ಅಸಿಡಿಟಿ ಸಮಸ್ಯೆಗೆ ಕೆಲವು ಮನೆಮದ್ದುಗಳು (ಭಾಗ 1)

ಅಸಿಡಿಟಿ ಸಮಸ್ಯೆಗೆ ಕೆಲವು ಮನೆಮದ್ದುಗಳು (ಭಾಗ 1)

ಹೊಟ್ಟೆಯಲ್ಲಿ ಅಧಿಕವಾಗಿ ಆಮ್ಲ ಸ್ರವಿಕೆಯನ್ನು ಅಸಿಡಿಟಿ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ನಾವು ತಿಂದ ಆಹಾರವನ್ನು ಸುಲಭವಾಗಿ ಕರಗುವ ರೀತಿಯಲ್ಲಿ ಕರಗಿಸುವ ಕ್ರಿಯೆಯನ್ನು ಮಾಡುತ್ತದೆ. ಆದರೆ ಅಗತ್ಯಕ್ಕಿಂತ ಅಧಿಕವಾಗಿ ಸ್ರವಿಸುವ ಆಮ್ಲದಿಂದ ಅಸಿಡಿಟಿ ತೊಂದರೆ ಬರುತ್ತದೆ.ಹೊಟ್ಟೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದ ಆಮ್ಲದ ಉತ್ಪಾದನೆಯಿಂದ ಆಸಿಡಿಟಿ (ಪಿತ್ತ) ಕಾರಣ ಜೊತೆಗೆ ಆಮ್ಲ ಪಿತ್ತ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ನಾವು ಸೇವಿಸಿದ ಆಹಾರವು ಹೊಟ್ಟೆಯಲ್ಲಿ ಆಮ್ಲೀಯವಾಗಿ ಪರಿವರ್ತನೆ ಹೊಂದಿ ಸುಲಭವಾಗಿ ಜೀರ್ಣವಾಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಈ ಆಮ್ಲದ ಪ್ರಮಾಣ ಅಗತ್ಯಕ್ಕಿಂತ ಹೆಚ್ಚಾಗಿ ಅಸಿಡಿಟಿಗೆ ಕಾರಣವಾಗುತ್ತದೆ. ಇದೊಂದು ಸಾಮಾನ್ಯ ರೋಗವಾಗಿದ್ದರೂ ಬೇಗ ಚಿಕಿತ್ಸೆ ಪಡೆಯದಿದ್ದಲ್ಲಿ ಗಂಭೀರ ಆರೋಗ್ಯ ಸಮಸ್ಯೆಯನ್ನು ತಂದೊಡ್ಡುತ್ತದೆ. ಪಿತ್ತ ಹೆಚ್ಚಾದಾಗ ಎದೆಯಲ್ಲಿ ಉರಿ, ಉದ್ವೇಗ ಹಾಗೂ ನೋವು ಕಾಣಿಸಿಕೊಳ್ಳುತ್ತದೆ. ಅನ್ನನಾಳದ ಕೋಶದ ವೈಫಲ್ಯತೆಯಿಂದ ಆಮ್ಲವು ಅನ್ನನಾಳಕ್ಕೆ ಹೋಗದಂತೆ ತಡೆ ಉಂಟಾಗುವುದರಿಂದ ಅಸಿಡಿಟಿ ಹೆಚ್ಚಾಗುತ್ತದೆ.ಅಸಿಡಿಟಿಗೆ ನಾವು ಸೇವಿಸುವ oil food ಆಹಾರವೂ ಕಾರಣವಾಗುತ್ತದೆ. ಜಂಕ್ ಫುಡ್ ತಿನ್ನುವುದು, ಸಾಕಷ್ಟು ನೀರು ಕುಡಿಯದಿರುವುದು ಮತ್ತು ತಿನ್ನುವಾಗ ಆಹಾರವನ್ನು ಸರಿಯಾಗಿ ಜಗಿಯದಿರುವುದು ಸಹ ಪಿತ್ತಕ್ಕೆ ಕಾರಣವಾಗುತ್ತದೆ ಎನ್ನುವುದು ಸುಳ್ಳಲ್ಲ. ಅಲ್ಲದೆ ಅತಿ ಮಸಾಲೆ, ಖಾರದ ಆಹಾರ ಸೇವಿಸುವುದು, ನಿಯಮಿತವಾಗಿ ಊಟ ಮಾಡದಿರುವುದರಿಂದಲೂ ಸಹ ಪಿತ್ತ ಹೆಚ್ಚಾಗಲು ಕಾರಣ. ಇನ್ನು ಧೂಮಪಾನ ಹಾಗೂ ಅಲ್ಕೊಹಾಲ್ ಸೇವನೆಗಳು ಕೂಡ ಪಿತ್ತದ ಪ್ರಮಾಣ ಅತಿಯಾಗಿ ಹೆಚ್ಚಾಗಲು ಕಾರಣವಾಗುತ್ತದೆ.

ಅಸಿಡಿಟಿಯ ಲಕ್ಷಣಗಳು:

1. ಹೊಟ್ಟೆಯಲ್ಲಿ ಉರಿತದ ಅನುಭವ

2. ಎದೆಯ ಭಾಗದಲ್ಲಿ ಉರಿಯಾಗುವುದು

3. ಹುಳಿಯಾದ ದ್ರವ ಬಾಯಲ್ಲಿ ತುಂಬಿಕೊಳ್ಳುವುದು

4. ಹುಳಿತೇಗಿನಿಂದ ವಾಂತಿಯಾಗುವುದು

5. ಉಸಿರಾಟದ ತೊಂದರೆ ಉಂಟಾಗುವುದು

6. ಹೊಟ್ಟೆ ತುಂಬಿದ ಅನುಭವ

7. ಹೊಟ್ಟೆಯಲ್ಲಿ ಗ್ಯಾಸ್ ತುಂಬಿದ ಅನುಭವ ಹಾಗೂ ತೇಗುವುದು

8. ತಲೆ ನೋವು ಬರುತ್ತದೆ

9. ಆಯಾಸ.

ಅಸಿಡಿಟಿಗೆ ಪ್ರಮುಖ ಕಾರಣಗಳು:

1. ಸರಿಯಾದ ಊಟದ ಆಯ್ಕೆ ಹಾಗೂ ಕ್ರಮ ಇಲ್ಲದಿರುವುದು

2. ಜೀವನ ಕ್ರಮ ಸರಿಯಾಗಿಲ್ಲದಿರುವುದು

3. ಅತಿಯಾದ ಕಾಫಿ, ಟೀ ಸೇವನೆ ಮಾಡುವುದು

4. ಅತಿ ಖಾರದ ಖಾದ್ಯ ಸೇವನೆ

5. ಯಾವಾಗಲೂ ತಿನ್ನುವುದು

6. ಸರಿಯಾಗಿ ಬೇಯಿಸದ ಅಥವಾ ಹಳಸಿದ ಪದಾರ್ಥಗಳನ್ನು ತಿನ್ನುವುದು

7. ಸರಿಯಾಗಿ ನಿದ್ದೆ ಮಾಡದಿರುವುದು

8. ತಂಬಾಕು, ಸಿಗರೇಟು ಹಾಗೂ ಮದ್ಯ ಸೇವನೆಯಿಂದ

9. ದೇಹದ ಅತಿಯಾದ ತೂಕ

10. ಸರಿಯಾಗಿ ಆಹಾರವನ್ನು ಜಗಿದು ಸೇವಿಸದೇ ಇರುವುದರಿಂದ

11. ಉಪವಾಸ ಅಥವಾ ಆಹಾರ ಸೇವನೆಯನ್ನು ಮುಂದೂಡುವುದು.

ಮನೆಮದ್ದು : ಅಸಿಡಿಟಿಯಿಂದ ತಲೆನೋವು ಒತ್ತಡ ಕೊಬ್ಬು ಇದು ಈಗ ಸಾಮಾನ್ಯ ಸಮಸ್ಯೆಯಾಗಿದೆ.ಬಹುತೇಕ ಎಲ್ಲರೂ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.ವಿವಿಧ ಬಗೆಯ ಆಹಾರಗಳನ್ನು ತಿನ್ನುವ ಮೂಲಕ ಡಯಟ್ ದಾರಿ ತಪ್ಪುತ್ತೆವೆ.ಮನಸ್ಸಿಗೆ ಬಂದಷ್ಟು ರುಚಿ ರುಚಿ ಆಹಾರ ಬಾಯಿಗೆ ಇಷ್ಟವೆನಿಸಿ ತಿಂದಾಗ ಅಸಿಡಿಟಿ ಸಮಸ್ಯೆ ತುಂಬಾ ನಮ್ಮನ್ನು ಕಾಡುತ್ತದೆ.ಪದೇ ಪದೆ ಕಾಡುವ ಅಸಿಡಿಟಿ ಸಮಸ್ಯೆಗೆ ಇಲ್ಲಿದೆ ಸಿಂಪಲ್ ಮನೆಮದ್ದುಗಳು ನೀವೆಲ್ಲರೂ ಎಂದುಕೊಂಡಂತೆ ಅಸಿಡಿಟಿ ದೊಡ್ಡ ಸಮಸ್ಯೆಯೇನಲ್ಲ. ಮನೆಯಲ್ಲಿರುವ ಕೆಲವು ಪದಾರ್ಥಗಳಿಂದ ಅಸಿಡಿಟಿಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.ಪದೇ ಪದೇ ಅಸಿಡಿಟಿ ನಮ್ಮನ್ನು ಕಾಡುತ್ತಿದ್ದರೆ ತುಳಸಿ ಬಹಳ ಉತ್ತಮ ಮನೆ ಮದ್ದಾಗಿದೆ. ತುಳಸಿ ಎಲೆಗಳನ್ನು ಆಗಾಗ ಜಗಿಯುತ್ತಾ ಇರಿ.ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸಿ ಅಸಿಡಿಟಿ ಸಮಸ್ಯೆಯನ್ನು ದೂರ ಮಾಡುತ್ತದೆ ಜೊತೆಗೆ ಓಂ ಕಾಳು  ಸಹ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ದೂರ ಮಾಡುತ್ತದೆ. ಓಂ ಕಾಳನ್ನು ತಿನ್ನಿರಿ ಇಲ್ಲವಾದರೆ ಓಂಕಾಳನ್ನು ನೀರಿಗೆ ಹಾಕಿ ನೀರಿನ ಪ್ರಮಾಣ ಅರ್ಧ ವಾಗುವವರೆಗೆ ಕುದಿಸಿ ಆ ನೀರನ್ನು ಕುಡಿಯುವುದರಿಂದಲೂ ಎಸಿಡಿಟಿ ಕಡಿಮೆಯಾಗುತ್ತದೆ ಮತ್ತು

ನೆಲ್ಲಿಕಾಯಿ ಹೆಸರು ಹೇಳಿದರೆ ಬಹುತೇಕರ ಬಾಯಲ್ಲಿ ನೀರು ಬರುತ್ತದೆ. ನೆಲ್ಲಿಕಾಯಿ ತಿನ್ನಲು ರುಚಿ ಅಷ್ಟೇ ಅಲ್ಲದೆ ಅಸಿಡಿಟಿಗೆ ಇದು ಒಳ್ಳೆಯ ಮನೆ ಮದ್ದಾಗಿದೆ (ಒಂದು ಲೋಟ ನೀರಿಗೆ ಒಂದು ಟೇಬಲ್ ಚಮಚೆ ಗುಡ್ಡದ ನೆಲ್ಲಿಕಾಯಿ ಅಥವಾ ಸಾದಾ ನೆಲ್ಲಿಕಾಯಿ ಪುಡಿಯನ್ನು ಸೇರಿಸಿ ಸೇವಿಸುವುದು ಪಿತ್ತ ಶಮನಕ್ಕೆ ಸಹಕಾರಿಯಾಗಿದೆ. ದಿನಕ್ಕೆರಡು ಬಾರಿ ಈ ರಸ ಸೇವಿಸುವುದರಿಂದ ಶೀಘ್ರ ಪರಿಣಾಮ ಲಭಿಸುತ್ತದೆ. ವಿಟಮಿನ್ ಸಿ ಗುಣ ಹೇರಳವಾಗಿರುವ ನೆಲ್ಲಿಕಾಯಿ ಅನ್ನನಾಳದ ಸಮಸ್ಯೆಗಳನ್ನು ನಿವಾರಿಸಿ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ) ನೆಲ್ಲಿಕಾಯಿಯನ್ನು ಒಣಗಿಸಿ ಸದಾ ನಿಮ್ಮ ಬಳಿ ಇಟ್ಟುಕೊಳ್ಳಬಹುದು ಹಾಗೂ ಕಾಳು ಮೆಣಸು ಇದು ಎಸಿಡಿಟಿ ಸಮಸ್ಯೆ ಕಾಡಿದರೆ ಕಾಳು ಮೆಣಸಿನ ಪುಡಿಯನ್ನು ಮಜ್ಜಿಗೆಗೆ ಹಾಕಿ ದಿನದಲ್ಲಿ 2 ಬಾರಿ ಮಜ್ಜಿಗೆ ಜೊತೆಗೆ ಕುಡಿದರೆ ಸಮಸ್ಯೆ ಕ್ರಮೇಣವಾಗಿ ಕಡಿಮೆಯಾಗುತ್ತದೆ.ಇದಲ್ಲದೆ ಒಂದು ಲೋಟ ನೀರಿಗೆ ಒಂದು ಟೇಬಲ್ ಚಮಚದಷ್ಟು ಜೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಇದನ್ನು ಸೋಸಿ ಆರಲು ಬಿಡಿ. ಈ ದ್ರಾವಣ ತಣ್ಣಗಾದ ನಂತರ ಕುಡಿದರೆ ಪಿತ್ತ ಶಮನವಾಗುವುದು. ಸ್ವಲ್ಪ ಪ್ರಮಾಣದ ಹುರಿದ ಜೀರಿಗೆಯನ್ನು ಅರೆದು ಒಂದು ಲೋಟ ನೀರಿಗೆ ಬೆರೆಸಿ ಊಟವಾದ ನಂತರ ಕುಡಿಯುವುದರಿಂದ ಸಹ ಪಿತ್ತದ ಸಮಸ್ಯೆಯಿಂದ ಪಾರಾಗಬಹುದು. ಜೀರ್ಣ ಸಮಸ್ಯೆ ನಿವಾರಣೆಗೆ ಹಾಗೂ ಆಮ್ಲದ ಹೆಚ್ಚಾಗುವಿಕೆ ತಡೆಗೆ ಜೀರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಅಸಿಡಿಟಿ ಸಂದರ್ಭದಲ್ಲಿ ಉಂಟಾಗುವ ಹೊಟ್ಟೆ ನೋವು ಶಮನಕ್ಕೆ ಜೀರಿಗೆ ಉಪಯುಕ್ತವಾಗಿದೆ. ಅಲ್ಲದೆ ಹೊಟ್ಟೆಯ ಆಲ್ಸರ್ ನಿವಾರಣೆಗೂ ಜೀರಿಗೆ ಸಹಕಾರಿಯಾಗಿದೆ.ಕೆಲ ಪುದೀನಾ ಎಲೆಗಳನ್ನು ಸಣ್ಣದಾಗಿ ಹೆಚ್ಚಿ ಒಂದು ಲೋಟ ನೀರಿಗೆ ಹಾಕಿ. ಇದನ್ನು ಕುದಿಸಿ ಆರಿಸಿದ ನಂತರ ಕುಡಿಯಬೇಕು. ಪುದೀನಾ ಚ್ಯೂಯಿಂಗ್ ಗಮ್ ತಿನ್ನುವುದು ಸಹ ಉಪಯುಕ್ತವಾಗಿದೆ. ಪಿತ್ತ ನಿವಾರಣೆಯಲ್ಲಿ ಪುದೀನಾ ಪ್ರಮುಖ ಪಾತ್ರ ವಹಿಸುತ್ತದೆ. ಪುದೀನಾ ಅಜೀರ್ಣತೆಯನ್ನು ನಿವಾರಿಸಿ, ದೇಹಕ್ಕೆ ತಂಪು ನೀಡುವ ಗುಣವನ್ನು ಹೊಂದಿದೆ. ಅಸಿಡಿಟಿ ಆದಾಗ ಉಂಟಾಗುವ ಉರಿಯ ಅನುಭವ ಹಾಗೂ ನೋವು ನಿವಾರಕನಾಗಿ ಪುದೀನಾ ಕೆಲಸ ಮಾಡುತ್ತದೆ. ಹಾಗೆ ಒಂದು ಲೋಟ ಮಜ್ಜಿಗೆಗೆ ಒಂದು ಚಮಚೆ ಮೆಂತ್ಯ ಕಾಳಿನ ಪೇಸ್ಟ್ ಸೇರಿಸಿ ಕುಡಿಯುವುದು ಸಹ ಒಳ್ಳೆಯ ಔಷಧಿಯಾಗಿದೆ. ಪಿತ್ತವನ್ನು ಶೀಘ್ರವಾಗಿ ನಿವಾರಣೆ ಮಾಡುವ ಗುಣ ಮಜ್ಜಿಗೆಗೆ ಇದೆ. ಮಜ್ಜಿಗೆ ನೈಸರ್ಗಿಕ ಅಂಟಾಸಿಡ್ ಆಗಿ ಕೆಲಸ ಮಾಡುತ್ತದೆ. ಜೊತೆಗೆ ಹೊಟ್ಟೆಯಲ್ಲಿ ಅಧಿಕವಾಗಿ ಉತ್ಪನ್ನವಾಗುವ ಆಮ್ಲವನ್ನು ಸಮತೋಲನಗೊಳಿಸಲು ಮಜ್ಜಿಗೆ ಸೇವನೆ ಹಿತಕಾರಿಯಾಗಿದೆ.

(ಇನ್ನೂ ಇದೆ)

- ಸಂಗಮೇಶ ಎನ್ ಜವಾದಿ, ಕೊಡಂಬಲ, ಬೀದರ.

ಚಿತ್ರ ಕೃಪೆ: ಇಂಟರ್ನೆಟ್ ತಾಣ