ಒಂದಿಷ್ಟು ಹನಿಗಳು...
ಕಾತರ....
ಎಲ್ಲಾ
ಪಕ್ಷದವರೂ
ಕಾತರದಿಂದ
ಕಾಯುತಿರುವರು
ಅಭ್ಯರ್ಥಿಗಳ
ಪಟ್ಟಿ ಪಟ್ಟಿ....
ಆಯ್ಕೆ
ಆದವರೇ
ಮುಂದಿನ
ರೋಚಕ
ರಾಜಕಾರಣಕೆ
ಗಟ್ಟಿ-ಗಟ್ಟಿ!
***
ಜೀವನ ಪಾಠ....
ನೀವು ಅನುಭವಿಸಿದ
ನೋವು-ಅವಮಾನ
ಒಂದು ಶಿಕ್ಷೆ
ಎಂದು- ನೊಂದರೆ
ಅದು ನಿಮ್ಮ
ಸೋಲು...
ಅವುಗಳನ್ನೇ-
ವಿದ್ಯಾರ್ಥಿಯಾಗಿ
ಜೀವನದ ಪಾಠ
ಎಂದುಕೊಂಡರೆ
ಅದೇ ನಿಮ್ಮ
ಗೆಲುವು!
***
ನುಡಿದರೆ- ಹೈಕಮಾಂಡ್ ಅಹುದಹುದೆನಬೇಕು....
ರಾಜಕಾರಣಿಗಳೇ-
ನೀವು ಬರೀ
ಜನಪ್ರಿಯರಾದರೆ
ಸಾಲದು;
ಆಗಿರಿ ಮೃದು
ಮಾತಿನ ಒಡೆಯ...
ಆಗ ನೋಡಿ-
ಜಗ ನಿಮ್ಮ
ಮೆಚ್ಚುವುದಲ್ಲದೆ;
ಟಿಕೆಟ್ ತಾನಾಗಿ
ಒಲಿದು ಬರುವ
ಕಮಾಲ್ ಪರಿಯ!
***
ದುಷ್ಮನ್ ಬಗಲ್ ಮೆ ಹೈ....
ದೇಶದಲ್ಲಿ
ಭಯೋತ್ಪಾದಕರು
ಸಾರ್ವಜನಿಕ
ಸ್ಥಳಗಳಲ್ಲಿ
ಇಡುತ್ತಾರೆ
ಟೈಂ ಬಾಂಬ್...
ಆದರೆ
ರಾಜಕೀಯದಲ್ಲಿ
ಸ್ವಂತ ಪಕ್ಷದವರೆ
ಕುರ್ಚಿ ಕೆಳಗೆ
ಇಟ್ಟು ಬಾರಿಸುವರು
ಡುಮ್ ಡುಮ್!
***
ಅಳಿಯನಲ್ಲ; ಮಗಳ ಗಂಡ!
ರಾಜ್ಯದಲ್ಲಿ
ಒಂದೇ
ಕುಟುಂಬದ
ವ್ಯವಸ್ಥೆ
ಬೇಡವೆಂದು
ಅವರ ಸ್ಫರ್ಧೆ...
ಏನು ಮಾಡುವುದು
ಅದೇ ಆಶಯಕೆ
ಹೈಕಮಾಂಡ್
ಟಿಕೆಟ್ ಕೊಡದೆ
ಅವರ ಬೆನ್ನಿಗೂ
ಹಾಕಿತು ಗುದ್ದೇ?
***
ಸ್ವಾರ್ಥವೇ ಶ್ರೇಷ್ಠ
ಟಿಕೆಟ್
ಸಿಕ್ಕರೆ
ಪಕ್ಷನಿಷ್ಠೆ
ಬಲವಾಗಿ ಹೆಚ್ಚಿ
ತೋರುವರು
ಅಭಿಮಾನ...
ಸಿಕ್ಕದಿದ್ದರೆ
ಸ್ವಾರ್ಥ ಹೆಚ್ಚಿ
ತಿರಸ್ಕಾರದ
ಬಾಲ ಬೆಳೆದು
ಪಕ್ಷಾಂತರದ
ದುರಭಿಮಾನ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ