ಅಡ್ಡಗೋಡೆ - ಸಣ್ಕತೆ

ಅಡ್ಡಗೋಡೆ - ಸಣ್ಕತೆ

ಪತಿ ಮಗನನ್ನು ದೊಂಬಿಯಲ್ಲಿ  ಕಳಕೊಂಡ ಅರವತ್ತರ ಮಹಿಳೆ ಖತೀಜಮ್ಮ, ಜೀವನಕ್ಕೆ ಎರಡು ದನಗಳನ್ನು ಸಾಕಿ ಹಾಲು ಮಾರುತ್ತಿದ್ದಳು. ಬಚ್ಚಲು ಮನೆಯಲ್ಲಿ ಜಾರಿ ಬಿದ್ದವಳನ್ನು ನೆರೆಮನೆಯ ಮೇಷ್ಟ್ರು ಸುಧಾಕರ ಆಸ್ಪತ್ರೆಗೆ ಕರೆದೊಯ್ದು ಬೇಕಾದ ಚಿಕಿತ್ಸೆಗಳನ್ನು ಕೊಡಿಸಿ, ತನ್ನ ಮನೆಯಲ್ಲಿಯೇ ಇರಿಸಿ ನೋಡಿಕೊಂಡನು. ಅವನ ಪತ್ನಿ ಮಾಧುರಿ ಹೆತ್ತಮ್ಮನಷ್ಟೇ ಪ್ರೀತಿಯನ್ನು ನೀಡಿ, ತನಗೆ ತಾಯಿಯಿಲ್ಲದ ಕೊರತೆಯನ್ನು ಖತಿಜಮ್ಮನಲ್ಲಿ ಕಂಡುಕೊಂಡಳು. ಇವರ ಮಗನಿಗೆ ಖತೀಜಮ್ಮನೇ ಅಜ್ಜಿ ಕಥೆ ಹೇಳಬೇಕು. ಮಗಳಿಗಂತೂ ಖತೀಜಮ್ಮನೇ ಬಾಯಿತುತ್ತು ನೀಡಬೇಕು. ಇವರ ‌ಸಹಬಾಳ್ವೆ, ಒಗ್ಗಟ್ಟು ನೋಡಿ ಊರಿನವರೆಲ್ಲ ಮೆಚ್ಚಿದರು. ಮಾನವೀಯತೆಯ ಮುಂದೆ ಜಾತಿ, ಧರ್ಮ, ಮತ, ರೀತಿ ನೀತಿಗಳು ಅಡ್ಡಗೋಡೆಯಾಗಲಿಲ್ಲ.

-ರತ್ನಾ ಕೆ. ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ