ಅನುವಾವಿ ಸುಬ್ರಹ್ಮಣ್ಯ ದೇಗುಲ

ಅನುವಾವಿ ಸುಬ್ರಹ್ಮಣ್ಯ ದೇಗುಲ

ಕವನ

ಇಲ್ಲಿದೆ ಷಣ್ಮುಖ ದೇವಾಲಯ

ಅನುವಾವಿಯಲ್ಲಿರುವ ಕಾರ್ತಿಕೇಯ

ಬಹುದೊಡ್ಡ ಬೆಟ್ಟದ ತುದಿಯಲ್ಲಿ ನಿಂತ

ಶ್ರೀ ಸುಬ್ರಹ್ಮಣ್ಯನ ದರ್ಶನವೆ ಭಾಗ್ಯ/

 

ಸುತ್ತಲೂ ಹಸಿರು ಸಿರಿ ಆಹ್ಲಾದವಿಲ್ಲಿ

ಶ್ರೀ ಸ್ವಾಮಿ ಕುಳಿತಿಹನು ಬೆಟ್ಟದಾ ತುದಿಯಲ್ಲಿ

ಮೆಟ್ಟಿಲನು ಏರುತ್ತ ತುದಿ ಸೇರಬೇಕು

ಮನದೊಳಗೆ ಬತ್ತದಿಹ ಭಕ್ತಿ ಇರಬೇಕು/

 

ಸಂಜೀವಿನಿ ಬೆಟ್ಟ ಹೊತ್ತಿರಲು ಹನುಮ

ಗಗನದಲಿ ಸಂಚಾರ ಅವಸರದ ಯಾನ

ಬಾಯಾರಿ ಬಳಲಿರಲು ಬೇಡಿದನು ಹನುಮ

ಶ್ರೀ ಕುಮಾರ ಸ್ವಾಮಿಯನು ಜಪಿಸುತ್ತ ಜಲವ/

 

ಷಣ್ಮುಖನು ಆಯಧವ ನೆಲಕೊಮ್ಮೆ ಕುಕ್ಕಿ

ಚಿಮ್ಮಿತದೊ ಜೀವಜಲ ಬಾನತ್ತ ಉಕ್ಕಿ

ಜಲ ಕುಡಿದು ಸಂತೃಪ್ತ ಗೊಂಡಿರಲು ಹನುಮ

ಅವ ಮುಂದುವರಿಸಿದನು ಲಂಕೆಯೆಡೆ ಯಾನ/

-ಪೆರ್ಮುಖ ಸುಬ್ರಹ್ಮಣ್ಯ ಭಟ್

(ಚಿತ್ರ ಅವಿನಾಶ್ ನಿಡುಗಳ ಅವರ ವಾಲ್ ನಿಂದ) 

ಚಿತ್ರ್