ಅಂತರಜಾಲದಲ್ಲಿ ಯು.ಆರ್. ಅನಂತಮೂರ್ತಿ

ಅಂತರಜಾಲದಲ್ಲಿ ಯು.ಆರ್. ಅನಂತಮೂರ್ತಿ

ಬರಹ

ಡಾ.ಯು.ಆರ್. ಅನಂತಮೂರ್ತಿಯವರ ಇತ್ತೀಚಿನ ಬರೆಹಗಳಿರುವ ಬ್ಲಾಗ್ ಋಜುವಾತು ಈಗ ಅಂತರಜಾಲದಲ್ಲಿ ಲಭ್ಯವಿವೆ. ಇಲ್ಲಿರುವ ಲೇಖನಗಳು ಅವರು ಪ್ರತೀ ವಾರ ಉದಯವಾಣಿ ಪತ್ರಿಕೆಯಲ್ಲಿ ಬರೆಯುತ್ತಿರುವ ಅಂಕಣ ಬರೆಹಗಳು.

ಈ ಬರೆಹಗಳಿಗೆ ಸಂಪದ ಸದಸ್ಯರು ಸಂಪದದಲ್ಲಿ ಬಳಸುವ ಯೂಸರ್ ಐಡಿ ಮತ್ತು ಪಾಸ್ ವರ್ಡ್ ಗಳನ್ನೇ ಬಳಸಿ ಪ್ರತಿಕ್ರಿಯಿಸಬಹುದು. ಇದಕ್ಕಾಗಿ ಮತ್ತೊಮ್ಮೆ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ. ರಾಜಕಾರಣದಿಂದ ಆರಂಭಿಸಿ ಸಾಹಿತ್ಯದವರೆಗೆ ವಿವಿಧ ವಿಷಯಗಳಿಗೆ ಕನ್ನಡದ ಪ್ರಮುಖ ಲೇಖಕರೊಬ್ಬರ ಸ್ಪಂದನೆ ಈ ಬರಹಗಳಲ್ಲಿವೆ. ಇವಗಳನ್ನು ಹೊಸ ಕಾಲಕ್ಕೆ ಅಗತ್ಯವಿರುವ ತಾತ್ವಿಕತೆಯೊಂದರ ಶೋಧನೆ ಎಂದೂ ಕರೆಯಬಹುದು.

-ಇಸ್ಮಾಯಿಲ್