ಪುಸ್ತಕ ಸಂಪದ

  • *ಮೂಡಿಗೆರೆ ಎಂ. ಎಸ್. ನಾಗರಾಜರ "ಭಾವತರಂಗ"* 

    "ಭಾವತರಂಗ" , ಎಂ. ಎಸ್. ನಾಗರಾಜ್, ಮೂಡಿಗೆರೆ ಇವರ 2017ರಲ್ಲಿ ಪ್ರಕಟವಾದ ಹನಿಗವನ ಸಂಕಲನ. 60 ಪುಟಗಳ, 70 ರೂಪಾಯಿ ಬೆಲೆಯ ಸಂಕಲನವನ್ನು ಕವಿ ನಾಗರಾಜ್ ಅವರೇ ತಮ್ಮ ಅಭಿನವ ಪ್ರಕಾಶನ, ಮಾರ್ಕೆಟ್ ರಸ್ತೆ, ಮೂಡಿಗೆರೆ- 577132, ಚಿಕ್ಕಮಗಳೂರು ಜಿಲ್ಲೆ ಮೂಲಕ  ಪ್ರಕಟಿಸಿದ್ದಾರೆ.

    ಸಂಕಲನಕ್ಕೆ ಸರಕಾರಿ ಪದವಿ ಪೂರ್ವ ಕಾಲೇಜು ಕಳಸಾಪುರ ಇಲ್ಲಿನ ಪ್ರಾಚಾರ್ಯರಾದ ಎಚ್. ಎಂ. ನಾಗರಾಜ ರಾವ್ ಕಲ್ಕಟ್ಟೆ ಅವರ ಮುನ್ನುಡಿ ಮತ್ತು ಸಾಹಿತಿ ಮೂಡಿಗೆರೆಯ ಹಳೇಕೋಟೆ ಎನ್. ರಮೇಶ್ ಅವರ ಬೆನ್ನುಡಿ ಇದೆ. ಕವಿ ನಾಗರಾಜ್ ಅವರ "ಅಂತರಾಳ..."ವೂ ಇದೆ.

    "ಭಾವತರಂಗ…

  • ‘ಇಡ್ಲಿ, ಆರ್ಕಿಡ್ ಆಣಿ ಮಿ' ಎಂಬ ಪುಸ್ತಕವನ್ನು ಮರಾಠಿ ಭಾಷೆಯಲ್ಲಿ ಬರೆದವರು ಭಾರತದ ಖ್ಯಾತ ಹೋಟೇಲ್ ಉದ್ಯಮಿ ವಿಠಲ ವೆಂಕಟೇಶ ಕಾಮತ್. ಈ ಪುಸ್ತಕವನ್ನು ಕನ್ನಡಕ್ಕೆ ಅಕ್ಷತಾ ದೇಶಪಾಂಡೆಯವರು ತಂದಿದ್ದಾರೆ. ಅವರದ್ದೇ ಮಾತಿನಲ್ಲಿ ಹೇಳುವುದಾದರೆ ‘ಈ ಪುಸ್ತಕದ ಕನ್ನಡಾನುವಾದ ನನಗಾಗಿ ಒಂದು ಅಭೂತಪೂರ್ವ ಅನುಭವ. ಅನುವಾದ ಮಾಡುವಾಗಿನ ಅನುಭವ, ಇದನ್ನು ಓದಬೇಕಾದರೆ ಊಟ ತಿಂಡಿ ಮರೆತ ಅನುಭವ ಬೇರೆಯಾಗಿರಲಿಲ್ಲ. ಈ ಪುಸ್ತಕದ ಪ್ರತಿಯೊಂದು ವಾಕ್ಯದಲ್ಲಿ ಜಿದ್ದಿದೆ, ಆತ್ಮವಿಶ್ವಾಸವಿದೆ, ಅತ್ಮೀಯತೆ ಇದೆ ಮತ್ತು ಓದುಗರನ್ನು ಕಟ್ಟಿ ಹಾಕುವ ಜಾದೂ ಅದರಲ್ಲಿದೆ. ಪುಸ್ತಕವನ್ನು ಓದುತ್ತಾ ಹೋದಂತೆ ಕಾಮತರ ಸಾಧನೆಯಿಂದ ನಮ್ಮಲ್ಲೂ ಒಂದು ಹುರುಪು ಬಂದಂತಾಗಿ ಜೀವನದಲ್ಲಿ ಏನನ್ನೂ ಸಾಧಿಸದೆ ಹೋದರೆ ಅರ್ಥವೇ ಇಲ್ಲ. ಅನಿಸುವುದು ನಿಜ…

  • ನಾವೆಲ್ಲಾ ಸಣ್ಣವರಿರುವಾಗ ಓದುತ್ತಿದ್ದ ಪುಸ್ತಕವಿದು. ‘ಅರೇಬಿಯನ್ ನೈಟ್ಸ್' ಎಂಬ ಪುಸ್ತಕದ ಕಥೆಗಳನ್ನು ಅರೇಬಿಯದ ಇರುಳು ಎಂಬ ಹೆಸರಿನಲ್ಲಿ ಎಸ್. ರಮಾನಂದ ಇವರು ಅನುವಾದಿಸಿದ್ದಾರೆ. ಪ್ರಕಾಶಕರು ಪ್ರಸ್ತಾವನೆಯಲ್ಲಿ ಅರೇಬಿಯನ್ ನೈಟ್ಸ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಿದ್ದಾರೆ. ಈ ಪುಸ್ತಕದಲ್ಲಿ ಹಲವಾರು ಸಣ್ಣ ಹಾಗೂ ದೊಡ್ಡ ಕಥೆಗಳು ಇವೆ. ಬಹಳ ಹಿಂದೆ ಮಧ್ಯಪೂರ್ವ ದೇಶಗಳು ಎಂದು ಕರೆಯಲ್ಪಡುವ ಅರೇಬಿಯಾದಲ್ಲಿ ಅರಸರು (ಖಲೀಫರು) ಆಳುತ್ತಿದ್ದರು. ಶಹರಿಯಾರ್ ಎಂಬ ದೊರೆಯು ಆಳುತ್ತಿದ್ದ ಸಂದರ್ಭದಲ್ಲಿ ದೇಶವು ಸುಭಿಕ್ಷವಾಗಿತ್ತು. ಅವನ ಬಳಿ ಹಲವಾರು ಸಿಪಾಯಿಗಳಿದ್ದರು. ರಕ್ಷಕರು, ಸೇವಕರು ಹಾಗೂ ಗುಲಾಮರೂ ಇದ್ದರು. ಅಧ್ಭುತವಾದ ಅರಮನೆಯಿತ್ತು. ಆದರೆ ಅವನಿಗೆ ಕೊರತೆಯಿದ್ದದ್ದು ವಿಶ್ವಾಸಾರ್ಹ ಪತ್ನಿಯದ್ದು.…

  • ಬಿ. ಸಚ್ಚಿದಾನಂದ ಹೆಗ್ಡೆಯವರ "ತುಳು ಭಾಷೆ - ತುಳುನಾಡು"

    ಉಡುಪಿ ಅಂಬಲಪಾಡಿಯ ಬಿ. ಸಚ್ಚಿದಾನಂದ ಹೆಗ್ಡೆಯವರ 32 ಲೇಖನಗಳ ಸಂಕಲನ "ತುಳು ಭಾಷೆ - ತುಳು ನಾಡು" (ಪುರಾಣ ಜಾನಪದಗಳಲ್ಲಿ ತುಳುನಾಡವರು). ಶ್ರೀನಿವಾಸ ಪುಸ್ತಕ ಪ್ರಕಾಶನ ಸಂಸ್ಥೆಯು ಪ್ರಕಟಿಸಿದ, 174 ಪುಟಗಳ ಕೃತಿಯಲ್ಲಿ ಬೆಲೆಯನ್ನು ನಮೂದಿಸಲಾಗಿಲ್ಲ.

    ಕೃತಿಯಲ್ಲಿ ಎ. ರಾಜೀವಲೋಚನ ಅವರ "ಪ್ರಕಾಶಕರ ಮಾತು", ಮೈಸೂರಿನ ವಿಜಯನಾಥ ಭಟ್ಟ ("ಕೌಂಡಿನ್ಯ") ಅವರ "ಮುನ್ನುಡಿ" ಮತ್ತು ಕೃತಿಯ ಲೇಖಕ ಸಚ್ಚಿದಾನಂದ ಹೆಗ್ಡೆಯವರ "ಪ್ರಸ್ತಾವನೆ" ಇದೆ.

    ತಮ್ಮ ತುಳು ಕಾದಂಬರಿಗಾಗಿ ಪ್ರತಿಷ್ಟಿತ "ಯು.ಎಸ್. ಪಣಿಯಾಡಿ ಪ್ರಶಸ್ತಿ" ಪಡೆದಿರುವ,…

  • ಪತ್ರಕರ್ತ, ಲೇಖಕರಾದ ವಿಶ್ವೇಶ್ವರ ಭಟ್ ಅವರು ಬರೆದ ಪತ್ರಿಕೋದ್ಯಮದ ಕುರಿತಾದ ಅಪರೂಪದ ಪುಸ್ತಕ. ಅವರೇ ತಮ್ಮ ಬೆನ್ನುಡಿಯಲ್ಲಿ ಹೇಳುವಂತೆ ‘ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಪುಸ್ತಕಗಳು ನಮ್ಮಲ್ಲಿ ಹೆಚ್ಚಿಲ್ಲ. ಅದರಲ್ಲೂ ಕನ್ನಡದಲ್ಲಿ ಇರುವ ಪುಸ್ತಕಗಳು ಕೆಲವೇ ಕೆಲವು. ಇಂಗ್ಲೀಷ್ ಪುಸ್ತಕಗಳಲ್ಲಿ ವಿದೇಶಿ ಸರಕುಗಳೇ ಹೆಚ್ಚು. ಭಾರತದ ಸಂದರ್ಭದಲ್ಲಿ ಬರೆದ ಕೃತಿಗಳೂ ಹೆಚ್ಚಿಲ್ಲ. ಇದು ಪತ್ರಿಕೋದ್ಯಮದ ಮೇಷ್ಟು-ವಿದ್ಯಾರ್ಥಿಗಳಿಗೆ ಕೊರತೆಯೇ. ಈ ಸಂಗತಿಯನ್ನು ಗಮನದಲ್ಲಿರಿಸಿಕೊಂಡು ರೂಪಿಸಿದ ಕೃತಿಯಿದು. ಇದು ಪಠ್ಯದ ಎಲ್ಲ ಆಶಯಗಳನ್ನು ಒಳಗೊಂಡಿದ್ದರೂ, ನಿರೂಪಣೆ ಹಾಗೂ ಶೈಲಿಯಿಂದ ಭಿನ್ನವಾಗಿ ನಿಲ್ಲುತ್ತದೆ, ಸಂದೇಹ ಬೇಡ'.

    ನಿಜಕ್ಕೂ ಪತ್ರಿಕೋದ್ಯಮದಲ್ಲಿ ಅಪಾರ ಅನುಭವವಿರುವ…

  • ೧೯೯೪ರಲ್ಲಿ ಮುದ್ರಿತವಾದ ‘ಪಾಲ್ಗಡಲ ಮುತ್ತುಗಳು' ಎಂಬ ಹನಿ ಕವನಗಳ ಸಂಗ್ರಹ ಪುಸ್ತಕದಲ್ಲಿ ಹನಿಗವನಗಳನ್ನು ರಚಿಸಿರುವ ಹಲವಾರು ಕವಿಗಳು ಈಗ ಬಹಳಷ್ಟು ಖ್ಯಾತನಾಮರಾಗಿದ್ದಾರೆ. ಈ ಪುಸ್ತಕವನ್ನು ತಮ್ಮದೇ ಆದ ನವೀನ ಪ್ರಕಾಶನದಿಂದ ಸಂಪಾದನೆ ಮಾಡಿರುವ ಧನಂಜಯ ಕುಂಬ್ಳೆಯವರೂ ಈಗ ಉತ್ತಮ ಕವಿ, ಉಪನ್ಯಾಸಕರಾಗಿದ್ದಾರೆ. ‘ನವೀನ' ಎಂಬ ಅಂಚೆ ಕಾರ್ಡು ಮಾಸಿಕವನ್ನು ಬಹಳ ಹಿಂದೆ ಅವರು ಪ್ರಕಟಿಸುತ್ತಿದ್ದ ನೆನಪು ನನಗೆ ಈಗಲೂ ಇದೆ. 

    ಸಂಪಾದಕರ ಮಾತು ಇದರಲ್ಲಿ ಧನಂಜಯ ಕುಂಬ್ಳೆಯವರು ಬರೆಯುತ್ತಾರೆ ‘ ಹನಿಗವನವು ಸದ್ಯದ ಸಂದರ್ಭದಲ್ಲಿ ಮೆಚ್ಚುಗೆಯನ್ನೂ, ಇನ್ನೊಂದೆಡೆಯಿಂದ ಉಪೇಕ್ಷೆಯನ್ನೂ ಗಳಿಸಿಕೊಂಡ ಪ್ರಕಾರ ನಮ್ಮ ಕನ್ನಡದ ಬಹುಪಾಲು ಓದುಗರು ಎಂಥ ಅವಸರದಲ್ಲೂ ಹನಿಗವನಗಳ ಕಡೆ ಕಣ್ಣು…

  • ಆಂಗ್ಲ ಬರಹಗಾರ ಪಾಲ್ ಕೊಯೆಲ್ಹೋ ಬರೆದ ದಿ ಆಲ್ ಕೆಮಿಸ್ಟ್ ಎಂಬ ಇಂಗ್ಲೀಷ್ ಪುಸ್ತಕದ ಮಾಹಿತಿಯನ್ನು ‘ಸಂಪದ’ದಲ್ಲಿ ಬಹಳ ಹಿಂದೆ ನೀವು ಗಮನಿಸಿರಬಹುದು. ಈ ಪುಸ್ತಕ ಅದರದ್ದೇ ಕನ್ನಡ ಅನುವಾದ. ಕನ್ನಡ ಮಾತ್ರ ಬಲ್ಲವರಿಗೆ ಅರ್ಥವಾಗುವಂತೆ ಸರಳವಾಗಿ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ ಕಿರಣ್ ಕುಮಾರ್ ಅವರು.

    ಈ ಪುಸ್ತಕದ ಬೆನ್ನುಡಿಯಲ್ಲಿ ಲೇಖಕರು ಬರೆಯುತ್ತಾರೆ. ‘ಓದುಗರ ಜೀವನವನ್ನು ಶಾಶ್ವತವಾಗಿ ಬದಲಾಯಿಸುವಂತಹ ಪುಸ್ತಕಗಳು ದಶಕಗಳಲ್ಲಿ ಒಮ್ಮೆ ಪ್ರಕಟಗೊಳ್ಳುತ್ತವೆ. ಪಾಲೋ ಕೊಯೆಲ್ಹೋರವರ ‘ದ ಆಲ್ಕಮಿಸ್ಟ್' ಅಂತಹ ಒಂದು ಪುಸ್ತಕ. ವಿಶ್ವದಾದ್ಯಂತ ವಿವಿಧ ಭಾಷೆಗಳಲ್ಲಿ ೨೦ ದಶಲಕ್ಷಗಳಿಗಿಂತಲೂ ಅಧಿಕ ಪ್ರತಿಗಳು ಮಾರಾಟವಾಗಿರುವ ‘ದ ಆಲ್ಕಮಿಸ್ಟ್' ಸಾರ್ವಕಾಲಿಕ ಉತ್ಕೃಷ್ಟ ಸಾಹಿತ್ಯ…

  • ಪತ್ರಕರ್ತ ಲೇಖಕ ಶ್ರೀರಾಮ ದಿವಾಣರ ಮೊದಲ ಪ್ರಕಟಿತ ಲೇಖನಗಳ ಸಂಗ್ರಹ ಪುಸ್ತಕ ಇದು. ‘ಬರೆದದ್ದನ್ನೆಲ್ಲ ಪ್ರಕಟಿಸಬಾರದು, ಮುದ್ರಿಸಬಾರದು. ಆದರೆ ಆಯ್ದ ಲೇಖನಗಳನ್ನಾದರೂ ಪ್ರಕಟಿಸಬಹುದಲ್ವಾ?’ ಎಂಬ ಮಾತುಗಳನ್ನು ಹೇಳಿದವರು ನೇರ ನಡೆ-ನುಡಿಯ ನಿರ್ಭೀತ ಸಾಹಿತಿ, ಬೆಂಗಳೂರಿನ ‘ಪುಸ್ತಕ ಮನೆ'ಯ ಶ್ರೀ ಹರಿಹರ ಪ್ರಿಯರು. ಇವರ ಈ ಮಾತಿನಿಂದ ಪ್ರೇರಣೆಗೊಂಡು ಶ್ರೀರಾಮ ದಿವಾಣರು ‘ಕೃಷ್ಣಾರ್ಪಣ' ಎಂಬ ಕೃತಿಯನ್ನು ಹೊರ ತಂದಿದ್ದಾರೆ. 

    ಎಪ್ಪತ್ತೆರಡು ಪುಟಗಳ ಈ ಪುಸ್ತಕದಲ್ಲಿ ಒಟ್ಟು ೩೧ ಲೇಖನಗಳಿವೆ. ಆರಂಭದ ಎಂಟು ಲೇಖನಗಳು ಮಂಗಳೂರಿನ ‘ಮಂಗಳೂರು ಮಿತ್ರ' ಸಂಜೆ ದಿನ ಪತ್ರಿಕೆಯಲ್ಲಿ ಬೆಳಕು ಕಂಡಿವೆ. ನಂತರದ ಒಂದು ಲೇಖನ ‘ ಈ ನಾಡಿನ ಮುಂಗಾರು' ವಾರ ಪತ್ರಿಕೆಯಲ್ಲೂ, ಮೂರು ಲೇಖನಗಳು ‘…

  • ವಿಶ್ವೇಶ್ವರ ಭಟ್ ಅವರು ವಿಜಯ ಕರ್ನಾಟಕ ದಿನ ಪತ್ರಿಕೆಯ ಸಂಪಾದಕರಾಗಿದ್ದ ಸಮಯದಲ್ಲಿ ಬರೆದ ಅಂಕಣ ಬರಹಗಳ ಸಂಗ್ರಹವೇ ‘ನೂರೆಂಟು ಮಾತು'. ಈ ಪುಸ್ತಕವು ಎರಡನೇ ಭಾಗವಾಗಿದೆ. ವಿಶ್ವೇಶ್ವರ ಭಟ್ ಅವರ ಬರವಣಿಗೆಯ ಶೈಲಿಯ ಪ್ಲಸ್ ಪಾಯಿಂಟ್ ಎಂದರೆ ಅವರ ಬರಹಗಳಲ್ಲಿ ವಿವಿಧತೆ ಇದೆ ಮತ್ತು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಅವರು ಬರೆಯುವ ಬರಹಗಳಿಗೆ ಸೂಕ್ತ ದಾಖಲೆಗಳನ್ನೂ ಕೊಡುತ್ತಾರೆ. ಐದು ವರ್ಷಗಳಲ್ಲಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬರೆದ ಅಂಕಣ ಬರಹಗಳನ್ನು ಬೇರೆ ಬೇರೆ ಭಾಗಗಳಾಗಿ ಓದುಗರ ಮುಂದಿಡುವ ಪ್ರಯತ್ನ ಮಾಡಿದ್ದಾರೆ. ಅವರೇ ತಮ್ಮ ಮಾತಿನಲ್ಲಿ ಹೇಳುವುದಾದರೆ “ನನ್ನ ಜೀವನಕ್ಕೆ ಶಿಸ್ತು, ಸಂಯಮ ಹಾಗೂ ನಿಶ್ಚಿತತೆಯನ್ನು ರೂಪಿಸಿದ್ದು ಈ ಬರಹಗಳು. ಈ ಅಂಕಣ ನನಗೆ ನೀಡಿದ ತೃಪ್ತಿ ಅಷ್ಟಿಷ್ಟಲ್ಲ. ಇಲ್ಲಿನ…

  • *ರಾಜಗೋಪಾಲ್ ಎಂ. ಅವರ "ಧ್ಯಾನ, ಮಾತು ಮತ್ತು ಧ್ವನಿ"*

    ಕರ್ನಾಟಕ ಸಂಘ (ಪುತ್ತೂರು- 574201, ದಕ್ಷಿಣ ಕನ್ನಡ ಜಿಲ್ಲೆ)ವು 2002ರಲ್ಲಿ ಪ್ರಕಾಶಿಸಿದ ಉಡುಪಿ ಹಿರಿಯಡಕದ ರಾಜಗೋಪಾಲ ಎಂ. ಅವರ " ಧ್ಯಾನ, ಮಾತು ಮತ್ತು ಧ್ವನಿ" , "ಹಿಮಾಲಯ - ಯಾತ್ರೆ - ಒಂದು ದರ್ಶನ" ಹಾಗೂ "ರಂಗಾಯಣದ ಗಾಂಧಿ" ಎಂಬ ಮೂರು ಲೇಖನಗಳ ಸಂಕಲನ, " ಧ್ಯಾನ, ಮಾತು ಮತ್ತು ಧ್ವನಿ". 4 + 60 ಪುಟಗಳ ಕೃತಿಯ ಬೆಲೆ 36 ರೂಪಾಯಿ.

    "ಧ್ಯಾನವೆಂದರೆ, ಏಕಾಂತದಲ್ಲಿ ಕುಳಿತು, ಕಣ್ಣು ಮುಚ್ಚಿ ಏಕಾಗ್ರತೆಯಿಂದ ಯಾವುದೋ ಅಕ್ಷರವನ್ನೋ, ಆಕೃತಿಯನ್ನೋ, ಬೆಳಕನ್ನೋ ಕುರಿತು ಚಿಂತಿಸುವುದು ಮಾತ್ರ - ಎಂದಲ್ಲ. ತಾನು ನೋಡಲೇಬೇಕಾದ, ಅಧ್ಯಯಿಸಲೇಬೇಕಾದ ಚಿಂತಿಸಲೇಬೇಕಾದ, ಹಾಗೆ…