ಆಡಳಿತ ಮತ್ತು ದರೋಡೆ

ಆಡಳಿತ ಮತ್ತು ದರೋಡೆ

ಕವನ

ಪ್ರಜಾ ಪ್ರಭುತ್ವದಲಿ ಜನ ನಾಯಕರ ಹಣದ ಗುಡ್ಡೆ

ಸರ್ವಾಧಿಕಾರದಲಿ ಸರ್ವಾಧಿಕಾರಿಯೇ ಹಣದಡ್ಡೆ!

 

ಏನಾಗಿದೆ ಇಂದು ಈ ಭ್ರಷ್ಟ ಆಡಳಿತದ ವ್ಯವಸ್ಥೆಗೆ?

ಹಾಳು ಸಂಪತ್ತಿನೊಡೆತನಕೇ ಹಾಕಿರುವರಲ್ಲ ಲಗ್ಗೆ

ನ್ಯಾಯ ನೀತಿ ಧರ್ಮಗಳು ಓಡಿ ಹೋಗಿವೆಯೇನು?

ಅಧರ್ಮ ಅನೀತಿ ಉತ್ತುಂಗಕೇರಿ ನರ್ತಿಸುವವಲ್ಲ!

 

ಏಕಿಂತು ಸಂಪತ್ತ ಹಪಾಹಪೀ ನಾಯಕ ಮಣಿಗಳೇ?

ಅಭಿವೃದ್ಧಿ ಹೆಸರಲಿ ತಿಂದು ದೋಚುತಿರುವಿರೇಕೇ?

ನೀವೆಷ್ಟೇ ಕದ್ದರೂ ತಿನ್ನುವುದು ಮಾತ್ರ ತುತ್ತು ಅನ್ನ

ಇಲ್ಲಿಂದ ಹೊತ್ತು ಒಯ್ಯಲಾರಿರಿ ನೀವು ಹಿಡಿ ಮಣ್ಣ!

 

ಪಾಪದ ಸೋಂಕ ನಿಮ್ಮ ಸಂತತಿಗೂ ಹರಿಸುವಿರಲ್ಲ

ಸಿರಿವಂತಿಗೆಯ ಪಟ್ಟ ಇತಿಹಾಸದಲ್ಲೆಲ್ಲೂ ಕಾಣದಲ್ಲ

ಹಣವಿಲ್ಲದ ಗುಣದ ಅಭಿಜಾತನೇ ಜಗದಲಿ ಮಾನ್ಯ

ಸಂಪತ್ತ ಕಾಯ್ವ ವಿಷ ಸರ್ಪದೊಲಿದೆ ನಿಮ್ಮ ಸ್ಥಾನ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್