ಕವನಗಳು

ವಿಧ: ಕವನ
May 16, 2024
ಸೀತಾ ಮಾತೆಯನರಸುವ ಹೊಣೆಯನು ಮಾರುತಿ ಹೊಂದಿದ ತರುವಾಯ ಶರಧಿಯ ದಾಟುತ ಸೇರಿದ ಹನುಮನು ಲಂಕೆಯ ರಾವಣನರಮನೆಯ   ದನುಜನ ಬಂಧನದಲ್ಲಿಹ ಮಾತೆಯ ಕಂಡನು ಅಶೋಕ ವನದಲ್ಲಿ ಮುದ್ರೆಯ ಉಂಗುರ ತೋರಿಸಿ ರಾಮನ ನುಡಿಯನು ಅರುಹಿದ ಮಾತೆಯಲಿ   ಮರಗಳನೇರುತ ಹಣ್ಣನು ತಿಂದನು ಉದರದ ಹಸಿವನು ಕಳೆವಂತೆ ಲಂಕೆಯ ವನಗಳ ಕೆಡಿಸಿದ ರೋಷದಿ ತನ್ನಯ ಮನಸಿಗೆ ಬಂದಂತೆ   ರಾವಣ ಕುವರನು ಬಂಧಿಸಿ ಹನುಮನ ಬಾಲಕೆ ಬೆಂಕಿಯ ಹಚ್ಚಿದನು ಬಾಲದ ಬೆಂಕಿಯ ಬಳಸುತ ಮಾರುತಿ ಸುಟ್ಟನು ದನುಜರ ಲಂಕೆಯನು||   -ಪೆರ್ಮುಖ ಸುಬ್ರಹ್ಮಣ್ಯ ಭಟ್ …
ವಿಧ: ಕವನ
May 15, 2024
ನೀಲಿಯ ಸಾಗರದಲೆಗಳ ಭೇದಿಸಿ ಸೋಲದೆ ಸಾಗಿದೆ ನೌಕೆ ಬಾಲೆಯ ಜೊತೆಯಲಿ ಕುಳಿತಿಹ ಪಯಣಿಗ ಸಾಲದು ಎನಿಸಿದ ಬಯಕೆ   ತರುಣಿಗೆ ತಂದಿದೆ ತುಂಬಿದ ಸಂತಸ ಕಿರುನಗೆ ಮೊಗದಲಿ ಹೊಮ್ಮಿ ಕರದಲಿ ಬಂಧಿಸಿ ಕುಳಿತಿಹ ಪ್ರಿಯತಮ ಸರಸದ ಬಯಕೆಯು ಚಿಮ್ಮಿ   ಸಾಗರದಾಚೆಯ ದಡವನು ಸೇರಲು ವೇಗದಿ ಸಾಗುವುದಾಸೆ ಹೇಗದ ಪೇಳಲಿ ನಾವಿಕನರಿಯನು ಬೇಗುದಿಯರುಹುವ ಭಾಷೆ   ಬಿರಿದಿಹ ಹೂವಿನ ಕರೆಯನು ಆಲಿಸಿ ಬರುವುದು ಸನಿಹಕೆ ಭೃಂಗ ಬೆರೆತಿಹ ಮನಗಳ ಬೆರಗಿನ ಜೋಡಿಗೆ ದೊರೆಯಿತೆ ಸರಸಕೆ ರಂಗ|| -ಪೆರ್ಮುಖ ಸುಬ್ರಹ್ಮಣ್ಯ ಭಟ್ 
ವಿಧ: ಕವನ
May 14, 2024
೧. ಹೊನಲು ಬೆಳಕಿನ ನಡುವೆ ನಾನಿರುವೆ ಗೆಳತಿ ಕನಸು ನನಸಿನ ಬಿಡದೆ ಕಾದಿರುವೆ ಗೆಳತಿ   ಬನವು ಹಸಿರಿನ ಹೊದೆಯೆ ಜಾರುವೆಯ ಏಕೆ ಗುಣಕು ಚೆಲುವಿನ ಕಹಳೆ ಊದಿರುವೆ ಗೆಳತಿ   ತನುವು ಒಲವಿನ ಮನೆಯೆ ಆಗಿದೆಯ ಹೇಗೆ ಹಲವು ಒಡಲಿನ ಒಳಗೆ ಸಾಗಿರುವೆ ಗೆಳತಿ   ಮರೆವು ಹುರುಪಿನ ಬಣಕೆ ತಾಗಿದೆಯ ಹೀಗೆ ಸಿಡುಕು ಮನಸಿನ ಹೊದಿಕೆ ತೆಗೆದಿರುವೆ ಗೆಳತಿ   ಇರಲು ಕಡಲಿನ ಅಲೆಗೆ ಹೋಗದೆಯೆ ಈಶ ಛಲವು ಗೆಲುವಿನ ಬಳಿಯೆ ನಿಂತಿರುವೆ ಗೆಳತಿ *** ೨. ಜಾತಿಗೆ ಜಾತಿ ಪಗೆ ನಾವು ಬರೆದದ್ದೇ ಗಝಲ್ ನೀತಿ ನಿಯಮವೇ ಬೇಡ…
ವಿಧ: ಕವನ
May 13, 2024
ಚಾಣಾಕ್ಷರು  ರಾಜಕೀಯದಲಿ ಯಾರೂ ಸದಾ ಪರಮ ಶತ್ರುಗಳಲ್ಲ; ಯಾವಾಗ ಬೇಕಾದರೂ ಹೆಗಲ ಮಿತ್ರ....   ಇದ ಪ್ರಾಕ್ಟಿಕಲ್ ಆಗಿ ತೋರಿಸಿದವರೇ ಗೌಡ್ರ ಕುಟುಂಬ- ಇದು ಅವರ ಪರಮ ಚಾಣಾಕ್ಷ ರಾಜಕೀಯ ತಂತ್ರ! *** ಸಿದ್ಧಾಂತ  ಸಿದ್ಧಾಂತವಿಲ್ಲದ ಜೀವನ; ರಾಜಕೀಯ ಬಹಳಕಾಲ ಇರದು ಗೆಳೆಯಾ...   ಇದರಿಂದ ಯಾರೂ ಗಳಿಸಲಾರರು ಸತ್ವ ಭರಿತ ಸಮಾಜದ ಬೆಳೆಯಾ! *** ಸುಳ್ಳಿನ ನಾಯಕರು  ಲೋಕಸಭಾ ಅಭ್ಯರ್ಥಿಗಳಿಗೆ ಕೋಟಿ ಕೋಟಿ ಇದ್ದರೂ ಕಾರಿಲ್ಲಾ ಮನೆಯಿಲ್ಲಾ....   ಸತ್ಯದ ಮಾಲಿಕ ನೀವಲ್ಲಾ ನೀವಲ್ಲಾ... ಮಹಾ ಸುಳ್ಳಿನ …
ವಿಧ: ಕವನ
May 12, 2024
ಚೈತ್ರದ ಶುಕ್ಲದ ನವಮಿಯ ದಿನದಲಿ ಬುವಿಯಲಿ ರಾಮನ ಅವತಾರ ದುಷ್ಟರ ಶಿಕ್ಷಿಸಿ ಶಿಷ್ಟರ ಪೊರೆಯಲು ಮಾಡಿದ ದನುಜರ ಸಂಹಾರ   ರಾಮನ ನೊಸಲಿಗೆ ಚಂದದ ತಿಲಕವ ಇರಿಸಿದೆ ಸೂರ್ಯನ ಹೊಂಗಿರಣ ಎಂತಹ ಸುಂದರ ಕ್ಷಣವಿದು ಎನಿಸಿದೆ ಧನ್ಯತೆ ಪಡೆಯಿತು ಈ ನಯನ   ಪೃಥ್ವಿಯ ಒಡೆಯನ ಸುಂದರ ನಗುಮೊಗ  ಜಾನಕಿ ರಮಣನ ಸೌಂದರ್ಯ ಭಕ್ತರ ರಸನದಿ ರಾಮನ ನಾಮವು ಕೇಳಲು ಎಂತಹ ಮಾಧುರ್ಯ   ಹೃದಯದ ಗುಡಿಯಲಿ ಭಕ್ತಿಯ ಪೂಜೆಯ ನಡೆಸುತಲಿರುವನು ಹನುಮಂತ ಮಾತೆಯನರಸಲು ಶರಧಿಯ ದಾಟಿದ ಸಾಟಿಯು ಇಲ್ಲದ ಧೀಮಂತ|| -ಪೆರ್ಮುಖ ಸುಬ್ರಹ್ಮಣ್ಯ…
ವಿಧ: ಕವನ
May 11, 2024
ತನಗೆ ತಾನೇ ಸಿಂಗರಿಸಿಕೊಳ್ಳುತಿಹ ಜಾಣೆ ಒಂದಿಷ್ಟು ವ್ಯತ್ಯಾಸ ಸಹಿಸುವುದ ಕಾಣೆ||ಪ||   ನಯನಕಿಟ್ಟಳು ಕಪ್ಪು ತುಟಿಗೆ ಲೇಪಿಸಿ ಕೆಂಪು ಸರಿಸಾಟಿ ತನಗಿಲ್ಲ ಎಂಬ ನಿಲುವು   ಕೆನ್ನೆಗಂಟಿದ ಬಣ್ಣ ಉಡುಪಿಗೊಪ್ಪುವ ವರ್ಣ ದರ್ಪಣದೆ ಪ್ರತಿಬಿಂಬ ಸೆಳೆದು ಕಣ್ಣು   ಎಲ್ಲ ಮುಗಿಸಿದ ವನಿತೆ ಉಳಿದುಕೊಂಡಿದೆ ಕೊರತೆ ಅರಸಿ ನೋಡುವ ಛಲದಿ ಆಕೆ ನಿರತೆ   ಬೆಳ್ಳಗಾಗಿದೆ ಹೆರಳು ಸುಕ್ಕುಗಟ್ಟಿದೆ ಕೊರಳು ಕೆನ್ನೆ ಚುಂಬಿಸಲಿಲ್ಲ ಮುಂಗುರುಳು   ಏನು ಮಾಡಿದರೇನು ಹರೆಯ ನಿಲ್ಲುವುದೇನು ತೃಪ್ತಿ ಪಟ್ಟಳು ಮನದೆ ತನಗೆ…
ವಿಧ: ಕವನ
May 10, 2024
ಗುಡಿಯ ಸೇರದ ಹೂವು ಮುಡಿಯಲಾಗದ ಸುಮವು ಗಿಡದಲರಳದೆ ಬರಿದೆ ನಗುವ ಹೂವು   ಗಂಧವಿಲ್ಲದ ಹೂವು ಬಂಧಕೆಳಸದ ಸುಮವು ಬಂದ ದುಂಬಿಗೆ ಜೇನು ಕೊಡದ ಹೂವು   ಮೊಗ್ಗು ಅರಳುವ ಹಿತದ ಹಿಗ್ಗು ನೀಡದ ಸುಮವು ಕುಗ್ಗಿ ಹೋಗಿದೆ ಮನದೆ ನೊಂದ ಹೂವು   ಸುದ್ಧಿಯಾಗದ ಹೂವು ಮುದ್ದು ಎನಿಸದ ಸುಮವು ಬುದ್ಧಿಗೆಟಕುವೆನೆಂಬ ಕಸದ ಹೂವು   ನಿಂದು ನೋಡುವಿರೇಕೆ ಕುಂದುಕೊರತೆಗಳುಂಟು ಎಂದು ನುಡಿಯುತಲಿಹುದು ಕೃತಕ ಹೂವು|| (ತಮಾಷೆಗಾಗಿ) -ಪೆರ್ಮುಖ ಸುಬ್ರಹ್ಮಣ್ಯ ಭಟ್ 
ವಿಧ: ಕವನ
May 09, 2024
ಕಾತರ.... ಎಲ್ಲಾ ಪಕ್ಷದವರೂ ಕಾತರದಿಂದ ಕಾಯುತಿರುವರು ಅಭ್ಯರ್ಥಿಗಳ ಪಟ್ಟಿ ಪಟ್ಟಿ....   ಆಯ್ಕೆ ಆದವರೇ ಮುಂದಿನ ರೋಚಕ ರಾಜಕಾರಣಕೆ ಗಟ್ಟಿ-ಗಟ್ಟಿ! *** ಜೀವನ ಪಾಠ.... ನೀವು ಅನುಭವಿಸಿದ ನೋವು-ಅವಮಾನ ಒಂದು ಶಿಕ್ಷೆ ಎಂದು- ನೊಂದರೆ ಅದು ನಿಮ್ಮ ಸೋಲು...   ಅವುಗಳನ್ನೇ- ವಿದ್ಯಾರ್ಥಿಯಾಗಿ ಜೀವನದ  ಪಾಠ ಎಂದುಕೊಂಡರೆ ಅದೇ ನಿಮ್ಮ  ಗೆಲುವು! *** ನುಡಿದರೆ- ಹೈಕಮಾಂಡ್ ಅಹುದಹುದೆನಬೇಕು.... ರಾಜಕಾರಣಿಗಳೇ- ನೀವು ಬರೀ ಜನಪ್ರಿಯರಾದರೆ ಸಾಲದು; ಆಗಿರಿ ಮೃದು  ಮಾತಿನ ಒಡೆಯ...   ಆಗ ನೋಡಿ- ಜಗ…
ವಿಧ: ಕವನ
May 08, 2024
ಬೋನಿನ ಒಳಗಡೆ ಇರಿಸಿದ ತಿನಿಸನು ದಾನವಿದೆನ್ನುತ ಬಯಸದಿರು ಪ್ರಾಣವ ತೆಗೆಯುವ ರೂಪಿತ ಸಂಚಿದು ಬೇನೆಯ ಸುಳಿಯಲಿ ಸಿಲುಕದಿರು   ಬಲೆಯಲಿ ಸಿಲುಕಿಸಿ ಹಣಿಯುವ ತಂತ್ರವು ಒಳಗಡೆ ಇರಿಸಿದ ಸಿಹಿತಿಂಡಿ ಹಲವಿಧ ಹಾದಿಯ ಹಿಡಿವರು ಜಯಿಸಲು ಕಲೆಯಲಿ ಜಾಣರು ಈ ಮಂದಿ   ಜಾಲವನರಿಯುತ ಎಚ್ಚರದಿಂದಿರು ಕೋಲನು ಮರೆಯಲಿ ಇರಿಸಿಹರು ಕಾಲವು ಬದಲಿದೆ ಅವರಿಗೆ ಅರಿಯಲಿ ಸೋಲಿನ ರುಚಿಯನು ನೀ ತೋರು||   -ಪೆರ್ಮುಖ ಸುಬ್ರಹ್ಮಣ್ಯ ಭಟ್ (ಚಿತ್ರ ಕೃಪೆ : ಅಂತರ್ಜಾಲ) 
ವಿಧ: ಕವನ
May 07, 2024
ರೆಕ್ಕೆಯು ಕಳಚಿದೆ ಪಕ್ಕದೆ ಬಿದ್ದಿದೆ ಚೊಕ್ಕದ ಬಾಳಲಿ ಬರಸಿಡಿಲು ಕೊಕ್ಕಿಗೆ ಕಾಳನು ಇಕ್ಕುವರಿಲ್ಲದೆ ಹಕ್ಕಿಯು ನರಳಿದೆ ನೋವಿನೊಳು   ಕಿರಿಕಿರಿ ಮಾಡದೆ ಕರುಣೆಯ ನೋಟದೆ ಕರೆದಿದೆ ಸನಿಹಕೆ ಈ ಹಕ್ಕಿ ನೆರವನು ಬಯಸಿದೆ ದೊರೆಯುವ ಭರವಸೆ ಮೊರೆಯನು ಇಡುತಿದೆ ನೋವುಕ್ಕಿ   ಬಿಕ್ಕುವ ಪರಿಯಲಿ ಹಕ್ಕಿಯ ನೋಯಿಸಿ ದಕ್ಕಿಸಿಕೊಳ್ಳುವ ಧಾವಂತ ಸೊಕ್ಕಿನ ಕ್ರೌರ್ಯಕೆ ಸಿಕ್ಕದು‌ ಮನ್ನಣೆ ತಕ್ಕಡಿ ಹಿಡಿದಿಹ ಭಗವಂತ||   -ಪೆರ್ಮುಖ ಸುಬ್ರಹ್ಮಣ್ಯ ಭಟ್ (ಚಿತ್ರ ಕೃಪೆ : ವಾಟ್ಸಾಪ್)