ಗಿರಿಮನೆ ಶ್ಯಾಮರಾವ್ ಮಲೆನಾಡಿನಲ್ಲೇ ಹುಟ್ಟಿ ಬೆಳೆದವರು. ಅಲ್ಲಿಯ ರೋಚಕತೆಯನ್ನು ಇಂಚು ಇಂಚಾಗಿ ಅನುಭವಿಸಿದವರು. ಅವರ ಅನುಭವದ ರೋಚಕ ಘಟನೆಗಳಿಗೇ ಕೃತಿರೂಪ ನೀಡಿ ‘ಕಾಫಿ ನಾಡಿನ ಕಿತ್ತಳೆ’ ಎಂಬ ಹೆಸರಿನಲ್ಲಿ ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟವಾಯಿತು. ಅದರಲ್ಲಿನ ಚಿಂಟಿಯ ಪಾತ್ರದ ಚಿತ್ರಣದ ಭಾಗ ಮಕ್ಕಳ ಸಾಹಿತ್ಯಕ್ಕೆ ಸ್ವೀಕೃತವಾಯಿತು. ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಮಲೆನಾಡಿಗೆ ಸಂಬಂಧಪಟ್ಟ ಬರಹಗಳ ಪ್ರಭಾವವೂ ಈ ಕೃತಿ ರಚನೆಗೆ ಪ್ರಮುಖ ಕಾರಣ ಎನ್ನುತ್ತಾರೆ ಲೇಖಕರು. ‘ಕಾಫಿ ನಾಡಿನ ಕಿತ್ತಳೆ' ಮುಂದೆ ಮುದ್ರಣವಾಗಿ, ನಂತರ ಪರಿಷ್ಕೃತ ಮುದ್ರಣವಾಗುವ ಸಮಯದಲ್ಲಿ ಮಲೆನಾಡಿನ ರೋಚಕ ಕತೆಗಳು ಎಂದಾಯಿತು.
ಬೆನ್ನುಡಿಯಲ್ಲಿ ಗಿರಿಮನೆ ಶ್ಯಾಮರಾಯರೇ ಬರೆದುಕೊಂಡಂತೆ ‘ ಬಟ್ಟ ಬಯಲಿನಂತಲ್ಲ ಮಲೆನಾಡು, ಇಲ್ಲಿನ…