ಅಚ್ಚರಿ !
ಕವನ
ಕಾಡಿನ ಒಳಗಡೆ ಹುಲ್ಲಿನ ಸೂರಿನ
ಗುಡಿಸಲು ಇರುವುದು ನೋಡಿಲ್ಲಿ
ಬಾಗಿಲು ತೆರೆಯುತ ಬಂದಳು ಸುಂದರಿ
ಅಚ್ಚರಿ ತಂದಳು ನನ್ನಲ್ಲಿ
ನೀಲಿಯ ಲಂಗವ ಧರಿಸಿದ ಯುವತಿಯು
ಧರಿಸಿದ ಕುಪ್ಪಸ ಕೆಂಬಣ್ಣ
ಬೆಳ್ಳನೆ ಬಣ್ಣದ ದಾವಣಿಯಟ್ಟಳು
ಸೆಳೆವುದು ರಸಿಕರ ಮನವನ್ನ
ನೊಸಲಲಿ ಬಿಗಿದಳು ಪದಕದ ಮಾಲೆಯ
ಕಿವಿಯಲಿ ತೂಗವ ಲೋಲಾಕು
ಆಕೆಯ ವೇಷವ ನೋಡುತ ಅನಿಸಿತು
ಕಾಡಿಗೆ ಹೊಂದದ ಪೋಷಾಕು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಶ್ರೀ ಬಸವರಾಜ್ ರವರ ವಾಲ್ ನಿಂದ ಸಂಗ್ರಹಿತ
ಚಿತ್ರ್
