ಕವನಗಳು

ವಿಧ: ಕವನ
July 11, 2024
ಕಣಿಪುರೇಶನ ಪರಮಪಾವನ ಪುಣ್ಯ ನಾಡಿದು ಕಣಿಪುರ ಭೂಮಿತಾಯಿಗೆ ಹಸಿರಿನುಡುಗೆಯ ತೊಡಿಸಿದಂತಹ ಪರಿಸರ   ಯಕ್ಷಗಾನಕೆ ಮುತ್ತು ರತ್ನದ ಗಢಣ ನೀಡಿದ ನಾಡಿದು ಜನರ ಮನದಲಿ ಅಚ್ಚು ಒತ್ತಿದ ಯಕ್ಷಪ್ರೇಮದ ಊರಿದು   ಹಾವಭಾವದ ನಟನೆ,ಮಾತಿನ ಪ್ರತಿಭೆ ತುಂಬಿದ ಸಾಗರ ಯಕ್ಷಪ್ರೇಮಿಗಳೆದೆಯ ಸೇರಿದ ಹೆಸರು ಅವರದು ಶ್ರೀಧರ   ಯಕ್ಷರಂಗದಿ ಹಲವು ಪಾತ್ರವ ಮಾಡಿ ಮಿಂಚಿದ ಚೇತನ ಯಕ್ಷಗಾನಕೆ ತಮ್ಮನರ್ಪಿಸಿ ಮುಡಿಪನಿರಿಸಿದ ಜೀವನ   ಅವರ ಕೀರ್ತಿಯು ಬಾನಿನೆತ್ತರ ಬಾನು ಸೇರುವ ತವಕದೆ ಇಹವ ತ್ಯಜಿಸುತ ಅಗಲಿ ನಮ್ಮನು…
ವಿಧ: ಕವನ
July 10, 2024
ಆಸ್ತಿ -- ಅಸ್ಥಿ ಎಲ್ಲರೂ ಕನ್ನಡದ ಆಸ್ತಿ ಅದಕ್ಕೆಂದು ತೋರುತ್ತದೆ ಬೆಳಗಾಂ ಮಹಾರಾಷ್ಟ್ರಕ್ಕೆ ಕಾಸರಗೋಡು ಕೇರಳಕ್ಕೆ ನಡುವೆ ಉಳಿದಿರುವ  ಕನ್ನಡದ ಸ್ಥಿತಿ ಎನ್ನಡಾ * ಸ್ವಾ-- ಹಿತ ಬಹುಜನರ ಸ್ವಾ ಹಿತಕ್ಕೆ ಬಲಿಯಾಯ್ತೆ ಸ್ವಾತಂತ್ರ್ಯ  ಸಿರಿವಂತಗೆ ಮಾತ್ರ ಇಹುದೆ ಸ್ವಾತಂತ್ರ್ಯ  ಬಡತನದ  ಲೋಕದೊಳು ಬಾಳುವುದೇ ಸ್ವಾತಂತ್ರ್ಯ ಈ ಮಣ್ಣ ನೆಲದೊಳು ಇಹುದೆ ಸ್ವಾತಂತ್ರ್ಯ * ಕೊಂದವರು ಆನೆ ಕೊಂದವರು ನಾವು ಎಂದವರು ಯಾರೊ ಕೊಂದವನು ಎಲ್ಲಿಹನೊ ಎಂದನೊಬ್ಬ ಹಾಗಾದರೆ ಹೇಗೆನುತ ಆನೆಯನ್ನೇ ಕೇಳೋಣವೆಂದರೆ ಆನೆ…
ವಿಧ: ಕವನ
July 09, 2024
ನಿಜವಾದ ಸುಖ  ಈ ಜಗತ್ತಿನಲ್ಲಿ ಉಂಡು ಉಟ್ಟು ಕೂಡಿ  ನಲಿದದ್ದೇ ನಿಜವಾದ ಸುಖ...   ಉಳಿದೆಲ್ಲಾ ಆಸ್ತಿ-ಅಂತಸ್ತು ಅಧಿಕಾರ ಜನಪ್ರಿಯತೆ- ನಮ್ಮನ್ನು ಕಾಡುವ ಮಿಕ! *** ಗೂಡು-ಮಾಡು  ಪ್ರತಿಯೊಂದೂ ಹಕ್ಕಿಗಳು ಕಟ್ಟುತ್ತವೆ ತಮ್ಮ ಮರಿಗಳಿಗೆ ಗೂಡು...   ಇದು  ಸ್ವಾರ್ಥವಲ್ಲ ಗೆಳೆಯಾ ಅವುಗಳ ಕರ್ತವ್ಯದ ಮಾಡು! *** ಮರೀಚಿಕೆ  ಹಣ- ಎಂದೂ ಅಳೆಯಲಾಗದು ನಮ್ಮ ಮೌಲ್ಯ ಹಾಗೂ ಸ್ಥಾನಮಾನ....   ಅದು ಎಂದಿದ್ದರೂ ಅಪ್ಪಟ ಮರಳುಗಾಡಿನ ಮರೀಚಿಕೆಯೊಲು ಭ್ರಮಾಧೀನ! *** ಕಳ್ಳ ಬೆಕ್ಕು  ಈ ರಾಜಕಾರಣಿಗಳು ಕಳ್ಳ…
ವಿಧ: ಕವನ
July 08, 2024
೧. ಒಲವಿರುವ ಮಾತುಗಳ ಗೆಲುವಿಂದ ತಿಳಿಸಿದೆ  ಚೆಲುವಿರುವ ಹೃದಯಕ್ಕೆ ಮನದಿಂದ ತಿಳಿಸಿದೆ   ತನುವಿನಾಳದೊಳು ನೆನಪುಗಳು ಇರುವುದೇಕೆ ತೊಟ್ಟಿಕ್ಕುತಲೆ ಪ್ರೀತಿಸುವ ಹನಿಯಿಂದ ತಿಳಿಸಿದೆ   ಪ್ರೇಮದ ಮಂದಿರಕ್ಕೆ ಅಡಿಯಾಳು ಬೇಡವೇನು ನಲುಮೆಯು ಮೂಡುತ್ತ  ಸವಿಯಿಂದ ತಿಳಿಸಿದೆ   ಶಯನಗೃಹ ಒದ್ದಾಡುವುದನು ಕಂಡು ಮರುಗಿದೆ ಮೆತ್ತಗಿರುವಂತ ತನುವಿಗಿಂದು ಕನಸಿಂದ ತಿಳಿಸಿದೆ   ನೋವು ಮಾಯುವ ಮುನ್ನವೆ ಬರುವನೇ ಈಶಾ ಸುರಿವಂತಹ ಮದುವಿಗಿಂದು ತನುವಿಂದ ತಿಳಿಸಿದೆ *** ೨. ಯಾವತ್ತೂ ನಿನ್ನ ನೆನಪು ಜೊತೆಯಾಗುತಿದೆ…
ವಿಧ: ಕವನ
July 07, 2024
ಇಂದೀಗ ಕಣ್ತುಂಬಿಕೊಳ್ಳುವಾ ವಿಶ್ವ ವಿಖ್ಯಾತ ಜೋಗಾ ಜಲಪಾತವಾ ||ಪ||   ಮಳೆಯೀಗ ಸೊಗಸಾಗಿ ಸುರಿದಿದೆ ನಾಡ ಬರಗಾಲ ಸಂಕಟ ಕಳೆದಿದೆ ಮೈಯೆಲ್ಲ ಹಸಿರುಟ್ಟು ಭೂರಮೆ ಪದವು ಸಿಗದೀಗ ಮಾಡಲು ಬಣ್ಣನೆ   ಮೈತುಂಬಿ ಹರಿದ ಶರಾವತಿ ಚೆಲುವ ಮಲೆನಾಡ ಸೆರಗಿನ ಐಸಿರೀ ಜಲಪಾತ ಸೆಳೆವುದು ಮೈಮನ ಇದನು ಕಣ್ತುಂಬಿಕೊಳ್ಳುವ ಈದಿನ   ಕವಲಾಗಿ ಹಾಲ್ನೊರೆ ಗೋಚರ ಕೆಳಗೆ ಧುಮ್ಮಕ್ಕುತಿರುವುದು ಈತರ ಮನದೊಳಗೆ ತುಂಬಿರಲು ಬೇಸರ ಮರೆಸಿ ಉತ್ಸಾಹ ತುಂಬುವ ಪರಿಸರ   ಪರನಾಡಿನಿಂದಲು ಬರುವರು ನೋಡಿ ಸಂತೋಷದಿಂದವರು ನಡೆವರು…
ವಿಧ: ಕವನ
July 06, 2024
ಉಪ್ಪಿನ ಅಳೆತೆಯು ತಪ್ಪಿದೆ ಖಾದ್ಯಕೆ ಸಪ್ಪೆಯೆ ಎನಿಸುವ ಸಾಂಬಾರು ತಪ್ಪನು ನೆನೆಯದೆ ಒಪ್ಪದಿ ಉಣ್ಣಲು ಹಪ್ಪಳ ಸಂಡಿಗೆ ಹುರುದುಬಿಡು   ಉಪ್ಪಿನ ಕಾಯಿಯೊ ಸೊಪ್ಪಿನ ಸಾರಲಿ ಒಪ್ಪದು ಮನವಿದು ಉಣ್ಣಲಿಕೆ ತುಪ್ಪವ ಸುರಿದರೆ ಸಪ್ಪೆಯು ಕಳೆವುದೆ ಚಪ್ಪರಿಸುಣ್ಣಲು ಬೇಕದಕೆ   ಸುರಿಯುವ ಮಳೆಯಿದೆ ಹೊರಗಡೆ ಹೋಗದೆ ಕಿರಿಕಿರಿಯಾಗಿದೆ ಮನದೊಳಗೆ ಗರಿಗರಿಯಾಗಿಹ ಕರಿದಿಹ ತಿಂಡಿಯ ಮುರಿಯುತ ತಿನ್ನುವ ಮನವಿಹುದೆ   ಅಕ್ಕರೆಯಿಂದಲಿ ಸಕ್ಕರೆ ಬೆರೆಸಿದ ಚೊಕ್ಕದ ಪಾಯಸ ನೀ ಮಾಡು ಮಿಕ್ಕಿದೆಯಾದರೆ ಇಕ್ಕುವುದಿರುಳಿಗೆ…
ವಿಧ: ಕವನ
July 05, 2024
ಅರಳಿದ ಹೂವಿನ ನಡುವಲಿ ಕುಳಿತಿದೆ ಏನಿದು ಬೇಗನೆ ಹೇಳಮ್ಮ ಹೂವಿನ ಒಳಗಿನ ಹಳದಿಯ ಭಾಗವ ತಿನ್ನುತಲಿರುವುದು ನೋಡಮ್ಮ   ಹೂಗಳ ನಡುವಲಿ ಕಾಣುತಲಿರುವುದು ಜೇನನು ಹೊಂದಿದ ಮಕರಂದ ಜೇನಿನ ನೊಣವದು ಶೇಖರಿಸಿಡುವುದು ಸಂಗ್ರಹಕಿಳಿದಿದೆ ಹೂವಿಂದ   ಚಂದದ ಹೂವನು ಕೆಡಿಸದೆ ಈ ನೊಣ ಏನಿದೆ ಲಾಭವು ಅದರಿಂದ? ಬಾರದ ಹಾಗೆಯೆ ಮಾಡಲಿಕಾಗದೆ ರಕ್ಷಿಸು ಸುಮಗಳ ನೊಣದಿಂದ   ಅನುದಿನ ಜೇನನು ಬೇಡುತ ಸವಿಯುವೆ ನಮಗದು ಸಿಗುವುದು ಇದರಿಂದ ಫಲಗಳು ದೊರೆಯಲು ಇವುಗಳ ಶ್ರಮವಿದೆ ಶಂಕೆಯ ಕಳೆವುದು ಮನದಿಂದ|| (ಕಂದನ ಪ್ರಶ್ನೆ,…
ವಿಧ: ಕವನ
July 04, 2024
ಬೂಟು ಕೊಡಿಸಲು ಹೊರಟಿದ್ದನು  ತನ್ನ ಚಪ್ಪಲಿ ಸವರುತ್ತ ಎಳೆಯುತ್ತಿದ್ದ ಕಿತ್ತಿದ ಉಂಗುಟಕ್ಕೆ ಬಡಿದ ಮೊಳೆಗೆ ಬೆರಳಿಗಾದ ಗಾಯವ ಮರೆಯುತ್ತಾ...   ಸಮವಸ್ತ್ರ ಕೊಡಿಸಲು ಹೊರಟಿದ್ದನು ಮಂದಹಾಸ ಮುಖದಲ್ಲಿತ್ತು; ಸದ್ಯಕ್ಕೆ ಸಾವಿರ ತೂತಿನ ಒಳಾಂಗಿ ಮುಚ್ಚಿತ್ತು; ತೇಪೆ ಹಾಕಿದ ಬಿಳಿ ಘಮಲಿನ ಅಂಗಿ..!   ಪುಸ್ತಕಗಳ ಕೊಡಿಸಲು ಹೊರಟಿದ್ದನು ಮಸ್ತಕದಲಿ ಭವಿಷ್ಯದ ಕನಸ ಕಂಡು; ತನ್ನ ಬದುಕಿನ ಪುಟಗಳ ಬರೆಯಲಿಲ್ಲ, ಖಾಲಿ ಹಾಳೆಗೆ ದಿನ ದೂ(ದು)ಡಿದವನು..!   ಮಗನ ಕಾಣಲು ಶಾಲೆಗೆ ಹೊರಟಿದ್ದನು, ವಿಶ್ರಾಂತಿಗೆ…
ವಿಧ: ಕವನ
July 03, 2024
೧. ಸ್ವತಂತ್ರ ನಾಡಿನ ಶ್ರೇಣಿಗಳೊಳಗೆ ಪುಣ್ಯ ಪುರುಷರ ಬೀಡುಗಳು ಕ್ಷಾತ್ರ ಕಲೆಗಳ ನಾಡುಗಳೊಳಗೆ ಪುಣ್ಯ ಪುರುಷರ ಬೀಡುಗಳು   ಶೂರರು ಮೆರೆದಿಹ ನೆಲ ಇದುವು ಕವಿಗಳು ಜನಿಸಿದ ನೆಲೆಯಿದುವು ಸೊಬಗಿನ ಸುಂದರ ಕೋಡುಗಳೊಳಗೆ ಪುಣ್ಯ ಪುರುಷರ ಬೀಡುಗಳು   ವಿಶ್ವದ ಮಾನ್ಯತೆ ತಾಣದ ಜೊತೆಗೆ ಮನ್ನಣೆ ಪಡೆದಿಹ ಜೀವನ ಫಲವು ಪ್ರೇಮವು ತುಂಬಿದ ಭಾವನೆಯೊಳಗೆ ಪುಣ್ಯ ಪುರುಷರ ಬೀಡುಗಳು   ಭಾರತ ಮಾತೆಯ ಒಲವಿನ ಮೈಯೊಳು ನಲಿವಿನ ನದಿಗಳ ಕಾಯವಿದು ಮುಂದಿನ ಜನತೆಯ ಸ್ಪೂರ್ತಿಗಳೊಳಗೆ ಪುಣ್ಯ ಪುರುಷರ ಬೀಡುಗಳು   ಈಶನ…
ವಿಧ: ಕವನ
July 02, 2024
ಮೂಡಣ ತೆಂಕಣ ಗಾಳಿಯು ಬೀಸಿತು ಹೋ ಹೋ ಗಾಳಿಯೊ ಮರವದು ಬಾಗಿತು   ಸೊಂಯ್ ಸೊಂಯ್ ಶಬ್ದವು ಸುತ್ತಲು ಕೇಳಿತು ಹೋಯ್ ಹೋಯ್ ಜನರ ಕೂಗದು ಮೊರೆಯಿತು   ದನವದು ಉಂಮ್ಮಾ ಎನ್ನುತ ಓಡಿತು ಕರುವದು ಹಿಂದೆಯೆ ಉಂಬೇ ಎಂದಿತು   ಗಿಡವದು ಬಾಗಲು ಎಲೆಯದು ಉದುರಿತು ಮಾಡಿನ ಹುಲ್ಲದು ದೂರಕೆ ನೆಗೆಯಿತು   ಮಕ್ಕಳ ಮನದಲಿ ಭಯವದು ಕಂಡಿತು ಬೆಕ್ಕದು ಮನೆಯ ಒಳಗಡೆ ಅವಿತಿತು   ರೈತನ ಜೊತೆಗೆ ಎತ್ತದು ಬೆದರಿತು ದೂರಕೆ ದೂರಕೆ ಹೆಜ್ಜೆಯ ಹಾಕಿತು   ಎಂತಹ ಗಾಳಿಯೊ ಕೇಕೆಯ ಹಾಕಿತು ಮೋಡವು ಮುಸುಕಲು ಮಳೆಯದು ಬಂದಿತು -ಹಾ…