ಇದು ನಮ್ಮ ಬದುಕು,
![](https://saaranga-aws.s3.ap-south-1.amazonaws.com/s3fs-public/styles/article-landing/public/IMG-20230625-WA0005.jpg?itok=7zyjtGhT)
ಇಂದು ಹನುಮ ನಾಳೆ ಭೀಮ
ಮತ್ತೆ ಆ ರಾಮಾ...
ಕಾಸುಹಾಕಿದರೆ ಬದುಕು ತುಸು ಆರಾಮ..
ಹೊಟ್ಟೆಗಾಗಿ ಈಬಣ್ಣ..
ಹಾಕದಿರೆ ಹಿಡಿಮಣ್ಣ
ಸಂಸಾರ ಸಾಗರೋಲಂಘನ ಬಲು ಕಠಿಣ!
ಈ ಬಹುರೂಪ...
ನಿಶ್ಚಿಂತೆ ಅಪರೂಪ
ಪಾಪಗಳ ಕಳೆಯಲು ದೇವರು ಬಂದ ನಂತೆ..
ಇಲ್ಲಿ ಪಾಪದ ಹೊಟ್ಟೆಯ ಹೊರಲು ದೇವರಾ ವೇಷ,
ವಾಸ್ತವ ಬದುಕಿನ ವಿಪರ್ಯಾಸ!
-ಅಶೋಕ ಪ್ರ ದೇಸಾಯಿ ಕಲಬುರಗಿ