‘ಆಗಾಗ ಬಿದ್ದ ಮಳೆ’ ವಿಜಯ ಕರ್ನಾಟಕದಲ್ಲಿ ವಿಶ್ವೇಶ್ವರ ಭಟ್ ಅವರು ಬರೆದ ಬಿಡಿ ಬರಹಗಳ ಸಂಗ್ರಹ. ತಮ್ಮ ಅಂಕಣಗಳ ಮೂಲಕ ಖ್ಯಾತರಾಗಿರುವ ವಿಶ್ವೇಶ್ವರ ಭಟ್ ಅವರ ಲೇಖನಗಳು ಮಾಹಿತಿಪೂರ್ಣ ಹಾಗೂ ಅರ್ಥ ಗರ್ಭಿತವಾಗಿರುತ್ತವೆ. ಲೇಖಕರು ತಮ್ಮ ಮುನ್ನುಡಿಯಾದ ‘ಮಳೆ ಹನಿಗಳ ಟಪ್ ಟಪ್' ಇದರಲ್ಲಿ ಬರೆಯುತ್ತಾರೆ ‘“ಪತ್ರಿಕೆಗಳ ಬರೆದ ಲೇಖನಗಳನ್ನೆಲ್ಲ ಸಂಗ್ರಹಿಸುವುದೆಂದರೆ ಪಾತರಗಿತ್ತಿ ಹಿಡಿದಂತೆ. ಕಣ್ಣಿಗೆ ಕಾಣುತ್ತದೆ. ಕೈಗೆ ಸಿಗುವುದಿಲ್ಲ. ಎಷ್ಟೋ ಸಲ ಕಾಣೆಯಾಗುತ್ತದೆ. ಕೆಲ ದಿನಗಳ ಅನಂತರ ಅವುಗಳನ್ನು ಹುಡುಕುವ, ಪುಸ್ತಕ ರೂಪದಲ್ಲಿ ಪ್ರಕಟಿಸುವ ಉಮ್ಮೇದಿ ಸಹ ಉಳಿದಿರುವುದಿಲ್ಲ.
ಹೀಗೆ ಅಂದುಕೊಳ್ಳುತ್ತಿರುವಾಗಲೇ ‘ವಿಜಯ ಕರ್ನಾಟಕದ'ದಲ್ಲಿ ಪ್ರಕಟವಾದ ಲೇಖನಗಳನ್ನೆಲ್ಲ ನನ್ನ…