ಇದು ನಿಜವೇ? ನನಗೇಕೊ ಅನುಮಾನ..!!

ಇದು ನಿಜವೇ? ನನಗೇಕೊ ಅನುಮಾನ..!!

ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ, ಸಂಡಿಗೆಗಳೇ, ಕಡುಬು, ಹೋಳಿಗೆ, ಕಜ್ಜಾಯ, ಕರ್ಜಿಕಾಯಿಗಳೇ, ಬೆಣ್ಣೆ, ತುಪ್ಪ, ಹಾಲು, ಮೊಸರುಗಳೇ, ಮುದ್ದೆ, ರೊಟ್ಟಿ, ಚಪಾತಿ, ಪೀಜಾ, ಬರ್ಗರ್ ಗಳೇ, ಚಿಕನ್, ಮಟನ್, ಫಿಶ್, ಪೋರ್ಕ್ ಗಳೇ, ಸೀರೆ, ಲಂಗ, ಬುರ್ಖಾ, ಜೀನ್ಸ್, ಚೂಡಿದಾರ್ ಗಳೇ, ಪ್ಯಾಂಟ್, ಷರ್ಟ್, ಪಂಚೆ, ಲುಂಗಿ, ಪೈಜಾಮಾಗಳೇ, ಹರಿಶಿನ, ಕುಂಕುಮ, ವಿಭೂತಿ, ಧೂಪ, ಪರ್ ಪ್ಯೂಮ್ ಗಳೇ, ರೋಜಾ, ಮಲ್ಲಿಗೆ, ಸಂಪಿಗೆ, ಸೇವಂತಿಗೆ, ಕಾಕಡಾಗಳೇ, ಒಂದು ಜಡೆ, ಎರಡು ಜಡೆ, ಬಾಬ್ ಕಟ್, ಹೇರ್ ಕಟ್ ಗಳೇ, ಗೌಡ, ಲಿಂಗಾಯತ, ದಲಿತ, ಬ್ರಾಹ್ಮಣ, ಕುರುಬ, ಹಿಂದುಳಿದ ವರ್ಗಗಳೇ, ಶಿಯಾ, ಸುನ್ನಿ, ಕ್ಯಾಥೋಲಿಕ್, ಪ್ರಾಟೆಸ್ಟೆಂಟ್, ಜೈನ, ಬೌದ್ಧ, ಪಾರ್ಸಿ, ಯಹೂದಿಗಳೇ, ಕರಿಯ, ಬಿಳಿಯ, ಕೆಂಚ, ಗೋದಿ ಮೈ ಬಣ್ಣಗಳೇ, ಶಿವ, ಜೀಸಸ್, ಪೈಗಂಬರ್, ಗುರುನಾನಕ್, ಬುದ್ದ, ಮಾಹಾವೀರರುಗಳೇ, ರಾಮ,ಇಮ್ರಾನ್, ಜೇಕಬ್, ಸರ್ದಾರ್, ಪಠಾಣ್, ಠಾಕೂರ್ ಗಳೇ, ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಸಂಸ್ಕೃತಗಳೇ, ಕಣ್ಣು, ಕಿವಿ, ಮೂಗು, ಬಾಯಿ, ಕಿಡ್ನಿ, ಹೃದಯಗಳೇ, ಬಿಪಿ, ಶುಗರ್, ಕ್ಯಾನ್ಸರ್, ಏಡ್ಸ್, ಕೊರೋನಾ ವೈರಸ್ ಗಳೇ, ಡಾಕ್ಟರ್, ಆಕ್ಟರ್, ಬೆಗ್ಗರ್, ಮಿನಿಸ್ಟರ್, ರಾಬರ್ಸಗಳೇ, ಅಪ್ಪ, ಅಮ್ಮ, ಅಣ್ಷ, ತಮ್ಮ, ತಂಗಿ, ಬಂಧುಗಳೇ,..

ಪ್ರಕೃತಿಯಲ್ಲಿ ಎಲ್ಲಾ ಒಂದೇ ಕಣ್ರಯ್ಯಾ, ಇಲ್ಲಿ ಯಾವುದೂ ಸೃಷ್ಟಿಸಲು ಸಾಧ್ಯವಿಲ್ರಯ್ಯ, ಯಾವುದೂ ನಾಶ ಮಾಡಲು ಸಾಧ್ಯವಿಲ್ರಯ್ಯ, ರೂಪ ಆಕಾರ ಗುಣಗಳು ಮಾತ್ರ ಬೇರೆಯಾಗಿರುತ್ತದ್ರಯ್ಯ, ತಾರತಮ್ಯ ಎಲ್ಲಾ ನಿಮ್ಮ ಭ್ರಮೆಯಯ್ಯ, ಇಷ್ಟು ಸರಳ ವಿಷಯ ಅರ್ಥವಾಗಲು ಸಹಸ್ರಾರು ವರ್ಷ ಬೇಕೇನ್ರಯ್ಯ, ಆದರೂ ನಾವು ಹೇಳಿಕೊಳ್ಳುತ್ತೇವೆ. ಮಾನವ ಮುಂದುವರಿದ ನಾಗರೀಕ ಸಮಾಜದ, ಅತ್ಯಂತ ಬುದ್ಧಿವಂತ ಪ್ರಾಣಿಯೆಂದು, ಇದು ನಿಜವೇ? ನನಗೇಕೊ ಅನುಮಾನ.!! ನಿಮಗೆ....?

**

ಮಲೆನಾಡು - ಮಳೆನಾಡು ಕೊಡಗಿನ ಪ್ರೀತಿಯ ಆತ್ಮೀಯ ಆತಿಥ್ಯವನ್ನು ನೆನೆಯುತ್ತಾ, ಭಾರವಾದ ಹೃದಯದೊಂದಿಗೆ, ಮತ್ತಷ್ಟು ಉತ್ಸಾಹದಿಂದ ಪದಗಳಿಗೆ ನಿಲುಕದ ಭಾವಗಳೊಂದಿಗೆ..

  • 298 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನಿಂದ ಸುಮಾರು‌ 20 ಕಿಲೋಮೀಟರ್  ದೂರದ ಶನಿವಾರಸಂತೆ ಗ್ರಾಮ  ತಲುಪಿತು. ಇಂದು 26/8/2021 ಗುರುವಾರ 299 ನೆಯ ದಿನ  ನಮ್ಮ ಕಾಲ್ನಡಿಗೆ ಕೊಡಗು ಜಿಲ್ಲೆಯ ಶನಿವಾರಸಂತೆ ಗ್ರಾಮದಿಂದ  ಸುಮಾರು 22 ಕಿಲೋ ಮೀಟರ್ ‌ದೂರದ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕು ತಲುಪಲಿದೆ. ನಾಳೆ 27/8/2021 ಶುಕ್ರವಾರ 300 ನೆಯ ದಿನ ನಮ್ಮ ಕಾಲ್ನಡಿಗೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನತ್ತಾ...

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ: ಮಡಿಕೇರಿ ಜಿಲ್ಲೆಯಲ್ಲಿ ಪಾದಯಾತ್ರೆಯ ಸಮಯದಲ್ಲಿ ಕಂಡುಬಂದ ದೃಶ್ಯ