ಪುಸ್ತಕ ಸಂಪದ

  • ಕನ್ನಡದ ನುಡಿಚಿತ್ರ ಬರಹಗಾರರು ಎನ್ನುವಾಗ ತಟ್ಟನೆ ನೆನಪಾಗುವ ಹೆಸರು ನಿರಂಜನ ವಾನಳ್ಳಿ. ೧೯೮೦ರ ದಶಕದಲ್ಲಿ ನುಡಿಚಿತ್ರಗಳನ್ನು ಬರೆಯಲಾರಂಭಿಸಿದ ಡಾ. ನಿರಂಜನ ವಾನಳ್ಳಿ, ಅಧ್ಯಾಪನ ವೃತ್ತಿಯಲ್ಲಿ ಮುಂದುವರಿಯುತ್ತಾ ಇಂದಿಗೂ ನುಡಿಚಿತ್ರಗಳನ್ನು ಬರೆಯುತ್ತಲೇ ಇದ್ದಾರೆ. ಈ ನಿಟ್ಟಿನಲ್ಲಿ, ಪತ್ರಿಕೋದ್ಯಮದ ಪಾಠ ಮಾಡುತ್ತಿದ್ದರೂ ವರುಷಕ್ಕೊಂದು ಬರಹವನ್ನೂ ಬರೆಯದಿರುವ ಪತ್ರಿಕೋದ್ಯಮದ ಹಲವಾರು ಪ್ರಾಧ್ಯಾಪಕರಿಗಿಂತ ಇವರು ಭಿನ್ನ.

    ತಮ್ಮ ಎಂ.ಎ. ಶಿಕ್ಷಣ ಮುಗಿಸಿದೊಡನೆ, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ವಿಭಾಗವನ್ನು ಪ್ರಾಧ್ಯಾಪಕರಾಗಿ ಸೇರಿಕೊಂಡರು ನಿರಂಜನ ವಾನಳ್ಳಿ. ಅನಂತರ, ಆರು ವರುಷ ಅಲ್ಲಿ ವೃತ್ತಿಯಲ್ಲಿ ಇದ್ದುಕೊಂಡೇ ಬೆಳ್ತಂಗಡಿ ತಾಲೂಕಿನ ಮೂಲೆಮೂಲೆಯ ಹಳ್ಳಿಗಳಿಗೂ ಹೋಗಿ ಬಂದು, ತಮ್ಮ…

  • ‘Don’t say my child is mild’ - The issue is development of self
    [ ಆಪ್ತ ಸಮಾಲೋಚಕನ ಅನುಭವಕಥನ ಸಂಕಲನ] 
    ಈ ಪುಸ್ತಕ ಬೆಂಗಳೂರಿನ ಸ್ವಪ್ನಾ ಬುಕ್ ಹೌಸ್  ಮತ್ತು  ಸಾಧನಾ ಪ್ರಕಾಶನ, ಬೆಂಗಳೂರು ಇಲ್ಲಿ ಲಭ್ಯವಿದೆ . ಫೋನ್  -   8197731986                                                    
      
    ಚಂದದ ಪುಟಾಣಿಯೊಂದು ತುಂಟನಗೆ ಬೀರುತ್ತಾ ನಿಂತಿದ್ದ ಮುಖಪುಟ ಹೊತ್ತ ‘Don’t say my child is mild’ ಪುಸ್ತಕವನ್ನು ಕೈಗೆತ್ತಿಕೊಂಡು ಓದುತ್ತಿದ್ದಂತೆಯೇ ಸಮಯ ಸರಿದದ್ದೇ ತಿಳಿಯಲಿಲ್ಲ. ನನ್ನ ಶಿಕ್ಷಕವೃತ್ತಿಯ ಅನುಭವಗಳೇ ತುಂಬಿವೆಯಲ್ಲಾ ಎಂಬ ಆಪ್ತತೆಯನ್ನು ಮೂಡಿಸಿತು ಈ ಹೊತ್ತಗೆ.
    ‘Don’t say my child is mild’ ಪುಸ್ತಕ ಖ್ಯಾತ ಶಿಕ್ಷಣತಜ್ಞ, ’ ಅಸಾಮಾನ್ಯ ಕನ್ನಡಿಗ…

  • “...ಮೂಲತ: ಮಾನವ ಬದುಕಿನ ಮೂಲವೇ ಸಸ್ಯಗಳು. ಪಂಚಭೂತಗಳಿಂದಾದ ಸಸ್ಯಗಳೇ, ಅದೇ ಮೂಲದ ಮಾನವನ ದೇಹಕ್ಕೆ ಆಧಾರವಾದುವು. ಪಂಚಭೂತ ತತ್ವಗಳಲ್ಲಿ ಎರಡೆರಡು ಘಟಕಗಳಿಂದ ಒಂದೊಂದು ರಸಗಳುತ್ಪನ್ನವಾದುವು. ಭೂಮಿ-ಜಲ ಯೋಗದಿಂದ-ಮಧುರ, ಅಗ್ನಿ-ಭೂಮಿ ಸೇರಿ ಹುಳಿ, ಬೆಂಕಿ-ನೀರು ಸೇರಿ ಉಪ್ಪು, ವಾಯು- ಆಕಾಶ ಸೇರಿ ಕಹಿ, ಬೆಂಕಿ-ವಾಯು ಸೇರಿ ಖಾರ, ವಾಯು, ಭೂಮಿ ಸೇರಿ ಒಗರು ಈ ಆರು ರಸಗಳು ಉಂಟಾದುವು. ಇವೇ ಷಡ್ರಸಗಳು (ಆರು ಆಹಾರ ರಸಗಳು.) ಮಾನವನ ದೇಹಧಾರಣೆ ಹಾಗೂ ಆರೋಗ್ಯ ಮೂಲದ್ರವ್ಯಗಳು. ನಮ್ಮ ಪರಿಪೂರ್ಣ ಆಹಾರದಲ್ಲಿನ ಮೂಲಘಟಕಗಳು. ಬದುಕಿನ ಚಟುವಟಿಕೆಗಳಿಗೆ ಅವಶ್ಯ ಇಂಧನಗಳು. ಈ ಮೂಲ ರಸಗಳು ನಿಶ್ಚಿತ ದಾಮಾಶಯದಲ್ಲಿ ಮಾತ್ರ ದೇಹಾರೋಗ್ಯಕ್ಕೆ ಮೂಲವಾಗಬಹುದು. ಆಹಾರದಲ್ಲಿನ ರಸಗಳು ನಿಶ್ಚಿತ ಪ್ರಮಾಣದಲ್ಲಿ ಇದ್ದರೆ ದೇಹವು ಸುಸ್ಥಿತಿಯಲ್ಲಿ ಇರುವುದು.…

  • ಎಲ್ಲರಿಗೂ ಖುಷಿ ಕೊಡುವ ಮಕ್ಕಳ ಕವನಗಳು ಎಂದಾಗ ನಮಗೆ ನೆನಪಾಗುವುದು ಪಂಜೆ ಮಂಗೇಶರಾಯರು, ಕು.ವೆಂ. ಪುಟ್ಟಪ್ಪನವರು, ರಾಜರತ್ನಂ, ದಿನಕರ ದೇಸಾಯಿ ಹಾಗೂ ಹೊಯಿಸಳರು ಬರೆದ ಮಕ್ಕಳ ಕವನಗಳು. ಇಂದಿಗೂ ನಮ್ಮ ಬಾಯಲ್ಲಾಡುವ ಮಕ್ಕಳ ಕವನಗಳನ್ನು ಬರೆದ ಅಂದಿನ ಕಾಲದ ಈ ಕನ್ನಡ ಕವಿಗಳ ಜೊತೆಗೆ ನೆನಪಾಗುವವರು  ಲಯಬದ್ಧ ಮಕ್ಕಳ ಹಾಡುಗಳನ್ನು ಬರೆದ ಡಾ.ಎಚ್.ಎಸ್. ವೆಂಕಟೇಶ ಮೂರ್ತಿ, ಡಾ.ಎನ್.ಎಸ್. ಲಕ್ಷ್ಮಿ ನಾರಾಯಣ ಭಟ್ಟ, ಪಳಕಳ ಸೀತಾರಾಮ ಭಟ್ಟ, ಡಾ. ಸುಮತೀಂದ್ರ ನಾಡಿಗ ಹಾಗೂ ಶ್ರೀನಿವಾಸ ಉಡುಪ.

    ಇಂತಹ ಹಳೆಯ ಹಾಗೂ ಹೊಸ ಮಕ್ಕಳ ಕವನಗಳು ಸಿ.ಡಿ.ಗಳಲ್ಲಿ ಸಿಗುವಂತಾದಾಗ ಅವನ್ನು ಕೇಳಬೇಕು, ಮಕ್ಕಳಿಗೆ ಕಲಿಸಬೇಕು  ಎಂಬವರಿಗೆಲ್ಲ ಹಣ್ಣು ಸಿಕ್ಕಂತಾಯಿತು. ಇನ್ನಷ್ಟು ಹೊಸ ಮಕ್ಕಳ ಕವನಗಳು ಬೇಕೆಂಬವರಿಗೆ "ಹಲೋ ಹಲೋ ಚಂದಮಾಮ” ಎಂಬ  ನಲುವತ್ತು ಕವನಗಳ…

  • ಡಿ.ಡಿ. ಭರಮಗೌಡ್ರು ಮಾತಿಗೆ ಶುರುವಿಟ್ಟರೆಂದರೆ, ಅವರ ಒಂದೊಂದು ಮಾತೂ ನಮ್ಮನ್ನು ಸೆಳೆದುಬಿಡುತ್ತಿತ್ತು - ಕನ್ನಡದಲ್ಲಿ ಗಂಡುಧ್ವನಿಯಲ್ಲಿ ನಿರರ್ಗಳವಾಗಿ ಹರಿದು ಬರುವ ಅನುಭವದ ಬೆಂಕಿಯಲ್ಲಿ ಬೆಂದ ಕಬ್ಬಿಣದ ಗುಂಡುಕಲ್ಲಿನಂತಹ ಮಾತುಗಳು.
    ಅಂತಹ ಭರಮಗೌಡ್ರು ಇಂದು ನಮ್ಮೊಂದಿಗಿಲ್ಲ. 13 ಜನವರಿ 2016 ರಂದು ವಿಧಿವಶರಾದರು. ಒಮ್ಮೆ ಅವರನ್ನು ಕಂಡರೆ ಸಾಕು, ಅವರ ಧೀಮಂತ ವ್ಯಕ್ತಿತ್ವ ನಮ್ಮಲ್ಲಿ ಅಚ್ಚೊತ್ತಿಬಿಡುತ್ತಿತ್ತು. ಅವರ ಮಾತಂತೂ ಮತ್ತೆಮತ್ತೆ ನೆನಪು.
    ನಮ್ಮ ಭಾಗ್ಯ. ಅವರ ಬದುಕನ್ನು 300 ಪುಟಗಳ "ಬದುಕು ಬೇಸಾಯ" ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ ವಿ.ಗಾಯತ್ರಿ.
    "ಸಾವಯವ ಕೃಷಿಕನ ಮಹಾನ್ ಪಯಣ" ಎಂಬುದು ಶಿರೋನಾಮೆಯೊಂದಿಗಿನ ಟಿಪ್ಪಣಿ. ಪುಸ್ತಕದ ಹೆಸರೇ ಹೇಳುವಂತೆ, ಭರಮಗೌಡ್ರ ಬದುಕೇ ಬೇಸಾಯ.…

  • ಮೌಢ್ಯತೆಯ ಪೊರೆ ಕಳಚಲು ಲೇಖನಿ ಹಿಡಿದ ಶಾಸ್ತ್ರಿಗಳು
    - ಮಹೇಶ ಕಲಾಲ್
    ಮೌಢ್ಯತೆಯ ಪೊರೆ ಕಳಚಿ ಸಾಹಿತ್ಯ ಗಂಗೆಯ ಹರಿಸಲು ಜನರನ್ನು ಪ್ರೇರೆಪಿಸಲೆಂಬಂತೆ ತಮ್ಮ ಮನೆಯ ಕಾರ್ಯವನ್ನು ಸಾರ್ವಜನಿಕವಾಗಿಸಿ ಆ ಸಮಯವನ್ನು  ಸಾಹಿತ್ಯ, ಚರ್ಚಾ ಕೂಟಗಳಿಗೆ ಸದ್ವಿನಿಯೋಗಿಸುತ್ತಿರುವ ಹಿರಿಯ ಸಾಹಿತಿ ಬಸವರಾಜ ಶಾಸ್ತ್ರಿಯವರ ಸೇವಾಕಾರ್ಯ ಶ್ಲಾಘನೀಯವಾದದ್ದು.
    ಕಸವು ರಸವಾಗಲಿ, ಧ್ಯೇಯೋದ್ದೇಶಗಳು ಅದ್ವಿತೀಯ ಬೀಜಾಕ್ಷರಗಳಾಗಲಿ ಎಂಬ ದೃಷ್ಠಿಯಿಂದ ಪ್ರತಿಯೊಂದು ಕಾರ್ಯಕ್ಕೂ ಸಾಹಿತ್ಯ ಸೇವೆಯ ಅನುಪಮ ಅವಕಾಶವನ್ನು ಒದಗಿಸಿ, ಸಾಹಿತ್ಯ ಸೃಷ್ಠಿಯ ಜೊತೆಗೆ ವಾಗ್ದೇವಿಯ ವರಪುತ್ರರಿಗೆ ಆಹ್ವಾನವಿಯುತ್ತ ಇಳಿ ವಯಸ್ಸಿನಲ್ಲಯೂ ಕ್ರಿಯಾಶೀಲ ವ್ಯಕ್ತಿತ್ವದಿಂದ ಸದಾ ತಾ ಮುಂದು ಎನ್ನುವು ಘೋಷಾ ವಾಕ್ಯದೊಂದಿಗೆ ಹಗಲಿರುಳೂ ಸೇವಾಕೈಂಕರ್ಯದಲ್ಲಿ…

  • ಶಿವರಾಮ ಕಾರಂತರ ‘ಬೆಟ್ಟದ ಜೀವ’ (1935?) ಕಾದಂಬರಿಯನ್ನು ನಾನು ಮೊದಲು ಓದಿದ್ದು ಸುಮಾರು ಹನ್ನೆರಡು ವರ್ಷಗಳ ಹಿಂದೆ.  ಎಲ್ಲವೂ ಸ್ವಲ್ಪ ಮರೆತಂತಾಗಿತ್ತು.  ಹಾಗಾಗಿ ಈ ವಾರ ಮತ್ತೊಮ್ಮೆ ಓದಿದೆ.  ಕಥೆಯ ಹಿಂದು-ಮುಂದುಗಳನ್ನು ನಾನು ವಿವರಿಸುವ ಗೋಜಿಗೆ ಹೋಗುವುದಿಲ್ಲ.  ಅದು ಓದಿ ತಿಳಿದರೇನೆ ಸರಿ.  ‘ಬೆಟ್ಟದ ಜೀವ’ದ ಮುಖ್ಯ ಪಾತ್ರ ಕಟ್ಟದ ಗೋಪಾಲಯ್ಯ ಅವರದು.   ಕರ್ನಾಟಕದ ಪಶ್ಚಿಮ ಘಟ್ಟಗಳ ಭಾಗವಾದ ಕುಮಾರ ಪರ್ವತ, ಶೇಷ ಪರ್ವತ, ಸಿದ್ಧ ಪರ್ವತ, ಹೀಗೆ ಕಳಂಜಿಮಲೆಗಳ ಚಿತ್ರವನ್ನು ಬಿಡಿಸುವಾಗಲೆಲ್ಲಾ ಕಾರಂತರು ಗೋಪಾಲಯ್ಯನವರ ವ್ಯಕ್ತಿತ್ವವನ್ನೇ ವಿವರಿಸುತ್ತಿರುವುದು ಸ್ಪಷ್ಟ.  ಉದಾಹರಣೆಗೆ ಇದನ್ನು ನೋಡಿ
    “ಹಿಂದಿನ ದಿನ ಅದೇ ಬೆಟ್ಟ ನನಗೆ ಮೊಸರು ಗದ್ದೆಯಲ್ಲಿ ನಿಂತ ನೀಲ ಕಡೆಗೋಲಿನಂತೆ ಕಾಣಿಸಿತ್ತು.  ಇಂದು ಹಿಮದ ಮೊಸರಿರಲಿಲ್ಲ. …

  • ಡಾ. ಸರಜೂ ಕಾಟ್ಕರ್ ನಮ್ಮ‌ ಓರಗೆಯ‌  ಒಬ್ಬ‌ ಸತ್ವಶಾಲೀ ಲೇಖಕರು. ಪತ್ರಕರ್ತರಾಗಿ ಹಾಗೂ ವ್ಯಾಪಕ‌ ಓಡಾಟ‌ ಮಾಡಿದವರಾಗಿ ಅವರ‌ ಅನುಭವ‌ ವಿಶಿಷ್ಟವಾದುದು.ಅವರ‌ ಹಲವು ಕ್ಱತಿಗಳು ಬಹುಬೇಗನೆ ಮರುಮುದ್ರಣ‌ ಕ0ಡಿವೆ.

          ಅವರ‌ ಈ ಕಾದ0ಬರಿ 'ಜುಲೈ 22, 1947' ಕೇವಲ‌ ಒ0ದು ನೂರು ಪುಟಗಳದ್ದು. ಆದರೆ ಕನ್ನಡದಲ್ಲಿ ಹೊಸದೊದು ವಸ್ತುವನ್ನು ಆರಿಸಿಕೊ0ಡಿದ್ದಾರೆ. ಸತ್ಯ‌ಪ್ಪ ಎ0ಬ ಸಾಮಾನ್ಯ ಅಟೆ0ಡರ್ ಒಬ್ಬನು ರಾಷ್ಟ್ರದ್ವಜದ ಬಗ್ಗೆ ಹೊದಿದ್ದ ಅತೀವ ಅಭಿಮಾನ‌, ಅವನ ನಿಷ್ಟೆ, ಅವನ ಪ್ರಾಮಣಿಕತೆ, ಅವನನ್ನು ಹಣಿಯಲು ಇತರರು ಬಳಸುವ ತ0ತ್ರಗಳು, ಅವನ ಮಗ ಉಡಾಳನಾಗಿ ನೋವು ತ0ದ್ದು, ಕೊನೆಗೆ ಸತ್ಯ‌ಪ್ಪನು ರಾಷ್ಟ್ರದ್ವಜದ‌ ಗೌರವ‌ ಕಾಡುವ‌ ಪ್ರಯತ್ನದಲ್ಲೇ ಸಾವನ್ನಪ್ಪುವುದು‍, ಇವೆಲ್ಲಾ ಇಲ್ಲಿ ತು0ಬ‌ ಪರಿಣಾಮಕಾರಿಯಾಗಿ ಚಿತ್ರಿತವಾಗಿವೆ. ಇದು…

  • ಒಂದು ಕಾದಂಬರಿಯ ಸುತ್ತಾ ....

    ಈಗಷ್ಟೇ ಮುಗಿಸಿದ 'ಪರಿಭ್ರಮಣ' ಎಂಬ ಕಾದಂಬರಿಯ ಕುರಿತು ಈ ಬರಹ. ನಾಗೇಶ ಮೈಸೂರು ಅವರ ಈ ಕೃತಿ, ಸಂಪದ online ಪತ್ರಿಕೆಯಲ್ಲಿ ಅರವತ್ತಕ್ಕೂ ಹೆಚ್ಚು ಕಂತುಗಳಲ್ಲಿ ಮೂಡಿಬಂದಿದೆ.ಕೆಳಗಿನ ಲಿಂಕ್ ನಲ್ಲಿ ಈ ಸರಣಿ ಲಭ್ಯವಿದೆ.

    https://nageshamysore.wordpress.com/00162-%e0%b2%95%e0%b2%a5%e0%b3%86-%e...

    ಪರಿಭ್ರಮಣೆ ಮುಗಿದಿದೆಯಾದರೂ ಇದೊಂದು ಕಾಡುವ ಆವರ್ತನ. ಕಥೆಯಲ್ಲಿ ಜೀವನದ ಅವರೋಹಣವನ್ನು, ಅದರ ಅಧಃಪತನದ ವಿವಿಧ ಮುಖಗಳನ್ನು ಯಶಸ್ವಿಯಾಗಿ ಚಿತ್ರಿಸಿದ್ದಾರೆ. ಇದನ್ನೆಲ್ಲಾ ದಾಟಿ ಆರೋಹಣದ ಮಾರ್ಗವನ್ನು ತರ್ಕಬದ್ಧವಾಗಿ, ಆಧ್ಯಾತ್ಮಿಕವಾಗಿ ವಿವರಿಸಿರುವುದು ಅದ್ಭುತ.

    ಈಗಿನ ಕಾಲಮಾನಕ್ಕೆ ಸರಿಯಾಗಿ IT ಯ ಬದುಕಿನ ಸೂಕ್ಷ್ಮತೆಯನ್ನು, ವಿದೇಶದಲ್ಲಿ ಭಾರತೀಯರ…

  • ಜನನಾರಾಭ್ಯ ಒಂದಷ್ಟು ಪ್ರಶ್ನೆಗಳು, ಕುತೂಹಲಗಳು ಉತ್ತರವಿಲ್ಲದೆ ಉಳಿದುಕೊಂಡೇ ಇರುತ್ತದೆ. ಈ ವಿಶ್ವ, ಭೂಮಿ, ಚರಾಚರ ವಸ್ತುಗಳು, ಅವುಗಳ ಬದುಕು ಹೀಗೆ ಯಾವುದೇ ವಿಚಾರ ತೆಗೆದುಕೊಂಡರೂ ನಮಗಿನ್ನೂ ಸಂಪೂರ್ಣವಾಗಿ ತೆರೆದುಕೊಂಡಿಲ್ಲ. ವಿಜ್ಞಾನ ಇಷ್ಟು ಮುಂದುವರಿದು ಬದುಕನ್ನು ಸರಾಗವಾಗಿಸಿದ್ದರೂ ಸಹ ಇನ್ನೂ ಪ್ರಕೃತಿ ತನ್ನ ನಿಗೂಢತೆಯನ್ನು ಬಿಟ್ಟು ಕೊಟ್ಟಿಲ್ಲ.

    ರಾತ್ರಿ ಸುಮ್ಮನೆ ನಿಂತು ಕೋಟ್ಯಾನುಕೋಟಿ ನಕ್ಷತ್ರಗಳನ್ನು ವೀಕ್ಷಿಸಿದರೆ ಈ ಅಗಾಧತೆ ಅರಿವಾಗುತ್ತದೆ. ಸುತ್ತ ಮುತ್ತಲಿರುವ ಸಾಕಷ್ಟು ವಿಚಿತ್ರಗಳಿಗೆ, ವಿಶೇಷಗಳಿಗೆ ಕಣ್ಮುಚ್ಚಿಕೊಂಡು ಎಲ್ಲವೂ ಸಹಜವೆಂಬಂತೆ ನಾವು ಬದುಕುತ್ತಿದ್ದೇವೆ. ಆದರೆ ಮನಸಿನಾಳದಲ್ಲಿ ಪ್ರಶ್ನೆಗಳು, ಗೊಂದಲಗಳು ಹಾಗೆ ಇವೆ. ಈ ಅಸ್ಪಷ್ಟತೆಯನ್ನು ಗುರುತಿಸಿ, ಅದನ್ನು ಚಿಂತಿಸಿ, ಗಂಟು ಬಿಡಿಸುವ ಅಪರೂಪದ…