ಪುಸ್ತಕ ಸಂಪದ

  • ಎಚ್ಚೆಸ್ವಿ ಅನಾತ್ಮಕಥನದ ಈ ಬರಹಗಳು ಅವರ ಅಂತರಂಗದಲ್ಲಿ ತುಂಬಿಕೊಂಡಿರುವ ನೆನಪುಗಳ, ಮಧುರ ಭಾವನೆಗಳ, ಅಕ್ಷರ ರೂಪಗಳು. ಸಮಕಾಲೀನ ಸಂದರ್ಭದ ಮಹತ್ವದ ಕವಿ ಮತ್ತು ನಾಟಕಕಾರ ಎಂದು ಗುರುತಿಸಲ್ಪಟ್ಟಿರುವ ಎಚ್ಚೆಸ್ವಿ 'ಅನಾತ್ಮ ಕಥನ' ಅವರು ಬರೆದಿರುವ ಆತ್ಮಕಥನಾತ್ಮಕವಾದ ಆಪ್ತ ಪ್ರಬಂಧಗಳ ಸಂಕೀರ್ಣ ಸಂಪುಟ. ಕನ್ನಡ, ಇಂಗ್ಲೀಷ್ ,ಸಂಸ್ಕೃತ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ನಿರಂತರವಾದ ಅನುಸಂಧಾನ ಎಚ್ಚೆಸ್ವಿ ಅವರ ಭಾವಕೋಶ ಮತ್ತು ಕಾವ್ಯವ್ಯಕ್ತಿತ್ವವನ್ನು ನಿರ್ಮಿಸಿವೆ. ಹಾಗಾಗಿ ಇವರ ಬರವಣಿಗೆಯಲ್ಲಿ ಕಾಣುವ ಆಧುನಿಕತೆಯು, ಪರಂಪರೆಯೊಂದಿಗೆ ನಡೆಸಿದ ಹೋರಾಟ ಮತ್ತು ಸಂಘರ್ಷದ ಫಲವಾಗಿ ನಿಷ್ಪನ್ನವಾದಂಥದು.
    ಅನಾತ್ಮಕಥನ ಬರಹಗಳು ಎಚ್ಚೆಸ್ವಿ ಅವರ ಸುತ್ತಲಿನ ಜಗತ್ತು, ಆತ್ಮೀಯ ವ್ಯಕ್ತಿಗಳು, ಘಟನೆಗಳು,  ತೀರ ಕ್ಷುದ್ರ ಎನ್ನಿಸುವಂಥಹ, ತೀರಾ…

  • ಯಾವುದೇ ಪುಸ್ತಕವನ್ನಾದರೂ ಒಮ್ಮೆ ಸಂಪೂರ್ಣ ಓದಿ ನಂತರ ಜೋಪಾನವಾಗಿ ಅದರ ಮೂಲ ಸ್ಥಾನದಲ್ಲಿಟ್ಟುಕೊಳ್ಳುವುದು ರೂಢಿ. ಆದರೆ ಈ ಬಾರಿ ಹಾಗಾಗಲಿಲ್ಲ. ಒಮ್ಮೆ ಓದಿ ಮುಗಿಸಿದ  ಬಳಿಕವೂ ಮತ್ತೆ ,ಮತ್ತೆ ಓದಬೇಕೆಂದನಿಸಿದ್ದು, ಪೂರ್ಣಚಂದ್ರತೇಜಸ್ವಿಯವರ "ಕರ್ವಾಲೋ" ಪುಸ್ತಕ. ಹಾರುವ ಓತಿಕ್ಯಾತನ ಬೆನ್ನತ್ತಿ ಹೋಗುವ ಹೆಸರಾಂತ ವಿಜ್ಞಾನಿ ಕರ್ವಾಲೋ ತೀರಾ ಹಳ್ಳಿಯಲ್ಲಿ ನಡೆಯುವ ಈ ಘಟನೆಯ ಸುತ್ತ ಸುತ್ತುವ ಕಥೆ. ಹಳ್ಳಿಯ ಮಂದಣ್ಣ, ಎಂಗ್ಟ, ಕರಿಯಪ್ಪ, ಮುಂತಾದ ಆ ಹಳ್ಳಿಯ ತೀರಾ ಸಾಮಾನ್ಯ ಜನರೊಂದಿಗೆ ಮಾತ್ರ ಬೆರೆಯುವ ವಿಜ್ಞಾನಿ ಕರ್ವಾಲೋ ಹಳ್ಳಿಯ ಕೆಲವು ಪ್ರಮುಖ ಕುಳಗಳಿಗೆ ಅಂದರೆ ದೊಡ್ಡ ಮನುಷ್ಯರಿಗೆ ಒಗಟಾಗಿಯೇ ಉಳಿಯುತ್ತಾರೆ. ಜೇನುಹುಳಗಳನ್ನು ಹಿಡಿದುಕೊಂಡು ಅವುಗಳನ್ನು ಪೆಟ್ಟಿಗೆಯಲ್ಲಿ ಕೂರಿಸಿ ವಯಸ್ಸಾಗಿದ್ದರೂ ಬುದ್ದಿ ಬೆಳೆಯಲಿಲ್ಲ ಎಂಬಂತೆ…

  • 'ವಸಂತ' ಎಂಬ ಮಾಸಪತ್ರಿಕೆಯನ್ನು ನಡೆಯಿಸತೊಡಗಿದ್ದಾಗ, ವಾಚಕರ ಅಭಿರುಚಿಯನ್ನು ಚಿಗುರಿಸುವ ಸಲುವಾಗಿ ಅದರಲ್ಲಿ ಕಥೆ,ಕಾವ್ಯ,ಕಾದಂಬರಿಗಳನ್ನು ಬರೆದು ತುಂಬಿಸಬೇಕಾಗಿ ಬಂತು. ಹೀಗೆ ಶಿವರಾಮ ಕಾರಂತರಿಗೆ ಬರಹ ಅನಿವಾರ್ಯವಾಗಿತ್ತು. ಅನಂತರ ಪತ್ರಿಕಾರಂಗದ ಉದ್ಯೋಗ ಅವರನ್ನು ಒಂದೇ ಕಡೆ ಕುಳಿತುಕೊಳ್ಳಲು ಬಿಡಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಒಳಗೂ ಹೊರಗೂ ಅಲೆದಾಡುತ್ತಾ ಸುತ್ತಲಿನ ಜನಜೀವನದೊಂದಿಗೆ ಬೆರೆತು, ಅಲ್ಲಿನ ಜನ, ಆಚಾರ-ವಿಚಾರ, ಪ್ರಾಕೃತಿಕ ಸೌಂದರ್ಯ,ವಿಸ್ಮಯಗಳನ್ನು ಅನುಭವಿಸುವ ಸಂದರ್ಭ ಒದಗಿ ಬಂತು. ಇಂತಹ ಅನುಭವಗಳಿಂದ ಪ್ರೇರಿತವಾಗಿ ಮೂಡಿಬಂದ ಮೊದಲ ಕಥೆಯೇ ಚೋಮನ ದುಡಿ. ಮುಂದೆ ಪುತ್ತೂರಿನಲ್ಲಿ ನೆಲೆಸಿ ಸುತ್ತಲಿನ ಕೃಷಿಕ ಜೀವನ, ನಿತ್ಯ ಜೀವನ, ಇವುಗಳೆಲ್ಲವನ್ನು ನೋಡಿ ಬರೆಯಲು ಸ್ಪೂರ್ತಿ ಪಡೆದುದೇ -ಬೆಟ್ಟದ ಜೀವ.
    ಕಾರಂತರು…

  • ಖ್ಯಾತ ಸಾಹಿತಿ ಎಸ್.ಎಲ್ ಭೈರಪ್ಪ ಅವರ ಕೃತಿ. ಬರಹಗಾರರು ತಾವು ಇಂಥದೇ ಕಾರಣಕ್ಕಾಗಿ ಬರೆಯುತ್ತೇವೆಂದು ನಿರ್ದಿಷ್ಟ ಕಾರಣವನ್ನು ಹೊಂದಿರುವುದು ಕಷ್ಟ ಸಾಧ್ಯ. ವಿಷಯದ ಆಯ್ಕೆಗಳು ಪೂರ್ವಯೋಜಿತವಾಗಿದ್ದರೂ ಬರಹವೂ ಇದೇ ರೀತಿ ಸಾಗಬೇಕೆಂದು ಅಂದುಕೊಂಡಿದ್ದರೂ ಬರವಣಿಗೆ ಸಂದರ್ಭದಲ್ಲಿ ಅವುಗಳ ತಿರುವುಗಳು ಬದಲಾಗಿಯೇ ಆಗುತ್ತವೆ. ಹೀಗೆ ಆದಂತಹ ಬದಲಾವಣೆಗಳು ಯಾವುದೇ ಎಗ್ಗಿಲ್ಲದಂತೆ ಸಾಗಿ ಬರಹಗಾರನ ವಿಚಾರ ಲಹರಿಯನ್ನು ತನ್ನ ಕೃತಿ ಅಥವಾ ಬರಹದಲ್ಲಿ ಅಭಿವ್ಯಕ್ತಗೊಳಿಸುತ್ತದೆ.
    ಬರಹ ಮುಗಿಸಿದ ಮೇಲೆ ಅಥವಾ ಪ್ರತಿಯೊಬ್ಬ ಬರಹಗಾರನಿಗೂ ಈ ಪ್ರಶ್ನೆ ಒಂದು ಬಾರಿಯಾದರೂ ತನ್ನ ಮನದಲ್ಲಿ ಈ ಪ್ರಶ್ನೆ ಮೂಡುವುದು ಸಹಜ. ಖ್ಯಾತ ಸಾಹಿತಿ ಎಸ್.ಎಲ್ ಭೈರಪ್ಪ ಅವರಿಗೂ ಈ ಪ್ರಶ್ನೆ ಕಾಡದಿರಲಿಲ್ಲ. ಇದರಿಂದಾಗಿಯೇ ಮೂಡಿ ಬಂದ ಕೃತಿಯೇ "ನಾನೇಕೆ ಬರೆಯುತ್ತೇನೆ?".…

  • ಬದುಕಿ ತೋರಿಸ್ತೀನಿ ನೋಡೋ,

    ದೇವರನ್ನು ದಿಕ್ಕರಿಸಿ ಬದುಕ್ತೀನಿ.

    -ರಂಗನಾಥ.

    ಇಂದಿಗೂ ಜೀವಂತವಾಗಿರುವ ಜಾತಿ ವ್ಯವಸ್ಥೆ , ದೇವರ ಬಗೆಗಿನ ಆಸ್ತಿಕ ಹಾಗೂ ನಾಸ್ತಿಕ ವಿಚಾರಗಳ ಎರಡು ಮನಸ್ಸಿನ ಗೊಂದಲಗಳು, ನಂಬಿಕೆ, ಸಮಾಜದ ವ್ಯವಸ್ಥೆಗಳನ್ನು ಒಪ್ಪಿಕೊಳ್ಳಲೂ ಆಗದೆ, ಇತ್ತ ಒಪ್ಪದೆ ಇರಲೂ ಆಗದಂತಹ ಇಕ್ಕಟ್ಟಿನ ಸ್ಥಿತಿಯಲ್ಲಿ ಏಕಾಂಗಿಯಾಗಿ ಹೋರಾಡುತ್ತಿರುವ ಎರಡು ಮನಸ್ಸುಗಳ ಕಥೆಯೇ ದೇವರ ಹುಚ್ಚು.  ರಂಗನಾಥ ಹಾಗೂ ರಾಜಶೇಖರ ಈ ಕಾದಂಬರಿಯ ಕೇಂದ್ರ ಬಿಂದುಗಳು. ಈ ಎರಡು ಪಾತ್ರಧಾರಿಗಳ ಸುತ್ತ ಲೇಖಕರು ತಮ್ಮ ಕಥೆಯನ್ನು ಹೆಣೆಯಲು, ಅದಕ್ಕೊಂದು ನಿರ್ದಿಷ್ಟ ರೂಪ ಕೊಡಲು ಯಶಸ್ವಿಯಾಗಿದ್ದಾರೆ. ನಮ್ಮ ಸುತ್ತಲೂ ಇಂತಹ ಅನೆಕ ರೀತಿಯ ವಿಷಯಗಳು ಕಂಡರೂ ಅವುಗಳನ್ನು ಗಣನೆಗೆ ತೆಗೆದುಕೊಳ್ಳದೆ ನಮ್ಮ ಪಾಡಿಗೆ ನಾವಿದ್ದು ಬಿಡುತ್ತೇವೆ,…


  • ತೇಜಸ್ವಿ ಅಥವಾ ಪೂರ್ಣಚ೦ದ್ರ ತೇಜಸ್ವಿ ಅ೦ದ ತಕ್ಷಣ ಕನ್ನಡ ಓದುಗ ಪ್ರಪ೦ಚದ ಕಣ್ಣುಗಳಲ್ಲಿ ಒ೦ದು ವಿಶಿಷ್ಟವಾದ೦ಥ ತೇಜಸ್ಸು ಮೂಡುತ್ತದೆ. ೨೦ ನೇ ಶತಮಾನದಲ್ಲಿ ತೇಜಸ್ವಿ, ತಮ್ಮ ಬರಹಗಳು, ವಿಶಿಷ್ಟ ಹವ್ಯಾಸಗಳು ಹಾಗು ರೈತಪರ ಚಳುವಳಿಗಳ ಮೂಲಕ ಜನಸಮಾನ್ಯರ ಮನಗೆದ್ದ೦ಥವರು.

    ಬಹುಪಾಲು ಜನಕ್ಕೆ ತಿಳಿದ೦ತೆ, ತೇಜಸ್ವಿಯವರದು ಪ್ರೇಮ ವಿವಾಹ ಅದರಲ್ಲೂ, ಅ೦ತರ್ಜಾತಿಯ ವಿವಾಹ. ಆಗಿನ ಕಾಲದಲ್ಲಿ ಇವೇ ಒ೦ಥರಾ ಹುಬ್ಬೇರಿಸುವ ಘಟನೆಗಳಾಗಿದ್ದರೆ, ಇವರು ವಿವಾಹವಾದ "ಮ೦ತ್ರ ಮಾ೦ಗಲ್ಯ೦" ಪದ್ದತಿ ಕೂಡ ಹೊಸತು. ಇದು ಕುವೆ೦ಪುರವರ ಸರಳ ಮದುವೆಯ ಸಲಹೆಯ೦ತೆ ಹುಟ್ಟಿದ್ದು. ಇ೦ಥ ಮದುವೆಯಲ್ಲಿ ತೇಜಸ್ವಿಯವರನ್ನು ವರಿಸಿದ್ದು ಶ್ರೀಮತಿ ರಾಜೇಶ್ವರಿ ತೇಜಸ್ವಿಯವರು. ತೇಜಸ್ವಿಯವರು ತಮ್ಮ ಅಣ್ಣನ ನೆನಪು ಪುಸ್ತಕದಲ್ಲಿ ತಮ್ಮ ಬಗ್ಗೆ ಸ್ವಲ್ಪ…

  • ಪರಿಸರ ಪತ್ರಕರ್ತ ಹಾಗೂ ವಿಜ್ಞಾನ ಅಂಕಣಕಾರ ನಾಗೇಶ ಹೆಗಡೆಯವರ ಈ ಕೃತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನಿತ ಕೃತಿ. ೨೦ನೇ ಶತಮಾನದ ಸರ್ವಶ್ರೇಷ್ಠ ಮಕ್ಕಳ ಕತೆಗಳ ಸಾಲಿಗೆ ಸೇರ್ಪಡೆಯಾಗಿದೆ.

    ಮನುಷ್ಯರಿಗೆ ಕೊಳವೆಬಾವಿಗಳು ಪರಿಚಿತವಾಗುವುದಕ್ಕಿಂತ ಮುಂಚೆ ಕೆರೆಗಳೇ ನೀರಿನಾಧಾರವಾಗಿದ್ದವು. ಜೀವನ ಶೈಲಿ ಬದಲಾಗುತ್ತಿದ್ದಂತೆ ಮನುಷ್ಯರು ಮಾಡುವ ಪರಿಸರ ಮಾಲಿನ್ಯಗಳು ಹೆಚ್ಚಾದುವು. ತೊಂಡೂರಿನ ಜನರ ಜೀವನಾಧಾರವಾಗಿದ್ದ ಹಾಗೂ ಕೆರೆಯಲ್ಲಿ ವಾಸಿಸುತ್ತಿದ್ದ ಅಸಂಖ್ಯಾತ ಜೀವಿಗಳ ವಾಸಸ್ಥಾನವಾದ ತೊಂಡೂರಿನ ಕೆರೆಯನ್ನು ಮನುಷ್ಯರು ಮಾಡುವ ಮಾಲಿನ್ಯದಿಂದ ಹೇಗಾದರೂ ರಕ್ಷಿಸಬೇಕೆಂಬುದು ಕೆರೆಯ ಜಲಚರ ಸಾಮ್ರಾಜ್ಯದ ಮುಖ್ಯ ಉದ್ದೇಶವಾಗಿತ್ತು. ಕೆರೆಯಲ್ಲಿನ ನೀರು ಕಲುಷಿತಗೊಂಡು, ಹೂಳು ತುಂಬಿ, ಇಡೀ ಕೆರೆಯೇ ಬತ್ತಿ ಹೋಗುವ ಸಂದರ್ಭ ಎದುರಾದಾಗ…

  • ಯಾರೂ ನಮಗೆ ಸೇರಿದವರಲ್ಲ, ಯಾರನ್ನಾದರೂ ಹುಡುಕಲು ಹೊರಟರೆ ನಮಗೆ ನಾವೇ ವೃತ್ತದ ಕೇಂದ್ರವೆನ್ನುವ ಭ್ರಮೆಯಲ್ಲಿ ಬೀಳುತ್ತೇವೆ. ಕಥಾ ನಾಯಕ ಸಣ್ಣವನಿದ್ದಾಗಲೇ ತನ್ನಿಂದ ದೂರಾದ ತಮ್ಮನನ್ನು ಹುಡುಕಹೊರಟು ಭಾವಾವೇಶಕ್ಕೆ ಒಳಗಾಗಿ ತನ್ನ ಸಹೋದ್ಯೋಗಿಯ ಕಣ್ಣುಗಳಲ್ಲಿ ಆತನ ಬಿಂಬವನ್ನು ಕಂಡು ಭ್ರಮಾಲೋಕಕ್ಕೆ ಹೋಗುತ್ತಾನೆ. ನಂತರ ತನ್ನ ತಮ್ಮನಂತೆಯೇ ಆತನನ್ನು ಕಾಣುತ್ತಾನೆ. ಅದಕ್ಕೆ ತಾಳೆಯಾಗುವಂತೆ ಛಾಯಾಚಿತ್ರಕಾರನೊಬ್ಬ ತನ್ನ ಚಿತ್ರಗಳಲ್ಲಿ"ಎಲ್ಲೋ ದೂರದ ದ್ವೀಪವ ಬಯಸಿ" ಏನನ್ನೋ ಹುಡುಕ ಹೊರಟ ಚಿತ್ರಣ.
    ಪೋಷಕರ ಅಸಮ್ಮತಿಯನ್ನೂ ಲೆಕ್ಕಿಸದೆ, ವಾರ್ ರಿಪೋರ್ಟರ್ ಆಗಿ ಅಫ್ಘಾನಿಸ್ತಾನಕ್ಕೆ ಹೋಗಬೇಕೆಂದು ದಿಟ್ಟ ನಿರ್ಧಾರವನ್ನು ತಳೆದ ಸಣ್ಣವಯಸ್ಸಿನ ಹುಡುಗ(ಮಹಿಂದ)ನ ಆತ್ಮಸ್ಥೈರ್ಯ,ಕನಸ್ಸನ್ನು ಬೆನ್ನಟ್ಟಿ ಹೋಗುವ ಕೆಚ್ಚು, ಲೋಕದಿಂದ…

  • ಕನ್ನಡದ ನುಡಿಚಿತ್ರಕಾರರಲ್ಲಿ ನಿರಂಜನ ವಾನಳ್ಳಿಯವರದ್ದು ಗಮನಾರ್ಹ ಹೆಸರು. ಇವರ ಎಲ್ಲಾ ನುಡಿಚಿತ್ರಗಳಲ್ಲಿಯೂ ಜೀವನ ಪ್ರೀತಿ, ಮಾನವೀಯ ಅನುಕಂಪಗಳು ಎದ್ದು ಕಾಣುತ್ತವೆ. ಅವರ ಸುಸಂಸ್ಕೃತ ಮನಸ್ಸು ಹಾಗೂ ಕುತೂಹಲದ ಮನೋಭಾವ ಹಾಗೂ ಚಿಕಿತ್ಸಕ ದೃಷ್ಟಿಗಳು ಎಲ್ಲಾ ವರ್ಗದ ಓದುಗರನ್ನು ತಮ್ಮೆಡೆಗೆ ಸೆಳೆಯುತ್ತವೆ. ಕಾಬಾಳೆ ಮತ್ತು ಪ್ರೀತಿ ಅವರ ಆಯ್ದ ನುಡಿಚಿತ್ರಗಳ ಸಂಗ್ರಹ- ಪುಸ್ತಕ. 2009 ರಲ್ಲಿ ಪ್ರಕಟಗೊಂಡ ಈ ಪುಸ್ತಕದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಬೇರೆ ಬೇರೆ ಕಡೆಗಳಲ್ಲಿ ಪ್ರಕಟಗೊಂಡ ಆಯ್ದ ನುಡಿಚಿತ್ರಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ.
    ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಎಂಬ ಮಾತಿನಂತೆ ನುಡಿಚಿತ್ರಗಳ ಅಥವಾ ಯಾವುದೇ ಬರಹಗಳ ವಸ್ತು ವಿಷಯಗಳನ್ನು ಸ್ವತಃ ಪರಾಮರ್ಶಿಸಿ ಬರೆಯುತ್ತಿರುವುದರಿಂದ, ಅವರ…

  • ನಮ್ಮ ಎಲ್ಲಾ ಕೆಲಸಗಳ ಉದ್ದೇಶವೂ ಅಂತಿಮವಾಗಿ ಸಾರ್ಥಕತೆ, ಸಂತಸ, ಉಲ್ಲಾಸವೇ ಆಗಿದ್ದರೂ ಆ ಉದ್ದೇಶ ಈಡೇರಿದೆಯೋ ಇಲ್ಲವೋ ಎಂಬುದನ್ನು ನೋಡಲು ನಮಗೆ ಬಿಡುವಿಲ್ಲ. ಅಂದರೆ ನಿಜ ಜೀವನದ ಹಲವಾರು ಒತ್ತಡಗಳಲ್ಲಿ ನಮ್ಮ ಬಗ್ಗೆ ಒಂದೈದು ನಿಮಿಷ ಚಿಂತಿಸಲು ಸಮಯ ಇಲ್ಲದಾಗುತ್ತದೆ. ಮನೋವಿಜ್ಞಾನದ ಪ್ರಕಾರ ವ್ಯಕ್ತಿ ಅದೆಷ್ಟೇ ಶ್ರೀಮಂತನಾಗಿದ್ದರೂ ತನಗಿಂತ ಶ್ರೀಮಂತರನ್ನು ಕಂಡಾಗ ಆತನದಲ್ಲಿದ್ದ ಉತ್ಸಾಹ, ತೃಪ್ತಿ, ಸಂತೋಷ ಕಡಿಮೆಯಾಗುತ್ತದೆ. ಲೇಖಕ ನಾಗೇಶ ಹೆಗಡೆಯವರ "ಮತ್ತೆ ಮತ್ತೆ ಕೂಗು ಮಾರಿ" ಪುಸ್ತಕದ 'ಹೊಸವರ್ಷಕ್ಕೆ ಹರ್ಷದ ಹೊಸಮಂತ್ರ' ಲೇಖನದ ಕೆಲವು ಸಾಲುಗಳಿವು. ಹೌದು ದೀರ್ಘವಾಗಿ ಈ ಸಾಲುಗಳ ಬಗ್ಗೆ ಚಿಂತಿಸುತ್ತಾ ಹೋದರೆ ನಾವು ವೈಯಕ್ತಿಕವಾಗಿ ದಿನದ ಎಷ್ಟು ಸಮಯವನ್ನು ಬಳಸಿಕೊಳ್ಳುತ್ತೇವೆ ಎಂಬದನ್ನು ಲೆಕ್ಕಹಾಕಿಕೊಳ್ಳಬೇಕು. ಆಗ ಮಾತ್ರ…