ಪುಸ್ತಕ ಸಂಪದ

  • ಇದು ಶ್ರೀಮತಿ ಲತಾಗುತ್ತಿಯವರ‌ ಇತ್ತೀಚಿನ‌ ಕಾದ0ಬರಿ. ಈ ಹಿ0ದೆ ಅವರು ತಮ್ಮ‌ 'ನಾ ಕ0ಡ0ತೆ ಅರೇಬಿಯಾ'  ಹಾಗೂ 'ಯೂರೋ ನಾಡಿನಲ್ಲಿ' ಪ್ರವಾಸ‌ ಕಥನಗಳಿ0ದಲೂ, 'ಸೂಜಿಗಲ್ಲು' ಮೊದಲಾದ‌ ಕವನಸ0ಗ್ರಹಗಳಿ0ದ‌ ಹಾಗೂ ಹೆಜ್ಜೆ ಎ0ಬ‌ ಕಾದ0ಬರಿಯಿ0ದ‌ ಕನ್ನಡ‌ ಸಾಹಿತ್ಯದ‌ ಗ0ಭೀರ‌ ಓದುಗರಿಗೆ ಪರಿಚಿತರಾದವರು. 'ಪ್ರವಾಸ‌ ಸಾಹಿತ್ಯ: ವಿಶ್ಹ‌ ಸ0ಸ್ಕ್ಱುತಿ' ಎ0ಬುದು ಅವರ‌ ಮಹಾಪ್ರಬ0ಧ‌.

           ಇದೀಗ‌ ಅವರು ಹೊಸರೀತಿಯ‌ ಪ್ರಯತ್ನವೊ0ದಕ್ಕೆ ಕೈಹಾಕಿ ಗೆದ್ದಿದ್ದಾರೆ. ಬೆಳಗಾವಿ ಜಿಲ್ಲೆಯ‌  ಮಹದೇವಪುರ‌ ಎ0ಬ‌ ಹಳ್ಳಿಯನ್ನು ಪ್ರಧಾನ‌ ಕೇ0ದ್ರವಾಗಿಟ್ಟುಕೊ0ಡು, ಸ್ವಾತ0ತ್ರ್ಯ‌ ಚಳುವಳಿ ಆ ಭಾಗದಲ್ಲಿ ಹುಟ್ಟಿ ಹರಡಿದ‌ ಬಗೆಯನ್ನು, ಐದು ತಲೆಮರುಗಳ‌ ದೀರ್ಘ‌ ಕಾಲಾವಧಿಯಲ್ಲಿ ನಡೆದ‌ ಆಗುಹೋಗುಗಳನ್ನು ಈ 420 ಪುಟಗಳ‌ ಕಾದ0ಬರಿಯಲ್ಲಿ ಸೊಗಸಾಗಿ…

  • ಕರ್ನಾಟಕ‌ ಜಾನಪದ‌ ಮತ್ತು ಯಕ್ಷಗಾನ‌ ಸಾಹಿತ್ಯವನ್ನು ಹಲವು ಸ0ಪುಟಗಳಲ್ಲಿ ಪ್ರಕಟಿಸುವ‌ ಯೋಜನೆಯೊದನ್ನು ಡಾ. ಹಿ.ಶಿ. ರಾಮಚ0ದ್ರೇಗೌಡರು ಅಧ್ಯಕ್ಷರಾಗಿದ್ದಾಗ‌ ರೂಪಿಸಲಾಗಿತ್ತು. ಪುಣ್ಯಕ್ಕೆ ಅದು ಇನ್ನೂ ಚಾಲ್ತಿಯಲ್ಲಿದ್ದು ಈ ವರೆಗೆ 56 ಸ0ಪುಟಗಳು ಹೊರಬ0ದಿವೆ. ಇದಕ್ಕೆ ಕರ್ನಾಟಕದ ಸರ್ಕಾರಗಳೂ ಕಾಲಕಾಲಕ್ಕೆ ನೆರವು ನೀಡಿವೆ ಎ0ಬುದು ಮೆಚ್ಚ‌ಬೇಕಾದ ಅ0ಶ‌.

       ಈ ಮಾಲಿಕೆಗೆ ಜೈನ‌ ಜನಪದ‌ ಗೀತೆಗಳ ಸ0ಪುಟವೊ0ದನ್ನು ಸ0ಪಾದಿಸಿ ಕೊಡುವ0ತೆ ನನ್ನನ್ನು ಕೋರಿಕೊ0ಡದ್ದ್ದರ‌ ಫಲವಾಗಿ ನಾನು ಇದನ್ನು ಸ0ಪಾದಿಸಿಕೊಟ್ಟು ಐದು ವರ್ಷಗಳೇ ಕಳೆದಿದ್ದವು. ಇದೀಗ ಸಿದ್ಧಗೊಡಿದೆ. 300 ಪುಟಗಳ‌ ಈ ಪುಸ್ತಕದಲ್ಲಿ ಈ ವರೆಗೆ ಸ0ಗ್ರಹಗೊ0ಡಿರುವ‌ ಬಹುತೇಕ‌ ಎಲ್ಲ ಜೈನ‌ ಜನಪದಗೀತೆಗಳು, ಐತಿಹ್ಯಗಳು, ಗಾದೆಗಳು, ಹಾಗೂ ಒಡಪುಗಳಿವೆ.ಕೆಲವು ಸ್ಥಳನಾಮಗಳ‌ ಮೇಲೆ…

  • 2010 ರಲ್ಲಿ ಮೊದಲಬಾರಿಗೆ ಪ್ರಕಟವಾದ‌ ಕು0.ವೀ. ಅವರ‌ ಈ ಅತ್ಮಕಥೆ ಮೂರೇ ವರ್ಷಗಳಲ್ಲಿ ಐದುಬಾರಿ ಪುನರ್ಮುದ್ರಣಗಳನ್ನು ಕ0ಡಿತೆನ್ನುವುದು ಇದರ‌ ಆಕರ್ಷಣೆ ಎ0ಥಾದು ಎನ್ನುವುದನ್ನು ಸೂಚಿಸುತ್ತದೆ.390 ಪುಟಗಳ‌ ಈ ಪುಸ್ತಕ‌ ಕನ್ನಡದ‌ ಒ0ದು ವಿಶಿಷ್ಟ‌ ಆತ್ಮಕಥೆಯಾಗಿದೆ.ಇಲ್ಲಿನ‌ ಕಾದ0ಬರಿಯ0ಥ‌ ಷೈಲಿಯೊ0ದೇ ಇದರ‌ ಆಕರ್ಷಣೆಯಲ್ಲ‌.ಇದು ಕಟ್ಟಿಕೊಡುವ‌ ಬಳ್ಳಾರಿ ಸೀಮೆಯ‌ ದೇಸೀತನ‌, ಆ ಪದಗುಚ್ಛಗಳು, ಹಿ0ದಿನ‌ ತಲೆಮಾರಿನ‌ ಜನರ‌ ಒರಟುತನ‌ ಹಾಗೂ ಭೋಳೇತನಗಳು,ಇವೆಲ್ಲ‌ ಇಲ್ಲಿ ತು0ಬ‌ ಸಹಜರೀತಿಯಲ್ಲಿ ಅವತರಿತವಾಗಿವೆ.ಓದುವಾಗ‌ ಎಲ್ಲಿಯೂ ಬೇಸರವಾಗುವುದಿಲ್ಲ‌. ಅಷ್ಟೇ ಅಲ್ಲ‌, ಇದು ನಮಗೆ ಅಪರಿಚಿತವಾದ‌ ಸಮುದಾಯವೊ0ದರ‌ ನಡಾವಳಿಗಳನು ನಮಗೆ ಪರಿಚಯಿಸಿ ಅವರನ್ನು ನಮ್ಮ‌ ಹತ್ತಿರಕ್ಕೆ ತರುತ್ತದೆ.ಇದೊ0ದು ನಾವುಓದಲೇಬೇಕಾದ‌ ಆತ್ಮಕತೆ.

       …

  • ಯಶವಂತ ಚಿತ್ತಾಲರ “ಶಿಕಾರಿ” ಕಾದಂಬರಿಯನ್ನು ಓದಿ.  ಪ್ರಕಟವಾದ ವರ್ಷ ೧೯೭೯ (ಮನೋಹರ ಗ್ರಂಥಮಾಲಾ, ಧಾರವಾಡ).  ನಾನು ಓದಿದ್ದೂ ಅದೇ ಆವೃತ್ತಿಯನ್ನೇ.  ಹಳೇ ಪುಸ್ತಕ,  ಹೊಸ ಓದುಗ. ಯಶವಂತ ಚಿತ್ತಾಲರು ಲೇಖಕನ ಕೃತಜ್ಞತೆಗಳನ್ನು ಬರೆಯುವಲ್ಲಿ “ಈ ಕಾದಂಬರಿಯು ನನಗೆ ಅತ್ಯಂತ ಸುಖ ಸಮಾಧಾನ ತಂದ ಕೃತಿ” ಎಂದು ಹೇಳಿಕೊಂಡಿದ್ದಾರೆ.  ಓದಿದ ಮೇಲೆ ಅದು ಕನ್ನಡದ ಶ್ರೇಷ್ಠ ಕಾದಂಬರಿಗಳ ಸಾಲಿಗೆ ಸೇರುತ್ತದೆ ಎಂಬ ಭಾವನೆ ನಿಮಗೆ ಬರದಿದ್ದರೆ, ನಿಮಗೆ ಬಹುಶಃ  ಸತ್ಯದ ಅಜೀರ್ಣ ಎಂದೂ ಆಗಿಲ್ಲವೆಂದೇ ಹೇಳಬಹುದು.  ನಮ್ಮ ಮನಸ್ಸಿನ ಭಯಗಳನ್ನು, ದೌರ್ಬಲ್ಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ಎಷ್ಟೆಲ್ಲಾ ರೀತಿಯಲ್ಲಿ ‘ಮರೆಮಾಚುವ’ ಕಲೆಯನ್ನು ನಾವು ಚಿಕ್ಕಂದಿನಿಂದಲೇ ರೂಢಿಸಿಕೊಳ್ಳುತ್ತಾ ಬರುತ್ತೇವಲ್ಲವೇ?  ಬೆಳೆಯುತ್ತಾ  ಹೋದಂತೆ ಸತ್ಯವನ್ನು ಔಷಧಿಯ ರೂಪದಲ್ಲಿ…

  • ಈ ಪುಸ್ತಕವನ್ನು ಕೈಗೆತ್ತಿಕೊಂಡಾಗ ನನ್ನ ಮನದ ಮೂಲೆಯಲ್ಲಿ ಇದ್ದ - ಇದು ಕೂಡಾ ಮಧ್ಯಪ್ರಾಚ್ಯದ ಮಹಿಳೆಯರ ಗೋಳಿನ ಕತೆ ಇರಬಹುದೇ? ಎಂಬ ಸಂಶಯ, ಪುಟಗಳು ಸರಿಯುತ್ತಿದ್ದಂತೆ ಮರೆಯಾಯಿತು. ಮಲಾಲಾ ಎಂಬ ಬಾಲಕಿಯ ಕಂಗಳಿಂದ ಕಂಡಂತೆ  ದೇಶದ ರಾಜಕೀಯ , ಸಾಮಾಜಿಕ ತಲ್ಲಣಗಳನ್ನು ಮನ ಮುಟ್ಟುವಂತೆ ಇಲ್ಲಿ  ನಿರೂಪಿಸಲಾಗಿದೆ. ತಾಲಿಬಾನ್ ಎಂಬುದು ಕೇವಲ ಧರ್ಮಾಂಧರ , ದುಷ್ಟರ ಗುಂಪು ಎನ್ನುವುದಕ್ಕಿಂತ ಅದೊಂದು ಸಾಮಾಜಿಕ ಪ್ರಜ್ಞೆ ಎಂಬ ದೃಷ್ಟಿಕೋನ ಎದ್ದು ಕಾಣುತ್ತದೆ. ಜೊತೆಗೆ ಪಾಕಿಸ್ತಾನದ ಚಾರಿತ್ರಿಕ, ಭೌಗೋಳಿಕ ವಿವರಗಳನ್ನೂ ಒಳಗೊಂಡು ಕತೆ ಮುಂದುವರಿಯುವುದು ಓದುಗನಿಗೆ ಮುದ ನೀಡುತ್ತದೆ. ಮಲಾಲಾಳ ಸಾಧನೆಯ ಹಿಂದೆ ಇರುವ ಅವಳ ತಂದೆಯ ವ್ಯಕ್ತಿತ್ವ ನಿಜಕ್ಕೂ ಮೆಚ್ಚುವಂತಹುದು.

    ಪುಸ್ತಕದ ಕನ್ನಡ ಅನುವಾದ ಅತ್ಯಂತ ಸೊಗಸಾಗಿ ಮೂಡಿ ಬಂದಿದೆ.…

  • ತೇಜಸ್ವಿ ಎ.ಸಿ ಯವರ ಕವನ ಸಂಕಲನ "ನೆರಳ ಹೆಜ್ಜೆ" ಮಾರ್ಚ್ ೧೫, ೨೦೧೫ರಂದು ಬಿಡುಗಡೆಗೊಂಡಿದೆ. ಜೀವನದ ಅನುಭವಗಳನ್ನು ಅನುಭವಿಸುತ್ತಾ, ಸಣ್ಣ ಪುಟ್ಟ ವಿಷಯಗಳಲ್ಲೂ ಸ್ವಾರಸ್ಯವನ್ನು ಕಾಣುತ್ತ, ಜೀವನದ ಹಲವು ಮಜಲುಗಳನ್ನು ಕವನಗಳ ರೂಪದಲ್ಲಿ ಸೆರೆ ಹಿಡಿದು.
    ಈ ಎಲ್ಲಾ ಕವನಗಳನ್ನು ಪೋಣಿಸಿ ಕವನ ಸಂಕಲವನ್ನಾಗಿ ಮಾಡಲಾಗಿದೆ.
    ಬಾಲ್ಯದಲ್ಲಿ ಮಕ್ಕಳ ತುಂಟಾಟ, ಪ್ರಕೃತಿ ವರ್ಣನೆ, ಜೀವನ ಪಾಠಗಳು, ಸ್ಫೂರ್ತಿ ಕೊಡುವ ವಿಷಯಗಳು, ಕನಸುಗಳು, ನೆನಪುಗಳು, ಮಧುರ ಭಾವನೆಗಳು ಹೀಗೆ ಹಲವಾರು ವಿಷಯಗಳನ್ನು ಕವನದ ರೂಪದಲ್ಲಿ ಈ ಹೊತ್ತಿಗೆ ಹೊಂದಿದೆ.
    ೨೦೧೫ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕವಿ ಡಾ. ಸಿದ್ಧಲಿಂಗಯ್ಯನವರು ಈ ಕೃತಿ ಲೋಕಾರ್ಪಣೆ ಮಾಡಿ, ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.…

  • ಕನ್ನಡ‌ದ‌ ಹೆಸರಾಂತ‌ ಕಾದಂಬರಿಕಾರ‌ ಹಾಗೂ ಕವಿ, ಡಾ. ನಾ. ಮೊಗಸಾಲೆಯವರ‌ ಮತ್ತೊಂದು ಬ್ಱುಹತ್ ಕಾದಂಬರಿ 'ಮುಖಾಂತರ‌' ಇದೀಗ‌ ಧಾರವಾಡದ‌ ಪ್ರಸಿದ್ಧ‌ 'ಮನೋಹರ‌ ಗ್ರಂಥಮಾಲೆ' ಯಿಂದ‌ ಪ್ರಕಟಗೊಂಡಿದೆ. ಅವ‌ ಹಿಂದಿನ‌ ಬ್ರುಹತ್ ಕಾದಂಬರಿ 'ಉಲ್ಲಂಘ‌ನೆ' ದಕ್ಷಿಣ‌ ಕನ್ನಡ‌ ಜಿಲ್ಲೆಯ‌ ಬಂಟ‌ ಸಮಾಜದ‌ ಮೂರು ತಲೆಮಾರುಗಳ‌ ಜೀವನ‌ ವಿಧಾನದಲ್ಲಾ ಏರುಪೇರುಗಳನ್ನು ಚಿತ್ರಿಸಿತ್ತು. ಅದು ಮರಾಠಿ ಮತ್ತು ತೆಲುಗು ಬಾಷೆಗಳಿಗೆ ಅನುವಾದವಾಗಿದೆ.ಈಗ‌ ಪ್ರಕಟಗೊಂಡಿರುವ‌ ಮುಖಾಂತರ‌ ಕಾದಂಬರಿಯು ಕಾಸರಗೋದು ,ದಕ್ಷಿಣಕನ್ನಡ‌ ಪ್ರದೇಶದ‌ ಬ್ರಾಹ್ಮಣರು, ಅವರ‌ ಒಳ‌ ಪಂಗಡಗಳಲ್ಲಿ ಮ್?ಮೂರು ತಲೆಮಾರಿನಲ್ಲಾದ‌ ಬದಲಾವಣೆಗಳು, ಸ್ವಾತ0ತ್ರ್ಯ‌ ಚಳುವಳಿಯ‌ ಪ್ರಬಾವಗಳು‍ಇವನ್ನೆಲ್ಲ‌ ನಿರುದ್ವಿಗ್ನವಾದ‌ ಸಮತೋಲಿತ‌ ಷೈಲಿಯಲ್ಲಿ ನಿರೂಪಿಸುತ್ತದೆ. ನಮ್ಮ‌ ಪ್ರಬುದ್ಧ‌…

  • ನಿನ್ನೆ ಕೆಲಸದ ಒತ್ತಡದ ನಡುವೆ ತೀರ ಬೇಸರವಾಗಿ ಯಾವುದಾದರೊಂದು ಪುಸ್ತಕವನ್ನು ಓದಬೇಕೆಂದು ನನ್ನದೇ ಪುಸ್ತಕಗಳ ಕಲೆಕ್ಷನ್ನಿನಲ್ಲಿ ಹುಡುಕುತ್ತಿದ್ದೆ. ಪ್ರೇಮಾ ಕಾರಂತರ "ಸೋಲಿಸಬೇಡ ಗೆಲಿಸಯ್ಯ" ಪುಸ್ತಕ ಕಣ್ಣಿಗೆ ಬಿತ್ತು. ಮನೋಹರ ಗ್ರಂಥಮಾಲೆಯಿಂದ ಅಂಚೆಯ ಮೂಲಕ ವರ್ಷಗಳ ಹಿಂದೆಯೇ ನನಗೆ ಈ ಪುಸ್ತಕ ತಲುಪಿತ್ತು. ಆದರೆ ಸರಿಯಾಗಿ ಓದಲು ಆಗಿರಲಿಲ್ಲ. ನಿನ್ನೆಯಷ್ಟೆ ಬೇಸರ ಕಳೆಯಲು ॑ಹಂಸಗೀತೆ॑ಯ ಹಾಡುಗಳನ್ನು ಕೇಳುತ್ತ ಕುಳಿತಿದ್ದ ನನಗೆ ಅದಕ್ಕೆ ಹಿನ್ನೆಲೆ ಸಂಗೀತ ನೀಡಿದ್ದ ಬಿ ವಿ ಕಾರಂತ ನೆನಪಾಗಿದ್ದರು. ಆ ಚಿತ್ರದಲ್ಲಿನ ವಸ್ತ್ರ ವಿನ್ಯಾಸ ಪ್ರೇಮಾ ಕಾರಂತರದ್ದು.

    ಪ್ರೇಮಾ ಕಾರಂತರು ಏನು ಬರೆದಿರಬಹುದು ಎಂಬ ಕುತೂಹಲದಿಂದ ಓದಲು ಪ್ರಾರಂಭಿಸಿದ ಪುಸ್ತಕ ಓದು ಮುಗಿಸುವವರೆಗೂ ತೆಗೆದಿಡಲು ಮನಸ್ಸಾಗಲೇ ಇಲ್ಲ. ಸಾಧನೆಯ ಜೀವನ ನಡೆಸಿದ…

  • ಸಂಪದ ಸ್ನೇಹಿತರೇ,
    ನಿಮ್ಮಲ್ಲಿ ನನ್ನದೊಂದು ವಿಜ್ಞಾಪನೆ. ಅದೇನೆಂದರೆ, ಗೋಪಾಲಕೃಷ್ಣ ಪೈ ಅವರು ಕನ್ನಡಕ್ಕೆ ಅನುವಾದಿಸಿರುವ “ಆಧುನಿಕ ಚೀನೀ ಸಣ್ಣಕತೆಗಳು” ಎಂಬ ಕಥಾಸಂಕಲನವನ್ನು ಹೇಗಾದರು ಸಂಪಾದಿಸಿ, ಅದರ ಸ್ವಾದವನ್ನು ಆಘ್ರಾಣಿಸಬೇಕೆಂದು ಪ್ರೀತಿಯಿಂದ ಆಗ್ರಹಿಸುತ್ತಿದ್ದೇನೆ.
           ಪ್ರತಿಯೊಂದು ಕತೆಯೂ ತನ್ನ ಮುಕ್ತಾಯದಲ್ಲಿ ಪ್ರಾರಂಭದ ಸೂಚನೆಯನ್ನು ಕೊಡುತ್ತೆ. ಅದು ಕತೆಗಿರಬಹುದು ಇಲ್ಲವೆ ಓದುಗನ ವಿಚಾರ ಸರಣಿಗಿರಬಹುದು. ನಾನು ಒಂದಂತೂ ಹೇಳಬಲ್ಲೆ, ಸಮಯವನ್ನು ಸಾರ್ಥಕಗೊಳಿಸಿಕೊಂಡ ಮತ್ತು ಸಮ್ಮೋಹನ ವಿದ್ಯೆಗೆ ಬಲಿಯಾಗುವಂತಹ ಬೇರೆ ತರಹದ ನಿರೂಪಣಾ ಕೌಶಲ್ಯವನ್ನು ನೀವೂ ಮೆಚ್ಚಿಯೇ ಮೆಚ್ಚಿತ್ತೀರಿ. ಅಲ್ಲದೆ ಗೋಪಾಲಕೃಷ್ಣ ಪೈ ಅವರು ಕನ್ನಡಕ್ಕೆ ಅಳವಡಿಸಿದ ರೀತಿಗೆ ಮಾರು ಹೋಗಲೆ ಬೇಕು.
           ಹೀಗೆ…

  • ಈಚೆಗೆ ರಜೆಯಲ್ಲಿ ಭಾರತಕ್ಕೆ ಭೇಟಿ ಕೊಟ್ಟಿದ್ದಾಗ ಕನ್ನಡ ಪುಸ್ತಕ ಖರೀದಿಸಲು ಹೋದಾಗ ಕೊಂಡ ಪುಸ್ತಕಗಳಲ್ಲಿ ವಸುಧೇಂದ್ರರ ಇತ್ತೀಚೆಗೆ ಬಿಡುಗಡೆಯಾದ ಹೊಸ ಸಣ್ಣ ಕಥೆಗಳ ಸಂಕಲನ 'ಮೋಹನಸ್ವಾಮಿ' ಒಂದು. ಈ ಪುಸ್ತಕದ ಕಿರು ಪರಿಚಯದ ಯತ್ನ ಈ ಬರಹ.

    ಈ ಸಂಕಲನದಲ್ಲಿ ಒಟ್ಟು ಹನ್ನೊಂದು ಕಥೆಗಳಿದ್ದು ಅದರಲ್ಲಿ ನಾಲ್ಕೈದು ಕಥೆಗಳು ನಮ್ಮ ಕಥೆಗಳಲ್ಲಿ ಅಪರೂಪವಾದ 'ಹೆಣ್ಣಿಗ'  (ಸಲಿಂಗಕಾಮಿ) ವ್ಯಕ್ತಿತ್ವವನ್ನು ಬಿಂಬಿಸುವ ಕಥೆಯಾಗಿರುವುದು ಈ ಸಂಕಲನದ ವಿಶೇಷಗಳಲ್ಲಿ ಒಂದು. ಸಂಕಲನದ ಮೊದಲ ಕಥೆ 'ತುತ್ತತುದಿಯಲ್ಲಿ ಮೊತ್ತಮೊದಲು' ಕೂಡ ಇದೆ ಕಥಾವಸ್ತುವಿನಿಂದಲೆ ಆರಂಭವಾಗುವ ಕಥಾನಕ. ಇಲ್ಲಿ (ಮತ್ತೂ ಕೆಲವು ಕಥಾನಕಗಳಲ್ಲಿ ಸಹ) ಬರುವ ಮೋಹನಸ್ವಾಮಿ ಪಾತ್ರ ಆಂತರ್ಯದಲ್ಲಿ ಹೆಣ್ಣಿನ ಮನಸತ್ವವಿರುವ ಅಧುನಿಕ ಜಗದಲ್ಲಿ ಇತರ ಸಾಮಾನ್ಯರಂತೆ ಜೀವಿಸುತ್ತಿರುವ…