ಪುಸ್ತಕ ಸಂಪದ

  • *ರಾಜಗೋಪಾಲ್ ಎಂ. ಅವರ "ಧ್ಯಾನ, ಮಾತು ಮತ್ತು ಧ್ವನಿ"*

    ಕರ್ನಾಟಕ ಸಂಘ (ಪುತ್ತೂರು- 574201, ದಕ್ಷಿಣ ಕನ್ನಡ ಜಿಲ್ಲೆ)ವು 2002ರಲ್ಲಿ ಪ್ರಕಾಶಿಸಿದ ಉಡುಪಿ ಹಿರಿಯಡಕದ ರಾಜಗೋಪಾಲ ಎಂ. ಅವರ " ಧ್ಯಾನ, ಮಾತು ಮತ್ತು ಧ್ವನಿ" , "ಹಿಮಾಲಯ - ಯಾತ್ರೆ - ಒಂದು ದರ್ಶನ" ಹಾಗೂ "ರಂಗಾಯಣದ ಗಾಂಧಿ" ಎಂಬ ಮೂರು ಲೇಖನಗಳ ಸಂಕಲನ, " ಧ್ಯಾನ, ಮಾತು ಮತ್ತು ಧ್ವನಿ". 4 + 60 ಪುಟಗಳ ಕೃತಿಯ ಬೆಲೆ 36 ರೂಪಾಯಿ.

    "ಧ್ಯಾನವೆಂದರೆ, ಏಕಾಂತದಲ್ಲಿ ಕುಳಿತು, ಕಣ್ಣು ಮುಚ್ಚಿ ಏಕಾಗ್ರತೆಯಿಂದ ಯಾವುದೋ ಅಕ್ಷರವನ್ನೋ, ಆಕೃತಿಯನ್ನೋ, ಬೆಳಕನ್ನೋ ಕುರಿತು ಚಿಂತಿಸುವುದು ಮಾತ್ರ - ಎಂದಲ್ಲ. ತಾನು ನೋಡಲೇಬೇಕಾದ, ಅಧ್ಯಯಿಸಲೇಬೇಕಾದ ಚಿಂತಿಸಲೇಬೇಕಾದ, ಹಾಗೆ…

  • ಖೋಟಾ ನೋಟು ರಹಸ್ಯಗಳು ಎಂಬ ಈ ಪುಸ್ತಕವು ಹಳೆಯ ಪುಸ್ತಕವಾದುದರಿಂದ ಹಲವಾರು ವಿಷಯಗಳು ಸ್ವಲ್ಪ ಮಟ್ಟಿಗೆ ಈಗಿನ ಸಮಯಕ್ಕೆ ಸರಿಹೊಂದಲಾರವು. ಆದರೂ ಆಗಿನ ಸಮಯದಲ್ಲಿ ನೋಟುಗಳ ವಿಷಯ ತಿಳಿದುಕೊಳ್ಳಲು ಅನುಕೂಲಕರವಾದ ಸಂಗತಿಗಳನ್ನು ಈ ಪುಸ್ತಕ ಒಳಗೊಂಡಿದೆ. ಖೋಟಾ ನೋಟಿನ ಬಗ್ಗೆ ನಿಮಗಿರುವ ಸಮಸ್ಯೆ ಬಹೆಗರಿಸಲು ಮತ್ತು ಇದರಿಂದ ನಮ್ಮ ದೇಶಕ್ಕಾಗುವ ನಷ್ಟ, ಜನಸಾಮಾನ್ಯರಿಗಾಗುವ ಮೋಸ, ವ್ಯಾಪಾರದಲ್ಲಿ ಭಯ, ಬ್ಯಾಂಕುಗಳಲ್ಲಿ ಅನುಮಾನ, ಪೋಲೀಸರಿಗೆ ಒತ್ತಡ, ಸರ್ಕಾರಿ ನೌಕರರಿಗೆ ಪ್ರತಿಯೊಂದು ನೋಟನ್ನು ಪರೀಕ್ಷಿಸಿಕೊಳ್ಳುವ ಶಿಕ್ಷೆಯಿಂದ ತಪ್ಪಿಸುವ ಒಂದು ಸಣ್ಣ ಪ್ರಯತ್ನವೇ ಈ ಖೋಟಾ ನೋಟು ರಹಸ್ಯಗಳು. ಈ ಕೃತಿಯಲ್ಲಿ ಖೋಟಾ ನೋಟಿನ ವ್ಯವಹಾರದಲ್ಲಿ ನಡೆಯುವ ಪ್ರತಿಯೊಂದು ಹೆಜ್ಜೆಯನ್ನು ವಿವರವಾಗಿ ತೋರಿಸಿ, ಪ್ರತಿಯೊಬ್ಬರಿಗೂ…

  • ವಶೀಕರಣ (Hypnotism) ಎನ್ನುವ ಈ ಕಿರು ಪುಸ್ತಕವನ್ನು ಬರೆದವರು ಡಾ. ಎನ್.ಕಪನೀಪತಯ್ಯನವರು. ಬಹಳ ಹಿಂದೆ ಅಂದರೆ ೧೯೯೪ರಲ್ಲಿ ಮುದ್ರಣ ಕಂಡ ಈ ಪುಸ್ತಕ ಆ ಸಮಯದಲ್ಲಿ ಬಹಳ ಪ್ರಾಮುಖ್ಯತೆ ಪಡೆದಿತ್ತು. ಮಾಟ, ಮಂತ್ರ, ದೆವ್ವ, ಭೂತ ಇತ್ಯಾದಿಗಳನ್ನು ನಂಬುವ ಜನರ ನಡುವೆ ಸಂಮ್ಮೋಹನ ಕ್ರಿಯೆಯ ಬಗ್ಗೆ ಬರೆದಿರುವ ಈ ಪುಸ್ತಕ ತುಂಬಾ ಮಾಹಿತಿ ಪೂರ್ಣವಾಗಿದೆ. 

    ನಮ್ಮ ನಿತ್ಯ ಜೀವನದಲ್ಲಿ ಸಂಮ್ಮೋಹನ ಎಂಬ ಅಧ್ಯಾಯದಲ್ಲಿ ಲೇಖಕರು ಬರೆದಂತೆ ‘ ಹಿಂದಿನ ಕಾಲದಲ್ಲಿ ಜನಗಳು ನಿತ್ಯ ಸಂತೋಷವಾಗಿದ್ದರು. ಒಬ್ಬರನೊಬ್ಬರು ಕಂಡರೆ ಪ್ರೀತಿ ವಾತ್ಸಲ್ಯ, ಪ್ರೇಮ ತುಂಬಿ ಹರಿಯುತ್ತಿತ್ತು. ಅತಿಥಿ ಅಭ್ಯಾಗತರು ಮನೆಗೆ ಬಂದರೆ ತಮ್ಮ ಭಾಗ್ಯವೆಂದು ತಮ್ಮ ಮನೆಯಲ್ಲಿರುವ ವಸ್ತುಗಳಲ್ಲೇ ಆಹಾರವನ್ನು ತಯಾರು…

  • ಮೂರು ಕೊಲೆಗಳ ಮರ್ಮ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು. ಅಕ್ಷರ ಸೌಲಭ್ಯವಂಚಿತ ಕುಟುಂಬದಿಂದ ಬಂದ ಇವರ ಬರಹಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಟಿತ ಗೌರವ ಪ್ರಶಸ್ತಿ ದೊರೆತಿದೆ. ಇಷ್ಟೊಂದು ಪುಸ್ತಕಗಳನ್ನು ಬರೆದರೂ ಬಡತನದಿಂದಲೇ ಬದುಕಿ ಬಾಳಿದವರು. 

    ೬೦-೭೦ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಯನ್ನು ಅದೂ ಪತ್ತೇದಾರಿ ಸಾಹಿತ್ಯವನ್ನು ಬರೆದು ಜನರಿಗೆ ಓದುವುದರ ಚಟವನ್ನು ಹಿಡಿಸಿದವರು ನರಸಿಂಹಯ್ಯನವರು…

  • ಪತ್ರಕರ್ತ, ಸಂಘಟಕ ಶ್ರೀರಾಮ ದಿವಾಣರದ್ದು ಬಹುಮುಖ ಪ್ರತಿಭೆ. ಅವರೊಬ್ಬ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ. ‘ವ್ಯವಸ್ಥೆಯೆಂಬ ಅವ್ಯವಸ್ಥೆ' ಇದು ಶ್ರೀರಾಮ ದಿವಾಣರ ಎರಡನೇ ಪ್ರಕಟಿತ ಲೇಖನಗಳ ಸಂಕಲನ. ಈಗಾಗಲೇ ೩೧ ಆಯ್ದ ಲೇಖನಗಳನ್ನು ‘ಕೃಷ್ಣಾರ್ಪಣ!’ ಎಂಬ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ. ಪ್ರಸ್ತುತ ಈ ಪುಸ್ತಕದಲ್ಲಿರುವ ಲೇಖನಗಳು ೨೦೧೧ ರಿಂದ ೨೦೧೪ರ ನಡುವಿನ ಅವಧಿಯಲ್ಲಿ ಜಯಕಿರಣ ಪತ್ರಿಕೆ, ಹಾಯ್ ಉಡುಪಿ ಮತ್ತು ಉಡುಪಿ ಬಿಟ್ಸ್.ಇನ್ ಇವುಗಳಲ್ಲಿ ಬರೆದ ಅಂಕಣ ಬರಹಗಳು. ೬೧ ಲೇಖನಗಳನ್ನು ಒಳಗೊಂಡಿರುವ ಈ ಸಂಕಲನವು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಆಗುತ್ತಿರುವ ಅವ್ಯವಸ್ಥೆಯ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಡುತ್ತದೆ. 

    ಲೇಖಕರಾದ ಶ್ರೀರಾಮ ದಿವಾಣರೇ…

  • ‘ಪಾರಿವಾಳಗಳು’ ಎಂಬ ಲಲಿತ ಪ್ರಬಂಧಗಳನ್ನು ಒಳಗೊಂಡಿರುವ ಪುಸ್ತಕವನ್ನು ಕೈಯಲ್ಲಿ ಓದಲು ಹಿಡಿದುಕೊಂಡಾಗ ನನಗೆ ಅದರ ಕಥಾ ವಸ್ತುವಿನ ಮೇಲೆ ಬಹಳವೇನೂ ಅಪೇಕ್ಷೆಯಿರಲಿಲ್ಲ. ಆದರೆ ಸ್ವಲ್ಪ ಕುತೂಹಲ ಖಂಡಿತಾ ಇತ್ತು. ಇದು ಲೇಖಕರಾದ ವಿಠಲ್ ಶೆಣೈ ಅವರ ಮೊದಲ ಪ್ರಕಟಿತ ಪುಸ್ತಕ. ಈಗಾಗಲೇ ಅವರು ಬಿಟ್ ಕಾಯಿನ್ ಬಗ್ಗೆ ಬರೆದ ‘ನಿಗೂಢ ನಾಣ್ಯ' ಮತ್ತು ‘ಹುಲಿವೇಷ’ ಎಂಬ ಕಥಾ ಸಂಕಲನವನ್ನು ಓದಿ, ಮಾಹಿತಿ ಹಂಚಿಕೊಂಡಿರುವುದರಿಂದ ಅವರ ಮೊದಲ ಪುಸ್ತಕ ಹೇಗಿರಬಹುದು? ಎಂಬುವುದರ ಬಗ್ಗೆ ಕೊಂಚ ಕುತೂಹಲವಿತ್ತು. ಆದರೆ ಪುಸ್ತಕದ ಪುಟಗಳನ್ನು ತೆರೆದು ಓದುತ್ತಾ ಹೋದಂತೆ ಇದು ನನ್ನದೂ ಕತೆಯಲ್ವಾ, ನನಗೂ ಹೀಗೇ ಆಗಿದೆಯಲ್ಲಾ, ವಿದೇಶಕ್ಕೆ ಹೋದರೆ ಹೀಗೂ ಪೀಕಲಾಟವಾಗುತ್ತಾ? ಎಂದೆಲ್ಲಾ ಅನಿಸಿ ಬಹಳ ಆಪ್ತವೆನಿಸಿತು. ಒಂದೆರಡು ಗಂಟೆಯ ಒಳಗೆ…

  • *ಡಾ. ರಘುಪತಿ ಕೆಮ್ತೂರು (ಆರ್.ಕೆ. ಮಣಿಪಾಲ್) ಅವರ "ತುಳುನಾಡಿನ ಸ್ಥಳನಾಮಾಧ್ಯಯನ"*

    ನಿವೃತ್ತ ಪ್ರಾಂಶುಪಾಲರೂ, ಖ್ಯಾತ ವಿಮರ್ಶಕರೂ, ಸಂಶೋಧಕರೂ ಆದ ಡಾ. ರಘುಪತಿ ಕೆಮ್ತೂರು (ಆರ್. ಕೆ. ಮಣಿಪಾಲ್, 7 - 2 - 105 ಎ 5, "ಪುದರ್", ಹರಿಶ್ಚಂದ್ರ ಮಾರ್ಗ, ಉಡುಪಿ- 576101) ಇವರು 1980ರಲ್ಲಿ ರಚಿಸಿದ ಸಂಶೋಧನಾ ಗ್ರಂಥ "ತುಳುನಾಡಿನ ಸ್ಥಳನಾಮಾಧ್ಯಯನ". ಈ ಮಹಾ ಸಂಶೋಧನಾ ಪ್ರಬಂಧಕ್ಕಾಗಿ ಮೈಸೂರು ವಿ.ವಿ.ಯು 1981ರಲ್ಲಿ ಡಾ. ರಘುಪತಿ ಕೆಮ್ತೂರು ಅವರಿಗೆ ಪಿಎಚ್.ಡಿ ಪದವಿಯನ್ನು ನೀಡಿತು.

    ತುಳುನಾಡಿನ ಭೂ ವಿವರ, ಶಾಸನ ಶಾಸ್ತ್ರ, ಭಾಷಾ ಶಾಸ್ತ್ರ, ಜಾನಪದ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮಾನವ ಶಾಸ್ತ್ರಗಳನ್ನೊಳಗೊಂಡ ಬಹುಮುಖೀ ಅಧ್ಯಯನ…

  • ಕಥೆಗಾರ, ಪತ್ರಕರ್ತ ಜೋಗಿಯವರು ಫೇಸ್ ಬುಕ್ ಡಾಟ್ ಕಾಮ್/ಮಾನಸ ಜೋಶಿ ಎಂಬ ವಿಲಕ್ಷಣ ಹೆಸರುಳ್ಳ ಕಥಾ ಸಂಗ್ರಹವನ್ನು ಬರೆದಿದ್ದಾರೆ. ಇದಕ್ಕೆ ಕಥೆಗಳು ಮತ್ತು ಕಥೆಯಾಗದ ಕಥೆಗಳು ಎಂದು ಹೆಸರು ಬೇರೆ ನೀಡಿದ್ದಾರೆ. ಜೋಗಿಯವರ ಕಥೆಗಳೇ ಹಾಗೆ ಕಾಡುತ್ತಾ ಇರುತ್ತವೆ. ಅವರೇ ಹೇಳುವಂತೆ ‘ಇನ್ನು ಸಣ್ಣ ಕಥೆಗಳನ್ನು ಬರೆಯಬಾರದು ಎಂಬ ಬಹುದಿನದ ನಿರ್ಧಾರ ಕರಗಿದ ನಂತರ ಹುಟ್ಟಿದ ಕಥೆಗಳು ಇವು. ಸಣ್ಣ ಕಥೆಗಳ ದೊಡ್ಡ ಸಮಸ್ಯೆ ಇದು: ಅವು ಪುಟಗಳ ಸಂಖ್ಯೆಯಲ್ಲಿ ಚಿಕ್ಕದಾಗಿದ್ದರೂ ಒಂದು ಕಾದಂಬರಿಯ ಆತ್ಮವನ್ನೇ ನುಂಗಿ ಬಿಡುತ್ತವೆ. ವೈಯಕ್ತಿಕವಾಗಿ ನನಗೆ ಸಣ್ಣ ಕಥೆಗಳಲ್ಲಿ ನಂಬಿಕೆಯೂ ಹೊರಟುಹೋಗಿದೆ. ಅವುಗಳನ್ನು ಕ್ಷಣದ ಓದಿಗೆ ಬರೆಯಬಹುದು. ಓದುಗರೂ ಅದನ್ನು ಓದಿ ಮರೆಯುತ್ತಾರೆ ಎಂಬುದು ಕ್ರಮೇಣ ಅರ್ಥವಾಗಿದೆ.’ 

  • ಸಿರಿಧಾನ್ಯವು ಸರ್ವ ರೋಗಗಳಿಗೆ ರಾಮಬಾಣ ಎನ್ನುವ ವಿಷಯವನ್ನು ಹಲವಾರು ಉದಾಹರಣೆಗಳ ಮೂಲಕ ಈ ಪುಸ್ತಕದ ಮೂಲಕ ಹೇಳಲು ಹೊರಟಿದ್ದಾರೆ ಲೇಖಕರಾದ ಎನ್. ಭವಾನಿಶಂಕರ್. ‘ಸಿರಿಧಾನ್ಯದಲ್ಲಿ ಔಷಧೀಯ ಗುಣಗಳಿವೆ. ಹೈಟೆಕ್ ಆಸ್ಪತ್ರೆಗಳಿಂದ ದೂರವಿರಿ. ಎಲ್ಲಾ ಕಾಯಿಲೆಗಳಿಗೂ ಈ ಆಹಾರಗಳು ಔಷಧ. ಅವುಗಳ ಪರಿಚಯ. ನಿಮ್ಮ ಮಕ್ಕಳಿಗೆ ಈ ವಿಷಯುಕ್ತ ಆಹಾರವನ್ನು ಕೊಡಬೇಡಿ. ನೀವೂ ತಿನ್ನಬೇಡಿ. ಭಯಾನಕ ಕಾಯಿಲೆಗಳು ಬರುತ್ತವೆ. ಹತ್ತು ವರ್ಷದ ಮಕ್ಕಳಿಗೆ ಡಯಾಬೀಟೀಸ್, ಬೇಗ ಮುಟ್ಟಾಗಲು ಕಾರಣವೇನು? ಡಯಾಬಿಟೀಸ್, ಹೃದಯ ಕಾಯಿಲೆ, ಅಧಿಕ ಕೊಲೆಸ್ಟ್ರಾಲ್, ಗ್ಯಾಂಗ್ರೀನ್, ಫಿಟ್ಸ್... ಗುಣವಾಗುತ್ತದೆ. ಪ್ರಖ್ಯಾತ ವೈದ್ಯರಾದ ಡಾ.ಖಾದರ್ ಅವರು ಗುಣಪಡಿಸುತ್ತಿರುವ ರೋಗಗಳು ಮತ್ತು ಔಷಧಗಳು. ಸಿರಿಧಾನ್ಯ ಕೃಷಿ ವಿಧಾನ. ಸಿರಿಧಾನ್ಯದಲ್ಲಿರುವ…

  • *ಹಳೆಕೋಟೆ ಸುಂದರ ಬಂಗೇರಾ ಅವರು ಸಂಪಾದಿಸಿದ ಕವನ ಸಂಕಲನ "ಹದ್ದಿನ ಕವನ"*

    ಇಪ್ಪತ್ತಮೂರು ಮಂದಿ ಕವಿಗಳ ಇಪ್ಪತ್ತೇಳು ಕವನಗಳಿರುವ ಸಂಕಲನ " ಹದ್ದಿನ ಕವನ". ಕವಿ, ಪತ್ರಕರ್ತ ಹಳೆಕೋಟೆ ಸುಂದರ ಬಂಗೇರಾ ಅವರು ಸಂಕಲನವನ್ನು ಸಂಪಾದಿಸಿದ್ದಾರೆ. ಈಗಲ್ ಪ್ರಕಾಶನ, ಕೆ. ಎಂ. ರಸ್ತೆ, ಬಿಳಗುಳ, ಹೆಸಗಲ್ ಅಂಚೆ, ಮೂಡಿಗೆರೆ- 577 132, ಚಿಕ್ಕಮಗಳೂರು ಜಿಲ್ಲೆ ಸಂಸ್ಥೆಯು 2019 ರಲ್ಲಿ ಪ್ರಕಾಶಿಸಿದ ಸಂಕಲನದಲ್ಲಿ 44 + 4 ಪುಟಗಳಿದ್ದು, ಬೆಲೆ 70 ರೂಪಾಯಿ.

    ಸಂಕಲನದ 23 ಮಂದಿ ಕವಿಗಳಲ್ಲಿ ಒಬ್ಬರಾಗಿರುವ, ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ  ಕುಂದೂರು ಅಶೋಕ ಇವರ ಮುನ್ನುಡಿ ಮತ್ತು ಕವನಗಳನ್ನು ಸಂಪಾದಿಸಿದ,…