ಪುಸ್ತಕ ಸಂಪದ

  • ಚೇತನ್ ಭಗತ್ ಬರೆದ 'ದ ತ್ರಿ ಮಿಸ್ಟೇಕ್ಸ್ ಆಫ್ ಮೈ ಲೈಫ್' ನಿಜಕ್ಕೂ ಆಸಕ್ತಿ ಮೂಡಿಸುವಂತಹ ಪುಸ್ತಕ. ಮೇಲ್ನೋಟಕ್ಕೆ ಅಹಮದಾಬಾದ್ ನ ಮೂರು ಗೆಳೆಯರ ಜೀವನದ ಭಿನ್ನ ಆಸಕ್ತಿ, ದ್ವಂದ್ವ, ನೋವು-ನಲಿವುಗಳ ಕಥೆಯಂತೆ ಕಂಡರೂ, ಕಥೆಯೊಳಗೆ ಇಳಿದಾಗ ಭಾರತೀಯ ಸಮಾಜ, ಧರ್ಮ, ಕ್ರಿಕೆಟ್, ವ್ಯಾಪಾರಗಳ ಬಗ್ಗೆ ಆಳವಾದ ಅರಿವು ಮೂಡಿಸುವುದಂತೂ ಸತ್ಯ..ಮೂರು ಗೆಳೆಯರಲ್ಲಿ, ಗೋವಿಂದ್‌ ಬಡ ಕುಟುಂಬದ ಹುಡುಗ, ಲೆಕ್ಕದಲ್ಲಿ ಪಕ್ಕಾ, ಬಿಸಿನೆಸ್ ಮಾಡಿ ಸಿರಿವಂತನಾಗಬೇಕೆಂಬ ಅದಮ್ಯ ಬಯಕೆ. ಇಶಾಂತ್ ಮಧ್ಯಮ ಕುಟುಂಬದ ಯುವಕ, ಭಾರತೀಯ ಸೇನೆಯ ಸೇವೆಯನ್ನು ಬಿಟ್ಟು ಬಂದು ಒಂದು ವರ್ಷವಾದರೂ ಬೇರೆ ಕೆಲಸವಿಲ್ಲ, ಕ್ರಿಕೆಟ್‌ನಲ್ಲಿನ ಆಸಕ್ತಿಯಿಂದಾಗಿ ಬೇರೆ ಯಾವ ಕೆಲಸದಲ್ಲೂ ಆಸಕ್ತಿಯಿಲ್ಲ. ಮೂರನೆಯವನು ಓಮಿ, ಅರ್ಚಕರ ಮಗ, ಗೊತ್ತುಗುರಿಯಿಲ್ಲದ ಜೀವನ. ಈ ಮೂವರು ಕಥಾನಾಯಕರ…

  • ಇತ್ತೀಚೆಗೆ ಸಿಂಗಪುರದಲಿ ನಡೆದ 'ಭಾವ ಸುಧೆ ದೀಪೋತ್ಸವ - 2013' ಸಮಾರಂಭದಲ್ಲಿ ಶ್ರೀಯುತ ಗಿರೀಶ್ ಜಮದಗ್ನಿಯವರ ಮೊದಲ ಕಥಾ ಸಂಕಲನ "ಕಣ್ಣೀರಜ್ಜ ಮತ್ತು ಇತರ ಕಥೆಗಳು" ಪುಸ್ತಕ ರೂಪದಲ್ಲಿ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಸಂಧರ್ಭದಲ್ಲೆ ಈ ಪುಸ್ತಕವನ್ನು ನೇರ ಕೊಳ್ಳುವ ಅವಕಾಶವಿದ್ದ ಕಾರಣ ಅಂದೆ ನಾನೂ ಒಂದು ಪ್ರತಿ ಖರೀದಿಸಿದ್ದೆನಾದರೂ, ಬಿಡುವಿಲ್ಲದ ಕಾರಣ ತಕ್ಷಣ ಓದಲಾಗಿರಲಿಲ್ಲ. ಈ ವಾರದ ಕೊನೆಯಲ್ಲಿ ತುಸು ಬಿಡುವಿನಲಿ ಓದಲು ಕುಳಿತದ್ದರ ಪ್ರತಿಫಲ ಈ ಕಿರು ವಿಮರ್ಶೆ. 

    (ತಮ್ಮ ಕೃತಿಯ ಲೋಕಾರ್ಪಣೆಯ ಕುರಿತು ಶ್ರೀ ಗಿರೀಶರು ಸಂಪದದಲ್ಲೂ ಒಂದು ಕಿರು ಲೇಖನ ಪ್ರಕಟಿಸಿದ್ದರು. ಲೇಖನಕ್ಕೆ ಮತ್ತು ಪುಸ್ತಕ ಕುರಿತ ಇತರ ವಿವರಗಳಿಗೆ ಈ ಕೊಂಡಿ ನೋಡಿ )

    ಇಲ್ಲಿರುವ ಒಟ್ಟು ಹದಿಮೂರು ಕಥೆಗಳು ಲೇಖಕರೆ ಹೇಳಿದಂತೆ, ಕಾಲಾಂತರದಲ್ಲಿ…

  • ನಾನು ವಿಮರ್ಷಕನಲ್ಲ, ಆದರೂ ಬದರಿನಾಥರ ಕವಿತೆಗಳನ್ನು ಓದಿದ ಮೇಲೆ, ಅವುಗಳ ಬಗ್ಗೆ ಒಂದೆರಡು ಮಾತುಗಳನ್ನಾಡದೇ ಹೋದರೆ ತಪ್ಪಾದೀತು ಎನ್ನುವುದು ನನ್ನ ಅನಿಸಿಕೆ ಅಷ್ಟು ಸುಂದರವಾಗಿ ಮೂಡಿ ಬಂದಿದೆ ಗೆಳೆಯ ಬದರಿಯವರ ಚೊಚ್ಚಲ ಕವನ ಸಂಕಲನ "ಪಾತ್ರ ಅನ್ವೇಷಣಾ". ಈ ಕವನ ಸಂಕಲನದ ಏನಿದೆ, ಏನಿಲ್ಲ? ಇಲ್ಲಿ ಪ್ರೀತಿಯ ಸೆಳತವಿದೆ, ನೋವಿದೆ, ಬದುಕಿನ ವಿವಿಧ ಮಜಲುಗಳನ್ನು ನೋಡಿದ ಅನುಭವವಿದೆ, ಕಾಳಜಿಯಿದೆ, ಸಂಬ್ರಮವಿದೆ ಹೀಗೆ ಎಲ್ಲವೂ ಇವೆ.

    ಪಾಚಿ ಬೆಳೆದ ಹೊಡದಲ್ಲಿ ಹೇಗೆ ಆ ಹೊಂಡದ ಆಳವನ್ನು ತಿಳಿಯಲಾಗುವುದಿಲ್ಲವೋ ಹಾಗೆ, ನಮ್ಮ ಜೊತೆಯಲ್ಲೇ ಇದ್ದು ನಮ್ಮ ವಿರುದ್ದ ಪಿತೂರಿ ನಡೆಸುವ ಹಿತ ಶತ್ರುಗಳನ್ನು ಅರಿಯುವುದು ಕಷ್ಟ ಎನ್ನುವ ಈ ಕೆಳಗಿನ ಸಾಲಿನೊಂದಿಗೆ ಪ್ರಾರಂಭವಾಗುತ್ತದೆ ಗೆಳೆಯ ಬದರಿನಾಥ ಪಲವಳ್ಳಿಯವರ "ಪಾತ್ರ ಅನ್ವೇಷಣಾ" ಕವನ ಸಂಕಲನ.…

  • ಸುಮಾರು ಎರಡು ವಾರಗಳಿಂದ ಓದುತಿದ್ದ, ಕೇ ಎನ್ ಗಣೇಶಯ್ಯರವರ 'ಕರಿಸಿರಿಯಾನ' ಎನ್ನುವ ಪುಸ್ತಕವನ್ನು ಇಂದು ಓದಿ ಮುಗಿಸಿದೆ. ಇದೊಂದು ಐತಿಹಾಸಿಕ ಸುಂದರ ಕಾದಂಬರಿ.  ೧೫೬೫ರ ರಕ್ಕಸತಂಗಡಿ ಯುದ್ದದಲ್ಲಿ ವಿಜಯನಗರ ಸಾಮ್ರಾಜ್ಯದ ಅರಸರು ಸೋತ ನಂತರ, ಅಳಿಯ ರಾಮರಾಯನ ತಮ್ಮ ತಿರುಮಲನು ವಿಜಯನಗರ ಸಾಮ್ರಾಜ್ಯದ ಖಜಾನೆಯಲ್ಲಿದ್ದ ಸಂಪೂರ್ಣ ನಿಧಿಯನ್ನೆಲ್ಲ ಸುಮಾರು ೧೫೦೦ ಆನೆಗಳಲ್ಲಿ ಸಾಗಿಸುತ್ತಾನೆ. ಆ ನಿಧಿ ವಿಜಯನಗರವನ್ನು ಬಿಟ್ಟ ಮೇಲೆ ಎಲ್ಲಿ ಹೋಯಿತು? ತಿರುಪತಿ ಸೇರಿತೆ? ಅಥವಾ ವಿಜಯನಗರ ಸಾಮ್ರಾಜ್ಯದ ಎರಡನೆಯ ರಾಜಧನಿಯಾದ ಪೆನುಕೊಂಡವನ್ನು ಸೇರಿತೇ? ಅಥವಾ ಚಂದ್ರಗಿರಿಯನ್ನು ಸೇರಿತೇ? ಅಥವಾ ಯಾವುದೋ ಕಳ್ಳ ಕಾಕರರ ಪಾಲಾಯಿತೇ? ಅಥವಾ ವಿರೋಧಿಗಳ ಪಾಲಾಯಿತೇ? ತಿರುಪತಿ ಏಕೆ ಅಷ್ಟೊಂದು ಶ್ರೀಮಂತ ದೇವಸ್ಥಾನವಾಯಿತು? ವಿಜಯನಗರ ದೊರೆ ಕ್ರಷ್ಣದೇವರಾಯನ…

  • ಅವಳು ಎಲ್ಲ ಮಕ್ಕಳಂತೆ ಎಲ್ಲದರ ಬಗ್ಗೆ ಅಪಾರ ಕುತೂಹಲ ಮತ್ತು ಅಚ್ಚರಿ ತುಂಬಿಕೊಂಡ ಹುಡುಗಿ. ಅವಳು ಕುತೂಹಲ ತಡೆಯಲಾಗದೆ ಮಾಡುತ್ತಿದ್ದ ಕೆಲಸಗಳೇ ದೊಡ್ಡವರ ಲೋಕದಲ್ಲಿ ತುಂಟತನ ಎಂದು ಕರೆಸಿಕೊಳ್ಳುತ್ತಿದ್ದ ತರಲೆಗಳು. ಶಾಲೆಗೆ ಸೇರಿದ ಹೊಸದರಲ್ಲಿ ಆ ಶಾಲೆಯ ಡೆಸ್ಕ್‍ ಅವಳ ಇಂತಹ ಕುತೂಹಲ ಮತ್ತು ಮೆಚ್ಚುಗೆಗೆ ಕಾರಣವಾಯಿತು. ತೆಗೆದು ಮುಚ್ಚಬಹುದಾಗಿದ್ದ ಆ ಡೆಸ್ಕ್‍ ಅವಳ ಪ್ರೀತಿಯ ಆಟದ ವಸ್ತುವಾಯಿತು. ಅದೇ ಅವಳ ಟೀಚರ್‍ಗೆ ಕಿರಿಕಿರಿಯುಂಟುಮಾಡಿತು. ಇದು ಸಾಲದೆಂಬಂತೆ ಬೀದಿ ಹಾಡುಗಾರರ ಕಡೆಗಿನ ಇವಳ ಸೆಳೆತ ಕಿಟಕಿ ಬದಿಯಲ್ಲಿ ನಿಂತು ಅವರನ್ನು ನೋಡುವಂತೆ ಮಾಡುತ್ತಿತ್ತು, ತರಗತಿ ಸಾಕೆನಿಸಿದಾಗ ಕಿಟಕಿಯ ಹೊರಗೆ ನೋಡುತ್ತಾ ಮರದಲ್ಲಿ ಕೂತ ಗುಬ್ಬಚ್ಚಿಯೊಂದಿಗೆ ಮಾತಾಡುತ್ತಿದ್ದಳು. ಇಂತಹ ಅವಳ ವರ್ತನೆಗಳೇ ಕಾರಣವಾಗಿ ಶಾಲೆಯಿಂದ ಅವಳನ್ನು ಹೊರಗೆ…

  • ಸಿನೆಮಾ... ಸಿನೆಮಾ...ಸಿನೆಮಾ... ನಮ್ಮ ಬದುಕನ್ನು ವ್ಯಾಪಿಸಿರುವ ರೀತಿಯೇ ಅನನ್ಯ. ಸಿನೆಮಾ ಆಧುನಿಕ ಬದುಕಿನಲ್ಲಿ ಒಂದು ಧರ್ಮದ ಹಾಗೆ ಎನ್ನುವುದು ನಿಜವಲ್ಲವೆ. ಬದುಕಿನ ಹಲವು ರೀತಿ ರಿವಾಜುಗಳನ್ನು ಸಿನೆಮಾ ಪ್ರಭಾವಿಸುವ ರೀತಿ ಕುತೂಹಲಕಾರಿಯಾದದ್ದು. ಅದರಲ್ಲೂ ಸಣ್ಣ ವಯಸ್ಸಿನ ಬೆರಗು ಕಣ್ಣುಗಳ ಮೂಲಕ ನಮ್ಮೊಳಗೆ ಪ್ರವೇಶ ಪಡೆಯುವ ನಮ್ಮ ನೆಚ್ಚಿನ ತಾರೆಯರು ತಮ್ಮೆಲ್ಲ ಹಾವಭಾವ ನಡೆನುಡಿಗಳೊಂದಿಗೆ ನಮ್ಮ ಬದುಕಿನ ಹಲವು ವರ್ತನೆಗಳನ್ನು ಸೂಕ್ಷ್ಮವಾಗಿ ಪ್ರಭಾವಿಸುತ್ತಿರುತ್ತಾರೆ. ನಮ್ಮ ಹಾವಭಾವ, ಉಡುಪು, ಮಾತು, ವರ್ತನೆ ಇವುಗಳ ಮೇಲಿನ ಸಿನೆಮಾಗಳ ಪ್ರಭಾವ ಗುರುತಿಸುವಂತದ್ದು.

    ಜಯಂತ ಕಾಯ್ಕಿಣಿಯವರ ‘ಟೂರಿಂಗ್ ಟಾಕೀಸ್‍’ ಇಂತಹ ಸಿನೆಮಾದ ವಿವಿಧ ಆಯಾಮಗಳು ಹಾಗೂ ಅದರ ಪ್ರಭಾವಗಳನ್ನು ಗುರುತಿಸುವ ಲೇಖನಗಳ ಪುಸ್ತಕ. ಕಾಯ್ಕಿಣಿಯವರ…

  • ಬಹಳ ದಿನಗಳಿಂದ ಏನನ್ನು ಸರಿಯಾಗಿ ಓದಲಾಗುತ್ತಿರಲಿಲ್ಲಾ,ನಿನ್ನೆ ಹಟಕ್ಕೆ ಬಿದ್ದು ಎಸ್.ಎಲ್.ಭೈರಪ್ಪ ನವರ ಜಲಪಾತ ಕಾದಂಬರಿಯನ್ನು ಅರಗಿಸಿಕೊಂಡೆ.ಕಲೆಯ ಹುಟ್ಟು ಮತ್ತು ಉದ್ದೇಶ,ಲೈಂಗಿಕ ತೃಪ್ತಿ ಮತ್ತು ಜೀವನ ಸೃಷ್ಟಿಯ ಪೂರಕತೆ,ನಗರ ಮತ್ತು ಹಳ್ಳಿ ಜೀವನದ ತಾಕಲಾಟ ಜಲಪಾತದಲ್ಲಿ ಚರ್ಚಿತವಾದ ವಿಷಯಗಳು.ಚಿತ್ರಕಲೆ ಮತ್ತು ಶಾಸ್ತ್ರೀಯ ಸಂಗೀತದಿಂದ ಸಮಾನ ಅಂತರ ಕಾಯ್ದುಕೊಂಡಿರು ನನಗೆ ಕಾದಂಬರಿಯಲ್ಲಿನ ಕಲೆಯ ಒಳ-ಹೊರವು,ಕಲೆಯ ಉದ್ದೇಶ ಅಷ್ಟೋಂದು ರುಚಿಸುವುದಿಲ್ಲವಾದರು ಚಿತ್ರಕಲೆಯನ್ನು ನೋಡುವ ಬಗೆಯನ್ನು ,ಸಂಗೀತಾಭ್ಯಸದ ಕಷ್ಟವನ್ನರಿಯಲು ಜಲಪಾತ ಸಹಕಾರಿಯಾಗುತ್ತದೆ.

       ಕಾದಂಬರಿಯಲ್ಲಿ ಪ್ರಮುಖವಾಗಿ ಚರ್ಚಿತವಾದದ್ದು ಲೈಂಗಿಕ ತೃಪ್ತಿ ಮತ್ತು ಜೀವನ ಸೃಷ್ಟಿ ಒಂದಕ್ಕೊಂದು ಪೂರಕವೇ? ಅಥವಾ ಅವೆರಡನ್ನು ಬೇರೆ ಬೇರೇ ಪ್ರಕ್ರಿಯೆಗಳೆಂದು…

  •  

    “ಪ್ರತಿ ಮುಖದ ಹಿಂದೆ ಒಂದೊಂದು ಅಪ್ರತಿಮ ಲೋಕ,

    ಸ್ವಸಂಪೂರ್ಣ ಎಂದುಕೊಳ್ಳುತ್ತಲೇ ಒಂದನ್ನೊಂದು ಬಯಸಿ

    ಬೇಯುತ್ತಿರುವ ನಡುಗಡ್ಡೆಗಳೆ ಪ್ರತಿಯೊಂದು

    ಬದುಕಿಗೂ ಈ ಕರಿ ನೀರಲ್ಲಿ

    ಜನ್ಮಟಾಪು; ಜೈಲರನ ಮೇಲ್ವಿಚಾರಣೆಯಲ್ಲಿ ಆಗಾಗ

    ಅತ್ತಿತ್ತ ದೋಣಿ ಸಂಚಾರ, ಒಂದು ನಡುಗಡ್ಡೆಯಿಂದಿನ್ನೊಂದಕ್ಕೆ

    ಜಿಗಿದು ಹಾರಿ, ಈಜಾಡಿ ಪಾರಾಗಿ, ಬದುಕಿ ಉಳಿಯುವ ಬಂಟ

    ರಿದ್ದರೂ ಸಿಕ್ಕುವುದೆಲ್ಲ ಪರಕೀಯ. ಅಕಸ್ಮಾತ್ತಾಗಿ

    ತನ್ನ ಇನ್ನೊಂದರ್ಧ, ಎಲ್ಲಾದರೂ ಕ್ಷಣಾರ್ಧ

    ಸಿಕ್ಕಿದವನೆ ಕೃತಾರ್ಥ, ಭಾಗ್ಯವಂತ”.. (ಚಿಂತಾಮಣಿಯಲ್ಲಿ ಕಂಡ ಮುಖ- ಗೋಪಾಲಕೃಷ್ಣ ಅಡಿಗ)

    “ದ್ವೀಪವ ಬಯಸಿ...” ಎಂ.ಆರ್‍.ದತ್ತಾತ್ರಿಯವರ ಕಾದಂಬರಿಯನ್ನು ಓದುವಾಗ ಮತ್ತೆ ಮತ್ತೆ ಅಡಿಗರ ಈ ಸಾಲುಗಳು ನೆನಪಾದವು.…

  •  ಪುರಾಣಪುರುಷ ಶ್ರೀಕೃಷ್ಣನ ಕಥೆಯನ್ನು ತಮ್ಮ ಕಲ್ಪನೆಯಲ್ಲಿ ಮೂಡಿಸಿದ್ದಾರೆ ಶ್ರೀ ಮುನಿಷಿಯವರು ಇಂಗ್ಲೀಷ್ ಬಾಷೆಯಲ್ಲಿ ಅದನ್ನು ಕನ್ನಡಕ್ಕೆ ತಂದಿರುವರು ಸಿದ್ದವನಹಳ್ಳಿ ಕೃಷ್ಣ ಶರ್ಮರು. ಒಂಬತ್ತು ಪುಸ್ತಕಗಳ ಹತ್ತು ಬಾಗಗಳಲ್ಲಿ ಕತೆ ಸಾಗುತ್ತದೆ.  ಮೊದಲಿಗೆ ಕೃಷ್ಣ  ಹುಟ್ಟುವ ಮೊದಲಿನ ಸನ್ನಿವೇಶ ಆಗಿನ ರಾಜಕೀಯ ಸ್ಥಿತ್ಯಂತರ ಎಲ್ಲವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತ ಸಾಗುತ್ತಾರೆ ಲೇಖಕರು. ಮೂಲಕತೆಯಲ್ಲಿನ ಹಲವು ಅನುಮಾನಗಳಿಗೆ ಇಲ್ಲಿ ಉತ್ತರ ಸಿಗುತ್ತದೆ. ಕೃಷ್ಣನು ಚಿಕ್ಕಮಗುವಾಗಿರುವಾಗ ಪದೆ ಪದೆ ಅವನ ಮೇಲೆ ಆಕ್ರಮಣ ನಡೆಸುವ ಕಂಸನ ಕಡೆಯವರು ಪೂತನಿಯ ಮರಣದ ನಂತರ , ಪುನಃ ಕೃಷ್ಣ ಮದುರೆಗೆ ಬರುವವರೆಗು ಅವನನ್ನು ಕೊಲ್ಲಲ್ಲು ಯಾವ ಪ್ರಯತ್ನ ಸಹ ಮಾಡುವದಿಲ್ಲ ಅನ್ನುವದು ನನಗೆ ಎಂದಿಗು ಆಶ್ಚರ್ಯವೆನಿಸಿತ್ತು, ಹಾಗೆ ಮದುರೆಗೆ ಬಂದು ಅವನ…