ಒಂದಿಷ್ಟು ಹನಿಗಳು...
ಗೆದ್ದಾಗ-ಸೋತಾಗ
ಗೆದ್ದಾಗ ಎಲ್ಲರೂ
ನಮ್ಮ ಸುತ್ತ
ಸೇರಿ
ಜೈಕಾರ ಹಾಕಿ
ಮಾಡುವರು
ದುಂದು...
ಸೋತಾಗ
ಬಂದು
ನಮ್ಮ
ಕಣ್ಣೊರೆಸುವವರೇ
ನಿಜವಾದ
ಬಂಧು!
***
ಸಮಾಧಾನ
ಆಯ್ಕೆಯಾದ
ಇನ್ನೂರೈವತ್ತೊಂದು
ಸಂಸದರು
ಕ್ರಿಮಿ-ನಲ್
ಅಪರಾಧದ
ಹಿನ್ನೆಲೆ...
ಸಮಾಧಾನ ಬಿಡಿ;
ಇನ್ನೂ ಇದೆಯಲ್ಲಾ
ಇನ್ನೂರಾತೊಂಭತ್ತೆರೆಡು
ಸೀಟುಗಳಲ್ಲಿ
ಸಭ್ಯಸ್ಥರ
ಮುನ್ನೆಲೆ!
***
ಚುನಾವಣಾ ಭವಿಷ್ಯ
ತಲೆ ಕೆಳಗಾದ
ಚುನಾವಣಾ
ಸಮೀಕ್ಷೆ-
ಚುನಾವಣಾ
ತಂತ್ರಗಾರ ಪ್ರಶಾಂತ್
ತಪ್ಪೊಪ್ಪಿಗೆ...
ಅದಕ್ಕೇ-
ನಮ್ಮಟಿವಿ
ಢೋಂಗೀ
ಭವಿಷ್ಯಕಾರರೆಲ್ಲಾ
ಮರೆಯಾಗಿದ್ದರು
ಹೊರಗೆ!
***
ಎಚ್ಚರಾ
ಧರ್ಮವನ್ನು
ವ್ಯಾಪಾರ
ಮಾಡಿಕೊಂಡು
ಅಕ್ರಮವಾಗಿ
ಗಳಿಸುತಿರುವ
ದುಷ್ಟರಾ...
ಕೊನೆಯಲ್ಲಿ
ಆ ಧರ್ಮವೇ
ನಿಮ್ಮನ್ನು
ತುಳಿದು
ಮುಗಿಸುವುದು
ಎಚ್ಚರಾ!
***
ಇತಿಹಾಸ ವೀರ
ನಮ್ಮದು
ನಿಮ್ಮದು
ಅವರ
ಸಾಧನೆಗಳೆನಿತೋ
ನೋಡಿಹನು
ಭಾನು...
ಆ ಇತಿಹಾಸ
ವೀರನ
ಮುಂದೆ
ಎಲ್ಲರದೂ
ತೃಣ
ಮಾತ್ರವೇನು?
***
ಡೈವೋರ್ಸ್
ಯಾವ
ಪ್ರತಿಷ್ಠೆಯ
ಮೋಹ
ಒಡೆಯಿತೋ
ನಿಮ್ಮ ಸಂಸಾರದ
ಕೋಟೆಯಾ...
ಎಲ್ಲಾ
ಕೋಟೆಗಳೂ
ಕಟ್ಟಿರುವುದು
ಕಲ್ಲಿನಿಂದಲೆ
ಎಂಬುದನು
ನೀನರಿಯೆಯಾ?
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
