ಪುಸ್ತಕ ಸಂಪದ

  • ಪತ್ರಕರ್ತ ಪ್ರತಾಪ್ ಸಿಂಹ ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹವೇ ಬೆತ್ತಲೆ ಜಗತ್ತು. ಈಗ ಇಲ್ಲಿರುವುದು ಅದರ ಹದಿನೈದನೇ ಭಾಗ. ಪ್ರತಿ ಶನಿವಾರ ಪ್ರತಾಪ್ ಸಿಂಹ ಅವರ ಅಂಕಣವನ್ನು ಕಾಯುತ್ತಿದ್ದ ದೊಡ್ಡದಾದ ಓದುಗ ಸಮೂಹ ಇತ್ತೆಂದರೆ ಸುಳ್ಳಲ್ಲ. ತೀಕ್ಷ್ಣವಾಗಿ ಚಾಟಿ ಬೀಸುವಂತಹ ರಾಜಕೀಯ ಲೇಖನಗಳಿಂದ ಹಿಡಿದು. ಕ್ರೀಡೆ, ಸಾಹಿತ್ಯ, ಸಿನೆಮಾ ಮುಂತಾದ ಎಲ್ಲಾ ವಿಚಾರಗಳನ್ನು ಅಧ್ಯಯನ ಮಾಡಿ ಬರೆಯುತ್ತಿದ್ದರು. ಪ್ರತಿಯೊಂದು ಲೇಖನಗಳಿಗೆ ಸೂಕ್ತ ಆಧಾರ ಒದಗಿಸುತ್ತಿದ್ದುದು ಇವರ ಹೆಗ್ಗಳಿಕೆ. 

    ಈ ಪುಸ್ತಕದಲ್ಲಿ ೨೬ ಅಧ್ಯಾಯಗಳಿವೆ. ಎಸ್. ಎಲ್.ಭೈರಪ್ಪ, ನರೇಂದ್ರ ಮೋದಿ, ಅಟಲ್ ಬಿಹಾರಿ ವಾಜಪೇಯಿ, ನರಸಿಂಹ ರಾವ್, ವಿಶ್ವೇಶ್ವರಯ್ಯ…

  • ‘ಮುತ್ತಜ್ಜಿಯ ಪಾಕಶಾಲೆ’ ಪುಸ್ತಕದ ಹೆಸರೇ ಹೇಳುವಂತೆ ಇದೊಂದು ಪಾಕ ಸಲಹೆಯ ಪುಸ್ತಕ. ಸುಮಾರು ೬೦ ವರ್ಷಗಳ ಹಿಂದೆ ನಮ್ಮ ಅಜ್ಜಿ, ಮುತ್ತಜ್ಜಿಯವರು ತಯಾರು ಮಾಡುತ್ತಿದ್ದ ವಿವಿಧ ಬಗೆಯ, ಅಪರೂಪದ ಅಡುಗೆಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಪುಸ್ತಕದಲ್ಲಿನ ಪಾಕಗಳನ್ನು ತಯಾರಿಸಿದ್ದು ಎಲ್ಲರ ಪ್ರಿಯರ ‘ಕೋಲಾರಜ್ಜಿ' ಸರಸ್ವತಮ್ಮ. ಸರಸ್ವತಮ್ಮನವರು ಹುಟ್ಟಿದ್ದು ತಮಿಳುನಾಡಿನ ಕೃಷ್ಣಗಿರಿಯಲ್ಲಿ. ೧೯೧೫ ಡಿಸೆಂಬರ್ ೨೦ರಂದು. ತನ್ನ ಹದಿಮೂರನೆಯ ವಯಸ್ಸಿನಲ್ಲಿ ನಂದಿಗಿರಿ ರಾವ್ ಅವರನ್ನು ವಿವಾಹವಾಗಿ ಕೋಲಾರಕ್ಕೆ ಬಂದರು. ನಂದಿಗಿರಿ ರಾವ್ ಅವರು ಕೋಲಾರದಲ್ಲಿ ನ್ಯಾಯವಾದಿಯಾಗಿ ಕೆಲಸ ಮಾಡುತ್ತಿದ್ದರು. ಈ ದಂಪತಿಗಳಿಗೆ ಹತ್ತು ಜನ ಮಕ್ಕಳು. ಪತಿಗೆ ನೆಚ್ಚಿನ ಮಡದಿಯಾಗಿ, ಹೆತ್ತ ಮಕ್ಕಳ ಕಣ್ಮಣಿಯಾಗಿ, ಮೊಮ್ಮಕ್ಕಳ…

  • ‘ನನ್ನ ತಮ್ಮ ಶಂಕರ್' ಎನ್ನುವ ಪುಸ್ತಕ ಖ್ಯಾತ ಚಿತ್ರನಟ, ನಿರ್ದೇಶಕ ಶಂಕರ್ ನಾಗ್ ಅವರ ಜೀವನ ಕಥನ ಅವರ ಅಣ್ಣನ ದೃಷ್ಟಿಯಲ್ಲಿ. ಬದುಕಿದ ಕೇವಲ ೩೬ ವರ್ಷಗಳಲ್ಲಿ ಶಂಕರ್ ಸಾಧಿಸಿದ್ದು ಬಹಳ. ಪಾದರಸದ ವ್ಯಕ್ತಿತ್ವ, ದೂರದರ್ಶಿ ಚಿಂತನೆ ಇವೆಲ್ಲಾ ಮೇಳೈಸಿದ ಅಪರೂಪದ ವ್ಯಕ್ತಿ ಶಂಕರ್ ನಾಗ್. ಇವರ ಸಾವಿನ ಬಳಿಕ ಅನಂತನಾಗ್ ಒಂದು ರೀತಿಯಲ್ಲಿ ಕುಸಿದು ಹೋಗಿದ್ದರು. ಆದರೆ ಸಾಹಿತಿ, ಪತ್ರಕರ್ತ ಲಂಕೇಶ್ ಅವರ ಮಾತಿಗೆ ಕಟ್ಟುಬಿದ್ದು ತಮ್ಮ ಹಾಗೂ ಶಂಕರ್ ನಾಗ್ ಒಡನಾಟವನ್ನು ಲಂಕೇಶ್ ಪತ್ರಿಕೆಯಲ್ಲಿ ಬರೆಯಲು ಪ್ರಾರಂಭಿಸಿದ ನಂತರ ಸ್ವಲ್ಪ ಚೇತರಿಸಿಕೊಂಡರು. ಶಂಕರ್ ನಾಗ್ ಅಭಿಮಾನಿಗಳು ಈಗಲೂ ತಮ್ಮ ಆರಾಧ್ಯ ದೈವವನ್ನು ಮರೆತಿಲ್ಲ. ಬೆಂಗಳೂರಿನ ಆಟೋಗಳಲ್ಲಿ ಈಗಲೂ ಶಂಕರ್ ಹೆಸರು, ಚಿತ್ರಗಳಿವೆ. ಶಂಕರ್ ನೆನಪಿನಲ್ಲಿ ಈಗಲೂ ಚಲನ…

  • ‘ಕ್ಷಣ ಹೊತ್ತು ಆಣಿ ಮುತ್ತು’ ಅಂಕಣ ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭದಲ್ಲಿ ಪ್ರತೀ ದಿನ ಮೂಡಿ ಬರುತ್ತಿತ್ತು. ಇದನ್ನು ಪುಸ್ತಕ ರೂಪದಲ್ಲಿ ತಮ್ಮದೇ ಆದ ರಮಣಶ್ರೀ ಪ್ರಕಾಶನದಿಂದ ಹೊರತಂದಿದ್ದಾರೆ ಲೇಖಕರಾದ ಎಸ್.ಷಡಾಕ್ಷರಿಯವರು. ಇಲ್ಲಿರುವ ಪುಸ್ತಕ ಭಾಗ ೭. ಮೊದಲ ಭಾಗಕ್ಕೆ ಎಸ್.ಎಲ್ ಭೈರಪ್ಪನವರು ಬರೆದ ಮುನ್ನುಡಿಯನ್ನೇ ಇದಕ್ಕೂ ಬಳಸಿಕೊಳ್ಳಲಾಗಿದೆ. ಪುಟ್ಟ ಪುಟ್ಟ ಕಥೆಗಳ ಮೂಲಕ, ಮಹನೀಯರ ಬದುಕಿನಲ್ಲಿ ನಡೆದ ಘಟನೆಗಳ ಉದಾಹರಣೆಗಳ ಮೂಲಕ ಬರೆದ ಲೇಖನಗಳ ಗುಚ್ಚ ಇವು. ಈ ಪುಸ್ತಕದಲ್ಲಿ ೭೫ ಅಧ್ಯಾಯಗಳಿವೆ. ಪ್ರತಿಯೊಂದು ಚುಟುಕಾಗಿದ್ದು, ಯಾವಾಗ ಬೇಕಾದರೂ ಆವಾಗ ಓದಲು ಅನುಕೂಲಕರವಾಗಿವೆ. ‘ಬಂಗಾರದ ಕಲ್ಲಿಗಿಂತ ಬೆಲೆಬಾಳುವ ಕಲ್ಲು!’ ಎಂಬ ಅಧ್ಯಾಯದಲ್ಲಿ ಲೇಖಕರು ನೀಡಿದ ಉದಾಹರಣೆಯ ಕಥೆ ಬಹಳ ಸೊಗಸಾಗಿದೆ.…

  • ಜೋಗಿ ಅಂದರೆ ಗಿರೀಶ್ ಹತ್ವಾರ್ ನಮ್ಮ ನಡುವಿನ ಅದ್ಭುತ ಬರಹಗಾರರು. ಇವರ ಸಣ್ಣ ಕಥೆ ತುಂಬಾನೇ ಸೊಗಸಾಗಿರುತ್ತದೆ. ‘ಜರಾಸಂಧ' ಕಥಾ ಸಂಕಲನವು ಬರೆಯದೇ ಉಳಿದ ಕಥೆಗಳು ಎಂದು ಅವರೇ ಹೇಳಿಕೊಂಡಿದ್ದಾರೆ. ತಮ್ಮ ಮುನ್ನುಡಿ ‘ಕತೆ ಕತೆ ಕಾರಣ'ದಲ್ಲಿ ಬರೆಯುತ್ತಾರೆ ‘...ಎಂದಿನಂತೆ ಇವುಗಳ ಪೈಕಿ ಹೆಚ್ಚಿನ ಕತೆಗಳನ್ನು ಗೆಳೆಯ ರವಿ ಬೆಳಗೆರೆ ತಮ್ಮ ‘ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಒಂದು ಕಥೆ ‘ದೇಶಕಾಲ' ಪತ್ರಿಕೆಯಲ್ಲೂ, ಮತ್ತೊಂದು ತರಂಗ ವಿಶೇಷಾಂಕದಲ್ಲೂ ಪ್ರಕಟವಾಗಿದೆ. ಉಳಿದೆಲ್ಲಾ ಕಥೆಗಳಿಗೆ ನಾನೇ ಹೊಣೆಗಾರ.’

    ಪರಿವಿಡಿಯಲ್ಲಿ ೧೭ ಕಥೆಗಳಿವೆ. ನಾನು ಅವನು ಮತ್ತು ಹೇಳದೇ ಉಳಿದ ಕತೆ, ಸದಾಶಿವನ ಧ್ಯಾನ, ಪೇಜಾವರ, ತಥಾಸ್ತು, ಸುಮ್ಮನೆ, ಮಂಜುನಾಥನ ಎರಡನೇ…

  • ಡಾ. ಪಿ. ಶ್ರೀಕೃಷ್ಣ ಭಟ್ ಅವರು ಬರೆದ "ಕಾಸರಗೋಡಿನ ಕಣ್ಮಣಿ ಕಳ್ಳಿಗೆ ಮಹಾಬಲ ಭಂಡಾರಿ

    ಕಾಂತಾವರ ಕನ್ನಡ ಸಂಘ (ರಿ)ದ 'ನಾಡಿಗೆ ನಮಸ್ಕಾರ' ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 80ನೆಯ ಕುಸುಮವೇ "ಕಾಸರಗೋಡಿನ ಕಣ್ಮಣಿ ಕಳ್ಳಿಗೆ ಮಹಾಬಲ ಭಂಡಾರಿ" (ಲೇಖಕರು: ಡಾ. ಪಿ. ಶ್ರೀಕೃಷ್ಣ ಭಟ್). 52 ಪುಟಗಳ, 33 ರೂಪಾಯಿ ಬೆಲೆಯ ಕೃತಿಯನ್ನು 2013ರಲ್ಲಿ ಕನ್ನಡ ಸಂಘ (ಕಾಂತಾವರ - 574129, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ) ಪ್ರಕಟಿಸಿದೆ.

    ಕೃತಿಯ ಆರಂಭದಲ್ಲಿ, ಪ್ರಧಾನ ಸಂಪಾದಕರಾದ ಡಾ. ನಾ. ಮೊಗಸಾಲೆಯವರು ಕನ್ನಡ ಸಂಘದ ಹಿನ್ನೆಲೆ, ಸಾಧನೆ ಮತ್ತು ಗ್ರಂಥಮಾಲೆಯ ಯೋಜನೆ ಇತ್ಯಾದಿಗಳ ಬಗ್ಗೆ "ನಾಡಿಗೆ ನಮಸ್ಕಾರ" ದಲ್ಲಿ ಸಂಕ್ಷಿಪ್ತವಾಗಿ…

  • ಪತ್ರಕರ್ತ ಪ್ರತಾಪ್ ಸಿಂಹ ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹವೇ ಬೆತ್ತಲೆ ಜಗತ್ತು. ಈಗ ಇಲ್ಲಿರುವುದು ಅದರ ಹದಿನಾರನೇ ಭಾಗ. ಪ್ರತಿ ಶನಿವಾರ ಪ್ರತಾಪ್ ಸಿಂಹ ಅವರ ಅಂಕಣವನ್ನು ಕಾಯುತ್ತಿದ್ದ ದೊಡ್ಡದಾದ ಓದುಗ ಸಮೂಹ ಇತ್ತೆಂದರೆ ಸುಳ್ಳಲ್ಲ. ತೀಕ್ಷ್ಣವಾಗಿ ಚಾಟಿ ಬೀಸುವಂತಹ ರಾಜಕೀಯ ಲೇಖನಗಳಿಂದ ಹಿಡಿದು. ಕ್ರೀಡೆ, ಸಾಹಿತ್ಯ, ಸಿನೆಮಾ ಮುಂತಾದ ಎಲ್ಲಾ ವಿಚಾರಗಳನ್ನು ಅಧ್ಯಯನ ಮಾಡಿ ಬರೆಯುತ್ತಿದ್ದರು. ಪ್ರತಿಯೊಂದು ಲೇಖನಗಳಿಗೆ ಸೂಕ್ತ ಆಧಾರ ಒದಗಿಸುತ್ತಿದ್ದುದು ಇವರ ಹೆಗ್ಗಳಿಕೆ. 

    ಈ ಪುಸ್ತಕದಲ್ಲಿ ೨೮ ಅಧ್ಯಾಯಗಳಿವೆ. ಶತಾವಧಾನಿ ಗಣೇಶ್, ಸರ್ದಾರ್ ಪಟೇಲ್, ನೇತಾಜಿ ಸುಭಾಷ್ ಚಂದ್ರ ಭೋಸ್, ನರೇಂದ್ರ ಮೋದಿ, ಟಿಪ್ಪು…

  • ಇದೊಂದು ಪುಟ್ಟ ಪುಸ್ತಕದಲ್ಲಿ ಒಂದು ಕಾಲಕ್ಕೆ ಇಡೀ ರಾಷ್ಟ್ರದ ಕುತೂಹಲ ಕೆರಳಿಸಿದ ಆರುಷಿ ಹತ್ಯಾ ಪ್ರಕರಣದ ವಿವರಗಳಿವೆ. ರವಿ ಬೆಳಗೆರೆಯವರು ಕ್ರೈಂ ಸಾಹಿತ್ಯವನ್ನು ಬಹಳ ಸೊಗಸಾಗಿ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಬರೆಯುತ್ತಾರೆ. ಆದರೆ ಈ ಆರುಷಿ ಹತ್ಯೆಯ ಪುಸ್ತಕವನ್ನು ಸ್ವಲ್ಪ ಗಡಿಬಿಡಿಯಲ್ಲಿ ಬರೆದು ಮುದ್ರಿಸಿದಂತೆ ತೋರುತ್ತದೆ. ಕೆಲವೆಡೆ ಕಥೆ ಓದುತ್ತಾ ಓದುತ್ತಾ ಬೇರೆ ಕಡೆಗೆ ತಿರುಗುತ್ತದೆ. ಆದರೂ ಈ ಪುಸ್ತಕ ಬರೆಯಲು ಅವರು ತೆಗೆದುಕೊಂಡ ಶ್ರಮ ಅಭಿನಂದನೀಯ. ಏಕೆಂದರೆ ಎಲ್ಲೂ ದೊರೆಯದ ವಿವರಗಳು ಹಾಗೂ ಭಾವಚಿತ್ರಗಳು ಪುಸ್ತಕದಲ್ಲಿ ಅಡಗಿವೆ. 

    ರವಿ ಬೆಳಗೆರೆಯವರು ಪುಸ್ತಕದ ಪ್ರಾರಂಭದಲ್ಲಿ ‘ನೆತ್ತರು ಹರಿದ ಹಾದಿಯಗುಂಟ' ಎಂಬ ಅಧ್ಯಾಯದಲ್ಲಿ ಅವರಿಗೆ ಈ ಪುಸ್ತಕ…

  • ನಾತಲೀಲೆ ಇದು ಕಥೆಗಾರ ಎಸ್.ಸುರೇಂದ್ರನಾಥ್ ಅವರ ಮೊದಲ ಕಥಾ ಸಂಕಲನ. ಈ ಸಂಕಲನದಲ್ಲಿ ಎಂಟು ಕಥೆಗಳಿವೆ. ನಟ, ನಿರ್ದೇಶಕ ಟಿ.ಎನ್.ಸೀತಾರಾಮ್ ಹಾಗೂ ಕಥೆಗಾರ ವಿವೇಕ್ ಶಾನಭಾಗ ಇವರ ಮಾತುಗಳು ಬೆನ್ನುಡಿಯಲ್ಲಿ ಅಚ್ಚಾಗಿವೆ. ‘ನಮ್ಮ ಬದುಕಿನ ಬೆಳಕಿನ ಭಾಗಗಳಲ್ಲಿ ನಮ್ಮನ್ನು ವಿಚಿತ್ರ ರೀತಿಯಲ್ಲಿ ಬೆರಗುಗೊಳಿಸುವ ಮಾರ್ಕ್ವೈಜ್ ಮತ್ತು ನಮ್ಮ ಎದೆಯ ಕತ್ತಲ ಭಾಗಗಳನ್ನು ಪೋಲೀಸ್ ನಂತೆ ತಟ್ಟುವ ಕಾಫ್ಕಾ ನನ್ನ ಇಷ್ಟದ ಕಥೆಗಾರರು. ಅವರಿಬ್ಬರೂ ಒಟ್ಟಿಗೆ ಸೇರುವುದು ಕಷ್ಟ. ಅವರಿಬ್ಬರೂ ಒಂದೇ ಪಾತಳಿಯಲ್ಲಿ ಮಾತನಾಡುತ್ತಿರುವಂತೆ ಕತೆ ಬರೆಯಬಲ್ಲ ಶಕ್ತಿ ಸುರೇಂದ್ರನಾಥ್ ಗಿದೆ ‘ ಎನ್ನುತ್ತಾರೆ ಟಿ.ಎನ್.ಸೀತಾರಾಮ್.

    ವಿವೇಕ ಶಾನಭಾಗ ಇವರು ಹೇಳುತ್ತಾರೆ “ ಸಾಮಾನ್ಯ ಜೀವನದ ಒಳಗೇ ಇರುವ…

  • ಓಶೋ ಅವರ ಚಿಂತನೆಗಳು ಬಹಳ ಪ್ರಭಾವಶಾಲಿ. ಇವರ ಪ್ರವಚನಗಳ ಕುರಿತಾದ ಪುಸ್ತಕಗಳು ಹಾಟ್ ಸೇಲ್ ಆಗುತ್ತವೆ. ಓಶೋ ಅವರೇ ಹೇಳುವಂತೆ “ಪ್ರತಿಯೊಬ್ಬರೂ ಪ್ರೇಮದ ಬಾಗಿಲ ಬಳಿಯೇ ಹೋಗುತ್ತಿರುವರು. ವೇಶ್ಯೆಯ ಬಳಿ ಹೋಗುತ್ತಿರಲಿ, ದೇವಸ್ಥಾನಕ್ಕೆ ಹೋಗುತ್ತಿರಲಿ, ಹೋಗುತ್ತಿರುವುದು ಮಾತ್ರ ಪ್ರೇಮದ ದ್ವಾರದ ಬಳಿಗೇ. ಆಯ್ಕೆ ತಪ್ಪಾಗಿರಬಹುದಾದರೂ, ಆಕಾಂಕ್ಷೆ ಪ್ರೇಮದ್ದೇ. ಪ್ರೇಮದ ಅಮೃತವರ್ಷ ಸುರಿಯಲೆಂದು ನೀವು ಬಯಸುವಿರಾದರೆ ನಿಮ್ಮ ಪಾತ್ರೆ ಅಮೃತವನ್ನು ಸಂಬಾಳಿಸಲು ಯೋಗ್ಯವಾಗಿರುವುದಿಲ್ಲ. ಆದ್ದರಿಂದಲೇ ನಿಮ್ಮ ಜೀವನ ಪ್ರೇಮವಿಲ್ಲದೆ ಬಡವಾಗಿ ಕಳೆದುಹೋಗುವುದು.

    ಧ್ಯಾನದ ಅತಿರಿಕ್ತವಾಗಿ ಬೇರಾವ ಮಾರ್ಗವೂ ಇಲ್ಲ. ಮಾರ್ಗ ಯಾವುದೇ ಇರಲಿ. ಅವೆಲ್ಲವೂ ಧ್ಯಾನದ್ದೇ ರೂಪಗಳು. ಪ್ರಾರ್ಥನೆ,…