ಅಪ್ಪಂದಿರ ದಿನಕ್ಕಾಗಿ ಒಂದು ಗಝಲ್

ಅಪ್ಪಂದಿರ ದಿನಕ್ಕಾಗಿ ಒಂದು ಗಝಲ್

ಕವನ

*ಚೆಲುವಿನ ಬದುಕನ್ನು ರೂಪಿಸಿದವನು ಅಪ್ಪ*

*ಒಲವಿನ ಶರಧಿಯಲಿ ತೋಯಿಸಿದವನು ಅಪ್ಪ*

 

*ತನ್ನವರ ಒಳಿತಿಗಾಗಿ  ಬದುಕನ್ನು ಮುಡಿಪಾಗಿಟ್ಟನಲ್ಲವೇ*

*ಕಣ್ಣರೆಪ್ಪೆಯಂತೆ ಮಕ್ಕಳನ್ನು ಸಲಹಿದವನು ಅಪ್ಪ*

 

*ಒಡೆತನವ ಎಂದೆಂದೂ ಆಶಿಸದ ಮನಸ್ಸಾಗಿತ್ತು*

*ಬಡತನದ ಕುಲುಮೆಯಲಿ ಬೆಂದವನು ಅಪ್ಪ*

 

*ಸತ್ಯ ನ್ಯಾಯ ಧರ್ಮವು ಅಡಿಪಾಯಗಳೆಂದನು*

*ಪಥ್ಯವಾಗದಿರೆ ದೂರವಿದ್ದು ಸಾಧಿಸೆಂದವನು ಅಪ್ಪ*

 

*ಹುಟ್ಟುಆಕಸ್ಮಿಕ ಸಾವು ನಿಶ್ಚಿತ ರತುನ*

*ಹೊಟ್ಟೆ ಹಸಿವನ್ನು ನೀಗಿಸಿದವನು ಅಪ್ಪ*

 

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್