‘ಕುಡು ಮಲ್ಲಿಗೆ’ ನಾಮಾಂಕಿತದಿಂದ ಖ್ಯಾತಿ ಪಡೆದ ಕೆ.ಕೃಷ್ಣ ಶೆಟ್ಟಿಯವರದ್ದು ಬಹುಮುಖ ಪ್ರತಿಭೆ. ಹುಟ್ಟಿದ್ದು ಮಲೆನಾಡಿನ ಕುಡುಮಲ್ಲಿಗೆಯಲ್ಲಿ. ಇವರು ಕಲಿತದ್ದು ಕಮ್ಮಿಯಾದರೂ ಅನುಭವ ಇವರನ್ನು ಪಕ್ವರನ್ನಾಗಿಸಿದೆ. ವೃತ್ತಿ ಸಂಬಂಧ ಮುಂಬೈ, ಉಡುಪಿಗಳಲ್ಲಿ ತಿರುಗಾಡಿದರೂ ನೆಲೆ ನಿಂತದ್ದು ಮಂಗಳೂರಿನಲ್ಲಿ. ಪತ್ರಿಕೆಯ ವರದಿಗಾರನಾಗಿ, ಅಂಕಣಗಾರನಾಗಿ, ಉಪಸಂಪಾದಕನಾಗಿ, ಯಕ್ಷಗಾನ ಕಲೆಯ ಉಪಾಸಕರಾಗಿ, ಕಲಾವಿಮರ್ಶಕರಾಗಿ ಇವರು ದುಡಿದಿದ್ದಾರೆ. ‘ಯಕ್ಷಗಾನ ಪುರಾಣ ಜ್ಞಾನ ದರ್ಶನ' ಎಂಬ ಕೃಉತಿ ಯಕ್ಷಗಾನ ಅಭ್ಯಾಸ ಮಾಡುವವರ ನಿಘಂಟು ಎಂದರೆ ಅತಿಶಯವಲ್ಲ ಎಂದು ಬೆನ್ನುಡಿಯಲ್ಲಿ ಯಕ್ಷಗಾನ ಕಲಾವಿದರೂ ಆಗಿರುವ ಕದ್ರಿ ನವನೀತ ಶೆಟ್ಟಿಯವರ ಅಭಿಮತ.
ಮುನ್ನುಡಿಯಲ್ಲಿ ಉಪನ್ಯಾಸಕರೂ,…