ಪುಸ್ತಕ ಸಂಪದ

  • ನಾಡಿನ ಖ್ಯಾತ ಸಾಹಿತಿವರೇಣ್ಯರಾದವರಿಂದ ರಚಿಸಲ್ಪಟ್ಟ ೬೪ ಶ್ರೇಷ್ಠ ಕವನಗಳು, ಕವಿಕಾವ್ಯ ಪರಿಚಯ ಇವುಗಳನ್ನು ಒಳಗೊಂಡ ಹೊತ್ತಗೆಯೇ ‘ನನ್ನದು ಈ ಕನ್ನಡ ನಾಡು'. ಕನ್ನಡ ನಾಡು ನುಡಿಯ ಬಗ್ಗೆ ಯುವಜನರಲ್ಲಿ ಆಸಕ್ತಿ ಮೂಡಿಸಬೇಕೆಂಬ ಉದ್ದೇಶದಿಂದ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೊರತಂದ ಕವನಗಳ ಗುಚ್ಛವಿದು. ಮುನ್ನುಡಿ,ಹಿನ್ನುಡಿ ಎಂದು ಪ್ರತ್ಯೇಕವಾಗಿ ಇಲ್ಲ. ಪ್ರಧಾನ ಸಂಪಾದಕರಾದ ಬಿ.ಎಂ.ಇದಿನಬ್ಬ ಇವರೇ ಪುಸ್ತಕವನ್ನು ಹೊರತಂದ ಆಶಯವನ್ನು ಬರೆದಿರುತ್ತಾರೆ.

    ನಮ್ಮ ಕನ್ನಡ ನಾಡು ನುಡಿಗೆ ಈಗ ಒದಗಿರುವ ಅವಸ್ಥೆಯನ್ನು ಸರಿಪಡಿಸುವಲ್ಲಿ ಒಂದಷ್ಟು ಕವನಗಳು ಸಹಕಾರಿಯಾಗಬಹುದೆಂಬ ಆಶಯ ಸಂಪಾದಕರದು. ಪಂಜೆ ಮಂಗೇಶರಾಯರ ಬಂತ್ಯೆ ಬಂತೈ ತೆಂಕಣಗಾಳಿ, ಬೆನಗಲ್ ರಾಮರಾವ್ ಅವರ ಕನ್ನಡಾಂಬೆಯ…

  • 'ಸರದಾರ' ಪುಸ್ತಕವು ಹೆಸರೇ ಹೇಳುವಂತೆ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಜೀವನದ ಮೇಲೆ ಚಿತ್ರಿತವಾಗಿದೆ. ಖ್ಯಾತ ವಾಗ್ಮಿ, ಲೇಖಕ ಚಕ್ರವರ್ತಿ ಸೂಲಿಬೆಲೆ ಇವರ ಲೇಖನಿಯಿಂದ ಹೊರ ಬಂದ ಹೊತ್ತಗೆ ಇದು. ಸರ್ದಾರ್ ಪಟೇಲರ ಬಗ್ಗೆ ಹತ್ತು ಹಲವಾರು ಪುಸ್ತಕಗಳು ಹೊರಬಂದಿವೆ. ಆದರೂ ಚಕ್ರವರ್ತಿಯವರ ಬರವಣಿಗೆ ಧಾಟಿ ಬಹು ಸುಂದರ ಮತ್ತು ಅಪರೂಪ. ಸರ್ದಾರ್ ಪಟೇಲರ ಬಗ್ಗೆ ಅವರು ಬರೆದ ಬೆನ್ನುಡಿ ಹೀಗಿದೆ “ಹಾರೊಲ್ಡ್ ಮ್ಯಾಕ್ ಮಿಲನ್ (ಬ್ರಿಟೀಷ್ ಪ್ರೀಮಿಯರ್) ವೇವೆಲ್ಲರ ಬಳಿ ಒಂದು ಮಾತು ಹೇಳಿದ್ದ ‘ಭಾರತದ ರಾಜಕಾರಣಿಗಳಲ್ಲೆಲ್ಲ ನೆಹರೂ ಆಕರ್ಷಕವಾಗಿ ಕಂಡರೂ ಆತ ಪುಕ್ಕಲ. ಪಟೇಲರು ಮಾತ್ರ ನಾಯಕತ್ವದ ಗುಣಗಳನ್ನು ಹೊಂದಿರುವ ಅಪರೂಪದ ವ್ಯಕ್ತಿ'.

    ಬ್ರಿಟೀಷರು ಭಾರತ…

  • ‘ಕೆಫೆ ಕಾಫಿ ಡೇ’ ಎಂಬ ಸಂಸ್ಥೆಯ ಮಾಲೀಕ ಸಿದ್ಧಾರ್ಥ್ ಮಂಗಳೂರಿನ ನೇತ್ರಾವತಿ ನದಿಯ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡದ್ದು ೨೦೧೯ರ ದೊಡ್ದ ಸಂಗತಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಸಿದ್ಧಾರ್ಥ ಪುಟ್ಟದಾದ ‘ಕೆಫೆ ಕಾಫಿ ಡೇ’ ಎಂಬ ಅಂಗಡಿಯನ್ನು ತೆರೆದರು. ಅದು ಅವರ ಭಾಗ್ಯದ ಬಾಗಿಲೇ ತೆರೆಯಿತು. ಅದರ ಉನ್ನತಿಯೇ ಅವರ ಸಾವಿಗೂ ಕಾರಣವಾದದ್ದು ಮಾತ್ರ ದುರಂತವೇ ಸರಿ. ೧೯೯೬ರಲ್ಲಿ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ತಲೆ ಎತ್ತಿದ ಮೊದಲ ‘ಅಡ್ಡಾ’ ಶ್ರೀಮಂತ ಯುವಕ-ಯುವತಿಯರ ಪಾಲಿನ ಹ್ಯಾಂಗ್ ಔಟ್ ಝೋನ್ ಆಯಿತು. ದೇಶದಾದ್ಯಂತ ನೂರಾರು ಮಳಿಗೆಗಳು ತೆರೆಯಲ್ಪಟ್ಟಿತು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಮಗಳನ್ನು ಮದುವೆಯಾದ ಸಿದ್ದಾರ್ಥ್ ಬಹಳ ಖ್ಯಾತ ವ್ಯಕ್ತಿಯಾದ…

  • ಕವಿ, ಸಾಹಿತಿ, ಅಧ್ಯಾಪಕರಾದ ಶ್ರೀ ಹಾ.ಮ.ಸತೀಶ (ಹಾಲುಮಜಲು ಸತೀಶ) ಇವರ ಪುಸ್ತಕ *ಪರಸ್ಪರ* ವೈಚಾರಿಕ ಲೇಖನಗಳನ್ನೊಳಗೊಂಡ ಹೊತ್ತಗೆ. ಒಟ್ಟು *೨೭* ಲೇಖನಗಳು ಶ್ರೀಯುತರ ಕೈಯಿಂದ ಬರೆಯಲ್ಪಟ್ಟಿದೆ. *ಮಾನವ* -ಮೊದಲು ಮಾನವನಾಗು, ಮನಸ್ಸನ್ನು ನಿರ್ಮಲವಾಗಿಟ್ಟುಕೊ, ಮೂರು ದಿನದ ಬಾಳ್ವೆಯಲಿ ಹಗರಣವೇತಕೆ? ರಗಳೆ ಬಾರದಿರಲಿ. ಮನುಜಾ ವಿಶ್ವ ಮಾನವನಾಗು, ಜಗದಗಲ ಪಸರಿಸು ಎಂಬ ಸಂದೇಶ ಮನಸೆಳೆಯಿತು, ಎಲ್ಲರಿಗೂ ಮಾದರಿ.

    ಮಾ ಎಂದರೆ ತಾಯಿ, ನವ ಎಂದರೆ ಹೊಸ. ತಾಯ ಗರ್ಭದಿಂದ ನವ ಮೂಡಿ, ಬುವಿಗೆ ಬಿದ್ದು, ಅಲ್ಲಿಯೂ ನವ, ಹೊಸ ಬೆಳಕನ್ನು ನೋಡಿ, ಪ್ರಕೃತಿಯ ತಾಯ ಎರಡೂ ಮಡಿಲಲ್ಲಿ ಆಡಿ, ಕೂಡಿ ಬೆಳೆದು ಮಾನವತ್ವವ ಪ್ರತಿಪಾದಿಸಿ ಬದುಕು ಮಾನವ ಎಂಬ ಸಂದೇಶ.

  • 'ಪಂಚಮಗಳ ನಡುವೆ' ಎಂಬ ಈ ಸತ್ಯಕಾಮರ ಕೃತಿಯ ವಿಷಯ ಬಹು ಚರ್ಚಿತ. ಸತ್ಯಕಾಮರೇ ತಮ್ಮ ಮುನ್ನುಡಿಯಲ್ಲಿ ಬರೆದ ಮಾತುಗಳನ್ನು ಓದಿದರೆ ನಿಮಗೆ ನಿಜಕ್ಕೂ ಕೃತಿಯ ಬಗ್ಗೆ ಕುತೂಹಲ ಮೂಡತೊಡಗುತ್ತದೆ. ‘ಅನುಭವಗಳು ತರಂಗಗಳಂತೆ ಚಲನೆ ನೇರ ನಿಟ್ಟಿನಲ್ಲಲ್ಲ' ಎಂದು ತಮ್ಮ ಮುನ್ನುಡಿಯನ್ನು ಪ್ರಾರಂಭಿಸುವ ಇವರು ಮುಂದುವರೆದು ಬರೆಯುತ್ತಾರೆ..."ನೀವು ಪುಟಗಳನ್ನು ತೆರೆದು ಓದುತ್ತಿರುವುದು ಒಂದು ಬದುಕನ್ನು. ಆ ಬದುಕಿನ ಹಿಂದೆ ಒಂದು ಪ್ರಾಮಾಣಿಕವಾದ ಅನುಭವ ಮಾತ್ರ ಇಲ್ಲ ; ಸಶಕ್ತವಾದ ವೈಜ್ಞಾನಿಕ ನೆಲಗಟ್ಟೂ ಇದೆ. ಇಲ್ಲಿಯ ಒಂದು ಮಾತು, ಕೃತಿ, ಅಸಂಭಾವ್ಯ ಅನಿಸಿದರೆ ಓದುಗ, ಇನ್ನೊಮ್ಮೆ ತನ್ನ ‘ಶಕ್ತಿ'ಯನ್ನು ಅಳೆದುಕೊಂಡರೆ ಸಾಕು.

    ಗತಿಯು ಶಕ್ತಿಯ ಮೂಲ. ಗತಿ ಶೀಲತೆ ಶಕ್ತಿವಂತಿಕೆಯ…

  • ಸ್ಮಶಾನ ಭೈರಾಗಿ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು. ಅಕ್ಷರ ಸೌಲಭ್ಯವಂಚಿತ ಕುಟುಂಬದಿಂದ ಬಂದ ಇವರ ಬರಹಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಟಿತ ಗೌರವ ಪ್ರಶಸ್ತಿ ದೊರೆತಿದೆ. ಇಷ್ಟೊಂದು ಪುಸ್ತಕಗಳನ್ನು ಬರೆದರೂ ಬಡತನದಿಂದಲೇ ಬದುಕಿ ಬಾಳಿದವರು. 

    ೬೦-೭೦ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಯನ್ನು ಅದೂ ಪತ್ತೇದಾರಿ ಸಾಹಿತ್ಯವನ್ನು ಬರೆದು ಜನರಿಗೆ ಓದುವುದರ ಚಟವನ್ನು ಹಿಡಿಸಿದವರು ನರಸಿಂಹಯ್ಯನವರು.…

  • ಮಲೆನಾಡಿನ ರೋಚಕ ಕತೆಗಳು ಸರಣಿಯ ೯ನೇ ಭಾಗವೇ ‘ಹೇಮಾವತಿ ತೀರದ ಕೌತುಕ ಕತೆಗಳು' ಎಂಬ ಕಥಾ ಸಂಕಲನ. ಹೇಮಾವತಿ ನದಿಗೆ ಹೊಂದಿಕೊಂಡು ಬರೆದ ಕತೆಗಳು ಇವು. ಹಿಂದಿನ ಕತೆಗಳಂತೆಯೇ ನೈಜ ಪರಿಸರದ ಚಿತ್ರಣ ಇಲ್ಲಿದೆ. ಕಾಡು- ಮೇಡು, ಬೆಟ್ಟ -ಗುಡ್ಡ, ನದಿ -ತೊರೆ, ಕಾಡು ಪ್ರಾಣಿಗಳು, ಹಾವು- ಚೇಳು, ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು, ದನ, ಎಮ್ಮೆ, ಕಾಫಿ-ಕಾಳುಮೆಣಸು ಎಲ್ಲವೂ ಈ ಪುಸ್ತಕದ ಕತೆಗಳಲ್ಲಿ ಇವೆ. ಗಿರಿಮನೆ ಶ್ಯಾಮರಾವ್ ಅವರು ಬರೆದ ಬೆನ್ನುಡಿಯನ್ನು ಗಮನಿಸಿದರೆ ನಿಮಗೆ ಪುಸ್ತಕ ಓದ ಬೇಕೆಂಬ ತುಡಿತ ಇನ್ನಷ್ಟು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.

    “ಇದು ಸಾವಿರದ ಒಂಬೈನೂರಾ ತೊಂಬತ್ತರ ದಶಕದ ಆಚೀಚೆ ಹುಟ್ಟೂರಿನ ಹಳ್ಳಿ ಮತ್ತು ಅದನ್ನು ಬಿಟ್ಟು ಪೇಟೆ ಸೇರಿದ ಸಂದರ್ಭಗಳಲ್ಲಿ…

  • ಸೂತ್ರಧಾರ ಮತ್ತು ಇತರ ಕಥೆಗಳು ಶೈಲಜಾ ಸುರೇಶ್ ರಾವ್ ನಾಯಕ್ ಅವರ ಪ್ರಥಮ ಕಥಾ ಸಂಕಲನ. ಈ ಕಥಾ ಸಂಕಲನದಲ್ಲಿ ಒಟ್ಟು ಹದಿಮೂರು ಕಥೆಗಳಿವೆ. ಆ ಹದಿಮೂರು ಕಥೆಗಳಲ್ಲಿ ಎರಡು ಕಥೆಗಳನ್ನು ಶೈಲಜಾ ಅವರ ಮಗಳಾದ ಅಶ್ವಿನಿಯವರು ಬರೆದಿದ್ದಾರೆ. ಅಮ್ಮ-ಮಗಳು ಸೇರಿ ಜೊತೆಯಾಗಿ ಕಥಾ ಸಂಕಲನ ರಚನೆ ಮಾಡಿದ್ದಾರೆ. ಶೈಲಜಾ ಅವರು ಬರೆದ ಕಥೆಗಳು ಚಿಕ್ಕದಾಗಿದ್ದು, ನಮ್ಮ-ನಿಮ್ಮೆಲ್ಲರ ಮನೆಯ ಕಥೆಗಳಂತೆಯೇ ಇವೆ. ಈ ಕಥೆಗಳು ನಮ್ಮ ನೆರೆಹೊರೆಯಲ್ಲೇ ನಡೆದಷ್ಟು ಆಪ್ತವಾಗಿವೆ. ಪ್ರತಿಯೊಂದು ಕಥೆ ಭಾವನಾತ್ಮಕವಾಗಿದೆ. ಇಲ್ಲಿರುವ ಬಹುತೇಕ ಕಥೆಗಳು ಉತ್ತಮ ಪುರುಷ (ನಾನು) ದಲ್ಲೇ ಆರಂಭವಾಗುತ್ತದೆ. ಈ ಕಾರಣದಿಂದಲೋ ಏನೋ ನಮ್ಮದೇ ಕಥೆ ಎಂಬ ಭಾವನೆಯುಂಟಾಗುತ್ತದೆ. 

    ಸಾಹಿತಿ ವಾಸುದೇವ ನಾಡಿಗ್ ಅವರು…

  • ಕಥೆಗಾರ, ಸಾಹಿತಿ, ಕಾದಂಬರಿಗಾರ ಜೋಗಿ (ಗಿರೀಶ್ ಹತ್ವಾರ್) ಇವರು ಬರೆದ ಸಣ್ಣ ಕಥೆಗಳ ಸಂಗ್ರಹವಿದು. ಮುಖಪುಟದಲ್ಲೇ ‘ನಾನಿದನ್ನು ಬರೆಯಬಾರದಿತ್ತು ಅಂದುಕೊಳ್ಳುತ್ತಿರುವ ಹೊತ್ತಿಗೇ, ನೀವಿದನ್ನು ಓದುತ್ತಾ ಇದ್ದೀರಿ!' ಎಂದು ಪ್ರಕಟಿಸಿ ನಮ್ಮ ಓದುವ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ ಜೋಗಿ. ಈ ಕಥೆಗಳು ‘ಖಾಸಾ ಪತ್ರದ ಹಾಗೆ ನಿಮ್ಮನ್ನು ತಲುಪಲಿ' ಎಂದು ಮುನ್ನುಡಿ ಬರೆದಿದ್ದಾರೆ ಜೋಗಿಯವರು. 'ಇಲ್ಲಿರುವ ಇಪ್ಪತ್ತೂ ಮತ್ತೊಂದು ಕತೆಗಳ ಬಗ್ಗೆ ಹೇಳುವಂಥದ್ದೇನಿಲ್ಲ. ಕತೆ ಬರೆಯುವುದು ಮಹಾನ್ ಪ್ರತಿಭೆಯೋ ಮಹಾನ್ ಸಾಧನೆಯೋ ಅಲ್ಲ. ಪುಟ್ಟ ಹುಡುಗಿ ಮುಂಜಾನೆಗೇ ಎದ್ದು ಮನೆ ಮುಂದೆ ರಂಗೋಲಿ ಬಿಡಿಸುವಾಗಿನ ತನ್ಮಯತೆ, ಉದ್ದಲಂಗದ ಅರಶಿನಗೆನ್ನೆಯ ಬಾಲಕಿ ಕುಣಿಗಲ್ ರಸ್ತೆಯ ಬದಿಯಲ್ಲಿ ದಟ್ಟ ಮಂಜಿನ ನಡುವೆ…

  • ಪತ್ರಕರ್ತ, ಬರಹಗಾರ, ಕವಿ, ವಿಮರ್ಶಕ ಎಂ.ನಾ.ಚಂಬಲ್ತಿಮಾರ್ ಇವರದ್ದು ಬಹುಮುಖ ಪ್ರತಿಭೆ. ಪ್ರಸ್ತುತ ‘ಕಣಿಪುರ' ಎಂಬ ಯಕ್ಷಗಾನ ಕಲೆಗೆ ಸಂಬಂಧಿಸಿದ ಪತ್ರಿಕೆಯ ಸಂಪಾದಕರಾಗಿರುವ ಇವರು ಈ ಹಿಂದೆ ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಬರೆದ ಲೇಖನ ಹಾಗೂ ಅಂಕಣ ಬರಹಗಳ ಸಂಗ್ರಹವೇ ‘ಗಡಿನಾಡ ದಡದಿಂದ...' ಎಂಬ ಪುಸ್ತಕ.

    ‘ಕನ್ನಡ ಕೈರಳಿ’ ಎಂಬ ಪತ್ರಿಕೆಯ ಪ್ರಕಾಶಕರೂ ಹಾಗೂ ಸಂಪಾದಕರೂ ಆಗಿರುವ ಅಬ್ದುಲ್ ರಹಿಮಾನ್ ಸುಬ್ಬಯ್ಯಕಟ್ಟೆ ಇವರು ತಮ್ಮ ಕೈರಳಿ ಪ್ರಕಾಶನದ ಮೂಲಕ ಈ ಪುಸ್ತಕವನ್ನು ಹೊರತಂದಿದ್ದಾರೆ. ಅವರು ತಮ್ಮ ಪ್ರಕಾಶಕರ ಮಾತಿನಲ್ಲಿ ಹೇಳಿದ್ದು ಹೀಗೆ “ಕಾಸರಗೋಡಿನ ಹೊಸ ತಲೆಮಾರಿನ ಪತ್ರಕರ್ತರಲ್ಲಿ ಎಂ.ನಾ.ಚಂಬಲ್ತಿಮಾರ್ ಇವರದ್ದು ಮುಖ್ಯ ಹೆಸರು. ಸಾಮಾಜಿಕ ಕಳಕಳಿ, ಸಂಸ್ಕೃತಿಯ…