ಪುಸ್ತಕ ಸಂಪದ

  • ವೃತ್ತಿಯಲ್ಲಿ ಪಶುವೈದ್ಯರಾಗಿದ್ದ ಡಾ.ಮಿರ್ಜಾ ಬಷೀರ ಅವರ ಮೊದಲ ಕಥಾ ಸಂಕಲನ, ‘ಬಟ್ಟೆ ಇಲ್ಲದ ಊರಿನಲ್ಲಿ’. ಇದು ವಾಸ್ತವ ಮತ್ತು ಕಲ್ಪನೆಯನ್ನು ಅವಲಂಬಿಸಿದ ಸಾಮಾಜಿಕ ಚಿತ್ರಣ. ಪ್ರಶಸ್ತಿ ವಿಜೇತ ಕತೆಗಳೂ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾದ ಹತ್ತು ಕತೆಗಳನ್ನು ಒಳಗೊಂಡ ಸಂಗ್ರಹ. ತಮ್ಮ ವೃತ್ತಿ ಜೀವನದಲ್ಲಿ ಸಂಭವಿಸಿದ ಅಥವಾ ಸಂಭವಿಸಿರಬಹುದಾದ ಘಟನೆಗಳ ಸುತ್ತ ಹೆಣೆದಿರುವ ಕತೆಗಳಲ್ಲದೆ ಲೇಖಕರು ಕಲ್ಪನೆಯ ಲೋಕಕ್ಕೆ ನಮ್ಮನ್ನು ಒಯ್ಯುವ ಕತೆಗಳೂ ಇವೆ. ಈ ಕತೆಗಳ ಮೂಲಕ ಬಷೀರರು ನಮ್ಮ ಸಮಾಜದ ಆಗುಹೋಗುಗಳಿಗೆ ಕನ್ನಡಿ ಹಿಡಿಯುತ್ತಾರೆ.
    ಹೆಚ್ಚಿನ ಕತೆಗಳಲ್ಲಿ ನಡೆಯುವ ಘಟನೆಗಳು ತೀರಾ ಸಾಮಾನ್ಯವಾದವು. ಭಾಷೆಯೂ ಸರಳವಾಗಿದೆ. ನಿರೂಪಣೆಯಲ್ಲಿ ನಾಟಕೀಯತೆ ಇಲ್ಲದೆಯೂ ಕುತೂಹಲವನ್ನು ಬೆಳೆಸುವ ಗುಣವಿದ್ದು ಕತೆಗಳು ಓದಿಸಿಕೊಂಡು…

  • ನಮ್ಮ ಬಾಲ್ಯದ ದಿನಗಳಲ್ಲಿ ಪ್ರಾಥಮಿಕ ಶಾಲೆಯ ಪಠ್ಯಪುಸ್ತಕಗಳಿಂದ ಕಲಿತ ಹಾಡುಗಳು ಹಲವು. ಅವುಗಳಲ್ಲಿ ಮರೆಯಲಾಗದ ಕವಿತೆ, “ಹಾವಿನ ಹಾಡು".  “ನಾಗರ ಹಾವೆ! ಹಾವೊಳು ಹೂವೆ! ಬಾಗಿಲ ಬಿಲದಲಿ ನಿನ್ನಯ ಠಾವೆ? ಕೈಗಳ ಮುಗಿವೆ, ಹಾಲನ್ನೀವೆ! ಬಾ ಬಾ ಬಾ ಬಾ ಬಾ ಬಾ ಬಾ ಬಾ” ಎಂದು ಆರಂಭವಾಗುವ ಈ ಹಾಡು ನಮ್ಮ ನಾಲಗೆಯಲ್ಲಿ ನಲಿದಾಡುತ್ತಿತ್ತು. ಇದಕ್ಕೆ ಕಾರಣ ಪ್ರತಿಯೊಂದು ಪದ್ಯದ ಕೊನೆಗೂ ಇರುವ ಹಾವಾಡಿಗನ ಪುಂಗಿಯ ನಾದದ ಸೊಗಸಾದ ಅನುಕರಣೆ. ಇದು ಪಂಜೆ ಮಂಗೇಶರಾಯರು ರಚಿಸಿದ ಸುಪ್ರಸಿದ್ಧ ಮಕ್ಕಳ ಕವನ.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡದ ಹಿರಿಯ ಸಾಹಿತಿಗಳ ಪ್ರಸಿದ್ಧ ಹಾಗೂ ಅಲಭ್ಯವಾದ ಕೃತಿಗಳನ್ನು ಪುನರ್ ಮುದ್ರಿಸುವ ಯೋಜನೆಯ ಅನುಸಾರ ೨೦೦೬ರಲ್ಲಿ ಈ ಪುಸ್ತಕ ಪ್ರಕಟಿಸಿದ್ದರಿಂದಾಗಿ ಪಂಜೆಯವರ ಮಕ್ಕಳ ಸಾಹಿತ್ಯವೆಲ್ಲ ಒಂದೆಡೆ…

  • “..ಅರಣ್ಯ ಸಂರಕ್ಷಣೆಯ ಕೆಲಸಗಳು ನಡೆಯುತ್ತಿವೆ.  ಸರಣಿ ವಿಚಾರ ಸಂಕಿರಣ, ಆಂದೋಲನ, ಹೋರಾಟಗಳು ಸಾಗಿದೆ. ನೆಲಮೂಲದ ಭಾಷೆಯ ಗಂಧವಿಲ್ಲದೇ ಪರಿಸರ ವಿಜ್ಞಾನವನ್ನು ಪರಿಣಾಮಕಾರಿಯಾಗಿ ಶ್ರೀಸಾಮಾನ್ಯರತ್ತ ಒಯ್ಯಬಹುದೇ?  ಪ್ರಶ್ನೆ ಜನಿಸಿದೆ.  ಪರಿಸರದ ಮಾತು ಕೇಳಲು ಕುಳಿತ ಶ್ರೀಸಾಮಾನ್ಯರಿಗೆ ಭೂಮಿ ಬಿಸಿಯಾಗುತ್ತಿದೆ, ಹಿಮ ಕರಗುತ್ತಿದೆ, ಓಜೋನ್ ಕವಚ ಹಾಳಾಗುತ್ತಿದೆ, ಸಸ್ಯ ಸಂಕುಲಗಳು ವಿನಾಶವಾಗುತ್ತಿವೆಯೆಂದು ಹೇಳಿದರೆ ಪ್ರಯೋಜನವಿಲ್ಲ.  ದಿನ ನಿತ್ಯದ ಬಳಕೆಯಲ್ಲಿರುವ ನಿಸರ್ಗ ಸಂಪನ್ಮೂಲಗಳ ಕತೆಯ ಎಳೆಎಳೆಯನ್ನು ಅವರ ಭಾಷೆಯಲ್ಲಿ ಬಿಡಿಸಿ ತೋರಿಸಬೇಕು.  ಕಾನ್ವೆಂಟ್ ಓದಿ, ಕಾಂಕ್ರೀಟ್‍ನಲ್ಲಿ ಬೆಳೆದು, ವಿಶ್ವ ಪರ್ಯಟನೆಗೆ ವಿಮಾನವೇರಿ ಜಾಗತಿಕ ಸೆಮಿನಾರಿನಲ್ಲಿ ಕಳೆದು ಹೋಗುತ್ತಿರುವ ಈ ತಲೆಮಾರಿನ ಅಕಡೆಮಿಕ್ ಪರಿಸರ ತಜ್ಞತೆಯಿಂದ ಇದನ್ನು…

  • ನಮ್ಮ ಪೂರ್ವಿಕರ ಜ್ನಾನ ಅಗಾಧ. ಆದರೆ ಇಂದಿಗೂ ಹಲವಾರು ಹೊಸ ಸಂಗತಿಗಳ ಶೋಧಕರು ವಿದೇಶೀಯರೆಂದು ನಮ್ಮಲ್ಲಿ ಹಲವರು ಭಾವಿಸುತ್ತಾರೆ. ಉದಾಹರಣೆಗಳು: ಸೂರ್ಯನೇ ಶಕ್ತಿಯ ಮೂಲ, ಆಕಾಶಕಾಯಗಳೆಲ್ಲದರ ಮಾರ್ಗವೂ ದೀರ್ಘವೃತ್ತಾಕಾರಕ, ಗುರುತ್ವಾಕರ್ಷಣ ನಿಯಮ, ಬೆಳಕಿನ ವೇಗ, ಪೈಥಾಗೋರಸ್ ಸಿದ್ಧಾಂತ ಇತ್ಯಾದಿ.

    ಭಾರತೀಯರನ್ನು ಆಳುಗಳಾಗಿ ಉಳಿಸಿಕೊಳ್ಳಲಿಕ್ಕಾಗಿ ಬ್ರಿಟಿಷರು ರೂಪಿಸಿದ ಶಿಕ್ಷಣ ಪದ್ಧತಿಗೆ ಅನುಸಾರವಾಗಿ ಬರೆಯಲ್ಪಟ್ಟ ನಮ್ಮ ಈಗಿನ ಶಾಲಾ ಪಠ್ಯಪುಸ್ತಕಗಳೂ ಅದನ್ನೇ ಬೋಧಿಸುತ್ತವೆ. ಸತ್ಯ ಏನೆಂದರೆ, ವಿದೇಶಿಯರ ಶೋಧನೆಗಳೆಂದು ಈಗಲೂ ಹೇಳಲಾಗುವ ಹಲವು ಸಂಗತಿಗಳನ್ನು ಅವರಿಗಿಂತ ಸಾವಿರಾರು ವರುಷಗಳ ಮುಂಚೆಯೇ ವೇದೋಪನಿಷತ್ತುಗಳ ಕಾಲದಲ್ಲಿ  ಭಾರತೀಯ ಋಷಿಮುನಿಗಳು ಶೋಧಿಸಿದ್ದರು. ಮಾತ್ರವಲ್ಲ, ಅವನ್ನು ಸಂಸ್ಕೃತ ಭಾಷೆಯಲ್ಲಿ ದಾಖಲಿಸಿದ್ದರು…

  • ವ್ಯಾಸರಾಯ ಬಲ್ಲಾಳರ ’ಬಂಡಾಯ’-ವರ್ಗಸಂಘರ್ಷಕ್ಕೊಂದು ವ್ಯಾಖ್ಯೆ
    ಕಾದಂಬರಿಯ ಹಿನ್ನೆಲೆ:
    ಕಾರ್ಮಿಕ ಚಳವಳಿ ಮತ್ತು ಮಾಲಿಕ-ಉದ್ಯೋಗಿಗಳ ಸಂಘರ್ಷವನ್ನೇ ವಸ್ತುವಾಗಿರಿಸಿ ರಚಿಸಲ್ಪಟ್ಟ ಸಾಹಿತ್ಯ ಕೃತಿಗಳು ಕನ್ನಡ ಅಥವಾ ಯಾವುದೇ ಭಾಷೆಯಲ್ಲಿ ವಿರಳ. ಇದಕ್ಕೆ ಕಾರ್ಮಿಕ ಸಂಘಗಳ ಬಗ್ಗೆ ಸಮಾಜದಲ್ಲಿ ಬೇರೂರಿರುವ ಪೂರ್ವಗ್ರಹ, ಅವುಗಳ ಕುರಿತಾದ ಅಸ್ಪಷ್ಟ ತಿಳಿವಳಿಕೆ ಮತ್ತು ಓದುಗರಲ್ಲಿ ಈ ವಿಷಯದ ಬಗ್ಗೆ ಆಸಕ್ತಿ ಇರಬಹುದೇ ಎಂಬ ಸಂಶಯ ಮುಖ್ಯ ಕಾರಣಗಳಿರಬಹುದೆಂದು ನನ್ನ ಅನಿಸಿಕೆ. ಈ ಹಿನ್ನೆಲೆಯಲ್ಲಿ ವ್ಯಾಸರಾಯ ಬಲ್ಲಾಳರ ’ಬಂಡಾಯ’ ಕಾದಂಬರಿ ಕಾರ್ಮಿಕ ಸಂಘಗಳ ಉದ್ದೇಶ, ಅವುಗಳ ಕಾರ್ಯವೈಖರಿ, ನಾಯಕರ ಧೋರಣೆಗಳು ಮತ್ತು ಉದ್ಯೋಗಪತಿಗಳ ಗುರಿಗಳು ಮುಂತಾದ ವಿಷಯಗಳ ಬಗ್ಗೆ ಮುಕ್ತ ವಿಶ್ಲೇಷಣೆ ನಡೆಸುವ ಒಂದು ಅನನ್ಯವಾದ ಕೃತಿ.
    ಕಾದಂಬರಿಯ…

  • “ಹಾ.ಮಾ.ನಾ.” ಎಂದೇ ಹೆಸರಾದ ಡಾ. ಹಾರೋಗದ್ದೆ ಮಾನಪ್ಪ ನಾಯಕರು ಕನ್ನಡದಲ್ಲಿ ಅಂಕಣ ಬರಹವನ್ನು ಜನಪ್ರಿಯಗೊಳಿಸಿದವರಲ್ಲಿ ಮೊದಲಿಗರು. ಅವರ ಪುಸ್ತಕಗಳಲ್ಲಿ ತೀರಾ ಆಪ್ತವೆನಿಸುವ ಪುಸ್ತಕ “ನಮ್ಮ ಮನೆಯ ದೀಪ”.

    ಇದರಲ್ಲಿವೆ, ಅವರ ಏಳು ಬರಹಗಳು. ಪ್ರತಿಯೊಂದು ಬರಹವೂ ನಮ್ಮ ಭಾವನೆಗಳನ್ನು ತೀಡಿ, ಹೃದಯವನ್ನು ತಟ್ಟುತ್ತದೆ. ಅವನ್ನು ಓದುತ್ತ ಹೋದಂತೆ, ಮನಸ್ಸು ದ್ರವಿಸುತ್ತದೆ. ಇದು ನಮ್ಮದೇ ಮನೆಯ ತಾಯಿ-ಮಗಳ ಬಗೆಗಿನ ಬರಹಗಳು ಅನಿಸಿ ಬಿಡುತ್ತದೆ. ೨೦೧೧ರಲ್ಲಿ ಬೆಳಗಾವಿಯಲ್ಲಿ ಜರಗಿದ ವಿಶ್ವ ಕನ್ನಡ ಸಮ್ಮೇಳನದ ಸಾಹಿತ್ಯಮಾಲೆಯ ಒಂದು ನೂರು ಮೇರು ಕೃತಿಗಳಲ್ಲಿ ಈ ಪುಸ್ತಕವೂ ಆಯ್ಕೆಯಾಗಿ ಮರುಪ್ರಕಟವಾದದ್ದು ಇದರ ಶ್ರೇಷ್ಠತೆಯ ಪುರಾವೆ.

    ೧೯೫೬ರಲ್ಲಿ ಮೊದಲು ಪ್ರಕಟವಾದ ಈ ಪುಸ್ತಕದ ಬಗ್ಗೆ, ಹಾ.ಮಾ. ನಾಯಕರು ಹೀಗೆ ಅರಿಕೆ…

  • ಭಾರತೀಯ ರಂಗಭೂಮಿಯೊಂದರ ವ್ಯವಸ್ಥೆ ಮತ್ತು ಅವಸ್ಥೆಯ ವಿಮರ್ಶೆಗೊಂದು ಕೈಪಿಡಿ

    ಭಾರತೀಯ ಸಾಂಪ್ರದಾಯಿಕ ರಂಗಭೂಮಿಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳಲು ಕಾಲ ಅವಕ್ಕೆ ಒಡ್ಡಿರುವ ಹೊಸ ಸಮಸ್ಯೆಗಳನ್ನು ಅಧ್ಯಯನ ಮಾಡುವ ಮೂಲಕ ಸಾಧ್ಯ ಎನ್ನುವುದು ನಿಜ ಹೌದು. ಹೊಸ ವಿಷಯ ವಸ್ತುಗಳನ್ನು ಹೇಗೆ ಬಳಸಬೇಕು ಬಳಸಬೇಡವೇ, ರಂಗ ಮಾಧ್ಯಮದ ಚೌಕಟ್ಟೇನು ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುವಲ್ಲಿ ರಂಗಭೂಮಿಯ ರೂಪ ಎದ್ದು ನಿಲ್ಲುತ್ತದೆ. ಹೀಗೆ ಯಕ್ಷಗಾನ ಬಯಲಾಟದ ಸ್ವರೂಪ ಆಗುತ್ತಿರುವ ಬದಲಾವಣೆ ಹಾಗೂ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದರಲ್ಲಿ ಯಕ್ಷಗಾನದ ಮತ್ತು ತನ್ಮೂಲಕ ಭಾರತೀಯ ರಂಗಭೂಮಿಯ ಹಲವು ವಿಚಾರಗಳನ್ನು ಸ್ಪಷ್ಟವಾಗಿ ಮಂಡಿಸಿ ಅರ್ಥಮಾಡಿಸುವ ಕೆಲಸವನ್ನು ಡಾ ಪ್ರಭಾಕರ ಜೋಶಿಯವರ ಯಕ್ಷಗಾನ ಸ್ಥಿತಿ ಗತಿ ಮಾಡುತ್ತದೆ. ಈ…

  • “ಗುಡ್ ಅರ್ತ್” ನೋಬಲ್ ಪ್ರಶಸ್ತಿ ಪುರಸ್ಕೃತ ಚೀನೀ ಕಾದಂಬರಿ. ವಾಂಗ್ ಲುಂಗ್ ಎಂಬ ಒಬ್ಬ ರೈತ, ಜಮೀನಿನ ಮಾಲೀಕನಾಗ ಬೇಕೆಂಬ ತನ್ನ ಕನಸನ್ನು ನನಸಾಗಿಸಿಕೊಂಡ ಕತೆ ಇದು. ಇದರಲ್ಲಿ ಅವನ ಪತ್ನಿ ಓಲನ್ ಅವಳದ್ದೂ ಪ್ರಧಾನ ಪಾತ್ರ. ವಾಂಗ್ ಲುಂಗನ ಮುದಿ ತಂದೆಯಿಂದ ತೊಡಗಿ ಅವನ ಮೊಮ್ಮಕ್ಕಳ ತನಕ ನಾಲ್ಕು ತಲೆಮಾರುಗಳ ಬದುಕಿನ ಕತೆಯೇ ಈ ಕಾದಂಬರಿ.

    ರೈತ ವಾಂಗ್ ಲುಂಗನ ಬಾಲ್ಯ ಮತ್ತು ಯೌವನ ಬಡತನದಲ್ಲೇ ಕಳೆಯಿತು. ಓಲನ್‌ಲನ್ನು ವಿವಾಹವಾದ ಬಳಿಕ, ಅವಳೊಂದಿಗೆ ವಾಂಗ್ ಲುಂಗ್ ತನ್ನ ತುಂಡು ಜಮೀನಿನಲ್ಲಿ ಶಕ್ತಿ ಮೀರಿ ದುಡಿಯುತ್ತಾನೆ. ತಮ್ಮ ಜಮೀನಿನ ಮಣ್ಣಿಗೆ ವಾಂಗ್ ಲುಂಗ್ ಮತ್ತು ಓಲನ್ ಸುರಿಸುವ ಬೆವರೇ ಬಂಗಾರವಾಗುತ್ತದೆ. ಕ್ರಮೇಣ ಬೆವರಿಳಿಸಿ ಗಳಿಸಿದ ಹಣದಿಂದ ಇನ್ನಷ್ಟು ಜಮೀನು ಖರೀದಿಸಿ ದೊಡ್ಡ ಜಮೀನ್ದಾರ ಎನಿಸಿಕೊಳ್ಳುತ್ತಾನೆ.

  • ಅಡುಗೆ ಪುಸ್ತಕಗಳಿಗೆ ಸುಗ್ಗಿ! ಹೊಸದಾಗಿ ಅಡುಗೆ ಆರಂಭಿಸುವವರಿಗೆ ಪುಸ್ತಕ ಆಪ್ತ ಸಂಗಾತಿ. ಮಾರುಕಟ್ಟೆಯಲ್ಲಿ ವೈವಿಧ್ಯ ಅಡುಗೆಯ ಪುಸ್ತಕಗಳು ಲಭ್ಯ. ಜಾಲತಾಣಗಳಲ್ಲೂ ರಾಶಿರಾಶಿ ಪುಟಗಳು. ವಾಹಿನಿಗಳ ಅಡುಗೆ ಕಾರ್ಯಕ್ರಮಗಳಂತೂ ರಂಗುರಂಗು. 
    ಈಚೆಗೆ ಮುಳಿಯ ಶಾಲೆಯಲ್ಲಿ ಜರುಗಿದ ‘ಕಾಡು ಮಾವಿನ ಮೆಲುಕು’ ಕಾರ್ಯಕ್ರಮದಲ್ಲಿ ಪಾತನಡ್ಕದ ಸುಶೀಲಾ ಎಸ್.ಎನ್.ಭಟ್ಟರ ಕಾಡು ಮಾವಿನ ಪಾಕೇತನಗಳ ಪುಸ್ತಕ ಬಿಡುಗಡೆಗೊಂಡಿತು. ಅಲ್ಲಿಂದಿಲ್ಲಿಂದ ಹೆಕ್ಕಿದ ಮಾಹಿತಿ ಇದರಲ್ಲಿಲ್ಲ. ತಮ್ಮ ಅಡುಗೆ ಮನೆಯಲ್ಲಿ ಮಾಡಿ, ರುಚಿ ನೋಡಿ ಗೆದ್ದ ಬಳಿಕವೇ ಕಾಗದಕ್ಕಿಳಿಸಿದ್ದಾರೆ. ಮಾವಿನ ತಳಿ ಸಂರಕ್ಷಣೆಯ ಜತೆಜತೆಗೆ ಅವುಗಳ ಪಾಕವೈವಿಧ್ಯಗಳ ದಾಖಲಾತಿಯೂ ಅಷ್ಟೇ ಮುಖ್ಯವಾಗುತ್ತದೆ. 
    ಉಪ್ಪಿನಕಾಯಿ ಇಲ್ಲದೆ ಊಟವಿಲ್ಲ. ವಿವಿಧ ಕಂಪನಿಗಳ ಉಪ್ಪಿನಕಾಯಿಗಳು ಅಡುಗೆ…

  • “ಜಮಖಂಡಿಯ ಅರಮನೆಯ ಹಿಂಭಾಗದ ಗುಡ್ಡದಂಚಿಗೆ ಒಂದು ಕೆರೆಯಿದೆ. ಜಮಖಂಡಿ ಸಂಸ್ಥಾನ ನೂತನ ಅರಮನೆ ಕಟ್ಟುವ ಕಾಲಕ್ಕೆ ನೀರಿಗೆಂದು ನಿರ್ಮಿಸಿದ ರಚನೆಯಿದು. ಒಮ್ಮೆ ಮಳೆ ಸುರಿದರೆ ಇಳಿಜಾರಿಗೆ ಹರಿಯುವ ನೀರು ಕೆರೆಯಲ್ಲಿ ಸುರಕ್ಷಿತವಾಗಿ ನಿಲ್ಲುತ್ತದೆ. ಎರಡು ವರ್ಷದ ಹಿಂದೆ ಎಪ್ರಿಲ್ ತಿಂಗಳ ಉರಿಬಿಸಿಲಿನಲ್ಲಿ ಕೆರೆಯ ಚಿತ್ರ ತೆಗೆಯುತ್ತಿದ್ದೆ. ಆಗ ಮುಕ್ಕಾಲು ಭಾಗ ನೀರು ತುಂಬಿತ್ತು. ಕೆರೆಯ ಸುತ್ತ ಈಗಲೂ ಇದ್ದದ್ದು ಕಲ್ಲುಗುಡ್ಡ, ಕಳ್ಳಿಗಿಡಗಳ ಪ್ರದೇಶ! ಪಕ್ಕದಲ್ಲಿ ಕುರಿ ಮೇಯಿಸುತ್ತಿದ್ದವರು ಇದು ಮೊನ್ನೆ ಸುರಿದ ಮಳೆ ನೀರೆಂದರು. ಮೊನ್ನೆ ಯಾವತ್ತು ಮಳೆ ಸುರಿಯಿತೆಂದು ಕೊಂಚ ವಿಚಾರಿಸಿದರೆ ಆರು ತಿಂಗಳ ಹಿಂದೆ ಅಕ್ಟೋಬರ್‍ನಲ್ಲಿ ಸುರಿದ ಮಳೆ ನೀರು ಎಂಬುದು ಆಮೇಲೆ ತಿಳಿಯಿತು. ಒಮ್ಮೆ ಕೆರೆ ಭರ್ತಿಯಾದರೆ ಹಲವು ತಿಂಗಳು ನೀರಿರುತ್ತದೆ. ಬರದ…