ಕವನಗಳು

ವಿಧ: ಕವನ
July 21, 2024
ಅಳಿದಿರುವೆ ನಾನೆಂದು ನೀನಂದುಕೊಂಡಿರುವೆ ಉಳಿದಿಹುದು ಜೀವವಿದು ಕೊಂಚ ಬುಡದಲ್ಲಿ   ಉಸಿರಿರಲು ನನ್ನಲ್ಲಿ ಕುಳಿತಿರೆನು ಬರಿಗೈಲಿ ಬಸಿರನ್ನು ಹೊತ್ತಿರುವೆ ಸಫಲ ಯತ್ನದಲಿ   ದಾರಿಯಲಿ ಅಡ್ಡವಿದು ಬೇಡೆಂದು ಕಡಿದಿರುವೆ ಬೇರನ್ನು ಉಳಿಸಿದ್ದೆ ನಿನ್ನ ಮರೆವಲ್ಲಿ   ಸಾಕಾಯ್ತು ನನಗಷ್ಟು ನೆಲದ ಋಣ ತೀರಿಸಲು ಈ ಕಾಯಿ ನಿನಗಾಗಿ ಬಳಸು ಸೊಗಸಾಗಿ   ಗುಟ್ಟೊಂದು ನುಡಿಯುವೆನು ವೃಕ್ಷಗಳ ಆ ದೇವ ಇಟ್ಟಿರುವ ಜೀವಿಗಳ ಬದುಕು ಸುಖಕಾಗಿ   ಮಾನವನು ಕೆಡಿಸಿರುವ ವಾಯುವಿನ ಕೊಳೆ ತೆಗೆದು ನಾನದನು ಮರಳಿಸುವೆ…
ವಿಧ: ಕವನ
July 20, 2024
ಮಡಿಲನು ತುಂಬಲು ಕುಡಿಯನು ಬಯಸಿದೆ ಪಡೆಯದೆ ಹೋದೆನು ಬಾಳಿನೊಳು ಬಿಡುವರೆ ನೆರೆಹೊರೆ ಕಿಡಿಯನು ಹಚ್ಚುವ ನುಡಿಗಳು ಕೂತಿವೆ ಮನಸಿನೊಳು   ಬಂಜೆಯು ಎನುವರು ರಂಜನೆ ಅವರಿಗೆ ಗಂಜಿಯು ಸೇರದು ಗಂಟಲೊಳು ಅಂಜುತ ಕುಳಿತಿಹ ಪಂಜರ ಪಕ್ಷಿಗೆ ನಂಜನು ಉಣಿಸುವ ಕೃತ್ಯಗಳು   ತಂದಿಹ ಗಿಡಗಳ ಚೆಂದದಿ ನೆಡುವರು ಹೊಂದಲು ಪರಿಮಳ ಹೂಗಳನು ಚೆಂದದ ಹೂಗಳ ಹೊಂದದ ಗಿಡಗಳ ಮಂದಿಯು ಜರೆವುದು ತರವೇನು?   ಬಂಧುಗಳಾದರು ಕಂದನು ನೀಡರು ಕುಂದಿಹ ಬಂಜೆಯು ನಾನಂತೆ ಕಂದನ ಹಡೆಯದ ನೊಂದಿಹ ಮನವನು ಕೊಂದರು ಮಾತಲಿ ಇರಿವಂತೇ||   -…
ವಿಧ: ಕವನ
July 19, 2024
ಬೂಟು ಕೊಡಿಸಲು ಹೊರಟಿದ್ದನು  ತನ್ನ ಚಪ್ಪಲಿ ಸವರುತ್ತ ಎಳೆಯುತ್ತಿದ್ದ ಕಿತ್ತಿದ ಉಂಗುಟಕ್ಕೆ ಬಡಿದ ಮೊಳೆಗೆ ಬೆರಳಿಗಾದ ಗಾಯವ ಮರೆಯುತ್ತಾ...   ಸಮವಸ್ತ್ರ ಕೊಡಿಸಲು ಹೊರಟಿದ್ದನು ಮಂದಹಾಸ ಮುಖದಲ್ಲಿತ್ತು; ಸದ್ಯಕ್ಕೆ ಸಾವಿರ ತೂತಿನ ಒಳಾಂಗಿ ಮುಚ್ಚಿತ್ತು; ತೇಪೆ ಹಾಕಿದ ಬಿಳಿ ಘಮಲಿನ ಅಂಗಿ..!   ಪುಸ್ತಕಗಳ ಕೊಡಿಸಲು ಹೊರಟಿದ್ದನು ಮಸ್ತಕದಲಿ ಭವಿಷ್ಯದ ಕನಸ ಕಂಡು; ತನ್ನ ಬದುಕಿನ ಪುಟಗಳ ಬರೆಯಲಿಲ್ಲ, ಖಾಲಿ ಹಾಳೆಗೆ ದಿನ ದೂ(ದು)ಡಿದವನು..!   ಮಗನ ಕಾಣಲು ಶಾಲೆಗೆ ಹೊರಟಿದ್ದನು, ವಿಶ್ರಾಂತಿಗೆ…
ವಿಧ: ಕವನ
July 18, 2024
ನೀ ನಿಲ್ಲದ ಹರಿಯುವ ನೀರಿನಂತೆ.. ಬೇಡಿಕೆ ಇಟ್ಟು ನೋಡಿದರು ಇಡೇರದು ನಿನ್ನ ಬಗ್ಗೆ ಚಿಂತೆ.. ಖರೀದಿಸುವ ಎಂದರೆ ಸಿಗಲ್ಲ ನೀ ಯಾವುದೇ ಸಂತೆ.. ಪ್ರತಿ ಕ್ಷಣ ನೋಡುತ್ತಾ ಕುಳಿತರೆ ಸಾಗುವೆ ನೀ ಸಂಬಂಧ ಇಲ್ಲದಂತೆ.. ನೀ ಯಾಕೆ ಹೀಗಂತೆ...   ಖುಷಿಯ ಕ್ಷಣಕ್ಕೆ ನೀ ಇರಬೇಕು ಹೆಚ್ಚು ಘಳಿಗೆ ಎನ್ನುವ ಬಯಕೆ.. ದುಃಖದ ಕ್ಷಣಕ್ಕೆ ಬೇಗ ನೀ ಸಾಗಲಿ ಎನ್ನುವ ನಂಬಿಕೆ.. ಸಾಗುವ ಬದುಕಿನ ಹಾದಿಗೆ ತೋರಿಸುವ ಘಳಿಗೆಯ ಯಾಂತ್ರಿಕ..   ಹಿಡಿದು ಇಡಲು ಆಗದು ನಿನ್ನನ್ನು.. ಪಡೆದು ಸಾಲದು ನಿನ್ನ ತನವನ್ನು.. ನೋಡುತಾ…
ವಿಧ: ಕವನ
July 17, 2024
ಬದುಕೆಂಬ ಪುಟ್ಟ ನೆನಪಿನ ಪೆಟ್ಟಿಗೆಗೆ.. ಜೀವ ಎನ್ನುವ ಬದುಕಿನ ಛಾಯೆಗೆ.. ಪ್ರೀತಿಯ ಅಪ್ಪುಗೆಯ ಮಮತೆಯ ನೆನಪೊಂದಿಗೆ... ಬದುಕಿನ ಪ್ರತಿ ಘಳಿಗೆಗೆ ಕೈ ಹಿಡಿದು ಸಾಗಿಸಿದ "ಯಜಮಾನ "... ಬದುಕಿನ ಪಯಣದಲಿ ನೀ ನನ್ನ ಜೊತೆಗಾರನಾಗಿ... ನಾ ಸಾಗುವ ದಾರಿಗೆ ಬೆಳಕಿನ ದೀಪವಾಗಿ... ತಪ್ಪಿನ ಅರಿವಿಗೆ ನೀ ನನಗೆ ಗುರುವಾಗಿ... ಪ್ರೀತಿಯ ಮನೆಯ ಯಜಮಾನ ನಾಗಿ... ಹಗಲು ರಾತ್ರಿ ಶ್ರಮಿಸಿ ನಮ್ಮ ಬದುಕಿಗೆ ಸುಖಿಯಾಗಿ... ಕಷ್ಟವ ದೂರದಿ ಸರಿಸಿ, ಭಯದ ಅಂಜಿಕೆ ಹೋಗಲಾಡಿಸಿ... ಬದುಕೆಂಬ ನನ್ನ ಪುಟ್ಟ ಜೀವನಕ್ಕೆ…
ವಿಧ: ಕವನ
July 16, 2024
ಅಷ್ಟದಳ ಮನವನವು ಸವಿಯಿರಲು ಬೆಸುಗೆಯೊಳು ಹಿತವಿಹುದು ಕನಸಿನಲು ಸುಖವಿಹುದು ತಿಳಿಯೆಂದು ನೀ ಮನುಜ ಜನರೊಳಗಿನಾ ನಂಟು ಅಂಟಾಗದೇಯಿರಲು ನನಸೆಂದು ಹರುಷದಲಿ ನೋಡಿರೈ ತೇಲುವುದು ಕನಲಿಕೆಯ ಗುಣವದನು ಬಿಡುತಲೀ ಸಾಗಿದರೆ ಬನದೊಳಗಿನಾ ಹೂವ ರೀತಿಯಲಿ ಸುಖಬದುಕು ಹೊನಲದುವು ತುಂಬಿರಲು ಹರುಷವದು ತೇಲುವುದು ಜನಮನಕೆ ಸವಿಬೆಳಕು --- ಛಲವಾದಿಯೆ|| *** ಸವಿಯೊಲುಮೆ ಚೆಲುವಿನಲಿ ಗೆಲುವಿಹುದು ತಿಳಿಯುತಲೆ ಬದುಕಿನಲಿ ಛಲಬಿಡದೆ ಸಾಗುತಿರು ಸೌಖ್ಯದೊಳು ಬಾಳಿನಲಿ ಬಲವಿಹುದು ಗೆಳೆತನದಿ ಚಿರಕಾಲ ಸವಿಯಿರಲು…
ವಿಧ: ಕವನ
July 15, 2024
ಕಗ್ಗತ್ತಲ ಕಾರ್ಮೋಡ ನಡು ಹಗಲಿಗೆ ಹಾಸಿ  ತಿಳಿಯಾದ ತಂಗಾಳಿ ಎದೆಯಂಚಿಗೆ ಬೀಸಿ  ಒಡಲೊಡಲ ಬೆಮರಮಳೆ ಮೆದುವಾಗಿ ಮಾಸಿ  ಬರುತಿಹುದು ಅಬ್ಬರಿಸಿ ಮುಂಗಾರ ರಾಶಿ...   ಮುನಿಯದ ನಭದಲ್ಲಿ ಕೋಲ್ಮಿಂಚ ಹಾಯಿಸಿ  ನಡುನೆತ್ತಿಯ ಪೇಟವನು ಬಿಡುವಿಲ್ಲದೆ ತೋಯಿಸಿ  ರೈತನೆದೆ ಬಾಂಧಳದಿ ಮುಗುಳುನಗೆ ಮೂಡಿಸಿ  ಬರುತಿಹುದು ಅಬ್ಬರಿಸಿ ಮುಂಗಾರ ರಾಶಿ...   ವೈಶಾಖ ಧಗೆಯೊಳಗೆ ಬಸವಳಿದ ದಿನಗಳಿವೆ  ಹನಿಹನಿಯು ಅಮೃತವೇ ಹೇಳುವ ಮನಗಳಿವೆ  ಮೋಡವನು ಬಿತ್ತುವ ಕರ್ಮವು ಎದುರಿರಲು  ಬರುತಿಹುದು ಅಬ್ಬರಿಸಿ ಮುಂಗಾರ ರಾಶಿ…
ವಿಧ: ಕವನ
July 14, 2024
ಬೆಂಕಿಯಂತೆ ಉಗುಳುವುದೇ ಸಾಹಿತ್ಯವಲ್ಲ ಬೆಂಕಿಯಲ್ಲೇ ಇರುವವರನ್ನು ಮತ್ತೆ ಅರಳುವಂತೆ ಮಾಡುವುದೇ ನಿಜವಾದ ಸಾಹಿತ್ಯದ ಕೆಲಸವಾಗಬೇಕು !   ಮಾತು ಉದುರಿ ಮುತ್ತಾಗಬೇಕು ನಿಜ ಹೊಲಸಾಗದೆ !  *** ಮುಳುಗಿರುವ  ಸೂರ್ಯ, ಉರಿದುರಿದು ಕಣ್ಮುಚ್ಚಿದಜ್ಜ !  *** ಒಬ್ಬ ನೆಟ್ಟಾಗ ಇನ್ನೊಬ್ಬ ಕಡಿಯುತ್ತಾ ಹೋಗುತ್ತಾನೆ ! *** ಮನುಷ್ಯ ಹೀಗೆ ಹೇಗೆಂದರೆ ಸತ್ತಾಗ ಸ್ಮಶಾನ ವಾಸಿ ! *** ಸತ್ಯ ಸತ್ತಿತೆ ಜಗತ್ತಿನ್ನೆಲ್ಲೆಡೆಗೂ ಮಿಥ್ಯೆ ಮೆತ್ತಿದೆ ! *** ಮುಖವಾಡದ ಮಗದೊಂದು ಹೆಸರೇ ನರ ಸತ್ತವ ! *** ಪತಿಯ ಒಂದು …
ವಿಧ: ಕವನ
July 13, 2024
ಗೆದ್ದಾಗ-ಸೋತಾಗ  ಗೆದ್ದಾಗ ಎಲ್ಲರೂ ನಮ್ಮ ಸುತ್ತ ಸೇರಿ ಜೈಕಾರ ಹಾಕಿ ಮಾಡುವರು ದುಂದು...   ಸೋತಾಗ ಬಂದು ನಮ್ಮ ಕಣ್ಣೊರೆಸುವವರೇ ನಿಜವಾದ ಬಂಧು! *** ಸಮಾಧಾನ  ಆಯ್ಕೆಯಾದ ಇನ್ನೂರೈವತ್ತೊಂದು ಸಂಸದರು ಕ್ರಿಮಿ-ನಲ್ ಅಪರಾಧದ ಹಿನ್ನೆಲೆ...   ಸಮಾಧಾನ ಬಿಡಿ; ಇನ್ನೂ ಇದೆಯಲ್ಲಾ ಇನ್ನೂರಾತೊಂಭತ್ತೆರೆಡು ಸೀಟುಗಳಲ್ಲಿ ಸಭ್ಯಸ್ಥರ ಮುನ್ನೆಲೆ! *** ಚುನಾವಣಾ ಭವಿಷ್ಯ ತಲೆ ಕೆಳಗಾದ ಚುನಾವಣಾ ಸಮೀಕ್ಷೆ- ಚುನಾವಣಾ ತಂತ್ರಗಾರ ಪ್ರಶಾಂತ್ ತಪ್ಪೊಪ್ಪಿಗೆ...   ಅದಕ್ಕೇ- ನಮ್ಮಟಿವಿ ಢೋಂಗೀ…
ವಿಧ: ಕವನ
July 12, 2024
ಸುತ್ತ ದನುಜೆಯರಿರಲು ಕಾವಲು ಚಿತ್ತ ಸೀತೆಯ ನೋವ ಬಲೆಯೊಳು ಚಿತ್ತದೊಲ್ಲಭನೆಂದು ಬರುವನು ತನ್ನ ಪತಿರಾಯ ಇತ್ತ ಬಂದಿಹ ಸದ್ದನಾಲಿಸಿ ಕತ್ತು ಹೊರಳಿಸಿ ನೋಡೆ ಜಾನಕಿ ಬಿತ್ತು ಕಣ್ಣಿಗೆ ಸನಿಹ ವಂದಿಸಿ ನಿಂತ ಕಪಿವರ್ಯ   ದನುಜರಾಡುವ ಕಪಟ ನಾಟಕ- -ವೆನುತ ರೋಷದಿ ಮಾತೆ ಸೀತೆಯು ಕನಲಿ ಜರೆದಳು ತೊಲಗು ನಿಲ್ಲದೆ ನೀನು ನನ್ನಿದಿರು ಹನುಮ ನಿಂತನು ನಮಿಸಿ ಪುನರಪಿ ವಿನಯದಿಂದಲೆ ನುಡಿದ ಮಾತೆಗೆ ಮನದ ಶಂಕೆಯ ತೊರೆದು ದಯೆಯನು ತಾಯೆ ನೀ ತೋರು   ಕರೆದು ನನ್ನನು ರಾಮ ನುಡಿದನು ಶರಧಿ ಲಂಘಿಸಿ ಲಂಕೆ ಸೇರಲು ಕರವ…