ಆ ಹುಡುಗ....

ಆ ಹುಡುಗ....

ಬರಹ

ಬೆಂಗಳೂರಿನ ಕಂಟೋನ್ಮೆನ್ಟ್ ರೈಲ್ವೆ ಸ್ಟೇಷನ್ ಹಳಿಯ ಬಳಿ ಒಬ್ಬ ಯುವಕನ ಹೆಣ ಬಿದ್ದಿತ್ತು. ಕಾಲೊಂದು ತುಂಡಾಗಿ, ಮುಖದ ಒಂದು ಪರ್ಶ ಜಜ್ಜಿ ಹೋಗಿತ್ತು... ಅಗಲೇ ಸಾಕಷ್ಟು ಜನ ಅಲ್ಲಿ ಸೇರಿದ್ದರು. ಪಕ್ಕದ ರೋಡಿನಲ್ಲಿ ನೆಡೆದು ಹೋಗುತ್ತಿದ್ದ ನಾನು ನೆಡೆಯುವುದನ್ನು ನಿಲ್ಲಿಸಿ, ಒಂದು ಕ್ಷಣ ನಿಂತು ಅ ಘಟನೆ ನೆಡೆದ ಸ್ಥಳಕ್ಕೆ ಸಾಗಿದೆ... ಅ ದೇಹದ ಮೇಲಿದ್ದ ಬಣ್ಣದ ಗೆರೆಗಳ ಬಟ್ಟೆ, ಮುಖ ನೋಡಿದಾಗ ನೆನಪಿನ ಸುರುಳಿ ಬಿಚ್ಚುತ್ತಾ ಹೋಯಿತು... 2 ವರ್ಷದ ಹಿಂದೆಗೆ ಜಾರಿ ಹೋಯಿತು ಮನ...

*********************************

ನಾ ಕಂಡ ಪ್ರತಿಭಾವಂತ ಹುಡುಗರಲ್ಲಿ ಅವನೊಬ್ಬ, ಆಗಷ್ಟೆ 2ನೇ ಪಿ.ಯು. ಮುಗಿಸಿದ್ದ. ಕಪ್ಪಗಿದ್ದ ಅನ್ನುವುದ ಬಿಟ್ಟು ಲುಕ್ಸ್ ನಲ್ಲಿ ಓಕೆ. 85 % ಮಾರ್ಕ್ಸ್ ಬಂದಿತ್ತು ಅವನಿಗೆ. ನನ್ನ ಮನೆಯಿಂದ ಕೊಗಳತೆ ದೂರದಲ್ಲಿತ್ತು ಅವನ ಮನೆ... ಅವನ ಅಪ್ಪ-ಅಮ್ಮ ನನ್ನ ತಂದೆ-ತಾಯಿಗೆ ಚೆನ್ನಾಗಿ ಪರಿಚಿತರಿದ್ದರು. ಈಗಲೂ ಗೊತ್ತು ಅ ದಿನ... ಅವನು ಪಿ.ಏಸ್.ಟಿ ಕಾಲೇಜ್ ಗೆ ಸೇರಿದ ಸಮಯ, ಎಷ್ಟು ಖುಷಿಯಿಂದ ನನ್ನ ಹತ್ತಿರ ಬಂದು ಹೇಳಿದ್ದ ಅವನು... " ಅಣ್ಣ.., ಫಸ್ಟ್ ಲಿಸ್ಟ್ನಲ್ಲೇ ಬಂತು ಅಣ್ಣಾ...". ಕಾಲೇಜ್ ಹೋಗಲಿಕೋಸ್ಕರನೇ "ಪಲ್ಸರ್" ಬೈಕ್ ತಗೆದುಕೊಂಡಿದ್ದ ಅವನು...

ನಂತರ ನಾನು ನನ್ನ ಕೆಲಸದಲ್ಲಿ ಮಗ್ನನಾಗಿದ್ದರಿಂದ ಅವನ ಜೊತೆ ಮಾತುಕಥೆ ಅಷ್ಟು ಹೆಚ್ಚಾಗಿ ನೆಡೆಯುತ್ತಿರಲಿಲ್ಲ... ಆದರೂ ಅವನು ಕಂಪ್ಯೂಟರ್ ವಿಷಯವನ್ನು ಪದವಿಯಲ್ಲಿ ಆರಿಸಿ ಕೊಂಡಿದ್ದರಿಂದ ಒಮೊಮ್ಮೆ "ಸಿ ಮತ್ತು ಸಿ++" ವಿಷಯದ ಸಂದೇಹಗಳನ್ನ ನನ್ನ ಹತ್ತಿರ ಕೇಳಲು ಬರುತ್ತಿದ್ದ. ತುಂಬ ಒಳ್ಳೇ ಜ್ನಾಪಕಶಕ್ತಿ ಹೊಂದಿದ್ದ... ಚುರುಕು ಬೇರೆ... ಏನೇ ವಿಷಯ ಇದ್ರೂ ಹೇಳ್ಕೊಳ್ಳ್ತಿದ್ದ. ಅದರೆ ಅಷ್ಟೇ ಸೂಕ್ಷ್ಮ ಮನಸ್ಸಿನವನು ಅವನು. ಸಣ್ಣ ಸಣ್ಣ ವಿಷಯಕ್ಕೆಲ್ಲಾ ಸುಮ್ಮನೆ ಬೇಸರ ಮಾಡಿಕೊಂಡುಬಿಡುತ್ತಿದ್ದ. ನಾ ಅವನಿಗೆ ಮುಂಚೆನೇ ಇದರ ಬಗ್ಗೆ ಹೇಳಿದ್ದೆ.., ಅದರೂ ಅವನು ಅಷ್ಟೇ, ನನ್ನ ಮಾತನ್ನ ಕೇಳುತಿರಲಿಲ್ಲ... ಅವನು ತಾನಾಗಿಯೇ ಮುಂದೆ ಸರಿ ಹೋಗಬಹುದು ಅಂತ ನನ್ನನ್ನ ನಾನೇ ಸಮಧಾನಪಡಿಸಿಕೊಂಡಿದ್ದೆ....

................

ಯಾಕೋ ಕೆಲವು ದಿನದಿಂದ ತುಂಬಾ ಬೇಜಾರು ಮಾಡಿಕೊಂಡಿದ್ದ ಅವನು. ಏನು ಕೇಳಿದರೂ ಬಾಯಿ ಬಿಡುತಿರಲಿಲ್ಲ... ನಾನು ಸಹಾ ಹೇಳುವಂತೆ ಒತ್ತಡ ಹೇರಲು ಹೋಗಲಿಲ್ಲ... ಒಂದು ದಿನ ತುರ್ತು ಕೆಲಸದ ನಿಮಿತ್ತ ನಾನು ನೆಡೆದು ಹೋಗುತ್ತಿದ್ದಾಗ ಹತ್ತಿರದಲ್ಲೇ ಇದ್ದ ಪಾರ್ಕ್ ನಲ್ಲಿ ಅವನು ಒಂದು ಹುಡುಗಿಯ ಜೊತೆ ಮಾತನಾಡುವುದನ್ನ ನೋಡಿದೆ. ಅವಳು ಹೋಗುವ ಅವಸರದಲ್ಲಿದ್ದಳು, ಅವನು ಅವಳನ್ನು ನಿಲ್ಲಿಸುವ ಅವಸರದಲ್ಲಿ..., ಅವನು ಅವಳನ್ನು ಪರಿ-ಪರಿಯಾಗಿ ಬೇಡುತಿದ್ದ ದ್ರುಷ್ಯ ಕಂಡಿತು... ಅದರೂ ಅವಳು ಅಲ್ಲಿಂದ ಅವನನ್ನು ಹಿಂದಿರುಗಿ ನೋಡದೆ ಹೊರಟುಹೋದಳು. ಅವನ ಕಣ್ಣು ಕಣ್ಣೇರಿನಿಂದ ತುಂಬಿ ಹೋದದ್ದು ಕಾಣಿಸಿತು. ಅಳುತ್ತಾ ನಿಂತಿದ್ದ ಅವನು... ನನ್ನ ಮಿತ್ರ ಅಗಲೇ ಬಂದಿದ್ದರಿಂದ ಅವನ ಬಳಿ ಸಾಗಿ ಏನು ಅಯಿತೆಂದು ಕೇಳುವ ನನ್ನ ಪ್ರಯತ್ನ ಅಂದು ಸಾಧ್ಯವಾಗಲಿಲ್ಲ...

*****************************

ಇಷ್ಟರಲ್ಲೇ ನನಗೆ ಕೆಲಸದ ಸಲುವಾಗಿ ಮೈಸೂರಿಗೆ ಹೋಗುವ ಸಂದರ್ಭ ಬಂದಿತು. ಅಲ್ಲಿಂದ ನಾ ನನ್ನ ಮನೆಗೆ ಫೋನ್ ಮಾಡಿದಾಗಲೆಲ್ಲ ನನ್ನ ತಾಯಿ " ಲೋ ಪ್ರತಾಪ, ಮಂಜು ಗೆ ನೀನು ಓನ್ಸಲ ಫೋನ್ ಮಾಡಿ ಕೇಳೋ, ಯಾವಾಗಲೂ ತುಂಬ ಬೇಜಾರ್ ಮಾಡಿಕೊಂಡು ಕೂತಿರ್ತಾನೆ ಅವನು.., ಅವನ್ ತಾಯಿ ಅಂತೂ ಇದರ ಬಗ್ಗೇನೆ ತುಂಬಾನೇ ಮನಸ್ಸಿಗೆ ಹಚ್ಕೊಂಡಿದ್ದಾರೆ ಕಣೋ... ಏನಾದ್ರೂ ಹೇಳಪ್ಪಾ ಅವನಿಗೆ...." ಅಂತ ಹೇಳ್ತಾನೆ ಇದ್ರೂ. ನಾ ಅವನ ಸೆಲ್ ಗೆ ಟ್ರೈ ಮಾಡಿದ್ರೆ ಬೇಕಂತಲೇ ನನ್ನ ನಂಬರ್ ಬಂದ ತಕ್ಷಣ ಕಟ್ ಮಾಡಿಬಿಡುತ್ತಿದ್ದ. ನಾ ನಂತರ ಅವನಿಗೆ ಕಾಲ್ ಮಾಡುವುದನ್ನೇ ನಿಲ್ಲಿಸಿ ಬಿಟ್ಟಿದ್ದೆ..

****************************

ಮನಸ್ಸು ಪುನ: ವಾಸ್ತವಕ್ಕೆ ಜಾರಿ ಬಂತು. ರೈಲು ಹಳಿಯ ಬಳಿ ಬಿದ್ದಿದ ಆ ಹೆಣವನ್ನು ಮತ್ತೊಮ್ಮೆ ನಾ ನೋಡಿದೆ. ಅಗಲೇ ಅವನ ತಂದೆ-ತಾಯಿ ಅಲ್ಲಿ ಬಂದಾಗಿತ್ತು. ಅವರನ್ನು ಸಂತೈಸಲು ಅಲ್ಲಿ ಯಾರಿಗೂ ಸಾಧ್ಯವಾಗಲೇ ಇಲ್ಲ. ಪೊಲೀಸ್ ಪಂಚಾನಾಮೆ, ವಿಚಾರಣೆಯೆಲ್ಲಾ ಮುಗಿದು ದೇಹ ಕೊಟ್ಟ ನಂತರ ಅವನ ಅಂತ್ಯ ಸಂಸ್ಕಾರದ ಕಾರ್ಯ ಮುಗಿಯಿತು... ಅವನ ಮನೆಯಲ್ಲಿ ಸೂತಕದ ಛಾಯೆ... 12ನೇ ದಿನದ ಕಾರ್ಯಕ್ರಮಕ್ಕೆ ನಾ ಹೋದಾಗ ಅವನ ಅಮ್ಮ ಅಳುತ್ತ ನನ್ನ ಕೈಗೆ ಒಂದು ಕವರ್ ಕೊಟ್ಟು... " ಪ್ರತಾಪ್.. ಇದನ್ನು ಅವನು ನಿನಗೆ ಕೊಡಲು ಹೇಳಿದ್ದ ಪಾ... " ಅಂತ ಹೇಳುತ್ತಾ ಒಳಗಡೆ ಹೊರಟು ಹೋದರು.... ನಾ ಇನ್ನೂ ಹೆಚ್ಚು ಮಾತನಾಡದೆ ಮನೆಗೆ ಬಂದು ಮೆಲ್ಲನೆ ಕವರ್ ಒಡೆದು ಆ ಪತ್ರವ ಓದತೊದಗಿದೆ...

--------------------------

" ಅಣ್ಣಾ, ನಿನ್ನ ಹತ್ರ ಒಂದು ಮಾತು ಹೇಳೋದಿತ್ತು. ಕ್ಷಮಿಸು, ಇಷ್ಟು ತಡವಾಗಿ ನಾ ಇದನ್ನ ನಿನಗೆ ಹೇಳ್ತಾಯಿದ್ದೀನಿ... ನನಗೇಕೊ ಇಂದು ಬದುಕುವ ಅಸೆಯೇ ಇಲ್ಲವಾಗಿದೆ... ನಾನು ಪ್ರೀತಿಸಿದ ಹುಡುಗಿ ಪೂರ್ವಿಯನ್ನು ನಂಬಿ ನಾ ಕೆಟ್ಟೆ ಅಣ್ಣಾ. ಇರುವವರೆಗೂ ನನ್ನ ಬಳಿ ಇದ್ದು, ಈಗ ನೀನು ನನ್ನ ಮಾತನಾಡಿಸಬೇಡ, ನಿನ್ನ ಹತ್ರಾ ಅದಿಲ್ಲ, ಇದಿಲ್ಲ ಅಂತಾ ಹೇಳಿ ನನ್ನ ಮನಸ್ಸನ್ನು ನೋಯಿಸ್ತಾ ಇದ್ದಾಳೆ ಅವಳು. ನಾನು ಅವಳನ್ನು ಅಷ್ಟು ಹಚ್ಚಿಕೊಂಡಿದ್ದೇ ತಪ್ಪಾ??. ಇಲ್ಲಾ ಈ ಹುಡುಗಿರೇ ಇಷ್ಟೇನಾ...? ಫೋನ್ ಕಾಲ್ ರಿಸೀವ್ ಮಾಡೋದು ಬಿಟ್ಟು ತುಂಬ ಟೈಮ್ ಅಯ್ತು ಅಣ್ಣಾ. ಏನಂತಾ ಕೇಳುದ್ರೆ ಸರಿಯಾಗಿ ಉತ್ರಾನೂ ಕೊಡೋಲ್ಲಾ... ಅದು ಈಗ ಇನ್ನೋ ಯಾರನ್ನೋ ಹುಡುಕಿ ಕೊಂಡಿದ್ದಾಳೆ, ಅವಳ ಸ್ನೇಹಿತರ ಹತ್ರ ನನ್ನ ಬಗ್ಗೆ ಇಲ್ಲದಿದ್ದನನ್ನೆಲ್ಲಾ ಹೇಳಿದ್ದಾಳೆ ಅವಳು... ಯಾಕಣ್ಣ ಇಂತಾ ಕೆಟ್ಟ ಮನಸ್ಸು ಬಂತು ಅವಳಿಗೆ??? ಹುಡುಗುರ ಕಂಡ್ರೇನೆ ಚೇಂಜ್ ಆಗ್ಬಿಡುವ ಇವರನ್ನಾ ಏನಂತಾ ಕರೀಲಿ ನಾನು... ನನ್ನ ಪ್ರೀತಿನಾ ತಿಂದ್ ಹಾಕಿ ಬಿಟ್ಲಾಣ್ಣ....!, ನನಗೆ ಈ ಜೀವನವೇ ಸಾಕಾಗಿದೆ ಅಣ್ಣಾ..."

****************************

ಓದಿ ಮನಸು ಭಾರವಾಯಿತು... ಈ ಮಾತನ್ನು ಅವನು ಸಲ್ಪ ಸಮಯದ ಮುಂಚೆಯೇ ನನಗೆ ತಿಳಿಸಿದ್ದರೆ ನಾ ಸಲ್ಪ ಟ್ರೈ ಮಾಡಿ ಅದ್ರೂ ಅವನನ್ನ ಸರಿ ದಾರಿಗೆ ತರಬಹುದಿತ್ತು.. ಒಬ್ಬಳ ಮನಸ್ಸನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ತನ್ನ ಜೀವನವನ್ನೇ ಮುಗಿಸಿಕೊಂಡಿದ್ದ ಅವನು. ಕೇವಲ ಒಂದು ಪ್ರೀತಿಗೋಸ್ಕರ...! ಅದು ಇತ್ತೋ, ಇಲ್ಲವೋ, ಇಲ್ಲಾ ಬರಿ ಒನ್ ಸೈಡೋ!!! ಈ ಹುಡುಗರೇ ಇಷ್ಟೇ.. ಎಲ್ಲೋ ಹುಡುಗಿ ಮಾತನಾಡಿಸಿದಳೆಂಬ ಕಾರಣಕ್ಕೆ ಅದನ್ನೇ ಪ್ರೀತಿಯೆಂದು ನಂಬಿ ಅವಳ ಹಿಂದೆ ಬಿದ್ದ್ ಬಿಡೋ ಕೆಲಸ ಮಾಡ್ಕೊಳ್ಬಿಡ್ತಾರೆ... ನಿಜ ವಿಷಯ ಗೊತ್ತಾದ ಮೇಲೆ ಪ್ರಾಣ ಕಳ್ಕೋಳ್ಳೋ ಕೆಲಸ ಮಾಡುತ್ತಾರೆ. ಮಂಜು ಈ ರೀತಿ ಮಾಡಿಕೊಂಡು ಬಿಟ್ಟನಲ್ಲಾ...! ತಾನೇನೋ ಹೋದ, ಅದರೆ ಮನೆಯವರನ್ನೆಲ್ಲಾ ಕಣ್ಣೀರಿನಲ್ಲಿ ಮುಳುಗಿಸಿ ಹೋಗಿದ್ದ ಅವನು. ಹು:, ಪತ್ರವನ್ನ ಪೂರ್ತಿ ಓದಿ ಮುಗಿಸಿದೆ.... ಪತ್ರ ನನ್ನ ಮೇಜಿನ ಒಳಗೆ ಸೇರಿತು... ಮನಸ್ಸು ಕೇಳತೊಡಗಿತು....: ಈ ಹುಡುಗರೇ ಇಷ್ಟೇನಾ..? ಎಲ್ಲಾನೂ ತಮ್ಮ ಮನಸ್ಸಿಗೆ ಬಂದ ಹಾಗೇ ತೋಚಿಕೊಂಡು ಮಾಡಿಕೊಳ್ಳೋದು, ನಂತರ ಏನಾದರೂ ಆಯಿತೆಂದರೆ ಜೀವ ಕಳೆದುಕೊಳ್ಳೋಕೆ ಹೋಗೋದು...! ತಮ್ಮ ನಂಬಿದ ಎಲ್ಲರನ್ನ ನಡು ನೀರಿನಲ್ಲಿ ಬಿಟ್ಟುಹೋಗೋ ಜನಾ ಆಗೋಗ್ತಾರಲ್ಲಾ ಇವರು...!. ಮನಸ್ಸು ಭಾರವಾಗಿ ಅವನ ನೆನಪುಗಳು ಇನ್ನೂ ಬಿಡದೇ ಕಾಡುತಿದ್ದವು... ದೂರದಲ್ಲಿ ಮೊಹಮ್ಮದ್ ರಫಿಯವರ " ನೀ ಏಲ್ಲಿ ನೆಡೆವೇ ದೂರ...ಏಲ್ಲೇಲ್ಲೂ ಶೋಕವೇ..." ಹಾಡು ಕೇಳಿ ಬಂದು ನನ್ನ ಮನಸ್ಸು ಹಾಗೇ ಯೋಚನೆಯ ಅಲೆಯಲ್ಲಿ ತೇಲಿ-ತೇಲಿ ಸಾಗಿ ಹೋಯಿತು...