ಪುಸ್ತಕ ಸಂಪದ

  • ಡಾ॥ ಎಲ್.ವಸಂತ ಇವರು ಬರೆದಿರುವ ಈ ಕೃತಿ ನಿರಂತರವಾಗಿ ಪುನರ್ ಮುದ್ರಣ ಕಾಣುತ್ತಿದೆ. ಈಗಾಗಲೇ ೧೧ ಮುದ್ರಣಗಳು ಕಂಡ ಕೃತಿ ಇದು. ನಮ್ಮ ಶರೀರ ನಿಸರ್ಗದ ಒಂದು ಅಂಗ, ನಿಸರ್ಗದ ಸೃಷ್ಟಿ. ಶರೀರದ ಕುಂದು ಕೊರತೆಗಳನ್ನು ನಿವಾರಿಸಿಕೊಳ್ಳಲು, ಅದರ ಸೌಂದರ್ಯವನ್ನು ಅಧಿಕಗೊಳಿಸಲು ನಿಸರ್ಗ ನಮಗೆ ಗಿಡಮೂಲಿಕೆಗಳು, ಖನಿಜ, ಲವಣಗಳ ರೂಪದಲ್ಲಿ ಹಲವಾರು ಉಪಯುಕ್ತ ಸಾಧನಗಳನ್ನೂ ಕರುಣಿಸಿದೆ. ಇವನ್ನು ಸರಿಯಾಗಿ ಉಪಯೋಗಿಸಿದರೆ, ಇಂದಿನ ಜಲ, ವಾಯು ಹಾಗೂ ಪರಿಸರ ಮಾಲಿನ್ಯದ ಕಲುಷಿತ ವಾತಾವರಣದಲ್ಲಿಯೂ ಶರೀರದ ಆರೋಗ್ಯ ಹಾಗೂ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.

    ಈ ಕೃತಿಯ ಲೇಖಕರಾದ ಡಾ॥ ಎಲ್.ವಸಂತ್ ಅವರು ಗಿಡಮೂಲಿಕೆಗಳಿಂದ ಮನೆಯಲ್ಲೇ ಹೇಗೆ ಸೌಂದರ್ಯ ಸಾಧನಗಳನ್ನು ತಯಾರಿಸಿಕೊಳ್ಳಬಹುದು ಎಂಬುದನ್ನು ಶರೀರ ಸೌಂದರ್ಯದ ಜತೆಗೆ ಶರೀರಾರೋಗ್ಯ…

  • ಆರೋಗ್ಯವೇ ಭಾಗ್ಯ. ನಮ್ಮ ಸುತ್ತಮುತ್ತಲಿನ ತರಕಾರಿ, ಹಣ್ಣು ಹಂಪಲುಗಳಲ್ಲಿರುವ ರೋಗ ನಿವಾರಕ ಗುಣಗಳನ್ನು ಈ ಪುಸ್ತಕದ ಮೂಲಕ ನಮ್ಮ ಮುಂದೆ ಇರಿಸಿದ್ದಾರೆ ಡಾ. ಎಂ.ಎಚ್. ಸವಿತ ಇವರು. ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದುಕೊಂಡು ತಮ್ಮ ಅನುಭವದ ನೆಲೆಗಟ್ಟಿನಲ್ಲಿ ಈ ಪುಸ್ತಕ ಬರೆದಿದ್ದಾರೆ.

    ನಿತ್ಯ ಬಳಸುವ ಆಹಾರದಲ್ಲಿ ಎಷ್ಟೊಂದು ವೈವಿಧ್ಯಮಯ ಪೋಷಕಾಂಶಗಳಿವೆ. ‘ಊಟ ಬಲ್ಲವನಿಗೆ ರೋಗವಿಲ್ಲ' ಎಂಬುದು ಮೊದಲಿನಿಂದ ಚಾಲ್ತಿಯಲ್ಲಿರುವ ಗಾದೆ. ನಮ್ಮ ಊಟದಲ್ಲಿರುವ ಪೋಷಕಾಂಶಗಳನ್ನು ನಾವು ಗಮನಿಸಿ ಹಿತಮಿತವಾಗಿ ಬಳಸಿದರೆ ಖಂಡಿತವಾಗಿಯೂ ನಿರೋಗಿಗಳಾಗಲು ಸಾಧ್ಯ. ನಮ್ಮ ಆಹಾರದಲ್ಲಿ ಬಳಸುವ ತರಕಾರಿ, ಸೊಪ್ಪು, ಕಾಯಿಗಳ ಬಗ್ಗೆ ಅದನ್ನು ಯಾವ ಯಾವ ಸಮಸ್ಯೆಗಳಿಗೆ ಬಳಸ ಬಹುದು ಎನ್ನುವುದರ ಬಗ್ಗೆ ಲೇಖಕಿ ಚೆನ್ನಾಗಿ…

  • ಹಿರಿಯ ಲೇಖಕರಾದ ರಾಜಾರಾಂ ತಲ್ಲೂರು ಅವರ ನಾಲ್ಕನೇ ಕೃತಿ ಇದು. ನುಣ್ಣನ್ನ ಬೆಟ್ಟ (೨೦೧೭), ತಲ್ಲೂರು ಎಲ್ ಎನ್ (೨೦೧೮) ಮತ್ತು ಏನಿದು ಪೌರತ್ವ ತಿದ್ದುಪಡಿ ಕಾಯಿದೆ (೨೦೧೯) ರಾಜಾರಾಂ ತಲ್ಲೂರು ಅವರ ಪ್ರಕಟಿತ ಕೃತಿಗಳು. ಇವರಿಗೆ, ಇವರ ಕೃತಿಗಳಿಗೆ ೨೦೧೭ರಲ್ಲಿ ಅಮ್ಮ ಪ್ರಶಸ್ತಿ ಮತ್ತು ೨೦೨೦ರಲ್ಲಿ ಶಿವರಾಮ ಕಾರಂತ ಪುರಸ್ಕಾರ ಸಂದಿದೆ.

    ದುಪ್ಪಟ್ಟು ಆಕರ್ಷಕ ಮತ್ತು ಕುತೂಹಲ ಮೂಡಿಸುವ ಮುಖಪುಟ ಚಿತ್ರದೊಂದಿಗೆ ಗಮನಸೆಳೆಯುತ್ತದೆ. ತಲ್ಲೂರು ಅವರ ಕೃತಿ ಎಂದರೆ ಸಹಜವಾಗಿಯೇ ಅದು ಅಚ್ಚುಕಟ್ಟಾಗಿ ಕಟ್ಟಿದ ಕೃತಿಯಾಗಿರುತ್ತದೆ. ಮಾತ್ರವಲ್ಲ ಅವರ ಸಹಜ ವ್ಯಕ್ತಿತ್ವದ ಹಾಗೆ ಕೃತಿಯೊಳಗಡೆಯೂ ಅಷ್ಟೇ ಘನ ಗಂಭೀರ ವಿಚಾರದ ಮಂಡನೆ ಇರುತ್ತದೆ. ಪುಟ ಪುಟಗಳಲ್ಲೂ ಜನಪರ ಕಾಳಜಿ, ಆಳವಾದ ಚಿಂತನೆಯೊಡನೆ, ಪರ್ಯಾಯ ಚಿಂತನೆಗಳೂ ಇರುತ್ತವೆ. ಇಲ್ಲೂ ಅದನ್ನು…

  • ಸ್ವಾಮಿ ಮತ್ತು ಅವನ ಸ್ನೇಹಿತರು ಖ್ಯಾತ ಸಾಹಿತಿ ಆರ್.ಕೆ.ನಾರಾಯಣ್ ಅವರ ಮಾಲ್ಗುಡಿ ಡೇಸ್ ಎಂಬ ಕಥಾ ಸಂಕಲನದ ಒಂದು ಕಥಾ ಭಾಗ. ಕನ್ನಡದ ಖ್ಯಾತ ನಟ, ನಿರ್ದೇಶಕ ಶಂಕರ್ ನಾಗ್ ಈ ಕಥೆಗಳನ್ನು ಕಿರುತೆರೆಗೆ ಧಾರವಾಹಿ ರೂಪದಲ್ಲಿ ತಂದಿದ್ದು ಎಲ್ಲರಿಗೂ ತಿಳಿದ ವಿಷಯ. ಹಿಂದಿಯಲ್ಲಿ ಬಹಳ ಹಿಂದೆ ಪ್ರಸಾರವಾದ ಮಾಲ್ಗುಡಿ ಡೇಸ್ ಈಗ ಮತ್ತೆ ಕನ್ನಡಕ್ಕೆ ಡಬ್ ಆಗಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. 

    ಸ್ವಾಮಿ ಮತ್ತು ಅವನ ಸ್ನೇಹಿತರು ಎಂಬ ಕಥೆಯು ಸ್ವಾಮಿನಾಥನ್ ಎಂಬ ೧೦ ವರ್ಷದ ಮುಗ್ಧ ಬಾಲಕನ ಸುತ್ತ ತಿರುಗುತ್ತದೆ. ಖಡಕ್ ಆಗಿರುವ ಅಪ್ಪ, ಎರಡನೇ ಮಗುವಿನ ಪಾಲನೆಯಲ್ಲೇ ಬಿಸಿಯಾಗಿರುವ ಅಮ್ಮ, ಜೀವಕ್ಕಿಂತ ಜಾಸ್ತಿ ಪ್ರೀತಿಸುವ ಅಜ್ಜಿ. ಶಾಲೆಯ ಮೇಷ್ಟುಗಳು, ಅವರು ನೀಡುವ ಹೋಮ್ ವರ್ಕ್ ಹೀಗೆ ಸ್ವಾಮಿ ತನ್ನ ಜೀವನ ಕಳೆಯುತ್ತಿರುತ್ತಾನೆ. 

  • ನವಕರ್ನಾಟಕ ಪ್ರಕಾಶನದವರು ಡಾ. ಸಿ.ಆರ್. ಚಂದ್ರಶೇಖರ್ ಇವರ ಸಂಪಾದಕತ್ವದಲ್ಲಿ ವ್ಯಕ್ತಿ ವಿಕಸನ ಮಾಲೆ ಈ ಮಾಲಿಕೆಯಲ್ಲಿ ಹೊರತಂದ ಪುಸ್ತಕವೇ ‘ಮನಸ್ಸಿನ ಮ್ಯಾಜಿಕ್'. ವೃತ್ತಿಯಲ್ಲಿ ಬ್ಯಾಂಕ್ ಅಧಿಕಾರಿಯಾಗಿದ್ದ ಅಡ್ಡೂರು ಕೃಷ್ಣ ರಾವ್ ಇವರ ಪ್ರವೃತ್ತಿ ಬರವಣಿಗೆ. ಮಂಗಳೂರಿನ ಬಳಕೆದಾರರ ವೇದಿಕೆಯ ಸಂಚಾಲಕರಾಗಿ ಹಲವಾರು ಮಂದಿಗೆ ಸಲಹೆ ಸಹಾಯ, ಮಾರ್ಗದರ್ಶನ ಮಾಡಿಕೊಟ್ಟಿದ್ದಾರೆ. ಕೃಷಿಯ ಬಗ್ಗೆಯೂ ಆಸಕ್ತಿ ಇರುವ ಇವರು ‘ಹಸುರು ಹೆಜ್ಜೆ' ಎಂಬ ಕೃತಿಯನ್ನು ಹೊರತಂದಿದ್ದಾರೆ. ದಿನ ಹಾಗೂ ಮಾಸ ಪತ್ರಿಕೆಗಳಿಗೆ ನಿರಂತರವಾಗಿ ಜಲಜಾಗೃತಿಯ ಬಗ್ಗೆ ಅಂಕಣ ಬರಹಗಳನ್ನು ಬರೆದಿದ್ದಾರೆ. ‘ಮೋಜಿನ ಗಣಿತ' ಮತ್ತು ಮನರಂಜನೆಗಾಗಿ ಬೀಜಗಣಿತ' ಇವರ ಅನುವಾದಿತ ಕೃತಿಗಳು.

    ಅಡ್ಡೂರು ಕೃಷ್ಣ ರಾವ್…

  • ‘ಮನದಾಚೆ ದೂಡಿದ ಬಯಕೆ ಕನಸಾಗಿ ಕಾಡುವುದೇಕೆ?’ ಎಂಬ ಸಾಲುಗಳು ‘ರಾಜ್ ಲೀಲಾ ವಿನೋದ' ಪುಸ್ತಕದ ಮುಖಪುಟದಲ್ಲೇ ಮುದ್ರಿತವಾಗಿವೆ. ಕನ್ನಡದ ವರನಟರಾದ ಡಾ. ರಾಜ್ ಕುಮಾರ್ ಇವರ ತೀರಾ ಖಾಸಗಿ ಬದುಕಿನ ಪುಟಗಳನ್ನು ಖ್ಯಾತ ಲೇಖಕ, ಪತ್ರಕರ್ತ ರವಿ ಬೆಳಗೆರೆಯವರು ಅನಾವರಣ ಮಾಡಿದ್ದಾರೆ. ಸ್ವತಃ ಲೀಲಾವತಿಯವರೇ ತಮ್ಮ ಬದುಕಿನ ಕರುಣಾಜನಕ ಕಥೆಯನ್ನು ಈ ಲೇಖಕರ ಬಳಿ ತೆರೆದಿಟ್ಟಿದ್ದಾರೆ. ಅಣ್ಣಾವ್ರು ಬದುಕಿರುವಾಗ ಈ ಪುಸ್ತಕ ಹೊರ ಬಂದಿದ್ದರೆ ಅದರ ಕಥೆಯೇ ಬೇರೆ ಇತ್ತು. ಆದರೆ ಈ ಸಮಯ ಬದಲಾಗಿದೆ. ಸಮಾಜವೂ ಇಂಥಹ ಸಂಬಂಧಗಳಿಗೆ ಮಾನ್ಯತೆ ನೀಡುವ ಉದಾರ ಮನೋಭಾವನೆ ತೋರಿಸುತ್ತಿದೆ. ಇರಲಿ.

    ಲೇಖಕರಾದ ರವಿ ಬೆಳಗೆರೆಯವರೇ ತಮ್ಮ ಬೆನ್ನುಡಿಯಲ್ಲಿ ಬರೆದಂತೆ' ರಾಜ್ ಕುಮಾರ್ ಬಗ್ಗೆ ನನಗೆ…

  • ‘ಕುಡು ಮಲ್ಲಿಗೆ’ ನಾಮಾಂಕಿತದಿಂದ ಖ್ಯಾತಿ ಪಡೆದ ಕೆ.ಕೃಷ್ಣ ಶೆಟ್ಟಿಯವರದ್ದು ಬಹುಮುಖ ಪ್ರತಿಭೆ. ಹುಟ್ಟಿದ್ದು ಮಲೆನಾಡಿನ ಕುಡುಮಲ್ಲಿಗೆಯಲ್ಲಿ. ಇವರು ಕಲಿತದ್ದು ಕಮ್ಮಿಯಾದರೂ ಅನುಭವ ಇವರನ್ನು ಪಕ್ವರನ್ನಾಗಿಸಿದೆ. ವೃತ್ತಿ ಸಂಬಂಧ ಮುಂಬೈ, ಉಡುಪಿಗಳಲ್ಲಿ ತಿರುಗಾಡಿದರೂ ನೆಲೆ ನಿಂತದ್ದು ಮಂಗಳೂರಿನಲ್ಲಿ. ಪತ್ರಿಕೆಯ ವರದಿಗಾರನಾಗಿ, ಅಂಕಣಗಾರನಾಗಿ, ಉಪಸಂಪಾದಕನಾಗಿ, ಯಕ್ಷಗಾನ ಕಲೆಯ ಉಪಾಸಕರಾಗಿ, ಕಲಾವಿಮರ್ಶಕರಾಗಿ ಇವರು ದುಡಿದಿದ್ದಾರೆ. ‘ಯಕ್ಷಗಾನ ಪುರಾಣ ಜ್ಞಾನ ದರ್ಶನ' ಎಂಬ ಕೃಉತಿ ಯಕ್ಷಗಾನ ಅಭ್ಯಾಸ ಮಾಡುವವರ ನಿಘಂಟು ಎಂದರೆ ಅತಿಶಯವಲ್ಲ ಎಂದು ಬೆನ್ನುಡಿಯಲ್ಲಿ ಯಕ್ಷಗಾನ ಕಲಾವಿದರೂ ಆಗಿರುವ ಕದ್ರಿ ನವನೀತ ಶೆಟ್ಟಿಯವರ ಅಭಿಮತ.

    ಮುನ್ನುಡಿಯಲ್ಲಿ ಉಪನ್ಯಾಸಕರೂ,…

  • ಪುಸ್ತಕದ ಲೇಖಕಿಯಾದ ಡಾ.ಪೂರ್ಣಿಮಾ ಕೊಡೂರು ಇವರು ಸ್ವತಃ ಆಯುರ್ವೇದ ವೈದ್ಯೆಯೂ ಆಗಿರುವುದರಿಂದ ತಮ್ಮ ವೈದ್ಯಕೀಯ ವೃತ್ತಿಯ ಜೊತೆಗೆ ಜನರಿಗೆ ಆಪ್ತವಾಗುವ ರೀತಿಯಲ್ಲಿ ಆಯುರ್ವೇದ ಮನೆ ಮದ್ದುಗಳನ್ನು ನೀಡಿದ್ದಾರೆ. ಈ ಪುಸ್ತಕದಲ್ಲಿ ನಮಗೆ ಬರುವ ಹಲವಾರು ಕಾಯಿಲೆಗಳಿಗೆ ಮನೆ ಮದ್ದುಗಳ ವಿವರಗಳಿವೆ. ನಾವಿಂದು ನಮಗೆ ಬರುವ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಿಕೊಳ್ಳುತ್ತೇವೆ. ಆದರೆ ಯಾವಾಗ ಕಾಯಿಲೆ ವಾಸಿಯಾಯಿತಾ, ಸುಮ್ಮನಾಗಿ ಬಿಡುತ್ತೇವೆ. ಹೀಗೆ ಸುಮ್ಮನಾಗುವ ಬದಲು ನಮಗೆ ಬಂದ ಕಾಯಿಲೆ ಏನು? ಯಾಕಾಗಿ ಬಂತು? ಇದರ ಹಿಂದಿನ ನೈಜ ಕಾರಣಗಳೇನು? ಎಂಬುವುದನ್ನು ಅರ್ಥೈಸಿಕೊಳ್ಳಲು ವಿಫಲರಾಗುತ್ತೇವೆ. ಇದನ್ನು ನಾವು ಪರಿಣತಿ ಪಡೆದ ವೈದ್ಯರಷ್ಟು ತಿಳಿದು ಕೊಳ್ಳದೇ ಹೋದರೂ, ನಮ್ಮ ಮಟ್ಟದಲ್ಲಿ ನಾವೊಂದಿಷ್ಟು…

  • ನೊಬೆಲ್ ಬಹುಮಾನ ಪುರಸ್ಕೃತ ಆಂಗ್ಲ, ಸ್ಪಾನಿಷ್ ಲೇಖಕರಾದ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಇವರ ‘No one writes to the Colonel’ ಎಂಬ ಕಾದಂಬರಿಯನ್ನು ಕನ್ನಡಕ್ಕೆ ತಂದವರು ಶ್ರೀನಿವಾಸ ವೈದ್ಯ ಇವರು. ಶ್ರೀನಿವಾಸ ವೈದ್ಯ ಇವರು ಸೃಜನ ಶೀಲ ಸಾಹಿತ್ಯದಲ್ಲಿ ಅಪಾರ ಹೆಸರು ಗಳಿಸಿದ್ದಾರೆ. ಬರೆದದ್ದು ಕಡಿಮೆಯಾದರೂ ಬರೆದುದನ್ನು ಗಮನಿಸಲೇ ಬೇಕಾದ ಬರಹಗಳು ಇವರು ರಚಿಸಿದ್ದಾರೆ. ಈ ಮೇಲಿನ ಆಂಗ್ಲ ಭಾಷೆಯ ಕಿರು ಕಾದಂಬರಿಯನ್ನು ಕನ್ನಡಕ್ಕೆ ತರಬೇಕೆಂಬ ತುಡಿತದಿಂದಲೇ ಸೊಗಸಾಗಿ ಅನುವಾದ ಮಾಡಿದ್ದಾರೆ. ಈ ಕೃತಿಯ ಮೂಲ ಸ್ಪಾನಿಷ್ ಆದರೂ ಅದನ್ನು ಜೆ.ಎನ್. ಬರ್ನ್ ಸ್ಟಿನ್ ಎಂಬವರು ಆಂಗ್ಲಕ್ಕೆ ಭಾಷಾಂತರಿಸಿದ್ದಾರೆ. ಈ ಕೃತಿಯಲ್ಲಿ ಸ್ಪಾನಿಷ್ ಜನರ ಜೀವನ ಕ್ರಮ, ನಡೆ-ನುಡಿ, ನಂಬುಗೆ ಆಚರಣೆಗಳ ಬಗ್ಗೆಯೂ ಲೇಖಕರು…

  • ತೇಜೋ-ತುಂಗಭದ್ರ ಎನ್ನುವ ಈ ಬೃಹತ್ ಕಾದಂಬರಿಯು ಹೆಸರೇ ಹೇಳುವಂತೆ ೨ ನದಿ ದಂಡೆಯಲ್ಲಿ ಬರುವ ಲಿಸ್ಬನ್, ವಿಜಯನಗರ, ಗೋವಾ ನಗರಗಳಲ್ಲಿ ಕತೆ ಮುಂದುವರೆಯುತ್ತದೆ. ೧೫-೧೬ನೇ ಶತಮಾನದ ಹಳೆಯ ಕತೆಯಾದರೂ ಸಾರಾಂಶವು ಈಗಿನ ವರ್ತಮಾನಕ್ಕೆ ಹತ್ತಿರವಾಗುತ್ತೆ. ಆ ಶತಮಾನದ ಸಮಯದಲ್ಲಿದ್ದ ಸತಿ ಪದ್ಧತಿ, ಯಹೂದಿಗಳ ಹತ್ಯೆ, ಗುಲಾಮರ ಚಟುವಟಿಕೆಗಳು ಮತ್ತು ಅವರ ಯಾತನಾಮಯ ದಿನಗಳು ಓದುಗರ ನಿದ್ದೆಯನ್ನು ಕೆಡಿಸುತ್ತವೆ. ಲಿಸ್ಟನ್ ನಗರದಲ್ಲಿ ಶುರುವಾದ ಒಂದು ಪ್ರೇಮ ಪ್ರಸಂಗ ಭಾರತದ ತುಂಗಭದ್ರಾ ದಂಡೆಯ ವಿಜಯನಗರದಲ್ಲಿ ಹೇಗೆ ಅಂತ್ಯ ಕಾಣುತ್ತದೆ ಎಂಬುದೇ ರೋಚಕ ಸಂಗತಿ. ಲೇಖಕರಾದ ವಸುಧೇಂದ್ರ ಇವರು ಈ ಕಾದಂಬರಿ ವಿಷಯ ಸಂಗ್ರಹಣೆಗೆ ತುಂಬಾ ಕಾಲ ಸಂಶೋಧನೆ ನಡೆಸಿದ್ದಾರೆ. ಊರಿನ, ರಾಜನ ಘಟನೆಗಳ (ಉದಾ; ವಾಸ್ಕೋಡಿಗಾಮ, ಕೃಷ್ಣ ದೇವರಾಯ…