ಪುಸ್ತಕ ಸಂಪದ

  • ತೇಜಸ್ವಿ ಎ.ಸಿ ಯವರ ಕವನ ಸಂಕಲನ "ನೆರಳ ಹೆಜ್ಜೆ" ಮಾರ್ಚ್ ೧೫, ೨೦೧೫ರಂದು ಬಿಡುಗಡೆಗೊಂಡಿದೆ. ಜೀವನದ ಅನುಭವಗಳನ್ನು ಅನುಭವಿಸುತ್ತಾ, ಸಣ್ಣ ಪುಟ್ಟ ವಿಷಯಗಳಲ್ಲೂ ಸ್ವಾರಸ್ಯವನ್ನು ಕಾಣುತ್ತ, ಜೀವನದ ಹಲವು ಮಜಲುಗಳನ್ನು ಕವನಗಳ ರೂಪದಲ್ಲಿ ಸೆರೆ ಹಿಡಿದು.
    ಈ ಎಲ್ಲಾ ಕವನಗಳನ್ನು ಪೋಣಿಸಿ ಕವನ ಸಂಕಲವನ್ನಾಗಿ ಮಾಡಲಾಗಿದೆ.
    ಬಾಲ್ಯದಲ್ಲಿ ಮಕ್ಕಳ ತುಂಟಾಟ, ಪ್ರಕೃತಿ ವರ್ಣನೆ, ಜೀವನ ಪಾಠಗಳು, ಸ್ಫೂರ್ತಿ ಕೊಡುವ ವಿಷಯಗಳು, ಕನಸುಗಳು, ನೆನಪುಗಳು, ಮಧುರ ಭಾವನೆಗಳು ಹೀಗೆ ಹಲವಾರು ವಿಷಯಗಳನ್ನು ಕವನದ ರೂಪದಲ್ಲಿ ಈ ಹೊತ್ತಿಗೆ ಹೊಂದಿದೆ.
    ೨೦೧೫ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕವಿ ಡಾ. ಸಿದ್ಧಲಿಂಗಯ್ಯನವರು ಈ ಕೃತಿ ಲೋಕಾರ್ಪಣೆ ಮಾಡಿ, ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.…

  • ಕನ್ನಡ‌ದ‌ ಹೆಸರಾಂತ‌ ಕಾದಂಬರಿಕಾರ‌ ಹಾಗೂ ಕವಿ, ಡಾ. ನಾ. ಮೊಗಸಾಲೆಯವರ‌ ಮತ್ತೊಂದು ಬ್ಱುಹತ್ ಕಾದಂಬರಿ 'ಮುಖಾಂತರ‌' ಇದೀಗ‌ ಧಾರವಾಡದ‌ ಪ್ರಸಿದ್ಧ‌ 'ಮನೋಹರ‌ ಗ್ರಂಥಮಾಲೆ' ಯಿಂದ‌ ಪ್ರಕಟಗೊಂಡಿದೆ. ಅವ‌ ಹಿಂದಿನ‌ ಬ್ರುಹತ್ ಕಾದಂಬರಿ 'ಉಲ್ಲಂಘ‌ನೆ' ದಕ್ಷಿಣ‌ ಕನ್ನಡ‌ ಜಿಲ್ಲೆಯ‌ ಬಂಟ‌ ಸಮಾಜದ‌ ಮೂರು ತಲೆಮಾರುಗಳ‌ ಜೀವನ‌ ವಿಧಾನದಲ್ಲಾ ಏರುಪೇರುಗಳನ್ನು ಚಿತ್ರಿಸಿತ್ತು. ಅದು ಮರಾಠಿ ಮತ್ತು ತೆಲುಗು ಬಾಷೆಗಳಿಗೆ ಅನುವಾದವಾಗಿದೆ.ಈಗ‌ ಪ್ರಕಟಗೊಂಡಿರುವ‌ ಮುಖಾಂತರ‌ ಕಾದಂಬರಿಯು ಕಾಸರಗೋದು ,ದಕ್ಷಿಣಕನ್ನಡ‌ ಪ್ರದೇಶದ‌ ಬ್ರಾಹ್ಮಣರು, ಅವರ‌ ಒಳ‌ ಪಂಗಡಗಳಲ್ಲಿ ಮ್?ಮೂರು ತಲೆಮಾರಿನಲ್ಲಾದ‌ ಬದಲಾವಣೆಗಳು, ಸ್ವಾತ0ತ್ರ್ಯ‌ ಚಳುವಳಿಯ‌ ಪ್ರಬಾವಗಳು‍ಇವನ್ನೆಲ್ಲ‌ ನಿರುದ್ವಿಗ್ನವಾದ‌ ಸಮತೋಲಿತ‌ ಷೈಲಿಯಲ್ಲಿ ನಿರೂಪಿಸುತ್ತದೆ. ನಮ್ಮ‌ ಪ್ರಬುದ್ಧ‌…

  • ನಿನ್ನೆ ಕೆಲಸದ ಒತ್ತಡದ ನಡುವೆ ತೀರ ಬೇಸರವಾಗಿ ಯಾವುದಾದರೊಂದು ಪುಸ್ತಕವನ್ನು ಓದಬೇಕೆಂದು ನನ್ನದೇ ಪುಸ್ತಕಗಳ ಕಲೆಕ್ಷನ್ನಿನಲ್ಲಿ ಹುಡುಕುತ್ತಿದ್ದೆ. ಪ್ರೇಮಾ ಕಾರಂತರ "ಸೋಲಿಸಬೇಡ ಗೆಲಿಸಯ್ಯ" ಪುಸ್ತಕ ಕಣ್ಣಿಗೆ ಬಿತ್ತು. ಮನೋಹರ ಗ್ರಂಥಮಾಲೆಯಿಂದ ಅಂಚೆಯ ಮೂಲಕ ವರ್ಷಗಳ ಹಿಂದೆಯೇ ನನಗೆ ಈ ಪುಸ್ತಕ ತಲುಪಿತ್ತು. ಆದರೆ ಸರಿಯಾಗಿ ಓದಲು ಆಗಿರಲಿಲ್ಲ. ನಿನ್ನೆಯಷ್ಟೆ ಬೇಸರ ಕಳೆಯಲು ॑ಹಂಸಗೀತೆ॑ಯ ಹಾಡುಗಳನ್ನು ಕೇಳುತ್ತ ಕುಳಿತಿದ್ದ ನನಗೆ ಅದಕ್ಕೆ ಹಿನ್ನೆಲೆ ಸಂಗೀತ ನೀಡಿದ್ದ ಬಿ ವಿ ಕಾರಂತ ನೆನಪಾಗಿದ್ದರು. ಆ ಚಿತ್ರದಲ್ಲಿನ ವಸ್ತ್ರ ವಿನ್ಯಾಸ ಪ್ರೇಮಾ ಕಾರಂತರದ್ದು.

    ಪ್ರೇಮಾ ಕಾರಂತರು ಏನು ಬರೆದಿರಬಹುದು ಎಂಬ ಕುತೂಹಲದಿಂದ ಓದಲು ಪ್ರಾರಂಭಿಸಿದ ಪುಸ್ತಕ ಓದು ಮುಗಿಸುವವರೆಗೂ ತೆಗೆದಿಡಲು ಮನಸ್ಸಾಗಲೇ ಇಲ್ಲ. ಸಾಧನೆಯ ಜೀವನ ನಡೆಸಿದ…

  • ಸಂಪದ ಸ್ನೇಹಿತರೇ,
    ನಿಮ್ಮಲ್ಲಿ ನನ್ನದೊಂದು ವಿಜ್ಞಾಪನೆ. ಅದೇನೆಂದರೆ, ಗೋಪಾಲಕೃಷ್ಣ ಪೈ ಅವರು ಕನ್ನಡಕ್ಕೆ ಅನುವಾದಿಸಿರುವ “ಆಧುನಿಕ ಚೀನೀ ಸಣ್ಣಕತೆಗಳು” ಎಂಬ ಕಥಾಸಂಕಲನವನ್ನು ಹೇಗಾದರು ಸಂಪಾದಿಸಿ, ಅದರ ಸ್ವಾದವನ್ನು ಆಘ್ರಾಣಿಸಬೇಕೆಂದು ಪ್ರೀತಿಯಿಂದ ಆಗ್ರಹಿಸುತ್ತಿದ್ದೇನೆ.
           ಪ್ರತಿಯೊಂದು ಕತೆಯೂ ತನ್ನ ಮುಕ್ತಾಯದಲ್ಲಿ ಪ್ರಾರಂಭದ ಸೂಚನೆಯನ್ನು ಕೊಡುತ್ತೆ. ಅದು ಕತೆಗಿರಬಹುದು ಇಲ್ಲವೆ ಓದುಗನ ವಿಚಾರ ಸರಣಿಗಿರಬಹುದು. ನಾನು ಒಂದಂತೂ ಹೇಳಬಲ್ಲೆ, ಸಮಯವನ್ನು ಸಾರ್ಥಕಗೊಳಿಸಿಕೊಂಡ ಮತ್ತು ಸಮ್ಮೋಹನ ವಿದ್ಯೆಗೆ ಬಲಿಯಾಗುವಂತಹ ಬೇರೆ ತರಹದ ನಿರೂಪಣಾ ಕೌಶಲ್ಯವನ್ನು ನೀವೂ ಮೆಚ್ಚಿಯೇ ಮೆಚ್ಚಿತ್ತೀರಿ. ಅಲ್ಲದೆ ಗೋಪಾಲಕೃಷ್ಣ ಪೈ ಅವರು ಕನ್ನಡಕ್ಕೆ ಅಳವಡಿಸಿದ ರೀತಿಗೆ ಮಾರು ಹೋಗಲೆ ಬೇಕು.
           ಹೀಗೆ…

  • ಈಚೆಗೆ ರಜೆಯಲ್ಲಿ ಭಾರತಕ್ಕೆ ಭೇಟಿ ಕೊಟ್ಟಿದ್ದಾಗ ಕನ್ನಡ ಪುಸ್ತಕ ಖರೀದಿಸಲು ಹೋದಾಗ ಕೊಂಡ ಪುಸ್ತಕಗಳಲ್ಲಿ ವಸುಧೇಂದ್ರರ ಇತ್ತೀಚೆಗೆ ಬಿಡುಗಡೆಯಾದ ಹೊಸ ಸಣ್ಣ ಕಥೆಗಳ ಸಂಕಲನ 'ಮೋಹನಸ್ವಾಮಿ' ಒಂದು. ಈ ಪುಸ್ತಕದ ಕಿರು ಪರಿಚಯದ ಯತ್ನ ಈ ಬರಹ.

    ಈ ಸಂಕಲನದಲ್ಲಿ ಒಟ್ಟು ಹನ್ನೊಂದು ಕಥೆಗಳಿದ್ದು ಅದರಲ್ಲಿ ನಾಲ್ಕೈದು ಕಥೆಗಳು ನಮ್ಮ ಕಥೆಗಳಲ್ಲಿ ಅಪರೂಪವಾದ 'ಹೆಣ್ಣಿಗ'  (ಸಲಿಂಗಕಾಮಿ) ವ್ಯಕ್ತಿತ್ವವನ್ನು ಬಿಂಬಿಸುವ ಕಥೆಯಾಗಿರುವುದು ಈ ಸಂಕಲನದ ವಿಶೇಷಗಳಲ್ಲಿ ಒಂದು. ಸಂಕಲನದ ಮೊದಲ ಕಥೆ 'ತುತ್ತತುದಿಯಲ್ಲಿ ಮೊತ್ತಮೊದಲು' ಕೂಡ ಇದೆ ಕಥಾವಸ್ತುವಿನಿಂದಲೆ ಆರಂಭವಾಗುವ ಕಥಾನಕ. ಇಲ್ಲಿ (ಮತ್ತೂ ಕೆಲವು ಕಥಾನಕಗಳಲ್ಲಿ ಸಹ) ಬರುವ ಮೋಹನಸ್ವಾಮಿ ಪಾತ್ರ ಆಂತರ್ಯದಲ್ಲಿ ಹೆಣ್ಣಿನ ಮನಸತ್ವವಿರುವ ಅಧುನಿಕ ಜಗದಲ್ಲಿ ಇತರ ಸಾಮಾನ್ಯರಂತೆ ಜೀವಿಸುತ್ತಿರುವ…

  • "ತುಂಟಶೀನನ ತ್ರಿಪದಿಗಳು" ಆಧುನಿಕ ಕಾಲದ ತ್ರಿಪದಿಗಳಾಗಿವೆ

    ಹೆಚ್ಚಿನ ವಿವರಗಳಿಗಾಗಿ ಕೆಳಕಂಡ ಬ್ಲಾಗ್ ವೀಕ್ಷಿಸಿ

    http://shreenathshejwadkar.blogspot.in/

  • ಚೇತನ್ ಭಗತ್ ಬರೆದ 'ದ ತ್ರಿ ಮಿಸ್ಟೇಕ್ಸ್ ಆಫ್ ಮೈ ಲೈಫ್' ನಿಜಕ್ಕೂ ಆಸಕ್ತಿ ಮೂಡಿಸುವಂತಹ ಪುಸ್ತಕ. ಮೇಲ್ನೋಟಕ್ಕೆ ಅಹಮದಾಬಾದ್ ನ ಮೂರು ಗೆಳೆಯರ ಜೀವನದ ಭಿನ್ನ ಆಸಕ್ತಿ, ದ್ವಂದ್ವ, ನೋವು-ನಲಿವುಗಳ ಕಥೆಯಂತೆ ಕಂಡರೂ, ಕಥೆಯೊಳಗೆ ಇಳಿದಾಗ ಭಾರತೀಯ ಸಮಾಜ, ಧರ್ಮ, ಕ್ರಿಕೆಟ್, ವ್ಯಾಪಾರಗಳ ಬಗ್ಗೆ ಆಳವಾದ ಅರಿವು ಮೂಡಿಸುವುದಂತೂ ಸತ್ಯ..ಮೂರು ಗೆಳೆಯರಲ್ಲಿ, ಗೋವಿಂದ್‌ ಬಡ ಕುಟುಂಬದ ಹುಡುಗ, ಲೆಕ್ಕದಲ್ಲಿ ಪಕ್ಕಾ, ಬಿಸಿನೆಸ್ ಮಾಡಿ ಸಿರಿವಂತನಾಗಬೇಕೆಂಬ ಅದಮ್ಯ ಬಯಕೆ. ಇಶಾಂತ್ ಮಧ್ಯಮ ಕುಟುಂಬದ ಯುವಕ, ಭಾರತೀಯ ಸೇನೆಯ ಸೇವೆಯನ್ನು ಬಿಟ್ಟು ಬಂದು ಒಂದು ವರ್ಷವಾದರೂ ಬೇರೆ ಕೆಲಸವಿಲ್ಲ, ಕ್ರಿಕೆಟ್‌ನಲ್ಲಿನ ಆಸಕ್ತಿಯಿಂದಾಗಿ ಬೇರೆ ಯಾವ ಕೆಲಸದಲ್ಲೂ ಆಸಕ್ತಿಯಿಲ್ಲ. ಮೂರನೆಯವನು ಓಮಿ, ಅರ್ಚಕರ ಮಗ, ಗೊತ್ತುಗುರಿಯಿಲ್ಲದ ಜೀವನ. ಈ ಮೂವರು ಕಥಾನಾಯಕರ…

  • ಇತ್ತೀಚೆಗೆ ಸಿಂಗಪುರದಲಿ ನಡೆದ 'ಭಾವ ಸುಧೆ ದೀಪೋತ್ಸವ - 2013' ಸಮಾರಂಭದಲ್ಲಿ ಶ್ರೀಯುತ ಗಿರೀಶ್ ಜಮದಗ್ನಿಯವರ ಮೊದಲ ಕಥಾ ಸಂಕಲನ "ಕಣ್ಣೀರಜ್ಜ ಮತ್ತು ಇತರ ಕಥೆಗಳು" ಪುಸ್ತಕ ರೂಪದಲ್ಲಿ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಸಂಧರ್ಭದಲ್ಲೆ ಈ ಪುಸ್ತಕವನ್ನು ನೇರ ಕೊಳ್ಳುವ ಅವಕಾಶವಿದ್ದ ಕಾರಣ ಅಂದೆ ನಾನೂ ಒಂದು ಪ್ರತಿ ಖರೀದಿಸಿದ್ದೆನಾದರೂ, ಬಿಡುವಿಲ್ಲದ ಕಾರಣ ತಕ್ಷಣ ಓದಲಾಗಿರಲಿಲ್ಲ. ಈ ವಾರದ ಕೊನೆಯಲ್ಲಿ ತುಸು ಬಿಡುವಿನಲಿ ಓದಲು ಕುಳಿತದ್ದರ ಪ್ರತಿಫಲ ಈ ಕಿರು ವಿಮರ್ಶೆ. 

    (ತಮ್ಮ ಕೃತಿಯ ಲೋಕಾರ್ಪಣೆಯ ಕುರಿತು ಶ್ರೀ ಗಿರೀಶರು ಸಂಪದದಲ್ಲೂ ಒಂದು ಕಿರು ಲೇಖನ ಪ್ರಕಟಿಸಿದ್ದರು. ಲೇಖನಕ್ಕೆ ಮತ್ತು ಪುಸ್ತಕ ಕುರಿತ ಇತರ ವಿವರಗಳಿಗೆ ಈ ಕೊಂಡಿ ನೋಡಿ )

    ಇಲ್ಲಿರುವ ಒಟ್ಟು ಹದಿಮೂರು ಕಥೆಗಳು ಲೇಖಕರೆ ಹೇಳಿದಂತೆ, ಕಾಲಾಂತರದಲ್ಲಿ…

  • ನಾನು ವಿಮರ್ಷಕನಲ್ಲ, ಆದರೂ ಬದರಿನಾಥರ ಕವಿತೆಗಳನ್ನು ಓದಿದ ಮೇಲೆ, ಅವುಗಳ ಬಗ್ಗೆ ಒಂದೆರಡು ಮಾತುಗಳನ್ನಾಡದೇ ಹೋದರೆ ತಪ್ಪಾದೀತು ಎನ್ನುವುದು ನನ್ನ ಅನಿಸಿಕೆ ಅಷ್ಟು ಸುಂದರವಾಗಿ ಮೂಡಿ ಬಂದಿದೆ ಗೆಳೆಯ ಬದರಿಯವರ ಚೊಚ್ಚಲ ಕವನ ಸಂಕಲನ "ಪಾತ್ರ ಅನ್ವೇಷಣಾ". ಈ ಕವನ ಸಂಕಲನದ ಏನಿದೆ, ಏನಿಲ್ಲ? ಇಲ್ಲಿ ಪ್ರೀತಿಯ ಸೆಳತವಿದೆ, ನೋವಿದೆ, ಬದುಕಿನ ವಿವಿಧ ಮಜಲುಗಳನ್ನು ನೋಡಿದ ಅನುಭವವಿದೆ, ಕಾಳಜಿಯಿದೆ, ಸಂಬ್ರಮವಿದೆ ಹೀಗೆ ಎಲ್ಲವೂ ಇವೆ.

    ಪಾಚಿ ಬೆಳೆದ ಹೊಡದಲ್ಲಿ ಹೇಗೆ ಆ ಹೊಂಡದ ಆಳವನ್ನು ತಿಳಿಯಲಾಗುವುದಿಲ್ಲವೋ ಹಾಗೆ, ನಮ್ಮ ಜೊತೆಯಲ್ಲೇ ಇದ್ದು ನಮ್ಮ ವಿರುದ್ದ ಪಿತೂರಿ ನಡೆಸುವ ಹಿತ ಶತ್ರುಗಳನ್ನು ಅರಿಯುವುದು ಕಷ್ಟ ಎನ್ನುವ ಈ ಕೆಳಗಿನ ಸಾಲಿನೊಂದಿಗೆ ಪ್ರಾರಂಭವಾಗುತ್ತದೆ ಗೆಳೆಯ ಬದರಿನಾಥ ಪಲವಳ್ಳಿಯವರ "ಪಾತ್ರ ಅನ್ವೇಷಣಾ" ಕವನ ಸಂಕಲನ.…