ಪುಸ್ತಕ ಸಂಪದ

  • ಎಲ್ಲರಿಗೂ ಖುಷಿ ಕೊಡುವ ಮಕ್ಕಳ ಕವನಗಳು ಎಂದಾಗ ನಮಗೆ ನೆನಪಾಗುವುದು ಪಂಜೆ ಮಂಗೇಶರಾಯರು, ಕು.ವೆಂ. ಪುಟ್ಟಪ್ಪನವರು, ರಾಜರತ್ನಂ, ದಿನಕರ ದೇಸಾಯಿ ಹಾಗೂ ಹೊಯಿಸಳರು ಬರೆದ ಮಕ್ಕಳ ಕವನಗಳು. ಇಂದಿಗೂ ನಮ್ಮ ಬಾಯಲ್ಲಾಡುವ ಮಕ್ಕಳ ಕವನಗಳನ್ನು ಬರೆದ ಅಂದಿನ ಕಾಲದ ಈ ಕನ್ನಡ ಕವಿಗಳ ಜೊತೆಗೆ ನೆನಪಾಗುವವರು  ಲಯಬದ್ಧ ಮಕ್ಕಳ ಹಾಡುಗಳನ್ನು ಬರೆದ ಡಾ.ಎಚ್.ಎಸ್. ವೆಂಕಟೇಶ ಮೂರ್ತಿ, ಡಾ.ಎನ್.ಎಸ್. ಲಕ್ಷ್ಮಿ ನಾರಾಯಣ ಭಟ್ಟ, ಪಳಕಳ ಸೀತಾರಾಮ ಭಟ್ಟ, ಡಾ. ಸುಮತೀಂದ್ರ ನಾಡಿಗ ಹಾಗೂ ಶ್ರೀನಿವಾಸ ಉಡುಪ.

    ಇಂತಹ ಹಳೆಯ ಹಾಗೂ ಹೊಸ ಮಕ್ಕಳ ಕವನಗಳು ಸಿ.ಡಿ.ಗಳಲ್ಲಿ ಸಿಗುವಂತಾದಾಗ ಅವನ್ನು ಕೇಳಬೇಕು, ಮಕ್ಕಳಿಗೆ ಕಲಿಸಬೇಕು  ಎಂಬವರಿಗೆಲ್ಲ ಹಣ್ಣು ಸಿಕ್ಕಂತಾಯಿತು. ಇನ್ನಷ್ಟು ಹೊಸ ಮಕ್ಕಳ ಕವನಗಳು ಬೇಕೆಂಬವರಿಗೆ "ಹಲೋ ಹಲೋ ಚಂದಮಾಮ” ಎಂಬ  ನಲುವತ್ತು ಕವನಗಳ…

  • ಡಿ.ಡಿ. ಭರಮಗೌಡ್ರು ಮಾತಿಗೆ ಶುರುವಿಟ್ಟರೆಂದರೆ, ಅವರ ಒಂದೊಂದು ಮಾತೂ ನಮ್ಮನ್ನು ಸೆಳೆದುಬಿಡುತ್ತಿತ್ತು - ಕನ್ನಡದಲ್ಲಿ ಗಂಡುಧ್ವನಿಯಲ್ಲಿ ನಿರರ್ಗಳವಾಗಿ ಹರಿದು ಬರುವ ಅನುಭವದ ಬೆಂಕಿಯಲ್ಲಿ ಬೆಂದ ಕಬ್ಬಿಣದ ಗುಂಡುಕಲ್ಲಿನಂತಹ ಮಾತುಗಳು.
    ಅಂತಹ ಭರಮಗೌಡ್ರು ಇಂದು ನಮ್ಮೊಂದಿಗಿಲ್ಲ. 13 ಜನವರಿ 2016 ರಂದು ವಿಧಿವಶರಾದರು. ಒಮ್ಮೆ ಅವರನ್ನು ಕಂಡರೆ ಸಾಕು, ಅವರ ಧೀಮಂತ ವ್ಯಕ್ತಿತ್ವ ನಮ್ಮಲ್ಲಿ ಅಚ್ಚೊತ್ತಿಬಿಡುತ್ತಿತ್ತು. ಅವರ ಮಾತಂತೂ ಮತ್ತೆಮತ್ತೆ ನೆನಪು.
    ನಮ್ಮ ಭಾಗ್ಯ. ಅವರ ಬದುಕನ್ನು 300 ಪುಟಗಳ "ಬದುಕು ಬೇಸಾಯ" ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ ವಿ.ಗಾಯತ್ರಿ.
    "ಸಾವಯವ ಕೃಷಿಕನ ಮಹಾನ್ ಪಯಣ" ಎಂಬುದು ಶಿರೋನಾಮೆಯೊಂದಿಗಿನ ಟಿಪ್ಪಣಿ. ಪುಸ್ತಕದ ಹೆಸರೇ ಹೇಳುವಂತೆ, ಭರಮಗೌಡ್ರ ಬದುಕೇ ಬೇಸಾಯ.…

  • ಮೌಢ್ಯತೆಯ ಪೊರೆ ಕಳಚಲು ಲೇಖನಿ ಹಿಡಿದ ಶಾಸ್ತ್ರಿಗಳು
    - ಮಹೇಶ ಕಲಾಲ್
    ಮೌಢ್ಯತೆಯ ಪೊರೆ ಕಳಚಿ ಸಾಹಿತ್ಯ ಗಂಗೆಯ ಹರಿಸಲು ಜನರನ್ನು ಪ್ರೇರೆಪಿಸಲೆಂಬಂತೆ ತಮ್ಮ ಮನೆಯ ಕಾರ್ಯವನ್ನು ಸಾರ್ವಜನಿಕವಾಗಿಸಿ ಆ ಸಮಯವನ್ನು  ಸಾಹಿತ್ಯ, ಚರ್ಚಾ ಕೂಟಗಳಿಗೆ ಸದ್ವಿನಿಯೋಗಿಸುತ್ತಿರುವ ಹಿರಿಯ ಸಾಹಿತಿ ಬಸವರಾಜ ಶಾಸ್ತ್ರಿಯವರ ಸೇವಾಕಾರ್ಯ ಶ್ಲಾಘನೀಯವಾದದ್ದು.
    ಕಸವು ರಸವಾಗಲಿ, ಧ್ಯೇಯೋದ್ದೇಶಗಳು ಅದ್ವಿತೀಯ ಬೀಜಾಕ್ಷರಗಳಾಗಲಿ ಎಂಬ ದೃಷ್ಠಿಯಿಂದ ಪ್ರತಿಯೊಂದು ಕಾರ್ಯಕ್ಕೂ ಸಾಹಿತ್ಯ ಸೇವೆಯ ಅನುಪಮ ಅವಕಾಶವನ್ನು ಒದಗಿಸಿ, ಸಾಹಿತ್ಯ ಸೃಷ್ಠಿಯ ಜೊತೆಗೆ ವಾಗ್ದೇವಿಯ ವರಪುತ್ರರಿಗೆ ಆಹ್ವಾನವಿಯುತ್ತ ಇಳಿ ವಯಸ್ಸಿನಲ್ಲಯೂ ಕ್ರಿಯಾಶೀಲ ವ್ಯಕ್ತಿತ್ವದಿಂದ ಸದಾ ತಾ ಮುಂದು ಎನ್ನುವು ಘೋಷಾ ವಾಕ್ಯದೊಂದಿಗೆ ಹಗಲಿರುಳೂ ಸೇವಾಕೈಂಕರ್ಯದಲ್ಲಿ…

  • ಶಿವರಾಮ ಕಾರಂತರ ‘ಬೆಟ್ಟದ ಜೀವ’ (1935?) ಕಾದಂಬರಿಯನ್ನು ನಾನು ಮೊದಲು ಓದಿದ್ದು ಸುಮಾರು ಹನ್ನೆರಡು ವರ್ಷಗಳ ಹಿಂದೆ.  ಎಲ್ಲವೂ ಸ್ವಲ್ಪ ಮರೆತಂತಾಗಿತ್ತು.  ಹಾಗಾಗಿ ಈ ವಾರ ಮತ್ತೊಮ್ಮೆ ಓದಿದೆ.  ಕಥೆಯ ಹಿಂದು-ಮುಂದುಗಳನ್ನು ನಾನು ವಿವರಿಸುವ ಗೋಜಿಗೆ ಹೋಗುವುದಿಲ್ಲ.  ಅದು ಓದಿ ತಿಳಿದರೇನೆ ಸರಿ.  ‘ಬೆಟ್ಟದ ಜೀವ’ದ ಮುಖ್ಯ ಪಾತ್ರ ಕಟ್ಟದ ಗೋಪಾಲಯ್ಯ ಅವರದು.   ಕರ್ನಾಟಕದ ಪಶ್ಚಿಮ ಘಟ್ಟಗಳ ಭಾಗವಾದ ಕುಮಾರ ಪರ್ವತ, ಶೇಷ ಪರ್ವತ, ಸಿದ್ಧ ಪರ್ವತ, ಹೀಗೆ ಕಳಂಜಿಮಲೆಗಳ ಚಿತ್ರವನ್ನು ಬಿಡಿಸುವಾಗಲೆಲ್ಲಾ ಕಾರಂತರು ಗೋಪಾಲಯ್ಯನವರ ವ್ಯಕ್ತಿತ್ವವನ್ನೇ ವಿವರಿಸುತ್ತಿರುವುದು ಸ್ಪಷ್ಟ.  ಉದಾಹರಣೆಗೆ ಇದನ್ನು ನೋಡಿ
    “ಹಿಂದಿನ ದಿನ ಅದೇ ಬೆಟ್ಟ ನನಗೆ ಮೊಸರು ಗದ್ದೆಯಲ್ಲಿ ನಿಂತ ನೀಲ ಕಡೆಗೋಲಿನಂತೆ ಕಾಣಿಸಿತ್ತು.  ಇಂದು ಹಿಮದ ಮೊಸರಿರಲಿಲ್ಲ. …

  • ಡಾ. ಸರಜೂ ಕಾಟ್ಕರ್ ನಮ್ಮ‌ ಓರಗೆಯ‌  ಒಬ್ಬ‌ ಸತ್ವಶಾಲೀ ಲೇಖಕರು. ಪತ್ರಕರ್ತರಾಗಿ ಹಾಗೂ ವ್ಯಾಪಕ‌ ಓಡಾಟ‌ ಮಾಡಿದವರಾಗಿ ಅವರ‌ ಅನುಭವ‌ ವಿಶಿಷ್ಟವಾದುದು.ಅವರ‌ ಹಲವು ಕ್ಱತಿಗಳು ಬಹುಬೇಗನೆ ಮರುಮುದ್ರಣ‌ ಕ0ಡಿವೆ.

          ಅವರ‌ ಈ ಕಾದ0ಬರಿ 'ಜುಲೈ 22, 1947' ಕೇವಲ‌ ಒ0ದು ನೂರು ಪುಟಗಳದ್ದು. ಆದರೆ ಕನ್ನಡದಲ್ಲಿ ಹೊಸದೊದು ವಸ್ತುವನ್ನು ಆರಿಸಿಕೊ0ಡಿದ್ದಾರೆ. ಸತ್ಯ‌ಪ್ಪ ಎ0ಬ ಸಾಮಾನ್ಯ ಅಟೆ0ಡರ್ ಒಬ್ಬನು ರಾಷ್ಟ್ರದ್ವಜದ ಬಗ್ಗೆ ಹೊದಿದ್ದ ಅತೀವ ಅಭಿಮಾನ‌, ಅವನ ನಿಷ್ಟೆ, ಅವನ ಪ್ರಾಮಣಿಕತೆ, ಅವನನ್ನು ಹಣಿಯಲು ಇತರರು ಬಳಸುವ ತ0ತ್ರಗಳು, ಅವನ ಮಗ ಉಡಾಳನಾಗಿ ನೋವು ತ0ದ್ದು, ಕೊನೆಗೆ ಸತ್ಯ‌ಪ್ಪನು ರಾಷ್ಟ್ರದ್ವಜದ‌ ಗೌರವ‌ ಕಾಡುವ‌ ಪ್ರಯತ್ನದಲ್ಲೇ ಸಾವನ್ನಪ್ಪುವುದು‍, ಇವೆಲ್ಲಾ ಇಲ್ಲಿ ತು0ಬ‌ ಪರಿಣಾಮಕಾರಿಯಾಗಿ ಚಿತ್ರಿತವಾಗಿವೆ. ಇದು…

  • ಒಂದು ಕಾದಂಬರಿಯ ಸುತ್ತಾ ....

    ಈಗಷ್ಟೇ ಮುಗಿಸಿದ 'ಪರಿಭ್ರಮಣ' ಎಂಬ ಕಾದಂಬರಿಯ ಕುರಿತು ಈ ಬರಹ. ನಾಗೇಶ ಮೈಸೂರು ಅವರ ಈ ಕೃತಿ, ಸಂಪದ online ಪತ್ರಿಕೆಯಲ್ಲಿ ಅರವತ್ತಕ್ಕೂ ಹೆಚ್ಚು ಕಂತುಗಳಲ್ಲಿ ಮೂಡಿಬಂದಿದೆ.ಕೆಳಗಿನ ಲಿಂಕ್ ನಲ್ಲಿ ಈ ಸರಣಿ ಲಭ್ಯವಿದೆ.

    https://nageshamysore.wordpress.com/00162-%e0%b2%95%e0%b2%a5%e0%b3%86-%e...

    ಪರಿಭ್ರಮಣೆ ಮುಗಿದಿದೆಯಾದರೂ ಇದೊಂದು ಕಾಡುವ ಆವರ್ತನ. ಕಥೆಯಲ್ಲಿ ಜೀವನದ ಅವರೋಹಣವನ್ನು, ಅದರ ಅಧಃಪತನದ ವಿವಿಧ ಮುಖಗಳನ್ನು ಯಶಸ್ವಿಯಾಗಿ ಚಿತ್ರಿಸಿದ್ದಾರೆ. ಇದನ್ನೆಲ್ಲಾ ದಾಟಿ ಆರೋಹಣದ ಮಾರ್ಗವನ್ನು ತರ್ಕಬದ್ಧವಾಗಿ, ಆಧ್ಯಾತ್ಮಿಕವಾಗಿ ವಿವರಿಸಿರುವುದು ಅದ್ಭುತ.

    ಈಗಿನ ಕಾಲಮಾನಕ್ಕೆ ಸರಿಯಾಗಿ IT ಯ ಬದುಕಿನ ಸೂಕ್ಷ್ಮತೆಯನ್ನು, ವಿದೇಶದಲ್ಲಿ ಭಾರತೀಯರ…

  • ಜನನಾರಾಭ್ಯ ಒಂದಷ್ಟು ಪ್ರಶ್ನೆಗಳು, ಕುತೂಹಲಗಳು ಉತ್ತರವಿಲ್ಲದೆ ಉಳಿದುಕೊಂಡೇ ಇರುತ್ತದೆ. ಈ ವಿಶ್ವ, ಭೂಮಿ, ಚರಾಚರ ವಸ್ತುಗಳು, ಅವುಗಳ ಬದುಕು ಹೀಗೆ ಯಾವುದೇ ವಿಚಾರ ತೆಗೆದುಕೊಂಡರೂ ನಮಗಿನ್ನೂ ಸಂಪೂರ್ಣವಾಗಿ ತೆರೆದುಕೊಂಡಿಲ್ಲ. ವಿಜ್ಞಾನ ಇಷ್ಟು ಮುಂದುವರಿದು ಬದುಕನ್ನು ಸರಾಗವಾಗಿಸಿದ್ದರೂ ಸಹ ಇನ್ನೂ ಪ್ರಕೃತಿ ತನ್ನ ನಿಗೂಢತೆಯನ್ನು ಬಿಟ್ಟು ಕೊಟ್ಟಿಲ್ಲ.

    ರಾತ್ರಿ ಸುಮ್ಮನೆ ನಿಂತು ಕೋಟ್ಯಾನುಕೋಟಿ ನಕ್ಷತ್ರಗಳನ್ನು ವೀಕ್ಷಿಸಿದರೆ ಈ ಅಗಾಧತೆ ಅರಿವಾಗುತ್ತದೆ. ಸುತ್ತ ಮುತ್ತಲಿರುವ ಸಾಕಷ್ಟು ವಿಚಿತ್ರಗಳಿಗೆ, ವಿಶೇಷಗಳಿಗೆ ಕಣ್ಮುಚ್ಚಿಕೊಂಡು ಎಲ್ಲವೂ ಸಹಜವೆಂಬಂತೆ ನಾವು ಬದುಕುತ್ತಿದ್ದೇವೆ. ಆದರೆ ಮನಸಿನಾಳದಲ್ಲಿ ಪ್ರಶ್ನೆಗಳು, ಗೊಂದಲಗಳು ಹಾಗೆ ಇವೆ. ಈ ಅಸ್ಪಷ್ಟತೆಯನ್ನು ಗುರುತಿಸಿ, ಅದನ್ನು ಚಿಂತಿಸಿ, ಗಂಟು ಬಿಡಿಸುವ ಅಪರೂಪದ…

  • ಸ್ನೇಹಿತನಿಂದ "ಮಂತ್ರಶಕ್ತಿ" ಎಂಬ ಕಾದಂಬರಿಯೊಂದನ್ನು ತಂದು ಸ್ವಲ್ಪ ಓದಿದೆ ಆದರೆ ಅದನ್ನು ಪುರ್ಣಗೊಳಿಸಲು ಸಮಯವೇ ಸಿಗುತ್ತಿರಲಿಲ್ಲ.ಒಂದು ದಿನ ವಾರಂತ್ಯದಲ್ಲಿ ಒಬ್ಬನೇ ರೂಂ ನಲ್ಲಿ ಇದ್ದೆ ತುಂಬಾ ಬೇಸರವಾಗಲಾರಂಬಿಸಿತು ಆಗ ಏನನ್ನಾದರೂ ಓದೋಣವೆಂದು ಅಪೂರ್ಣಗೊಳಿಸಿದ್ದ ಈ ಕಾದಂಬರಿ ತೆರೆದೆ ಓದುತ್ತಾ ಎಷ್ಟು ಕುತೂಹಲವಾಯಿತೆಂದರೆ ೨೫೦ ಪುಟಗಳ ಪುಸ್ತಕ ಮುಗಿದಿದ್ದೆ ತಿಳಿಯಲಿಲ್ಲ.
    "ಶವವಾಗಿದ್ದ ಯುವತಿ ಜೀವಂತ ಎದ್ದು ನಿಂತಳು......"
    "ಸದಾ ಮರವೇರಿ ಕುಳಿತರುತ್ತಿದ್ದ ಹುಡುಗ ಕೆಳಗಿಳಿದು ಬಂದು ಬಾಳುವೆ ಮಾಡತೊಡಗಿದ......"
    "ಕಣ್ಣಿನ ದೃಷ್ಟಿಯಿಂದಲೇ ಮೋಹಿತಳಾದ ಹೆಂಗಸೋಬ್ಬಳು ಕಂಡುಕೇಳರಿಯದವನೋಬ್ಬನ ದುರಾಸೆಗೆ ಬಲಿಯಾದಳು..... "
    ಇವು ಈ ಗ್ರಂಥದಲ್ಲಿ ನಡೆಯುವ ಅಸಂಖ್ಯಾತ ಘಟನೆಗಳಲ್ಲಿ ಒಂದೆರಡಷ್ಟೆ.ನಮ್ಮ…

  • ಬದುಕಿನಲ್ಲಿ ಇಂತಹ ಕ್ಷಣಗಳಿರುತ್ತವೆ, ಆಗಬಾರದ್ದು ಆಗಿಹೋಗಿರುತ್ತದೆ. ಶಾಶ್ವತ ಊನಕ್ಕೆ ಕಾರಣವಾಗಿರುತ್ತದೆ.
    ವ್ಯವಸ್ಥೆಯಿಂದಲೋ, ಇನ್ನೊಬ್ಬರಿಂದಲೋ ಹತ್ತಿರದವರಿಂದಲೋ ದೂರದವರಿಂದಲೋ ನೋವುಂಡ ಕಾರಣಕ್ಕೆ ಜೀವನದ ಬಗ್ಗೆ ನಿರಾಶರಾಗಿ,  ಬದುಕಿಗೆ ವಿದಾಯ ಹೇಳುವವರು ಉಂಟು. ಅಯ್ಯೋ ಹೀಗಾಯಿತೆ, ಇದೆಂತಹ ನನ್ನ ಹಣೆಯ ಬರಹ ಎಂದು ಹಲುಬುತ್ತ, ಅವರಿವರ ಅನುಕಂಪವನ್ನು ಹಾಸಿ ಹೊದ್ದು ಮಲಗುವವರೂ ಉಂಟು.
    ಆದರೆ ಬದುಕಿನ ನೋವುನಲಿವುಗಳ ಏರಿಳಿತದಲ್ಲಿ ಈಜಾಡಿಯೂ ಬದುಕನ್ನು ಪ್ರೀತಿಸಿದವರು ಅಪರೂಪ.

    ಇಂತಹವರು ಭೊರ್ಗರೆಯುವ ನದಿಯ ಮಧ್ಯದ ಬಂಡೆಯಂತೆ ಗಟ್ಟಿಯಾಗಿ ನಿಂತಿರುತ್ತಾರೆ. ಕೆಲವೊಮ್ಮೆ ಬದುಕೇ ಇವರ ಸಾಹಸ ಮತ್ತು ಇಚ್ಛಾಶಕ್ತಿಗೆ  ಮಣಿದು ಹಾದಿ ತೆರೆಯುತ್ತದೆ. ಇಂತಹ ಅಪರೂಪದ ಕೆಚ್ಚೆದೆಯ ಸಾಧಕಿ ಅರುಣಿಮಾ ಸಿನ್ಹಾ.