾ ಅವರ ‘Sathya Sai Speaks’ ಸಂಪುಟಗಳಿಂದ ಈ ಕತೆಗಳನ್ನು ಆಯ್ದುಕೊಳ್ಳಲಾಗಿದೆ. ಈ ಕತೆಗಳು ‘ಸುಧಾ’ ಹಾಗೂ ‘ಮಯೂರ' ಪತ್ರಿಕೆಗಳಲ್ಲಿ ಈಗಾಗಲೇ ಪ್ರಕಟವಾಗಿವೆ. 

    ಕೃತಿಯ ಬಗ್ಗೆ ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರು ತಮ್ಮ ಬೆನ್ನುಡಿಯಲ್ಲಿ “ತಮ್ಮ ಅನ್ಯದುರ್ಲಭ ವ್ಯಕ್ತಿತ್ವ ಮತ್ತು ವೈವಿಧ್ಯತರ ಬರವಣಿಗೆಯಿಂದ ಕನ್ನಡ ಸಾಹಿತ್ಯಕ್ಕೆ ಬೆಲೆ ಬಾಳುವ ಬಳುವಳಿಯನ್ನು ಓದಿಸಿರುವ ಮಹನೀಯ ಚೇತನ ಡಾ. ಜಿ.ಪಿ.ರಾಜರತ್ನಂ. ಸುದೀರ್ಘ ಕಾಲದ ಬಹು ವಿಫುಲ ಬರಹಗಳ…

  • ‘ನರರಾಕ್ಷಸ' ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು. ಅಕ್ಷರ ಸೌಲಭ್ಯವಂಚಿತ ಕುಟುಂಬದಿಂದ ಬಂದ ಇವರ ಬರಹಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಟಿತ ಗೌರವ ಪ್ರಶಸ್ತಿ ದೊರೆತಿದೆ. ಇಷ್ಟೊಂದು ಪುಸ್ತಕಗಳನ್ನು ಬರೆದರೂ ಬಡತನದಿಂದಲೇ ಬದುಕಿ ಬಾಳಿದವರು. 

    ೬೦-೭೦ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಯನ್ನು ಅದೂ ಪತ್ತೇದಾರಿ ಸಾಹಿತ್ಯವನ್ನು ಬರೆದು ಜನರಿಗೆ ಓದುವುದರ ಚಟವನ್ನು ಹಿಡಿಸಿದವರು ನರಸಿಂಹಯ್ಯನವರು. ಇವರು…

  • ‘ಗಾಲಿಬ್ ಸ್ಮೃತಿ - ಗಜಲ್ ಗುಲ್ದಸ್ಥ’ ಇದು ಡಾ. ಮಲ್ಲಿನಾಥ ತಳವಾರರ ಪ್ರಥಮ ಗಜಲ್ ಸಂಕಲನ. ಕಲಬುರಗಿಯ ನೂತನ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ ರಾಗಿರುವ ಇವರು ಈಗಾಗಲೇ 12 ಕೃತಿಗಳನ್ನು ಸಾಹಿತ್ಯ ಸರಸ್ವತಿಗೆ ಅರ್ಪಿಸುವ ಮೂಲಕ ಪರಿಚಿತರಾದವರು. ಆದರೆ ಆದಕ್ಕೂ ಹೆಚ್ಚಾಗಿ ಅವರು ಸಹೃದಯರನ್ನು  ತಲುಪಿದ್ದು ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದು ಗಜಲ್ ಕಾರರಾಗಿ. ಅಧ್ಯಯನಪೂರ್ಣ ಬರೆವಣಿಗೆಯಲ್ಲಿ ತೊಡಗಿದ ಡಾ‌. ತಳವಾರರು ಸಾಕಷ್ಟು ಗಜಲ್ಗಳನ್ನು ರಚಿಸಿದ್ದರೂ ಗಜಲ್ ಸಂಕಲನ ಪ್ರಕಟಿಸಿದ್ದು 2020 ರಲ್ಲಿ ಪ್ರಕಟವಾದ ಗಾಲಿಬ್ ಸ್ಮೃತಿ . ಈ ಕೃತಿಯ ಪ್ರಕಾಶಕರು ಚಿರುಶ್ರೀ ಪ್ರಕಾಶನ ಗದಗ. ಒಟ್ಟು 151 ಪುಟಗಳಿರುವ ಕೃತಿಯ ಬೆಲೆ 90 ರೂಪಾಯಿಗಳು. ಕೃತಿಯ…

  • ಖ್ಯಾತ ನಾಟಕಕಾರರಾಗಿದ್ದ ‘ಸಂಸ' ಅವರ ಜೀವನಾಧಾರಿತ ಕಾದಂಬರಿ ಇದು. ಈ ಕಾದಂಬರಿಗೆ ಖ್ಯಾತ ಬರಹಗಾರ ನವದೆಹಲಿಯ ಪ್ರೇಮಶೇಖರ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರ ಪ್ರಕಾರ ಈ ಕೃತಿ ‘ಯಶಸ್ವೀ ನಾಟಕಕಾರನ ಬದುಕೇ ಯಶಸ್ವೀ ನಾಟಕವಾಗಬಹುದಾದ ಸಾಧ್ಯತೆಯನ್ನು ಕಾಣಿಸುವ ಕಾದಂಬರಿ' ಎಂಬ ಸರ್ಟಿಫಿಕೇಟ್ ನೀಡಿದ್ದಾರೆ. ಅವರು ಹೀಗೆ ಬರೆಯುತ್ತಾರೆ “ಕಳೆದ ಶತಮಾನದ ಕನ್ನಡ ಸಾಂಸ್ಕೃತಿಕ ಲೋಕ ಕಂಡ ಅತ್ಯಂತ ಪ್ರತಿಭಾನ್ವಿತ, ಸ್ವಾಭಿಮಾನಿ ಹಾಗೂ ತನ್ನ ರಹಸ್ಯಮಯ ಜೀವನಶೈಲಿಯಿಂದ ಬದುಕಿದ್ದಾಗಲೇ ದಂತಕತೆಯಾಗಿಹೋದ ವಿಶಿಷ್ಟ ನಾಟಕಕಾರ ಸಂಸರ ಬದುಕನ್ನು ಚಿತ್ರಿಸುವ 'ಸಂಸ' ಕಾದಂಬರಿ ಒಂದು ಸ್ತುತ್ಯಾರ್ಹ ಪ್ರಯತ್ನ. ಕಾದಂಬರಿಕಾರರಾದ ಪ್ರೊ.ಮಲೆಯೂರು ಗುರುಸ್ವಾಮಿಯವರು ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ…

  • ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಕುರಿತಾದ ಪುಸ್ತಕವಿದು. ಪುಸ್ತಕದ ಬೆನ್ನುಡಿಯಲ್ಲಿ “ಭಾರತೀಯ ಕ್ರಿಕೆಟ್ ರಂಗದ ‘ಬೃಹತ್ ಗೋಡೆ' ಎಂದು ಎಲ್ಲರಿಂದಲೂ ಮೆಚ್ಚುಗೆ ಪಡೆದಿರುವ ರಾಹುಲ್ ದ್ರಾವಿಡ್ ಕ್ರಿಕೆಟ್ ಪ್ರೇಮಿಗಳಿಗೆ ಅರ್ಹ ಮಾದರಿಯಾಗಿದ್ದಾರೆ. ಕ್ರಿಕೆಟ್ ಆಟವನ್ನು ಅದ್ಭುತ ಸ್ಥೈರ್ಯದಿಂದ ಹಾಗೂ ಬದ್ಧತೆಯಿಂದ ಆಡಿ ದೇಶದ ಯುವ ಪೀಳಿಗೆಯ ಆರಾಧ್ಯ ಧೈವವಾಗಿದ್ದಾರೆ. ಎರಡು ವಿಶ್ವಕಪ್ ಪಂದ್ಯಾವಳಿಗಳಲ್ಲಿ ವಿಕೆಟ್ ಕೀಪಿಂಗ್ ಮಾಡಿರುವ ರಾಹುಲ್ ಕೆಲಬಾರಿ ಪ್ರಾರಂಭಿಕ ಬ್ಯಾಟಿಂಗ್ ಮಾಡಿದ್ದಲ್ಲದೆ ನಾಯಕತ್ವದ ಹೊಣೆಯನ್ನೂ ನಿರ್ವಹಿಸಿದ್ದಾರೆ. ಆಡುತ್ತಿರುವಾಗಲೇ ದಂತಕತೆಯಾಗಿರುವ ಮಹಾನ್ ಆಟಗಾರನ ಚರಿತ್ರಾತ್ಮಕ ಕೃತಿ ಇದು.

    ತೀರ ಚಿಕ್ಕವರಾಗಿದ್ದಾಗಿನಿಂದ…

  • 'ಹಾಯ್ ಬೆಂಗಳೂರು' ಪತ್ರಿಕೆಯ ಸಂಪಾದಕರಾದ ರವಿ ಬೆಳಗೆರೆಯವರು ಬರೆದ ಅಂಕಣ ಬರಹವೇ ‘ಬಾಟಮ್ ಐಟಮ್'. ಈ ಸರಣಿಯ ಏಳನೇಯ ಹೊತ್ತಗೆ ಇದು. ಪುಟ್ಟ ಪುಟ್ಟ ಅಧ್ಯಾಯಗಳಲ್ಲಿ ಜೀವನದ ಮೌಲ್ಯವನ್ನು ಹೆಚ್ಚಿಸುವ ಚೇತೋಹಾರಿ ಬರಹಗಳು ಇಲ್ಲಿವೆ. ರವಿ ಬೆಳಗೆರೆಯವರು ತಮ್ಮ ಬೆನ್ನುಡಿಯಲ್ಲಿ “ಅಂಥದೊಂದು ಡಿಸೈರ್ ನಿಮ್ಮಲ್ಲಿ ಕುದಿಯದೆ ಹೋದರೆ ನೀವು ಏನನ್ನೂ ಸಾಧಿಸಲಾರಿರಿ. ಇದ್ದಕ್ಕಿದ್ದಂತೆ ಕೋಟ್ಯಾಧೀಶರಾದವರ ಮಾತು ಬಿಟ್ಟು ಬಿಡಿ, ಅದು ಯಾರೋ ಕೆಲವರ ವಿಷಯದಲ್ಲಿ ಸತ್ಯವಾಗಿರಬಹುದು. ಅಂಥವರು ದೇವರು-ಅದೃಷ್ಟ ಮುಂತಾದುವುಗಳನ್ನು ನಂಬಿದರೆ ನಂಬಿಕೊಳ್ಳಲಿ. ಆದರೆ ಈ ಜಗತ್ತಿನಲ್ಲಿ ಯಶಸ್ಸಿನ ಬೆಟ್ಟ ಹತ್ತಿ ನಿಂತವರೆಲ್ಲರನ್ನೂ ಒಮ್ಮೆ ನೋಡಿ. ಅವರನ್ನೇ ಕೇಳಿ. ಅವರು ಅಂಥದೊಂದು ‘ಬರ್ನಿಂಗ್ ಡಿಸೈರ್' ಇಟ್ಟುಕೊಂಡೇ ಆ ಬೆಟ್ಟದ ಪ್ರತಿ…

  • ಕನ್ನಡದ ಮಕ್ಕಳಿಗಾಗಿ ಕಥೆಗಳನ್ನು ಬರೆದ ಮೊದಲಿಗರಲ್ಲಿ ಪ್ರಮುಖರು ಪಂಜೆ ಮಂಗೇಶರಾಯರು. ೧೯೭೩ರಲ್ಲಿ ಮೊದಲ ಸಲ ಮುದ್ರಣವಾದ ಈ ಪುಸ್ತಕದ ಎರಡನೆಯ ಮುದ್ರಣವಾದದ್ದು ೨೦೧೫ರಲ್ಲಿ (೪೨ ವರುಷಗಳ ನಂತರ).

    ಅವರು ಮಕ್ಕಳ ಕಥೆಗಳನ್ನು ಬರೆದು ಸುಮಾರು ನೂರು ವರುಷಗಳಾಗಿದ್ದರೂ ಇಂದಿಗೂ ಅವು ಚೇತೋಹಾರಿ. ಇದರಲ್ಲಿವೆ ೧೬ ಮಕ್ಕಳ ಕಥೆಗಳು. ಒಂದಕ್ಕಿಂತ ಒಂದು ಚಂದದ ಕತೆಗಳು. ಇಂಗ್ಲಿಷಿನ ಮಕ್ಕಳ ಕಥೆಗಳನ್ನು ಓದಿ ಬೆಳೆಯುತ್ತಿರುವ ಇಂದಿನ ತಲೆಮಾರಿನ ಕನ್ನಡದ ಮಕ್ಕಳು ಈ ಕಥೆಗಳನ್ನೊಮ್ಮೆ ಓದಬೇಕು. ಮಕ್ಕಳ ಕಲ್ಪನಾಲೋಕವನ್ನು ಅವು ಹೇಗೆ ವಿಸ್ತರಿಸುತ್ತವೆ ಎಂಬುದು ಅವನ್ನು ಓದಿ ಸವಿದಾಗಲೇ ಅರ್ಥವಾಗಲು ಸಾಧ್ಯ.

    ನನ್ನ ತಲೆಮಾರಿನವರು ಪಂಜೆಯವರ ಕಥೆಗಳನ್ನು ಓದುತ್ತಲೇ ಬೆಳೆದವರು. ಯಾಕೆಂದರೆ, ಆಗ ಹಲವಾರು ವರುಷ ಪಂಜೆಯವರ ಮಕ್ಕಳ ಕಥೆಗಳು ಪ್ರಾಥಮಿಕ…

  • ಮಹಾಭಾರತದ ಮೂಲ ಬಿಂದು ಶ್ರೀಕೃಷ್ಣ. ಕೃಷ್ಣನ ಪಾತ್ರ ಮಹಾಭಾರತದುದ್ದಕ್ಕೂ ಹಾಸು ಹೊಕ್ಕಾಗಿದೆ. ಈ ವಾಸುದೇವ ಕೃಷ್ಣನು ದ್ವಾರಕಾನಗರಿಯನ್ನು ಸಮುದ್ರದಲ್ಲಿ ನಿರ್ಮಿಸಿ ಯಾದವರೊಂದಿಗೆ ವಾಸಿಸುತ್ತಿದ್ದನೆಂದೂ ಈ ದ್ವಾರಕೆಯು ನಂತರ ಸಮುದ್ರದಲ್ಲಿ ಮುಳುಗಿ ಹೋಯಿತೆಂದೂ ಹೇಳುತ್ತದೆ.

    ಈ ಘಟನೆಯ ಸತ್ಯಾಸತ್ಯತೆ ಎಷ್ಟು? ಕೃಷ್ಣನು ನಿಜವಾಗಿಯೂ ಐತಿಹಾಸಿಕ ವ್ಯಕ್ತಿಯೇ? ಅಥವಾ ಕವಿ ನಿರ್ಮಿತ ಕಾವ್ಯದ ಕಥಾನಾಯಕನೇ? ಕೃಷ್ಣ ನಿಜವಾಗಿ ಐತಿಹಾಸಿಕ ವ್ಯಕ್ತಿಯಾಗಿದ್ದರೆ ಆತ ಬದುಕಿದ್ದನೆನ್ನಲಾದ ಕಾಲ ಯಾವುದು? ಯಾವ ಕಾರಣದಿಂದ ಅಂದಿನ ಸಂಸ್ಕೃತಿಗೆ ಸಂಬಂಧಿಸಿದ ಅವಶೇಷಗಳು ಸಿಗದೆ ಕಣ್ಣುಮುಚ್ಚಾಲೆಯಾಡುತ್ತಿವೆ? ಕೃಷ್ಣನ ಇರುವು ನಿಜವಾದರೆ ಕೃಷ್ಣನ ದ್ವಾರಕೆ ಯಾವುದು? ಮುಂತಾದ ಪ್ರಶ್ನೆ…

  • ಎ.ಎಸ್.ಪ್ರಸನ್ನರ ಕಥಾಸಂಕಲನವೇ ‘ಬಿಡುಗಡೆ' . ಪುಸ್ತಕದ ಬೆನ್ನುಡಿಯಲ್ಲಿ ಸಿ.ಎನ್. ರಾಮಚಂದ್ರನ್ ಅವರು ಹೀಗೆ ಬರೆಯುತ್ತಾರೆ “ ಪ್ರಸನ್ನರ ಪ್ರಸ್ತುತ ಕಥಾ ಸಂಕಲನ ಅವರ ಆರನೆಯದು. ಸದಾ ಪ್ರಯೋಗಶೀಲರಾಗಿರುವ ಪ್ರಸನ್ನ ಅವರ ಈ ಸಂಕಲನದ ಕಥೆಗಳು ಹಿಂದಿನ ಸಂಕಲನದ ಕಥೆಗಳಿಗಿಂತ ಭಿನ್ನವಾಗಿವೆ. ಈವರೆಗಿನ ಕಥೆಗಳು ಬಹುಮಟ್ಟಿಗೆ ವ್ಯಕ್ತಿ ಸಮಾಜಗಳ ನಡುವೆ ಇರುವ ಸಂಬಂಧವಗಳನ್ನು ಸೂಕ್ಷ್ಮವಾಗಿ ಕಟ್ಟಿಕೊಟ್ಟಿದೆ. ಈ ಸಂಕಲನದ ಕಥೆಗಳು ಸಂಪೂರ್ಣವಾಗಿ ವ್ಯಕ್ತಿಗಳ ಭಾವನೆಗಳು ಹಾಗೂ ಮಾನಸಿಕ ತುಮುಲಗಳಿಗೆ ಒತ್ತುಕೊಡುತ್ತಾ ವ್ಯಕ್ತಿಯ ಕೌಟುಂಬಿಕ ಸಂಬಂಧಗಳನ್ನು ಆಳವಾಗಿ ವಿಶ್ಲೇಷಿಸುತ್ತವೆ. ಈ ಸಂಕಲನದ ಕಥೆಗಳನ್ನು, ಸ್ಥೂಲವಾಗಿ, ಎರಡು ವರ್ಗಗಳಲ್ಲಿ ನೋಡಬಹುದು. ವರ್ಷ ಇಡೀ ವಿಶ್ವವನ್ನು ಆಕ್ರಮಿಸಿರುವ ಕೊರೋನಾ ಸಾಂಕ್ರಾಮಿಕದ…

  • ಈಗಿನ ಇಂಟರ್-ನೆಟ್ ಕಾಲಮಾನದಲ್ಲಿ ಗೂಗಲ್‌ನಲ್ಲಿ ಹುಡುಕಾಡಿದರೆ ಪ್ರಾಣಿಗಳ ಮತ್ತು ಪರಿಸರದ ಬಗ್ಗೆ ಲಕ್ಷಗಟ್ಟಲೆ ಪುಟಗಳ ಮಾಹಿತಿ ಮತ್ತು ಫೋಟೋಗಳು ಕ್ಷಣಾರ್ಧದಲ್ಲಿ ಸಿಗುತ್ತವೆ. ಆದರೆ ಐವತ್ತು ವರುಷಗಳ ಮುಂಚೆ ಇಂತಹ ಮಾಹಿತಿ ಸಂಗ್ರಹ ಸವಾಲಾಗಿತ್ತು. ಹಾಗಾಗಿ, ನವಂಬರ ೧೯೭೪ರಲ್ಲಿ ಪ್ರಕಟವಾದ ಈ ಪುಸ್ತಕದಲ್ಲಿ ಪ್ರಾಣಿಗಳು ಮತ್ತು ಪರಿಸರದ ಬಗ್ಗೆ ೧೪೪ ಮುದ್ರಿತ ಪುಟಗಳ ಮಾಹಿತಿ ಸಂಗ್ರಹಿಸಿ, ವಿಷಯಾನುಕ್ರಮವಾಗಿ ಸರಳ ಭಾಷೆಯಲ್ಲಿ ಕನ್ನಡದ ಓದುಗರಿಗೆ ಒದಗಿಸಿದ ಕೃಷ್ಣಾನಂದ ಕಾಮತರಿಗೆ ಅಭಿನಂದನೆ ಸಲ್ಲಿಸಲೇ ಬೇಕು.

    ಮುನ್ನುಡಿಯಲ್ಲಿ ಈ ಪುಸ್ತಕದ ಉದ್ದೇಶವನ್ನು ಲೇಖಕರು ಹೀಗೆಂದು ಸ್ಪಷ್ಟ ಪಡಿಸಿದ್ದಾರೆ: “ಹಿಂದೆಂದೂ ಇಲ್ಲದಷ್ಟು ಇಂದು ಮಾನವನು ಸಂಕುಚಿತ ದೃಷ್ಟಿಯವ ಮತ್ತು ಸ್ವಾರ್ಥಿಯಾಗ ಹತ್ತಿದ್ದಾನೆ. ಅಂತೆಯೆ ತನ್ನ ಸಂತತಿಯಿಂದ…