ಪುಸ್ತಕ ಸಂಪದ

  • ಅಂಕಣಕಾರ, ಲೇಖಕ ರೋಹಿತ್ ಚಕ್ರತೀರ್ಥ ಇವರು ವಿಶ್ವವಾಣಿ ಪತ್ರಿಕೆಯಲ್ಲಿ ‘ಚಕ್ರವ್ಯೂಹ' ಎಂಬ ಅಂಕಣವನ್ನು ಬರೆಯುತ್ತಿದ್ದರು. ಆ ಅಂಕಣ ಬರಹಗಳಿಂದ ಆಯ್ದ ಕೆಲವು ವ್ಯಕ್ತಿಚಿತ್ರಗಳನ್ನು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ರೋಹಿತ್ ಅವರ ಬರಹಗಳು ಸಾಕಷ್ಟು ಅಧ್ಯಯನ ಮಾಡಿ ಬರೆದವುಗಳಾಗಿರುತ್ತವೆ. ಏಕೆಂದರೆ ವ್ಯಕ್ತಿ ಚಿತ್ರಗಳನ್ನು ರೂಪಿಸುವಾಗ ಅವರ ಬಗ್ಗೆ ನಿಖರವಾದ ದಾಖಲೆಗಳಿರುವುದು ಅತ್ಯಂತ ಅವಶ್ಯಕ. ಅಯೋಧ್ಯಾ ಪ್ರಕಾಶನದವರು ಈ ಪುಸ್ತಕದ ಜೊತೆಗೆ ಇನ್ನೊಂದು ಪುಸ್ತಕವನ್ನೂ ಹೊರತಂದಿದ್ದಾರೆ. ಅದರ ಹೆಸರು ಗಂಧದ ಮಾಲೆ. ಅವೂ ವ್ಯಕ್ತಿ ಚಿತ್ರಗಳದ್ದೇ ಕಥನ.

    ಪುಸ್ತಕದ ಬೆನ್ನುಡಿಯಲ್ಲಿ ಬರೆದ ವಾಕ್ಯಗಳು ಹೀಗಿವೆ ‘ಕಾಲೇಜು ಶಿಕ್ಷಣ ಪಡೆದು ಯಾವುದಾದರೂ ದೊಡ್ಡ ಉದ್ಯೋಗ ಹಿಡಿದು ತನ್ನ ಮಗ ಲಕ್ಷಾಂತರ ರೂಪಾಯಿ ಸಂಪಾದಿಸಬೇಕೆಂದು ತಂದೆ ಅತ್ತ…

  • ಜನಗಳ ಮನ ಪತ್ರಕರ್ತ ವಿಶ್ವೇಶ್ವರ ಭಟ್ ಇವರು ವಿಜಯ ಕರ್ನಾಟಕ ದಿನ ಪತ್ರಿಕೆಯ ಸಂಪಾದಕರಾಗಿರುವ ಸಮಯದಲ್ಲಿ ಬರೆದ ಅಂಕಣಗಳ ಸಂಗ್ರಹ. ಈಗಾಗಲೇ ೨ ಭಾಗ ಮಾರುಕಟ್ಟೆಗೆ ಬಂದಿದ್ದು, ಇದು ಆ ಸರಣಿಯ ಮೂರನೇ ಭಾಗ. ಅಂಕಣಕಾರನ ಒಂದು ಚೌಕಟ್ಟಿನಿಂದ ಹೊರಗೆ ಬಂದು ಯಾವ ವಿಷಯದ ಮೇಲಾದರೂ ಬರೆಯುವ ಸ್ವಾತಂತ್ರ್ಯದಿಂದ ಬರೆದ ಲೇಖನಗಳು ಇವು. ಇದರಲ್ಲಿ ಇಷ್ಟೇ ಬರೆಯ ಬೇಕೆಂಬ ಒತ್ತಾಯವಿಲ್ಲ, ಎಷ್ಟೇ ಬರೆದರೂ ಆಗಬಹುದು. ಹೀಗಾಗಿ ಈ ಪುಸ್ತಕದ ಬರಹಗಳಿಗೆ ಒಂದು ನಿರ್ದಿಷ್ಟ ಚೌಕಟ್ಟಿಲ್ಲ, ವೈವಿಧ್ಯಗಳಿಗೆ ಚೌಕಾಶಿಯೂ ಇಲ್ಲ. ದೀರ್ಘ ಪ್ರಯಾಣಕ್ಕೆ ಹೊರಟ ಅಲೆಮಾರಿ ಮಾಡಿಕೊಳ್ಳುವ ನೋಟ್ಸ್ ಗಳಂತೆ ಕೇಳಿದ್ದು, ಕಂಡದ್ದು ಎಲ್ಲಾ ಗೀಚಿದ್ದು ಇದರಲ್ಲಿ ಉಲ್ಲೇಖಿಸಿದ್ದಾರೆ. 

    ಪುಸ್ತಕದಲ್ಲಿ ಹಲವಾರು ರಾಜಕೀಯ ವ್ಯಕ್ತಿಗಳ ಬಗ್ಗೆ, ಅವರ ಜೀವನದ ಘಟನೆಗಳ ಬಗ್ಗೆ…

  • ಪತ್ತೇದಾರಿ ಕಾದಂಬರಿಗಳಿಗೆ ಹೊಸ ಭಾಷ್ಯ ಬರೆದವರು ಎನ್.ನರಸಿಂಹಯ್ಯನವರು. ಅವರು ಕಡಿಮೆ ವಿದ್ಯಾಭ್ಯಾಸ ಮಾಡಿದರೂ ೬೦-೭೦ರ ದಶಕದಲ್ಲಿ ಓದುಗರಿಗೆ ಪತ್ತೇದಾರಿಯ ಚಟ ಹಿಡಿಸಿಬಿಟ್ಟಿದ್ದರು. ಆ ಸಮಯದ ಸೀಮಿತ ಸಂಪನ್ಮೂಲಗಳಿಂದ ತಮ್ಮ ಮನದ ಶಕ್ತಿಯಿಂದ ಪತ್ತೇದಾರಿ ಕಾದಂಬರಿಗಳನ್ನು ಬರೆದರು. ಅವರ ಪತ್ತೇದಾರಿಯ ಪಾತ್ರಗಳಾದ ಮಧುಸೂದನ, ಅರಿಂಜಯ, ಗಾಳೀರಾಯ, ಪುರುಷೋತ್ತಮ ಇವರೆಲ್ಲಾ ನಮ್ಮ ನಡುವೆಯೇ ಇದ್ದ ವ್ಯಕ್ತಿಗಳಂತೆ ಆಗಿ ಹೋಗಿದ್ದರು. ಆ ಸಮಯದಲ್ಲಿ ಬರೆದ ನೂರಾರು ಕಾದಂಬರಿಗಳು ಮರು ಮುದ್ರಣ ಕಾಣದೇ ಈಗಿನ ಕಾಲದ ಓದುಗರನ್ನು ತಲುಪಿರಲಿಲ್ಲ. ಈ ಕೊರತೆಯನ್ನು ನೀಗಿಸಲು ಸಪ್ನ ಬುಕ್ ಹೌಸ್ ಇವರು ಎನ್. ನರಸಿಂಹಯ್ಯನವರ ಬಹುತೇಕ ಕಾದಂಬರಿಗಳನ್ನು ಮತ್ತೆ ಮುದ್ರಿಸಿದ್ದಾರೆ. ಸರಳವಾದ ಬರಹಗಳು ಈಗಿನ ಕಾಲದವರಿಗೆ ಸ್ವಲ್ಪ ಗಲಿಬಿಲಿ ಎನಿಸಿದರೂ ಪ್ರತೀ ಕಾದಂಬರಿ…

  • ಭಾರತ ಖ್ಯಾತ ಪತ್ರಕರ್ತರಾದ ಕುಲದೀಪ್ ನಯ್ಯರ್ ಅವರು ಬರೆದ ‘ಸ್ಕೂಪ್' ದೇಶದ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಸಮಗ್ರವಾಗಿ ವಿಶ್ಲೇಷಿಸಿರುವ ಪುಸ್ತಕವೆಂದರೆ ತಪ್ಪಾಗಲಾರದು. ಕುಲದೀಪ್ ನಯ್ಯರ್ ಇವರ ಮೊದಲ ಕನ್ನಡಕ್ಕೆ ಭಾಷಾಂತರದೊಂಡ ಪುಸ್ತಕ ಇದು. ರಾಜಕೀಯ ವಿದ್ಯಮಾನಗಳ ಬೆನ್ನು ಹತ್ತಿದ ಅವರು ಆ ವಿದ್ಯಮಾನಗಳಿಗೆ ಸಂಬಂಧಿಸಿದ ಪ್ರಮುಖ ಘಟನೆಗಳನ್ನು ಬೇರೆಲ್ಲರಿಗಿಂತ ಮೊದಲು ಗ್ರಹಿಸಿ ಬಹಿರಂಗಗೊಳಿಸಿದ ಕಥನವಿದು. ಮಹಾತ್ಮಾ ಗಾಂಧಿಯವರ ಹತ್ಯೆಯಿಂದ ಹಿಡಿದು ಮಾಜಿ ಪ್ರಧಾನಿ ವಾಜಪೇಯಿ ಲಾಹೋರಿಗೆ ಕೈಗೊಂಡ ಬಸ್ ಯಾತ್ರೆಯವರೆಗೆ ಸುಮಾರು ಅರ್ಧ ಶತಮಾನದ ನಮ್ಮ ಇತಿಹಾಸವೇ ಇಲ್ಲಿದೆ. ನೆಹರೂ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಸಾವು, ರಾಷ್ಟ್ರ ಭಾಷೆಯ ವಿವಾದ, ತಾಷ್ಕೆಂಟ್ ಒಪ್ಪಂದ, ಕಾಂಗ್ರೆಸ್ ವಿಭಜನೆ, ಬಾಂಗ್ಲಾ ಉದಯ, ತುರ್ತು…

  • ವಿಶ್ವಮಾನ್ಯತೆ ಪಡೆದ ಮಹಾನ್ ಕಲಾವಿದ ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್ ಅವರನ್ನು ಆಪ್ತವಾಗಿ ಈ ಪುಸ್ತಕದಲ್ಲಿ ಪರಿಚಯಿಸಿದ್ದಾರೆ ವ್ಯಾಸರಾಯ ಬಲ್ಲಾಳರು. ಇವರು, ಮುಂಬಯಿಯಲ್ಲಿ ಕಲಾನಗರದ ಹೆಬ್ಬಾರರ ಮನೆಯ ಹತ್ತಿರದಲ್ಲೇ ಸುಮಾರು ಎಂಟು ವರುಷ ಕಾಲ ನೆಲೆಸಿದ್ದರು. ಈ ಅವಧಿಯಲ್ಲಿ ಮತ್ತು ಅನಂತರವೂ ಇವರಿಬ್ಬರ ಒಡನಾಟ ನಿರಂತರ. ಅದುವೇ ಇಂತಹ ಅಪರೂಪದ ಪುಸ್ತಕ ರೂಪುಗೊಳ್ಳಲು ಕಾರಣವಾಯಿತು.

    ಆ ಒಡನಾಟವನ್ನು ನೆನಪು ಮಾಡಿಕೊಳ್ಳುತ್ತಾ ವ್ಯಾಸರಾಯ ಬಲ್ಲಾಳರು "ಮೊದಲ ಮಾತಿ” ನಲ್ಲಿ ಹೀಗೆ ಬರೆದಿದ್ದಾರೆ: “ಕಲಾವಿದ ಕಟ್ಟಿಂಗೇರಿ ಕೃಷ್ಣ ಹೆಬ್ಬಾರರು ನನಗೆ ದೀರ್ಘ ಕಾಲದ ಆತ್ಮೀಯರು…. ಈ (ಎಂಟು ವರುಷಗಳ) ಅವಧಿಯಲ್ಲಿ ಅವರ ಜತೆ ಕಲೆಯ ವಿಚಾರ ಚರ್ಚಿಸುವ, ಕಲೆಯ ಕುರಿತು ನನ್ನ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳುವ, ಅವರ ಕೆಲಸ ಮಾಡುವ ರೀತಿಯನ್ನು…

  • ಅಂಕಣಕಾರ, ಲೇಖಕ ರೋಹಿತ್ ಚಕ್ರತೀರ್ಥ ಇವರು ವಿಶ್ವವಾಣಿ ಪತ್ರಿಕೆಯಲ್ಲಿ ‘ಚಕ್ರವ್ಯೂಹ' ಎಂಬ ಅಂಕಣವನ್ನು ಬರೆಯುತ್ತಿದ್ದರು. ಆ ಅಂಕಣ ಬರಹಗಳಿಂದ ಆಯ್ದ ಕೆಲವು ವ್ಯಕ್ತಿಚಿತ್ರಗಳನ್ನು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ರೋಹಿತ್ ಅವರ ಬರಹಗಳು ಸಾಕಷ್ಟು ಅಧ್ಯಯನ ಮಾಡಿ ಬರೆದವುಗಳಾಗಿರುತ್ತವೆ. ಏಕೆಂದರೆ ವ್ಯಕ್ತಿ ಚಿತ್ರಗಳನ್ನು ರೂಪಿಸುವಾಗ ಅವರ ಬಗ್ಗೆ ನಿಖರವಾದ ದಾಖಲೆಗಳಿರುವುದು ಅತ್ಯಂತ ಅವಶ್ಯಕ. ಅಯೋಧ್ಯಾ ಪ್ರಕಾಶನದವರು ಈ ಪುಸ್ತಕದ ಜೊತೆಗೆ ಇನ್ನೊಂದು ಪುಸ್ತಕವನ್ನೂ ಹೊರತಂದಿದ್ದಾರೆ. ಅದರ ಹೆಸರು ವೃಂದಾವನ. ಅವೂ ವ್ಯಕ್ತಿ ಚಿತ್ರಗಳದ್ದೇ ಕಥನ,

    ಗಂಧದ ಮಾಲೆಯ ಮುನ್ನುಡಿಯಲ್ಲಿ ರೋಹಿತ್ ಕವಿ ಗೋಪಾಲಕೃಷ್ಣ ಅಡಿಗರ ಸಾಲನ್ನು ಉಲ್ಲೇಖಿಸುತ್ತಾ ಬರೆಯುತ್ತಾರೆ ‘ ಮಹಾತ್ಮರಾಗಲು ಬೇಕಾದ ಚೈತನ್ಯ ಅಂತಸ್ಥವಾಗಿರುವವರು ಜಗತ್ತಿನ…

  • ಆಕರ್ಷಕವಾದ ಹೆಸರನ್ನು ಹೊಂದಿರುವ ೫ ಪೈಸೆ ವರದಕ್ಷಿಣೆ ಎಂಬ ಪುಸ್ತಕವು ವಸುಧೇಂದ್ರ ಇವರ ಸುಲಲಿತ ಪ್ರಬಂಧಗಳ ಸಂಗ್ರಹ. ಸುಲಲಿತ ಪ್ರಬಂಧಗಳನ್ನು ಬರೆಯುವುದರಲ್ಲಿ ವಸುಧೇಂದ್ರ ಇವರದ್ದು ಎತ್ತಿದ ಕೈ. ಈ ಪುಸ್ತಕದಲ್ಲಿ ೨೪ ಪುಟ್ಟ ಪುಟ್ಟ ಪ್ರಬಂಧಗಳಿವೆ. ಚೆನ್ನಾಗಿ ಓದಿಸಿಕೊಂಡೂ ಹೋಗುತ್ತದೆ. ೫ ಪೈಸೆಯನ್ನು ಒಂದೊಂದು ಪೈಸೆಯಾಗಿ ವಿಂಗಡಿಸಿ ಒಂದೊಂದರ ಅಡಿಯಲ್ಲಿ ೪-೬ ಪ್ರಬಂಧಗಳು ಬರುವಂತೆ ಮಾಡಿದ್ದಾರೆ. 

    ಪ್ರತಿಯೊಬ್ಬರ ಜೀವನದಲ್ಲಿ ಬರುವ ಘಟನೆಗಳನ್ನೇ ಕೆಲವು ಪ್ರಬಂಧಗಳಾಗಿ ಬರೆದಿದ್ದಾರೆ. 'ಚುಕ್ಕಿ ಬಾಳೆಹಣ್ಣು' ಎಂಬುದು ಮೊದಲ ಪ್ರಬಂಧ. ಮಾಮೂಲಿ ಹಸಿರು ಬಾಳೆಹಣ್ಣು ಅಥವಾ ಕ್ಯಾವಂಡೀಶ್ ಹಣ್ಣು ಸ್ವಲ್ಪ ಅಧಿಕ ಹಣ್ಣಾದ ನಂತರ ಅದರ ಹೊರ ಮೈ ಮೇಲೆ ಕಪ್ಪಾದ ಸಣ್ಣ ಸಣ್ಣ ಚುಕ್ಕಿಗಳು ಕಂಡು ಬರುತ್ತವೆ. ಅವನ್ನೇ ಚುಕ್ಕಿ ಬಾಳೆ ಹಣ್ಣು…

  • ಕಾವ್ಯ ಸಂಗಮವೆನ್ನುವುದು ಹೆಸರೇ ಹೇಳುವಂತೆ ಕವನಗಳ ಸಂಗ್ರಹ. ಕರಾವಳಿ ತೀರದ ಕವಿ/ಕವಯತ್ರಿಯವರ ೯೬ ಕವನಗಳು ಈ ಪುಸ್ತಕದಲ್ಲಿವೆ. ಇವನ್ನೆಲ್ಲ ಅತ್ಯಂತ ಆಸಕ್ತಿಯಿಂದ ಸಂಪಾದನೆ ಮಾಡಿದವರು ಸ್ವತಃ ಕವಿಯಾದ ಮೇಟಿ ಮುದಿಯಪ್ಪ ಇವರು.

    ಬೆನ್ನುಡಿಯಲ್ಲಿ ಕವಿ, ವಿಮರ್ಶಕ ವಿ.ಗ.ನಾಯಕ್ ಇವರು ಬರೆಯುತ್ತಾರೆ ‘ಕವಿ ಮೇಟಿಯವರು ಶಿಕ್ಷಣ ತಜ್ಞರಾಗಿ, ಸಾಹಿತಿಯಾಗಿ, ರಂಗಕಲಾವಿದರಾಗಿ, ಸಂಘಟಕ, ಸಮಾಜ ಸೇವಕನಾಗಿ ಹೀಗೆ ಹತ್ತು ಹಲವಾರು ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಈಗಾಗಲೇ ಹಲವಾರು ಕೃತಿಗಳನ್ನು ಸಮಾಜಕ್ಕೆ ನೀಡಿ ಗುರುತಿಸಿಕೊಂಡವರು.ಉತ್ತರ ಕನ್ನಡ, ಉಡುಪಿ, ಮಂಗಳೂರು ಮತ್ತು ಕಾಸರಗೋಡು ಜಿಲ್ಲೆಯ ಪ್ರತಿಭಾವಂತ, ಹಿರಿಯ, ಉದಯೋನ್ಮುಖ ಕವಿಗಳನ್ನು  ಒಗ್ಗೂಡಿಸಿ ಅವರ ಕವನಗಳನ್ನು ಸಂಪಾದಿಸಿ ‘ಕಾವ್ಯ ಸಂಗಮ' ಎನ್ನುವ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ…

  • ಸಂಸ್ಕೃತ ಸಾಹಿತ್ಯದಲ್ಲಿ ಒಂದು ಅನನ್ಯವಾದ ಕಾವ್ಯ ಕಾಶ್ಮೀರದ ಕಲ್ಹಣನು ೧೨ ನೇ ಶತಮಾನದಲ್ಲಿ ರಚಿಸಿದ ‘ರಾಜತರಂಗಿಣಿ' ಸಂಸ್ಕೃತ ಕವಿಗಳು ಇತಿಹಾಸಕ್ಕೂ ಮಹತ್ವ ನೀಡಿದುದಕ್ಕೆ ಒಂದು ಉಜ್ವಲ ನಿದರ್ಶನ. ಎಂಟು ‘ತರಂಗ'ಗಳಲ್ಲಿ ಹತ್ತಿರ ಹತ್ತಿರ ಎಂಟು ಸಾವಿರ ಪದ್ಯಗಳಲ್ಲಿ ಹರಡಿಕೊಂಡಿರುವ ಈ ಕಾವ್ಯ ಪ್ರಾಚೀನ ಕಾಲದ ಘಟನೆಗಳನ್ನು ಇತಿಹಾಸ ಮರ್ಯಾದೆಯಿಂದ ದಾಖಲೆ ಮಾಡಿಕೊಂಡಿರುವ ಅಪೂರ್ವ ಗ್ರಂಥ ಇದು. 

    ಕಲ್ಹಣನ ‘ರಾಜ ತರಂಗಿಣಿ'ಯಲ್ಲಿ ಅಲ್ಲಲ್ಲಿ ಬರುವ ಅತಿ ಸಂಕ್ಷಿಪ್ತ ಪ್ರಸ್ತಾವಗಳನ್ನು ಆಧಾರವಾಗಿರಿಸಿಕೊಂಡು ಅವಕ್ಕೆ ವಿಸ್ತೃತ ಕಥಾರೂಪವನ್ನು ನೀಡಿ ಪ್ರಕೃತ ಮಾಲಿಕೆಯನ್ನು ತೆಲುಗಿನಲ್ಲಿ ಕಸ್ತೂರಿ ಮುರಳೀ ಕೃಷ್ಣ ಇವರು ಸಿದ್ಧ ಪಡಿಸಿದ್ದಾರೆ. ಕೆಲವು ಮೂಲದಲ್ಲಿ ಎರಡೋ ಮೂರೋ ಸಾಲಿನಲ್ಲಿ ಇರುವ ಸಾಮಗ್ರಿಯು ಈ ಮಾಲಿಕೆಯಲ್ಲಿ ಪೂರ್ಣ ಪ್ರಮಾಣದ…

  • ಸ್ವಾತಂತ್ರ್ಯವೆಂಬುವುದು ಕೇವಲ ರಾಜಕೀಯ ಸ್ಥಿತ್ಯಂತರವಲ್ಲ. ಅದು ಎಲ್ಲ ಜೀವನ ಕ್ಷೇತ್ರಗಳನ್ನೂ ಸ್ವಾಭಿಮಾನದಿಂದ ಉಜ್ಜೀವಿಸಬಲ್ಲ ಸ್ವಧರ್ಮ ನಿಷ್ಠೆ- ಎಂಬ ಮನವರಿಕೆಯನ್ನು ಇಪ್ಪತ್ತನೇ ಶತಮಾನದ ಆರಂಭದ ವರ್ಷಗಳಲ್ಲಿ ಭಾರತೀಯರಲ್ಲಿ ಮೂಡಿಸಿ ಸ್ವಾತಂತ್ರ್ಯ ಸಂಘರ್ಷಕ್ಕೆ ಅನುಪಮ ಯೋಗದಾನ ಮಾಡಿದವರು ಸಿಸ್ಟರ್ ನಿವೇದಿತಾ ಇವರು. ಈ ಸಂಘರ್ಷಕ್ಕೆ ಒಂದು ಆಯಾಮ ನೀದಲು ‘ಆಕ್ರಮಕ ಹಿಂದೂಧರ್ಮ' ಎಂಬ ಕಲ್ಪನೆಯನ್ನು ಹುಟ್ಟುಹಾಕಿದವರು ಇವರೇ. ಸ್ವಾಮೀ ವಿವೇಕಾನಂದರ ಶಿಷ್ಯೆಯಾಗಿದ್ದು ತಮ್ಮ ಗುರುಗಳ ಆಶಯದಂತೆ ರಾಷ್ಟ್ರ ದರ್ಶನಕ್ಕೆ ಸಮರ್ಥ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಸೇವೆ-ತ್ಯಾಗಗಳ ಮೂಲಕ ತಮ್ಮ ಪದ ಚಿನ್ಹೆಯನ್ನು ಉಳಿಸಿ ಹೋದವರು ಇವರು. ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಓರ್ವ ಅಗ್ರಣಿಯಾಗಿದ್ದುದಲ್ಲದೇ ಆ ಪೀಳಿಗೆಯ ಹತ್ತಾರು ಮಂದಿಯನ್ನು ಹೋರಾಟಕ್ಕೆ…