ಆಧುನಿಕ ವಚನ
ಕವನ
ಚುಟುಕಿನಲಿ ಗುಟುಕನ್ನು ನೀಡುತ ಕುಟುಕಿದರಯ್ಯಾ
ಪಟಪಟನೆ ಬರೆಯುತಲಿ ನೇರನುಡಿಯಾಡಿದಿರಯ್ಯಾ
ಕಟು ಪದಗಳನು ನಿಷ್ಠುರವಾಗಿ ಎತ್ತಿ ಹಿಡಿದಿರಯ್ಯಾ
ಚುಟುಕಿನಲಿ ಸಮಾಜದ ಓರೆಕೋರೆಗಳ ಬಿಂಬಿಸಿದಿರಯ್ಯಾ
ದಿನಕರನ ಚೌಪದಿಯನು ಜನತೆಗೆ ಅರ್ಪಿಸಿದಿರಯ್ಯಾ
ಸಿರಿಗನ್ನಡದ ಹಂದರವೇ ನನ್ನ ಜಿಲ್ಲೆಯೆಂದಿರಯ್ಯಾ
ಆಡಂಬರ ಅಲಂಕಾರ ತ್ಯಜಿಸಿ ಮನದ ಮಾತುಗಳನೇ ಕೃತಿಯಾಗಿಸಿದಿರಯ್ಯಾ
ಹೋರಾಟ ಪ್ರವೃತ್ತಿಯನು ಮೈಗೂಡಿಸಿ ನಿಂದನೆಗೆ ಗುರಿಯಾದಿರಯ್ಯಾ
ಉಳುವವನೇ ಭೂಮಿಗೊಡೆಯನೆಂದು ಸಾರಿ ಸಾರಿಹೇಳಿದಿರಯ್ಯಾ
ಗಡಿಪಾರು ಶಿಕ್ಷೆಯನು ಅನುಭವಿಸಿಯೂ ಸತ್ಯವ ಬಿಡದವರಯ್ಯಾ
ಆಧುನಿಕ ವಚನದ ಈ ಬರೆಹ ತಮಗೆ ಅರ್ಪಣೆಯಯ್ಯಾ
‘ಚುಟುಕು ಬ್ರಹ್ಮ’ ರೇ ನಿಮಗೆ ಸರಿಸಮರಾರಿಹರು ಎಂದಳಾ ಮಾತೆ ಶ್ರೀದುರ್ಗೆ
-ರತ್ನಾ ಕೆ ಭಟ್,ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
