ಪುಸ್ತಕ ಸಂಪದ

  • ಡಾ| ಕೆ. ಶಿವರಾಮ ಕಾರಂತರ ಮೂಕಜ್ಜಿಯ ಕನಸು ನಾನು ಹೈಸ್ಕೂಲಿನ ದಿನಗಳಿಂದ ಇಲ್ಲಿಯವರೆಗು ಹಲವು ಸಾರಿ ಓದಿರಬಹುದೇನೊ.ಪ್ರತಿಬಾರಿ ಓದುವಾಗಲು ಜೀವನದ ಹಲವು ಮಜಲುಗಳ, ದರ್ಶನವನ್ನು ಮಾಡಿಸುವ ಕಾದಂಬರಿ ಇದು. ಇಲ್ಲಿ ಕನಸು ಅನ್ನುವದಕ್ಕಿಂತ ದರ್ಶನ ಅನ್ನುವುದು ಹೆಚ್ಚು ಸೂಕ್ತವೇನೊ ಅನ್ನಿಸುತ್ತೆ.
    ಮಲೆನಾಡಿನ ಕೊಲ್ಲೂರಿನ ಸಮೀಪದ ಮೂಡೂರು ಎಂಬ ಹಳ್ಳಿಯಲ್ಲಿ ನೆಲೆಸಿರುವ ಸಾದಾ ಸೀದ ಜೀವನ ಪ್ರವೃತ್ತಿಯ ವ್ಯಕ್ತಿ ಸುಬ್ಬರಾಯರದು. ಇವರ ಅಜ್ಜಿಯೆ ಮೂಕಜ್ಜಿ, ಅಜ್ಜಿ ಎಂದರೆ ತಾತನ ಅಂದರೆ ತಂದೆಯ ತಂದೆಯ ಚಿಕ್ಕಮ್ಮ. ಹುಟ್ಟಿನಿಂದಲು ಅದೆ ಮನೆಯಲ್ಲಿ ಬೆಳೆದಾಕೆ ಅವರು. ಹತ್ತನೆ ವರ್ಷಕ್ಕೆ ಮದುವೆಯ ಶಾಸ್ತ್ರದ ನಂತರ ಗಂಡನನ್ನು ಕಳೆದುಕೊಂಡ ಆಕೆ ಈಗ ತನ್ನ ಎಂಬತ್ತು ತೊಂಬತ್ತರ ವಯಸಿನಲ್ಲಿ ತಮ್ಮ ಮರಿಮಗ ಸುಬ್ಬರಾಯ ಹಾಗು ಅವನ ಪತ್ನಿ ಸೀತೆಯ ಜೊತೆ…

  • ಕನ್ನಡ ಸಾಹಿತ್ಯದಲ್ಲಿ ಒಂದು ಜನಪ್ರಿಯ ಪ್ರಕಾರ ಹರಟೆ. ಕನ್ನಡ ಸಾಹಿತ್ಯ-ಲೋಕದ ಅನೇಕ ಉದ್ಧಾಮ ಸಾಹಿತಿಗಳು ಈ ಸಾಹಿತ್ಯ ಪ್ರಕಾರವನ್ನು ತುಂಬಾ ಸೊಗಸಾಗಿ ದುಡಿಸಿಕೊಂಡಿದ್ದಾರೆ. ಕಲೆತರಂತೂ ಹರೆಟೆಗೊಂದು ವಿಭಿನ್ನ, ವಿಶಿಷ್ಟ ಆಯಾಮವನ್ನು ದೊರಕಿಸಿಕೊಟ್ಟಿದ್ದಾರೆ. ಹರಟೆ ಹಾಲು ಹರೆತೆಯಗದಂತೆ ಜಾಗ್ರತಿ ಮೂಡಿಸಿದ್ದಾರೆ ....ಎಂಬ ಹಿನ್ನುಡಿ ಇರುವ ಒಂದು ಒಳ್ಳೆಯ ಪುಸ್ತಕ. ಸಕತ್ ನಗೆಗಡಲಿನಲ್ಲಿ ತೇಲಿಸುವ ಹನ್ನೆರಡು ಹರಟೆಗಳ ಸಂಗ್ರಹ. ಅವರ ಒಂದು ಲೇಖನದ ಲಿಂಕ್ ಕೆಳಗೆ ಇದೆ.

    ನಗುವುದು ಅಷ್ಟೇ ಅಲ್ಲದೆ ಅಳುವುದು ಒಂದು ಕಲೆ ನಗನಗಿಸುತ್ತಲೇ ಹೇಳುವ ರೀತಿ ತುಂಬಾ ವಿಭಿನ್ನವಾದದು.

    http://www.udayavani.com/news/196948L15-%E0%B2%B8-%E0%B2%B2-%E0%B2%AF-%E0%B2%A4%E0%B2%B8-%E0%B2%AE-%E0%B2%A8%E0%B2%AE.html…

  • ಕೆ.ವಿ.ಅಯ್ಯರ್ ಕನ್ನಡದಲ್ಲಿ ಚಿರಸ್ಥಾಯಿ ಪ್ರಣಯ ತ್ಯಾಗದ ಕಾದಂಬರಿ ಶಾಂತಲ. ಅದೆಷ್ಟು ಬಾರಿ ಮುದ್ರಣವಾಗಿದೆಯೊ ನನಗೆ ತಿಳಿಯದು. ನನ್ನಲ್ಲಿರುವ ಹಳೆಯ ಪ್ರತಿಯೆ ಹತ್ತನೆಯ ಮುದ್ರಣ!. ಕನ್ನಡದ ಹೋಯ್ಸಳರ ರಾಣಿ ಶಾಂತಲೆಯ ಜೀವನವದ ವರ್ಣಚಿತ್ರ ಈ ಕಾದಂಬರಿ. ಹೋಯ್ಸಳರ ದೊರೆ ಜೈನ ಬಿಟ್ಟಿದೇವ ನಂತರದಲ್ಲಿ ಶ್ರೀ ವೈಷ್ಣವನಾದ ವಿಷ್ಣುವರ್ದನ ಹಾಗು ಅವನ ಪತ್ನಿ ಶಾಂತಲೆ ಹಾಗು ಲಕ್ಷ್ಮೀಯರ ಜೀವನ ಚಿತ್ರಣ. ಈ ಮೂವರ ನಡುವಿನ ಒಲವಿನಿ ಕೊಂಡಿ ಕುವರವಿಷ್ಣು,ಮಹಾರಾಜ ವಿಷ್ಣುವರ್ದನರ ತಾಯಿ ಮಹಾದೇವಿಯವರ ಸಾಕುಮಗ, ಚೆನ್ನಮ ದಂಡಾದೀಶರ ಮಗ. ವಿಷ್ಣುವರ್ದನರು ಅವನನ್ನು ಮಗನೆಂದೆ ಭಾವಿಸಿದ್ದರು.

    ಈ ನಾಲ್ವರ ನಡುವಿನ ಒಲುಮೆಯ ಪ್ರೀತಿಯ ಹರಿವೆ ಕಾದಂಬರಿಯ ವಸ್ತು. ಹಾಗೆ ಜೈನಧರ್ಮ, ವೈಷ್ಣವ ದರ್ಮ, ಶೈವದರ್ಮ ಮೂರು ದರ್ಮಗಳು ಕಾದಂಬರಿಯ ಉದ್ದಕ್ಕು ಹದವಾಗಿ…

  • ಇತ್ತೀಚೆಗೆ ಪ್ರಜವಾಣಿ ಪತ್ರಿಕೆಯಲ್ಲಿ ಡಾ. ಕೆ.ಎನ್. ಗಣೇಶಯ್ಯನವರ ಹೊಸ ಕಾದ೦ಬರಿ "ಮೂಕ ಧಾತು" ಬಿಡುಗಡೆಯಾದ ಸುದ್ದಿ ಓದಿ ನನಗೆ ತು೦ಬಾ ಖುಶಿಯಾಗಿತ್ತು. ಕನ್ನಡದಲ್ಲಿ ಅವರ ವಿಶಿಷ್ಟ ಹಾಗು ಹೊಸ ಬರವಣಿಗೆ ಶೈಲಿಗೆ ಮರುಳಾದವರಲ್ಲಿ ನಾನೂ ಒಬ್ಬ. ಇವರ ಬಗ್ಗೆ ತಿಳಿದ ಸ್ವಲ್ಪವೇ ಸಮಯದಲ್ಲಿ ಇವರ ಎಲ್ಲಾ ಹತ್ತು ಪುಸ್ತಕಗಳನ್ನು ಓದಿ ಮುಗಿಸಿರುವೆ ಎ೦ದರೆ ಇವರ ಬರವಣಿಗೆಗಿರುವ ಸೆಳತ ಅರ್ಥವಾಗಬಹುದು.

    ವೃತ್ತಿಯಲ್ಲಿ ಕೃಷಿ ವಿಜ್ಞಾನಿಯಾದ ಇವರ ಬರವಣಿಗೆಯಲ್ಲಿ ಹೆಚ್ಚಾಗಿ ಕಾಣುವುದು ಇತಿಹಾಸಕ್ಕೆ ಸ೦ಬ೦ಧಪಟ್ಟ ವಿಷಯಗಳು. ಆದರೆ "ಮೂಕ ಧಾತು"ವಿನಲ್ಲಿ ಇತಿಹಾಸಕ್ಕಿ೦ತ ವಿಜ್ಞಾನಕ್ಕೆ ಹೆಚ್ಚು ಒತ್ತು ಇದೆ. ಮನುಷ್ಯನ ವಿಕಾಸದ ಹಲವು ಮಜಲುಗಳನ್ನು ಹಾಗು ಜೈವಿಕ ತ೦ತ್ರಜ್ಣಾನದಲ್ಲಿನ ಇತ್ತೀಚಿನ ಬೆಳವಣಿಗೆಳನ್ನು ತು೦ಬಾ ಸರಳ ರೀತಿಯಲ್ಲಿ…

  • ಭಾರತ ಹೇಗೆ ಕೃಷಿ ಪ್ರಧಾನವಾದ ದೇಶವೋ ಚೀನಾ ದೇಶವೂ ಕೃಷಿ ಪ್ರಧಾನವಾದ ದೇಶವೇ. ಇಂದು ಚೀನ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿದ್ದರೂ ಅದರ ಅಂತರಾಳದಲ್ಲಿ ಹರಿಯುತ್ತಿರುವುದು ಕೃಷಿಯ ಬೆವರೇ. ಅಮೆರಿಕನ್ ಲೇಖಕಿ ಪರ್ಲ್.ಎಸ್.ಬಕ್ ಚೀನಾ ದೇಶದಲ್ಲಿ ೫ ವರ್ಷಗಳವರೆಗೆ ಇದ್ದು, ಅಲ್ಲಿನವರಿಗೆ ಕೃಷಿಯ ಬಗೆಗಿರುವ ಒಲವು, ಅಲ್ಲಿನ ಬದುಕಿನ ಬವಣೆಗಳು, ಲಿಂಗ ತಾರತಮ್ಯ, ಮೇಲ್ವರ್ಗದವರ ಶೋಷಣೆ, ಭೂಮಿಯ ಬಗೆಗೆ ಕೃಷಿಕರಿಗಿರುವ ಪ್ರೀತಿ ಎಲ್ಲವನ್ನೂ ತಮ್ಮ ಗುಡ್ ಅರ್ತ್ ಕಾದಂಬರಿಯಲ್ಲಿ ಹಿಡಿದಿಟ್ಟಿದ್ದಾರೆ. ಅದನ್ನು ಇತ್ತೀಚೆಗೆ ಕನ್ನಡಕ್ಕೆ ಅನುವಾದಿಸಿದವರು ಪಾರ್ವತಿ ಜಿ.ಐತಾಳ್.
              ಒಬ್ಬ ರೈತನಿಗೆ ಮಣ್ಣಿನ ಬಗೆಗಿರುವ ಭಕ್ತಿ, ಪ್ರೀತಿ, ತುಡಿತ ಹೇಗಿರುತ್ತದೆಂಬುದನ್ನು ಗುಡ್ ಅರ್ತ್ ಸಮರ್ಥವಾಗಿ ಹಿಡಿದಿಟ್ಟಿದೆ. ಉತ್ತರ ಚೀನಾದಲ್ಲಿನ…

  • ನಾನು ಚಿಕ್ಕವನಿದ್ದಾಗ ಅಜ್ಜಿ ಎಷ್ಟೋ ಹಳೆಯ ವಿಚಾರಗಳ ಬಗ್ಗೆ ಹೇಳುತ್ತಿದ್ದರು. ಅವರು ಹೋಗಿದ್ದ ಊರುಗಳ ಪ್ರಸ್ತಾಪವೂ ಅಲ್ಲಲ್ಲಿ ಬರ್ತಿತ್ತು. ಅವುಗಳಲ್ಲಿ ಒಂದು ಪ್ರಯಾಗದ ತ್ರಿವೇಣಿ ಸಂಗಮ. ಅಲ್ಲಿ ಗಂಗೆ ಮತ್ತೆ ಯಮುನೆ ಎರಡೂ ನದಿಗಳು ಸೇರುತ್ತವೆ. ಕಪ್ಪು ಬಣ್ಣದ ಯಮುನಾ ಮತ್ತೆ ತಿಳಿಯಾದ ಗಂಗೆ ಎರಡೂ ಅಲ್ಲದೆ, ಬರಿಗಣ್ಣಿಗೆ ಕಾಣದ ಸರಸ್ವತೀ ಕೂಡ ಅಲ್ಲೇ ಸೇರುತ್ತೆ. ಅದು ಗುಪ್ತ ಗಾಮಿನಿ, ಹಾಗಾಗಿ ಇದಕ್ಕೆ ತ್ರಿವೇಣಿ ಸಂಗಮ ಅಂತ ಹೆಸರು (ವೇಣಿ = ಜಡೆ. ಜಡೆಗೆ ಮೂರು ಕಾಲುಗಳಿರುವುದರಿಂದ ಈ ಹೆಸರು ಇರಬೇಕು)ಅಂತೆಲ್ಲ ಅವರು ಹೇಳುತ್ತಿದ್ದು ನೆನಪಿದೆ. 

    ಈ ರೀತಿ ಎಷ್ಟೋ ಕಡೆಗಳಲ್ಲಿ ಎರಡು ನದಿಗಳು ಸೇರುವ ಕಡೆ ಮೂರನೆಯ ಗುಪ್ತಗಾಮಿನಿಯನ್ನು ಹೇಳುವುದನ್ನು ನೋಡಿರಬಹುದು. ಉದಾಹರಣೆಗೆ ನಮ್ಮ ಕರ್ನಾಟಕದಲ್ಲೇ ಕೊಡಗಿನ ಭಾಗಮಂಡಲದಲ್ಲಿ ಕಾವೇರಿ…
  •  ಜ್ಞಾನಪೀಠ ಪ್ರಶಸ್ತಿ ವಿಜೇತ ಕಂಬಾರರ ಈ ಕಾದಂಬರಿಯನ್ನು ನಾನು ಎಂ.ಫಿಲ್ ಪದವಿಯಲ್ಲಿ ಅಧ್ಯಯನ ವಿಷಯವಾಗಿ ತೆಗೆದು ಕೊಂಡಿದ್ದೆ. ಇಲ್ಲಿ ಈ ಕಾದಂಬರಿಯ ಓದಿನ ಸಾರಾಂಶವನ್ನು ತಿಳಿಸಲು ಪ್ರಯತ್ನಿಸುತ್ತೇನೆ.

        'ಶಿಖರಸೂರ್ಯ' ಕಾದಂಬರಿಯು ಜನಪದ ಕತೆಯನ್ನು ಆಧರಿಸಿ ರಚಿತವಾಗಿದೆ. ಚಂದ್ರಶೇಖರ ಕಂಬಾರರ ಐದನೆಯ ಹಾಗೂ ಇಲ್ಲಿವರೆಗಿನ ಕೊನೆಯ ಕಾದಂಬರಿ 'ಶಿಖರಸೂರ್ಯ'. ಈ ಕಾದಂಬರಿಯು 2006 ರಲ್ಲಿ  ಪ್ರಕಟಗೊಂಡಿತು. ಜಾನಪದ ಮೈಯ್ಯಿಗೆ ಆಧುನಿಕ ಸಂವೇದನೆಯನ್ನು ಕಸಿ ಮಾಡಿದ ನಮ್ಮ ಅದ್ವೀತಿಯ ಕವಿಯಾದ ಕಂಬಾರರ 'ಶಿಖರ ಸೂರ್ಯ' ಕಾದಂಬರಿ ಮಹಾಕಾವ್ಯ ಸ್ವರೂಪದ ಒಂದು ವಿಶಿಷ್ಟ ಕೃತಿ. ಇದು ಒಂದು ರೀತಿಯಲ್ಲಿ ಅವರ 'ಚಕೋರಿ' ಮಹಾಕಾವ್ಯದ ಮುಂದುವರಿದ ಭಾಗವಾಗಿದೆ. ಈ ಕೃತಿಯು 2010ರಲ್ಲಿ ಭಾರತದ ಪ್ರತಿಷ್ಠಿತ ಪ್ರಶಸ್ತಿಯಾದ 2009ರ ಠಾಕೂರ್…

  • ಸಾಹಿತ್ಯದ ಆತ್ಮಕಥನಗಳು ಕನ್ನಡಕ್ಕೆ ಬಂದಾಗ ಓದುಗರಿಗೆ ನವಿರೇಳಿಸಿದ್ದವು. ನೋವು, ಹತಾಶೆ, ಶೋಷಣೆ, ಅಮಾನವೀಯತೆಗಳನ್ನು ಅನುಭವಿಸಿದವರಿಂದಲೇ ನೇರವಾಗಿ ಆತ್ಮಕಥನಗಳಾಗಿ ಕನ್ನಡ ಓದುಗರಿಗೆ ಮರಾಠಿ ಸಾಹಿತ್ಯದಿಂದ ಇತರೆ ಭಾಷೆಗಳಿಂದಲೂ ಲಭಿಸಿತ್ತು. ಆದರೆ ಮಹಿಳೆಯೊಬ್ಬರು ಲೈಂಗಿಕ ಕಾರ್ಯಕರ್ತೆಯಾಗಿ ಅನುಭವಿಸಿದ ನೋವನ್ನು ಕಣ್ಣೋಟದಿಂದ ಕಂಡ ಜಗತ್ತನ್ನು ಅನಾವರಣಗೊಳಿಸಿದ ಆತ್ಮಕಥನ ಕನ್ನಡದಲ್ಲಿ ಬಂದಿರುವುದು ವಿಶೇಷ. ಮೂಲತ: ಮಲೆಯಾಳಂ ಭಾಷೆಯ ಜ್ಞಾನ್ ಲೈಂಗಿಕ ತೊಳಿಲಾಳಿ ಎಂಬ ನಳಿನಿ ಜಮೀಲಾರ ಆತ್ಮಕಥನವನ್ನು ಸೆಕ್ಸ್ ವರ್ಕರ್ ಒಬ್ಬಳ ಆತ್ಮಕಥನ ಎಂದು ಕನ್ನಡಕ್ಕೆ ಅನುವಾದಿಸಿದವರು ಕೆ.ನಾರಾಯಣಸ್ವಾಮಿಯವರು. ನೇರ, ದಿಟ್ಟ, ನಿರ್ಭಿಡೆಯಿಂದ ತಮ್ಮ ಬದುಕನ್ನು ಅಕ್ಷರ ರೂಪದಲ್ಲಿ ಹಿಡಿದಿಟ್ಟ ನಳಿನಿ ಜಮೀಲಾರ ಆತ್ಮಕಥನವನ್ನು ಓದುತ್ತ ಹೋದಂತೆ ನಮಗರಿಯದ…
  • ಕುಂವೀ ಆತ್ಮಕಥನ - ಗಾಂಧಿ ಕ್ಲಾಸು ಇತ್ತೀಚೆಗೆ ಬಿಡುಗಡೆಯಾದ ಬಹು…

  • ಗಾಯದ ತುಟಿಗಳಿಂದ ಮುರಿದ ಕೊಳಲನೂದಬೇಕಿದೆ’-ಎಂದು ವಾಸ್ತವದ ಸಂಕಟಗಳನ್ನು ತೆರೆದಿಡುವ ಶ್ರೀ ವೀರಣ್ಣ ಮಡಿವಾಳರ ತಮ್ಮ ಮೊದಲ ಕವನ ಸಂಕಲನ ‘ನೆಲದ ಕರುಣೆಯ ದನಿ’ ಯ ಮೂಲಕ ಸಾರಸ್ವತ ಲೋಕಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಮೊದಲ ಸಂಕಲನ ತರುವ ಎಲ್ಲ ಕವಿಗಳಿಗೂ ಇರುವ ಹಾಗೇ ವೀರಣ್ಣನವರಿಗೂ ಇಲ್ಲಿನ ಕವಿತೆಗಳ ಆಯ್ಕೆಯಲ್ಲಿ ದ್ವಂದ್ವಗಳು ಕಾಡಿರುವ ಕುರುಹುಗಳಿವೆ. ಮೊದಲ ಸಂಕಲನ ಪ್ರಕಟಿಸುವ ಕವಿಗೆ ಕಾಡುವ ವಿಚಿತ್ರ ಸಮಸ್ಯೆಯೆಂದರೆ ಎಲ್ಲವನ್ನೂ ಮೊಗೆ ಮೊಗೆದು ಹೇಳಬೇಕು ಎಂಬ ಉತ್ಸಾಹ ಮತ್ತು ಅಂಥ ಉತ್ಸಾಹದ ಜೊತೆಗೇ ಹೇಳುವ ರೀತಿಯಲ್ಲಿ ಬಳಸಬೇಕಾದ ಮಾರ್ಗದ ಅನುಸೂಚಿ.

    ಕವಿಯೂ ಒಬ್ಬ ಸಾಮಾಜಿಕನೇ ಆಗಿರುವುದರಿಂದ ಅವನಿಗೂ ಎಲ್ಲರ ಹಾಗೇ ಬದುಕಿನ ಪರಿಕರಗಳು, ಅದಕ್ಕಾಗಿ ಮಾಡಬೇಕಿರುವ ತ್ಯಾಗ ಮತ್ತು ಸವಾಲುಗಳು ಹಾಗೇ ಬದುಕಿನ…