ಪುಸ್ತಕ ಸಂಪದ

  • *ಗುರುರಾಜ ಸನಿಲ್ ಅವರ "ಕಮರಿದ ಸತ್ಯಗಳು, ಚಿಗುರಿದ ಸುದ್ದಿಗಳು"*

    ಖ್ಯಾತ ಉರಗ ವಿಜ್ಞಾನಿ, ಪರಿಸರ ಅಧ್ಯಯನಕಾರ, ಕಥೆಗಾರ, ಲೇಖಕ ಗುರುರಾಜ ಸನಿಲ್ ಅವರ ಆರನೇ ಕೃತಿ "ಕಮರಿದ ಸತ್ಯಗಳು, ಚಿಗುರಿದ ಸುದ್ದಿಗಳು" ಎಂಬ ಲೇಖನಗಳ ಸಂಕಲನ. 2018ರಲ್ಲಿ ಪ್ರಕಟವಾದ, 12 + 106 ಪುಟಗಳ ಕೃತಿಯ ಬೆಲೆ 120 ರೂಪಾಯಿ. ಲೇಖಕರೇ (ಗುರುರಾಜ ಸನಿಲ್, ಕೊಳಂಬೆ - ಪುತ್ತೂರು, ಉಡುಪಿ - 576105, ಮೊಬೈಲ್: 9845083869) ಕೃತಿಯ ಪ್ರಕಾಶಕರು.

    ಮಂಗಳೂರಿನ ಪ್ರಸಿದ್ಧ ಮುದ್ರಕ, ಲೇಖಕ ಕಲ್ಲೂರು ನಾಗೇಶ್ ಅವರ ಮುನ್ನುಡಿ ಮತ್ತು ಖ್ಯಾತ ಛಾಯಾಗ್ರಾಹಕ ಸತೀಶ್ ಇರಾ ಅವರ ಬೆನ್ನುಡಿ ಕೃತಿಗಿದೆ. ಲೇಖಕರೇ ಸೆರೆಹಿಡಿದ ಮತ್ತು ಕಾರ್ಯಾಚರಣೆ ಸಮಯದಲ್ಲಿ ತೆಗೆಸಿಕೊಂಡ…

  • ಪ್ರಚಂಡ ಪತ್ತೇದಾರ ಪುಸ್ತಕದ ಲೇಖಕರಾದ ಬಿ.ಎಲ್.ಕೃಷ್ಣಮೂರ್ತಿಯವರು ಬೆಂಗಳೂರಿನ ಸಹಾಯಕ ಪೋಲೀಸ್ ಕಮೀಷನರ್ ಆಗಿ ನಿವೃತ್ತ ಹೊಂದಿದವರು. ಸ್ವಾತಂತ್ರ್ಯ ಪೂರ್ವ ದಿನಗಳಲ್ಲಿ ಆಂಗ್ಲರ ಆಡಳಿತದಲ್ಲಿದ್ದ ಬೆಂಗಳೂರು ದಂಡು ಪ್ರದೇಶದ ಬೆಂಗಳೂರು ಪೋಲೀಸ್ ಫೋರ್ಸ್ (BPF) ನಲ್ಲಿ ೧೯೪೨ರಲ್ಲಿ ಕಾನ್ ಸ್ಟೇಬಲ್ ದರ್ಜೆಯಲ್ಲಿ ನೌಕರಿಗೆ ಸೇರಿದ ಇವರು, ತರಭೇತಿ ಸಮಯದಲ್ಲಿ ತೋರಿದ ತಮ್ಮ ಅಸಾಧಾರಣ ಪ್ರತಿಭೆಯ ಕಾರಣದಿಂದ ಕೇವಲ ೧೬ ತಿಂಗಳಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಭಡ್ತಿ ಪಡೆದರು. ಭಾರತದಲ್ಲಿ ಇದೊಂದು ಅಪರೂಪದ ಪ್ರಕರಣ. ೧೯೫೭ರಲ್ಲಿ ಇನ್ಸ್ ಪೆಕ್ಟರ್ ಆಗಿ ಭಡ್ತಿ ಪಡೆದ ಇವರು ೧೯೬೯ರಲ್ಲಿ ಸಹಾಯಕ ಕಮೀಷನರ್ ಹುದ್ದೆಗೆ ಭಡ್ತಿ ಪಡೆದರು. ಪೋಲೀಸ್ ಇಲಾಖೆಯ ಎಲ್ಲಾ ಕ್ಷೇತ್ರಗಳಲ್ಲೂ ಪರಿಣತಿಯನ್ನು ಪಡೆದ ಇವರಿಗೆ ಇಲಾಲ್ಹೆಯಿಂದ…

  • ಹುಚ್ಚಾಟದ ಹುಲಿ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು. ಅಕ್ಷರ ಸೌಲಭ್ಯವಂಚಿತ ಕುಟುಂಬದಿಂದ ಬಂದ ಇವರ ಬರಹಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಟಿತ ಗೌರವ ಪ್ರಶಸ್ತಿ ದೊರೆತಿದೆ. ಇಷ್ಟೊಂದು ಪುಸ್ತಕಗಳನ್ನು ಬರೆದರೂ ಬಡತನದಿಂದಲೇ ಬದುಕಿ ಬಾಳಿದವರು. 

    ೬೦-೭೦ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಯನ್ನು ಅದೂ ಪತ್ತೇದಾರಿ ಸಾಹಿತ್ಯವನ್ನು ಬರೆದು ಜನರಿಗೆ ಓದುವುದರ ಚಟವನ್ನು ಹಿಡಿಸಿದವರು ನರಸಿಂಹಯ್ಯನವರು.…

  • ‘ಪನ್ನೀರು' ಹನಿಗವಿತೆಗಳ ಪುಸ್ತಕವನ್ನು ರಚಿಸಿದವರು ಶಿಕ್ಷಕರಾದ ಪರಮೇಶ್ವರಪ್ಪ ಕುದರಿಯವರು. ಇವರ ಬಗ್ಗೆ ಬೆಂಗಳೂರಿನ ಸಾಹಿತಿ ವೈ.ಬಿ.ಎಚ್. ಜಯದೇವ್ ಅವರು ತಮ್ಮ ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ- “ ಕನ್ನಡ ಸಾರಸ್ವತ ಲೋಕದಲ್ಲಿ ಸುಮಾರು ಮೂರು ದಶಕಗಳಿಂದಲೂ ಕವಿಯಾಗಿ, ಸಾಹಿತಿಯಾಗಿ ತಮ್ಮನ್ನು ಗುರುತಿಸಿಕೊಂಡಿರುವ ಶ್ರೀ ಪರಮೇಶ್ವರಪ್ಪ ಕುದರಿ ಅವರು ಹಳ್ಳಿಯ ಬಡನೆಂಟನಂತಹಾ ಸ್ನೇಹ ಜೀವಿ. ಕಲಾವಿದನಾಗಿ, ಹಾಡುಗಾರರಾಗಿ, ಉತ್ತಮ ಸಂಘಟಕರಾಗಿ, ಪ್ರಕಾಶಕರಾಗಿ ಹೀಗೆ ಬಹುಶ್ರುತ ವ್ಯಕ್ತ್ವಿತ್ವದ ಈ ಜೇನುಗಾರ ಮಿತ್ರ ವೃತ್ತಿಯಿಂದ ಸರ್ಕಾರಿ ಶಾಲೆಯ ಶಿಕ್ಷಕರು.

    ಈಗಾಗಲೇ ಮಕ್ಕಳಿಗಾಗಿ ‘ಕೋತಿ ಮತ್ತು ಫೋನು', ‘ಬಗೆ ಬಗೆ ಆಟ', 'ಕೈಲಾಸದಲ್ಲಿ ಕ್ರಿಕೆಟ್' ಮಕ್ಕಳ ಪದ್ಯ ಸಂಕಲನ…

  • ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರ ನಿಧನದ ಬಳಿಕ ಹೊರ ಬಂದ ಪುಸ್ತಕವಿದು. ಬಹಳ ಹಿಂದೊಮ್ಮೆ ಪ್ರಕಟವಾಗಿದ್ದರೂ, ಪ್ರತಿಗಳು ಈಗ ಮುಗಿದಿವೆ ಎಂದು ರವಿ ಬೆಳಗೆರೆಯವರು ಬರೆದಿದ್ದರು. ‘ಹಿಮಗಿರಿಯ ಗರ್ಭದಲ್ಲಿ' ಪುಸ್ತಕವು ಒಂದು ಪ್ರವಾಸ ಕಥನ. ರವಿ ಬೆಳಗೆರೆಯವರು ತಮ್ಮ ಅರುಣಾಚಲ ಪ್ರದೇಶದ ಪ್ರವಾಸದ ಅನುಭವಗಳನ್ನು ತಮ್ಮದೇ ಆದ ಶೈಲಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಅರುಣಾಚಲ ಪ್ರದೇಶಕ್ಕೆ ಹೋಗುವುದು ಅಷ್ಟೊಂದು ಸುಲಭವಿಲ್ಲ. 

    ಲೇಖಕರೇ ಬರೆದಂತೆ “.... ಈ ಮುಂಚೆ ನಾನು ಅರುಣಾಚಲವನ್ನು ಅಭೇಧ್ಯ, ಅಲ್ಲಿಗೆ ನೀವು ಸಲೀಸಾಗಿ ಹೋಗಲಾರಿರಿ ಎಂದದ್ದು ಕೇವಲ ನಿಸರ್ಗದ ಅಭೇದ್ಯತೆಯ ಸಂಬಂಧದಲ್ಲಿ ಅಲ್ಲ. ಅರುಣಾಚಲ ನಿರ್ಭಂಧಿತ ರಾಜ್ಯ. ಒಳಕ್ಕೆ ಪ್ರವೇಶ ಸುಲಭವಲ್ಲ. ಗೋಹಾಟಿ…

  • ಸ್ವರಾಜ್ಯ ಎಂಬುದು ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯರ ಸಮಗ್ರ ಕೃತಿ ಸಂಪುಟ. ಸ್ವಾತಂತ್ರ್ಯ ಹೋರಾಟಕ್ಕೆ ಕಾವ್ಯವನ್ನು ಮಹತ್ವದ ಮಾಧ್ಯಮವಾಗಿ ದುಡಿಸಿಕೊಂಡ ಕವಿ ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯರು. ಇವರ ಬದುಕಿನ ಮೇಲೂ ಬರವಣಿಗೆಯ ಮೇಲೂ ಗಾಂಧೀತತ್ವದ ಗಾಢ ಪ್ರಭಾವವಿದೆ. ಭಾರತೀಯ ಆರ್ಷ ಚಿಂತನೆಯೊಂದಿಗೆ, ಸುಧಾರಣಾವಾದಿ ನಿಲುವುಗಳೂ ಸೇರಿಕೊಂಡು ಅವರೊಬ್ಬ ಪ್ರಾಮಾಣೀಕ ದೇಶ ಭಕ್ತ ಕವಿಯಾಗಿ ರೂಪುಗೊಂಡವರು. ಬರೆದರು, ಬರೆದಂತೆ ಬದುಕಿದರು. ಮದುವೆ ಹಾಡುಗಳಲ್ಲೂ ಸ್ವಾತಂತ್ರ್ಯದ ಪ್ರಸ್ತಾಪ, ಸ್ವಾಗತ ಗೀತೆಗಳಲ್ಲೂ ರಾಷ್ಟ್ರೀಯತೆಯ ಧ್ವನಿ, ಮುಟ್ಟಿದಲ್ಲೆಲ್ಲಾ ಸ್ವರಾಜ್ಯದ ಒರತೆ- ಹೀಗೆ ಸ್ವಾತಂತ್ರ್ಯದ ಹಾಡುಗಳಿಗಾಗಿಯೇ ಅವರ ಜನ್ಮ.

    ಪುಣಿಂಚತ್ತಾಯರ ನಾಲ್ಕಾರು…

  • *ಕೆ. ಪಿ. ಅಶ್ವಿನ್ ರಾವ್ ಅವರ "ಡಿಸೆಂಬರ್ 31- ಯಾಕೋ ನೆನಪಾಯ್ತು...!"*

    " ಡಿಸೆಂಬರ್ 31- ಯಾಕೋ ನೆನಪಾಯ್ತು...!" , ಕೆ. ಪಿ. ಅಶ್ವಿನ್ ರಾವ್ ಅವರ ಮೊದಲ ಲೇಖನಗಳ ಸಂಕಲನ. 84 + 8 + 4 ಪುಟಗಳ, ಹತ್ತು ರೂಪಾಯಿ ಬೆಲೆ (ಸಾಂಕೇತಿಕ) ಯ ಸಂಕಲನ 2014ರಲ್ಲಿ ಪ್ರಕಟವಾಗಿದೆ. ಸ್ಟೆಲ್ಲಾ ಮನೋಜ್ ರವರು ವಿನ್ಯಾಸಗೊಳಿಸಿದ ಆಕರ್ಷಕ ಮುಖಪುಟದ ಸಂಕಲನವನ್ನು ಲೇಖಕರೇ (ಕೆ. ಪಿ. ಅಶ್ವಿನ್ ರಾವ್, ಪದವಿನಂಗಡಿ, ಅಂಚೆ: ಬೊಂದೇಲ್, ಮಂಗಳೂರು- 575008, ದ. ಕ. ಜಿಲ್ಲೆ, ಮೊಬೈಲ್: 9448253815) ಪ್ರಕಾಶಿಸಿದ್ದಾರೆ.

    ಗೌತಮ್ ಹೆಬ್ಬಾರ್, ಹೈದರಾಬಾದ್ ಅವರ ಬೆನ್ನುಡಿ (ಗೆಳೆತನದ ಸಂಭ್ರಮಕ್ಕೆ ಕೈಚಾಚುತ್ತಾ...) ಇರುವ ಸಂಕಲನದ ಆರಂಭದಲ್ಲಿ ಲೇಖಕರು…

  • ಮೈಸೂರು ವಿಶ್ವವಿದ್ಯಾನಿಲಯದ ‘ಪ್ರಸಾರಾಂಗ' ವಿಭಾಗದಿಂದ ೧೯೮೦ರಲ್ಲಿ ಪ್ರಕಟವಾದ ಪುಸ್ತಕವೇ ‘ಸುವರ್ಣ ಸಂಪುಟ' ಕನ್ನಡದ ಖ್ಯಾತ ಕವಿಗಳ ಕನ್ನಡ ಭಾವಗೀತೆಗಳ ಸಂಕಲನವಿದು. ಪು.ತಿ.ನ., ದೇ, ಜವರೇಗೌಡ, ಚೆನ್ನವೀರ ಕಣವಿ, ಹಾ ಮಾ ನಾಯಕ ಹಾಗೂ ಪ್ರಭುಶಂಕರ ಮುಂತಾದ ಪ್ರಸಿದ್ಧ ವ್ಯಕ್ತಿಗಳು ಸಂಪಾದಿಸಿದ ಅಮೂಲ್ಯ ಪುಸ್ತಕವಿದು. ಈ ಪುಸ್ತಕ ಮತ್ತೆ ಮರು ಮುದ್ರಣ ಕಂಡಿದೆಯೋ ತಿಳಿದಿಲ್ಲ. ಇದೊಂದು ಸಂಗ್ರಹ ಯೋಗ್ಯ ಕೃತಿ. ಹಲವಾರು ಮಹಾನ್ ಕವಿಗಳ ಅತ್ಯಮೂಲ್ಯ ಕವನಗಳು ಈ ಪುಸ್ತಕದಲ್ಲಿವೆ. 

    ಇಲ್ಲಿರುವ ಕವಿಗಳ ಕವನಗಳು ಬೇರೆ ಬೇರೆಯಾಗಿ ಪ್ರತ್ಯೇಕ ಕವನ ಸಂಗ್ರಹಗಳಲ್ಲಿ ಪ್ರಕಟವಾಗಿವೆ. ಆದರೆ ಖ್ಯಾತ ಕವಿಗಳ ಅಪರೂಪದ ಕವಿತೆಗಳು ಒಂದೆಡೆ ಓದುವ ಅಪರೂಪದ ಅವಕಾಶ ಈ ಪುಸ್ತಕ ಒದಗಿಸಿಕೊಟ್ಟಿದೆ…

  • ಖ್ಯಾತ ಮಲಯಾಳಂ ನಾಟಕಕಾರರಾದ ದಿ.ಕೆ.ಟಿ.ಮುಹಮ್ಮದ್ ಅವರ ‘ಸಂಹಾರಂ’ ನಾಟಕವನ್ನು ಕನ್ನಡಕ್ಕೆ ತಂದಿದ್ದಾರೆ ಖ್ಯಾತ ರಂಗಕರ್ಮಿ, ಚಿತ್ರ ನಟರಾದ ಕಾಸರಗೋಡು ಚಿನ್ನಾ ಅವರು. ಈ ಪುಟ್ಟ ನಾಟಕದ ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ ನಟ-ನಿರ್ದೇಶಕರಾದ ಟಿ.ಎಸ್. ನಾಗಾಭರಣ ಇವರು. ಅವರ ಪ್ರಕಾರ ‘ನಟ, ನಿರ್ದೇಶಕ, ಅನುವಾದಕ ಕಾಸರಗೋಡು ಚಿನ್ನಾ ಕನ್ನಡ, ಕೊಂಕಣಿ, ತುಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಪರಿಶ್ರಮವಿರುವವರು. ಹೀಗಾಗಿ ಬಳಸಿರುವ ಪದಗುಚ್ಚಗಳು, ನುಡಿಕಟ್ಟುಗಳು ಪ್ರಸ್ತುತ ಮತ್ತು ಪರಿಣಾಮಕಾರಿಯಾಗಿಯೇ ಇವೆ. ಚಿನ್ನಾರ ಹಾಸ್ಯ ಪ್ರಜ್ಞೆ ಇಲ್ಲಿ ಸಾಕಷ್ಟು ಪ್ರಯೋಜನಕಾರಿಯಾಗಿದೆ. ನಾಟಕದ ಸಾರ್ಥಕತೆ ಅದರ ಪ್ರದರ್ಶನ ಮತ್ತು ಪ್ರಯೋಗದಲ್ಲಿದೆ ಎಂದು ನಂಬಿರುವ ನನಗೆ, ಈ ನಾಟಕ ಹಲವು ಸಾಧ್ಯತೆಗಳನ್ನು ತೆರೆದಿಡುತ್ತದೆ…

  • ವಿಭಿನ್ನ ಶೈಲಿಯ ಕಥೆಗಳು ಹಾಗೂ ಲೇಖನಗಳನ್ನು ಬರೆಯುವುದರಲ್ಲಿ ಸಿದ್ಧಹಸ್ತರಾದ ಚಿತ್ರ ನಿರ್ದೇಶಕರೂ ಆಗಿರುವ ನಾಗತಿಹಳ್ಳಿ ಚಂದ್ರಶೇಖರವರ ೭ ಕಥೆಗಳ ಪುಟ್ಟ ಕಥಾ ಸಂಕಲನವೇ ‘ಛಿದ್ರ'. ಡಾ. ಯು.ಆರ್. ಅನಂತಮೂರ್ತಿಯವರು ಮುನ್ನುಡಿ ಬರೆದಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ ಇವರ ಬಗ್ಗೆ ಅನಂತಮೂರ್ತಿಯವರು ಹೀಗೆ ಬರೆಯುತ್ತಾರೆ ‘ನಾಗತಿಹಳ್ಳಿ ನನ್ನ ಸಮಕಾಲೀನರಿಂದ ಕಲಿತವರಾಗಿದ್ದೂ ನವ್ಯವನ್ನು ದಾಟಿದವರು ; ಬಂಡಾಯ ಚಳುವಳಿಯಿಂದ ಪ್ರಭಾವಿತರಾಗಿದ್ದೂ ಅದನ್ನು ಮೀರಿದವರು. ನಾನು ತುಂಬಾ ಇಷ್ಟ ಪಡುವ ಈಚಿನ ಬರಹಗಾರರ ನಡುವೆ ಅನನ್ಯ ದೃಷ್ಟಿಕೋನವುಳ್ಳವರು. ಸತ್ಯಪಕ್ಷಪಾತಿಯೊಬ್ಬನ ಸಂಕಟ ಅವರ ಉತ್ತಮ ಬರವಣಿಗೆಯಲ್ಲಿ, ಅವರ ಬರವಣಿಗೆಯ ನೇಯ್ಗೆಯಲ್ಲೇ ಕಾಣುತ್ತದೆ ಎಂಬುದು ನಾನು ಅವರ ಬರವಣಿಗೆಯನ್ನು ಇಷ್ಟಪಡಲು ಕಾರಣ.…