ಇದು ಭರತವರ್ಷ : ಆ ಹೆಣ್ಣುಮಗಳ ಉಪವಾಸದ ಹೋರಾಟಕ್ಕೆ ಹತ್ತು ವರ್ಷ!
ಬರಹ
ಅದು ೨೦೦೦ದ ನವೆಂಬರ್ ೧ ರ ದಿನ.ಮಣಿಪುರದ 'ಮಾಲೋಂ' ಎಂಬಲ್ಲಿ ಬಸ್ಸಿಗಾಗಿ ಕಾಯುತಿದ್ದ ಹತ್ತು ಜನರನ್ನ ಅಸ್ಸಾಂ ರೈಫಲ್ಸ್ ಯೋಧರು ಗುಂಡಿಕ್ಕಿ ಕೊಂದರು. ಕೆಲ ದಿನಗಳ ಹಿಂದೆ ಅಸ್ಸಾಂ ರೈಫಲ್ಸ್ ಯೋಧರ ಮೇಲೆ ನಡೆದ ದಾಳಿಯ ಶಂಕಿತರು ಇವರು ಅನ್ನುವುದು ಭದ್ರತಾ ಪಡೆಯವರ ಸಮಜಾಯಿಷಿ.ಆದರೆ ಅವರು ಬಸ್ಸಿಗೆ ಕಾಯುತ್ತ ನಿಂತಿದ್ದ ಮುಗ್ದ ಮಣಿಪುರಿಗಳು ಅನ್ನುವುದು ಅಲ್ಲಿನ ಜನರ ವಾದ.ಹಾಗೆ ಸತ್ತವರಲ್ಲಿ ೬೮ರ ಹೆಣ್ಣುಮಗಳು ಇದ್ದಳು, ೧೮ ರ ಹೆಣ್ಣುಮಗಳು ಇದ್ದಳು.ಆ ಹದಿನೆಂಟರ ಹೆಣ್ಣು ಮಗಳ ಹೆಸರು 'ಸಿನಂ ಚಂದ್ರಮಣಿ' ಆಕೆ ೧೯೮೮ರ ರಾಷ್ಟ್ರೀಯ ಮಕ್ಕಳ ಶೌರ್ಯ ಪ್ರಶಸ್ತಿ ವಿಜೇತೆ!.ಮರು ದಿನ ಜನ ಬೀದಿಗಿಳಿದರು ತನಿಖೆಗೆ ಆಗ್ರಹಿಸಿದರು ಏನು ಪ್ರಯೋಜನವಾಗಲಿಲ್ಲ.ಇದನ್ನೆಲ್ಲಾ ನೋಡಿ ರೋಸಿ ಹೋಗಿ ಭದ್ರತಾ ಪಡೆಗಳಿಗೆ ನೀಡಿರುವ ಈ ವಿವಾದಾತ್ಮಕ AFSP (Armed Forces Special Powers Act) ಅನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಆಮರಣಾಂತ ಉಪವಾಸಕ್ಕಿಳಿದ ಯುವತಿಯೇ 'ಇರೊಂ ಚಾನು ಶರ್ಮಿಳ' ಆಗ ಅವಳ ವಯಸ್ಸು ೨೮!
೨೦೦೦ದ ನವೆಂಬರ್ ೪ ರಂದು ಉಪವಾಸ ಸತ್ಯಾಗ್ರಹ ಆರಂಭಿಸಿದ ಆಕೆಯನ್ನ , ನವೆಂಬರ್ ೬ ರಂದು,ಆತ್ಮ ಹತ್ಯೆ ಯತ್ನದ ಕೇಸಿನಲ್ಲಿ ಬಂದಿಸಿಲಾಯಿತು.ಬೇಡಿಕೆ ಈಡೇರುವವರೆಗೂ ಉಪವಾಸ ಅಂತ್ಯಗೊಳಿಸುವುದಿಲ್ಲ ಎಂದು ಬಿಗಿ ಪಟ್ಟು ಹಿಡಿದಿರುವ ಇವಳಿಗೆ ಈಗ ವೈದ್ಯರು ದ್ರವರೂಪದ ಆಹಾರವನ್ನ ಮೂಗಿಗೊಂದು ನಳಿಕೆಯ ಮೂಲಕ ಕೊಡುತಿದ್ದಾರೆ (ಒಮ್ಮೆ ಯೋಚಿಸಿ,ಜ್ವರ ಬಂದರೆ ಒಂದು ಸೂಜಿ ಚುಚ್ಚಿಸಿಕೊಳ್ಳುವ ನೋವಿಗೆ ಅಳುಕುವ ನಾವು!ಹತ್ತು ವರ್ಷದಿಂದ ಇಂತ ಯಾತನೆಯನ್ನ ಸಹಿಸಿಕೊಂಡು ತಾನು ನಂಬಿರುವ ಸಿದ್ದಾಂತಕ್ಕೆ ಬದ್ದಳಾಗಿರುವ ಅವಳು!),ಆಕೆ ಅದೆಂತ ಗಟ್ಟಿಗಿತ್ತಿಯೆಂದರೆ ಅವಳ ಉಪವಾಸಕ್ಕೆ ಹತ್ತು ವರ್ಷವಾಯಿತು,ದೈಹಿಕವಾಗಿ ಕುಗ್ಗಿ ಹೋಗಿದ್ದಳಾದರು ಮಾನಸಿಕವಾಗಿ ಆಕೆಯಿನ್ನೂ ಗಟ್ಟಿ! ಅವಳ ಧ್ಯೇಯ,ಉದ್ದೇಶದಿಂದ ಹಿಂದೆ ಸರಿದಿಲ್ಲ. ೨೦೦೫ರಲ್ಲಿ ಈಕೆಯ ಹೆಸರನ್ನು ನೊಬೆಲ್ ಪ್ರಶಸ್ತಿಗಾಗಿ ಹೆಸರಿಸಲಾಗಿತ್ತು. ಈಕೆಯನ್ನ ಬೆಂಬಲಿಸಿ ಇಂದು ಬೆಂಗಳೂರಿನಲ್ಲಿ ಮಹಾತ್ಮರ ಪ್ರತಿಮೆಯ ಬಳಿ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ.ಪ್ರಧಾನಿ,ರಾಷ್ಟ್ರಪತಿ ಎಲ್ಲರಿಗು ಖುದ್ದಾಗಿ ಪತ್ರ ಬರೆದಿದ್ದಾಳೆ ಪ್ರಯೋಜನವಾಗಿಲ್ಲ!
ಹೌದು! ಇಷ್ಟೆಲ್ಲಾ ಆದರೂ ನಮ್ಮ ಘನ ಸರ್ಕಾರಗಳು ಏನು ಮಾಡಿದವು ಅನ್ನುವುದೇ ಮುಂದಿನ ಪ್ರಶ್ನೆ?.೨೦೦೦ದಿಂದ ಆಕೆಯ ಪ್ರತಿಭಟನೆ ಶುರುವಾಯಿತಾದರೂ ಸರ್ಕಾರ ನಿದ್ದೆಯಿಂದ ಏಳಲು ಮತ್ತೊಮ್ಮೆ 'ಮನೋರಮಾ ದೇವಿ' ಎಂಬಾಕೆಯ ಪ್ರಾಣ ಹೋಗಬೇಕಾಯಿತು,ಆ ನಂತರ ಎಚ್ಚೆತ್ತು ಸುಪ್ರಿಂ ಕೋರ್ಟಿನ ಜಸ್ಟಿಸ್ ಜೀವನ ರೆಡ್ಡಿಯವರ ಆಯೋಗ ಸ್ಥಾಪಿಸಲಾಯಿತು.ಆಯೋಗ ವರದಿ ನೀಡಿದೆ ಮತ್ತೆ ಅದುas usual ಮೂಲೆ ಸೇರಿದೆ.ಸರ್ಕಾರ AFSP ಯನ್ನ ಹಿಂತೆಗೆದುಕೊಳ್ಳಲು ತಯಾರಿಲ್ಲ. ಭದ್ರಾತಾ ದೃಷ್ಟಿಯಿಂದ ಅದು ಸರಿ ಇರಬಹುದು,ಆದರೂ ಮಾನವೀಯ ದೃಷ್ಟಿಯಿಂದ ಆ ಜನರ ಪಾಡನ್ನ ಒಮ್ಮೆ ಅರ್ಥ ಮಾಡಿಕೊಳ್ಳಬೇಕಲ್ಲವೇ? ಒಂದು ಕಡೆ ಪ್ರತ್ಯೇಕವಾದಿಗಳು,ಇನ್ನೊಂದು ಕಡೆ ಭದ್ರತಾ ಪಡೆಗಳು ಹಾಗು ಸರ್ಕಾರ ನಡುವೆ ಸಿಕ್ಕ ಮಣಿಪುರಿಗಳ ಪಾಡು ದೇವರಿಗೆ ಪ್ರೀತಿ!
ಹಿಂದೆ ಖಲಿಸ್ತಾನ್ ಚಳುವಳಿಯಲ್ಲೂ ಸರ್ಕಾರ ಅತಿರೇಖಕ್ಕೆ ಹೋಗುವವರೆಗೂ ಕಣ್ಮುಚ್ಚಿ ಕುಳಿತಿತ್ತು.ಆಮೇಲೆ ಅದಕ್ಕೆ ತೆತ್ತ ದಂಡ ಮರೆತೆವಾ?ಸಿಕ್ಕ ಸಿಕ್ಕ ಕಡೆ ಸೈನ್ಯ ನುಗ್ಗಿಸಿದರೆ ಏನು ಆಗುತ್ತದೆ ಅನ್ನುವುದನ್ನ ಇತಿಹಾಸ ಹೇಳಿ ಕೊಟ್ಟಿದೆ ಅದನ್ನ ಮರೆತೆವಾ? ಅಷ್ಟಕ್ಕೂ ಗುಂಡಿಗೆ ಎದೆಯೋಡ್ದುವವರು ಸಾಮನ್ಯ ಜನ,ಸೈನಿಕರು.ನಾಯಕರೆನಿಸಿಕೊಂಡವರು ಹಿಂದಿನಿಂದ ನಿಂತು ನೋಡುವವರಲ್ಲವೇ ಅಷ್ಟಾಗಿ ಬಿಸಿ ತಟ್ಟುವುದಿಲ್ಲ ಬಿಡಿ.ನಮ್ಮ ಸರ್ಕಾರಗಳೇಕೆ ಹೀಗೆ? ೨೦೦೦ದ ಆಸು ಪಾಸಿನಲ್ಲಿ ಪಶ್ಚಿಮ ಘಟ್ಟದಲ್ಲಿ ನಕ್ಸಲರು ಕಾಣಿಸಿ ಕೊಳ್ಳುವವರೆಗೂ ಕುದುರೆಮುಖದ ಹೋರಾಟದತ್ತ ತಿರುಗಿಯೂ ನೋಡುತ್ತಿರಲಿಲ್ಲ,ಈಗ ನಕ್ಸಲ್ ನಿಗ್ರಹ ಪಡೆ ಬಂದಿದೆ. ಅಂದೇ ಆ ಹೋರಾಟದ ಬಗ್ಗೆ ಗಮನ ಹರಿಸಿದ್ದರೆ, ಹಿತ ರಕ್ಷಕರ ಸೋಗಿನಲ್ಲಿ ಬಂದ ನಕ್ಸಲರಿಗೆ ಜಾಗವೇ ಇರುತ್ತಿತ್ತಾ?, ಅಸ್ತ್ರಗಳನ್ನ ಕೆಳಗಿಟ್ಟು ಬನ್ನಿ ಅನ್ನುವ ಸರ್ಕಾರಗಳಿಗೆ ಇರೋಮ್ ಅಂತವರು ಮಾಡುವ ಅಹಿಂಸಾತ್ಮಕ ಹೋರಾಟದ ಬೆಲೆ ಗೊತ್ತಾಗುವುದು ಯಾವಾಗ? ಉಗುರಿನಿಂದ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡು, ಕಡೆಗೆ ಬೆಟ್ಟ ಅಗೆದು ಇಲಿ ಹಿಡಿಯುವ ಕೆಲಸವನ್ನ ಇನ್ನಾದರೂ ಕೈ ಬಿಡಲಿ ಈ ಸರ್ಕಾರಗಳು.
ಪಬ್ಬ್ ದಾಳಿಯಾದಾಗ,ಚಿಕ್ಕ ಪುಟ್ಟ ಕಿಡಿಗೇಡಿ ಕ್ರುತ್ಯಗಳನೆಲ್ಲ ದೊಡ್ಡದಾಗಿ ಮಾಡಿ ಅಬ್ಬರಿಸಿ ಬೊಬ್ಬಿಡುವ ಕೆಲ ಮಾಧ್ಯಮಗಳಿಗೆ ಇಂತವರು ಕಾಣುವುದಿಲ್ಲ,ಅಷ್ಟಕ್ಕೂ ಅವಳೇನು ಮಂತ್ರಿಯು ಅಲ್ಲ, ಇಲ್ಲ ಶ್ರೀಮಂತರ ಮಗಳು ಅಲ್ಲ.ತೀರ ಅವಳ ಹಿಂದೆ ಯಾವ ರಾಜಕೀಯ ಪಕ್ಷಗಳು ಇಲ್ಲ, ಧರ್ಮಗಳು ಇಲ್ಲ! ಅವಳು ಸಾಮನ್ಯ ಮಣಿಪುರಿ ಬುಡಕಟ್ಟಿನ ಮಗಳು! ೪-೫ ದಿನದಿಂದ ಉಪವಾಸ ಕುಳಿತ ತೆಲಂಗಾಣ ಹೋರಾಟಗಾರರ ಬಗ್ಗೆ ವರದಿಯಾಗುತ್ತಿದೆ (ಅದು ತಪ್ಪು ಎಂದು ಹೇಳುತ್ತಿಲ್ಲ), ಇನ್ನ ಕೆಲ ರಾಜಕಾರಣಿಗಳು ಉಪವಾಸ ಅಂತ ಮಾಡುವ ನಾಟಕಗಳು ರೆಕ್ಕೆ ಪುಕ್ಕ ಕಟ್ಟಿಕೊಂಡು ಹಾರಾಡುತ್ತವೆ. ಮಾಧ್ಯಮಗಳೇ ತನ್ನ ಧ್ಯೇಯ ,ನಂಬಿಕೆಗಾಗಿ ಬಡಿದಾದುತ್ತಿರುವ ಇಂತವರನ್ನು ನೋಡಿ ಪ್ಲೀಸ್.
ಇನ್ನ ನಾವು! ನಿಜ ಹೇಳಿ,ನಮ್ಮಲ್ಲಿ ಅದೆಷ್ಟು ಜನರಿಗೆ ಈಶಾನ್ಯ ಭಾರತದ ಬಗ್ಗೆ ಗೊತ್ತು? ನಮಗೆ ಗೊತ್ತಿರುವುದೊಂದೇ ಕಾಶ್ಮೀರ! ಅದು ಬಿಟ್ಟರೆ ಮಂದಿರ,ಮಸೀದಿ,ಚರ್ಚು! ಇಷ್ಟೇ ನಾ? ಆ ಜೀವಗಳಿಗೆ ಬೆಲೆ ಇಲ್ವಾ? ರಸ್ತೆಯಲ್ಲಿ ಅವರನ್ನ ಕಂಡಾಕ್ಷಣ 'ಚಿಂಗಿ' ಅನ್ನುವ ನಮಗೆ ಅವರು ಭಾರತೀಯರು ಅನ್ನುವುದು ಗೊತ್ತಿಲ್ಲವೇ? ಯೋಚಿಸಬೇಕಾದ ಕಾಲ ಬಂದಿದೆ. ಇತ್ತೀಚಿಗೆ ಚೀನಿಗಳು ಅರುಣಾಚಲ ನಮ್ಮದು ಅಂದಾಕ್ಷಣ ಮೈ ಕೊಡವಿ ಎದ್ದ ಸರ್ಕಾರಕ್ಕೆ, ಅರುಣಾಚಲ ಎಂಬ ರಾಜ್ಯವಿರುವುದು ಭಾರತದಲ್ಲೇ ಅಂತ ತೋರಿಸಲು ಅವರೇ ಬರಬೇಕಾಯಿತು! ಅರುಣಾಚಲ ನಮ್ಮ ಅವಿಭಾಜ್ಯ ಅಂಗ, ಮಣಿಪುರ,ನಾಗಲ್ಯಾಂಡ್ ನಮ್ಮದು ಅನ್ನುವ ಸರ್ಕಾರಕ್ಕೆ, ಅಲ್ಲಿರುವ ನಮ್ಮವರ ಪಾಡು ಗೊತ್ತಿಲ್ಲವೇ? ನಮ್ಮದು ಅಂತ ಬೋಬ್ಬಿಡುವವರು ನಮ್ಮವರಿಗಾಗಿ ಏನು ಮಾಡಿದ್ದೇವೆ? ಏನು ಮಾಡುತಿದ್ದೇವೆ ಅನ್ನುವುದನ್ನು ಹೇಳಬೇಕಾಗಿದೆ. ಮಣಿಪುರದ ರಕ್ತ ಸಿಕ್ತ ಅಧ್ಯಾಕ್ಕೆ ಕೆಲ ತಿಂಗಳ ಹಿಂದೆ ಇಬ್ಬರು ಯುವಕರ ಹಾಗು ಒಬ್ಬ ತುಂಬು ಗರ್ಭಿಣಿಯ ಬಲಿ ಸೇರ್ಪಡೆಯಾಯಿತು.ಅಂದಿನಿದ ತನಿಖೆಗೆ ಆಗ್ರಹಿಸಿ ಬಂದ್ ಆಗಿರುವ ಶಾಲಾ ಕಾಲೇಜುಗಳು ಇನ್ನು ತೆರೆಯುತ್ತಿಲ್ಲ,ಅಂದ ಮೇಲೆ ಅಲ್ಲಿ ಸರ್ಕಾರವಿದೆಯ? ಇದ್ದರು ಏನು ಮಾಡುತ್ತಿದೆ? ಆಡಳಿತ ನಡೆಸಲು ಸಾಧ್ಯವಾಗದಿದ್ದರೆ, ಅದನ್ನ ಒಂದು ರಾಜ್ಯವಾಗಿ ನಡೆಸಿಕ್ಕೊಳ್ಳಲು ಸಾಧ್ಯವಾಗದಿದ್ದರೆ ಇನ್ಯಾವ ಪುರುಷಾರ್ಥಕ್ಕಾಗಿ ಅದನ್ನ ಭವ್ಯ ಭಾರತದ ಅವಿಭಾಜ್ಯ ಅಂಗವೆನ್ನಬೇಕು?
ಗಾಂಧೀ ಜಯಂತಿಯಂದು ಮಹಾತ್ಮನ ಗುಣಗಾನ ಮಾಡಿ,ನಮ್ಮದು ಅಹಿಂಸೆ,ಶಾಂತಿಗೆ ಬೆಲೆ ಕೊಡುವ ದೇಶ ಎನ್ನುವ ಮಾಹಾನ್ ನಾಯಕರೇ, ಇದೆ ಅಹಿಂಸೆ,ಶಾಂತಿಯ ಸಿದ್ದಾಂತ ನಂಬಿ ಹತ್ತು ವರ್ಷದಿಂದ ಹೋರಾಡುತ್ತಿರುವ ಆ ಹೆಣ್ಣು ಮಗಳ, ಮತ್ತೊಂದಿಷ್ಟು ಮುಗ್ದ ಜನರ ಕಡೆಯೂ ಒಮ್ಮೆ ದೃಷ್ಟಿ ಹಾಯಿಸಿ.ಇಲ್ಲ ಬಂದೂಕಿನಿಂದಲೇ ಪರಿಹಾರವೆಂದರೆ 'ಕಣ್ಣಿಗೆ ಕಣ್ಣು ಎಂಬ ಸಿದ್ದಾಂತ ಜಗತ್ತನ್ನೇ ಕುರುಡಾಗಿಸುತ್ತದೆ!' ಅನ್ನುವ ಮಹಾತ್ಮರ ಮಾತನ್ನ ನೆನಪಿಡಿ!
೨೦೦೦ದ ನವೆಂಬರ್ ೪ ರಂದು ಉಪವಾಸ ಸತ್ಯಾಗ್ರಹ ಆರಂಭಿಸಿದ ಆಕೆಯನ್ನ , ನವೆಂಬರ್ ೬ ರಂದು,ಆತ್ಮ ಹತ್ಯೆ ಯತ್ನದ ಕೇಸಿನಲ್ಲಿ ಬಂದಿಸಿಲಾಯಿತು.ಬೇಡಿಕೆ ಈಡೇರುವವರೆಗೂ ಉಪವಾಸ ಅಂತ್ಯಗೊಳಿಸುವುದಿಲ್ಲ ಎಂದು ಬಿಗಿ ಪಟ್ಟು ಹಿಡಿದಿರುವ ಇವಳಿಗೆ ಈಗ ವೈದ್ಯರು ದ್ರವರೂಪದ ಆಹಾರವನ್ನ ಮೂಗಿಗೊಂದು ನಳಿಕೆಯ ಮೂಲಕ ಕೊಡುತಿದ್ದಾರೆ (ಒಮ್ಮೆ ಯೋಚಿಸಿ,ಜ್ವರ ಬಂದರೆ ಒಂದು ಸೂಜಿ ಚುಚ್ಚಿಸಿಕೊಳ್ಳುವ ನೋವಿಗೆ ಅಳುಕುವ ನಾವು!ಹತ್ತು ವರ್ಷದಿಂದ ಇಂತ ಯಾತನೆಯನ್ನ ಸಹಿಸಿಕೊಂಡು ತಾನು ನಂಬಿರುವ ಸಿದ್ದಾಂತಕ್ಕೆ ಬದ್ದಳಾಗಿರುವ ಅವಳು!),ಆಕೆ ಅದೆಂತ ಗಟ್ಟಿಗಿತ್ತಿಯೆಂದರೆ ಅವಳ ಉಪವಾಸಕ್ಕೆ ಹತ್ತು ವರ್ಷವಾಯಿತು,ದೈಹಿಕವಾಗಿ ಕುಗ್ಗಿ ಹೋಗಿದ್ದಳಾದರು ಮಾನಸಿಕವಾಗಿ ಆಕೆಯಿನ್ನೂ ಗಟ್ಟಿ! ಅವಳ ಧ್ಯೇಯ,ಉದ್ದೇಶದಿಂದ ಹಿಂದೆ ಸರಿದಿಲ್ಲ. ೨೦೦೫ರಲ್ಲಿ ಈಕೆಯ ಹೆಸರನ್ನು ನೊಬೆಲ್ ಪ್ರಶಸ್ತಿಗಾಗಿ ಹೆಸರಿಸಲಾಗಿತ್ತು. ಈಕೆಯನ್ನ ಬೆಂಬಲಿಸಿ ಇಂದು ಬೆಂಗಳೂರಿನಲ್ಲಿ ಮಹಾತ್ಮರ ಪ್ರತಿಮೆಯ ಬಳಿ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ.ಪ್ರಧಾನಿ,ರಾಷ್ಟ್ರಪತಿ ಎಲ್ಲರಿಗು ಖುದ್ದಾಗಿ ಪತ್ರ ಬರೆದಿದ್ದಾಳೆ ಪ್ರಯೋಜನವಾಗಿಲ್ಲ!
ಹೌದು! ಇಷ್ಟೆಲ್ಲಾ ಆದರೂ ನಮ್ಮ ಘನ ಸರ್ಕಾರಗಳು ಏನು ಮಾಡಿದವು ಅನ್ನುವುದೇ ಮುಂದಿನ ಪ್ರಶ್ನೆ?.೨೦೦೦ದಿಂದ ಆಕೆಯ ಪ್ರತಿಭಟನೆ ಶುರುವಾಯಿತಾದರೂ ಸರ್ಕಾರ ನಿದ್ದೆಯಿಂದ ಏಳಲು ಮತ್ತೊಮ್ಮೆ 'ಮನೋರಮಾ ದೇವಿ' ಎಂಬಾಕೆಯ ಪ್ರಾಣ ಹೋಗಬೇಕಾಯಿತು,ಆ ನಂತರ ಎಚ್ಚೆತ್ತು ಸುಪ್ರಿಂ ಕೋರ್ಟಿನ ಜಸ್ಟಿಸ್ ಜೀವನ ರೆಡ್ಡಿಯವರ ಆಯೋಗ ಸ್ಥಾಪಿಸಲಾಯಿತು.ಆಯೋಗ ವರದಿ ನೀಡಿದೆ ಮತ್ತೆ ಅದುas usual ಮೂಲೆ ಸೇರಿದೆ.ಸರ್ಕಾರ AFSP ಯನ್ನ ಹಿಂತೆಗೆದುಕೊಳ್ಳಲು ತಯಾರಿಲ್ಲ. ಭದ್ರಾತಾ ದೃಷ್ಟಿಯಿಂದ ಅದು ಸರಿ ಇರಬಹುದು,ಆದರೂ ಮಾನವೀಯ ದೃಷ್ಟಿಯಿಂದ ಆ ಜನರ ಪಾಡನ್ನ ಒಮ್ಮೆ ಅರ್ಥ ಮಾಡಿಕೊಳ್ಳಬೇಕಲ್ಲವೇ? ಒಂದು ಕಡೆ ಪ್ರತ್ಯೇಕವಾದಿಗಳು,ಇನ್ನೊಂದು ಕಡೆ ಭದ್ರತಾ ಪಡೆಗಳು ಹಾಗು ಸರ್ಕಾರ ನಡುವೆ ಸಿಕ್ಕ ಮಣಿಪುರಿಗಳ ಪಾಡು ದೇವರಿಗೆ ಪ್ರೀತಿ!
ಹಿಂದೆ ಖಲಿಸ್ತಾನ್ ಚಳುವಳಿಯಲ್ಲೂ ಸರ್ಕಾರ ಅತಿರೇಖಕ್ಕೆ ಹೋಗುವವರೆಗೂ ಕಣ್ಮುಚ್ಚಿ ಕುಳಿತಿತ್ತು.ಆಮೇಲೆ ಅದಕ್ಕೆ ತೆತ್ತ ದಂಡ ಮರೆತೆವಾ?ಸಿಕ್ಕ ಸಿಕ್ಕ ಕಡೆ ಸೈನ್ಯ ನುಗ್ಗಿಸಿದರೆ ಏನು ಆಗುತ್ತದೆ ಅನ್ನುವುದನ್ನ ಇತಿಹಾಸ ಹೇಳಿ ಕೊಟ್ಟಿದೆ ಅದನ್ನ ಮರೆತೆವಾ? ಅಷ್ಟಕ್ಕೂ ಗುಂಡಿಗೆ ಎದೆಯೋಡ್ದುವವರು ಸಾಮನ್ಯ ಜನ,ಸೈನಿಕರು.ನಾಯಕರೆನಿಸಿಕೊಂಡವರು ಹಿಂದಿನಿಂದ ನಿಂತು ನೋಡುವವರಲ್ಲವೇ ಅಷ್ಟಾಗಿ ಬಿಸಿ ತಟ್ಟುವುದಿಲ್ಲ ಬಿಡಿ.ನಮ್ಮ ಸರ್ಕಾರಗಳೇಕೆ ಹೀಗೆ? ೨೦೦೦ದ ಆಸು ಪಾಸಿನಲ್ಲಿ ಪಶ್ಚಿಮ ಘಟ್ಟದಲ್ಲಿ ನಕ್ಸಲರು ಕಾಣಿಸಿ ಕೊಳ್ಳುವವರೆಗೂ ಕುದುರೆಮುಖದ ಹೋರಾಟದತ್ತ ತಿರುಗಿಯೂ ನೋಡುತ್ತಿರಲಿಲ್ಲ,ಈಗ ನಕ್ಸಲ್ ನಿಗ್ರಹ ಪಡೆ ಬಂದಿದೆ. ಅಂದೇ ಆ ಹೋರಾಟದ ಬಗ್ಗೆ ಗಮನ ಹರಿಸಿದ್ದರೆ, ಹಿತ ರಕ್ಷಕರ ಸೋಗಿನಲ್ಲಿ ಬಂದ ನಕ್ಸಲರಿಗೆ ಜಾಗವೇ ಇರುತ್ತಿತ್ತಾ?, ಅಸ್ತ್ರಗಳನ್ನ ಕೆಳಗಿಟ್ಟು ಬನ್ನಿ ಅನ್ನುವ ಸರ್ಕಾರಗಳಿಗೆ ಇರೋಮ್ ಅಂತವರು ಮಾಡುವ ಅಹಿಂಸಾತ್ಮಕ ಹೋರಾಟದ ಬೆಲೆ ಗೊತ್ತಾಗುವುದು ಯಾವಾಗ? ಉಗುರಿನಿಂದ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡು, ಕಡೆಗೆ ಬೆಟ್ಟ ಅಗೆದು ಇಲಿ ಹಿಡಿಯುವ ಕೆಲಸವನ್ನ ಇನ್ನಾದರೂ ಕೈ ಬಿಡಲಿ ಈ ಸರ್ಕಾರಗಳು.
ಪಬ್ಬ್ ದಾಳಿಯಾದಾಗ,ಚಿಕ್ಕ ಪುಟ್ಟ ಕಿಡಿಗೇಡಿ ಕ್ರುತ್ಯಗಳನೆಲ್ಲ ದೊಡ್ಡದಾಗಿ ಮಾಡಿ ಅಬ್ಬರಿಸಿ ಬೊಬ್ಬಿಡುವ ಕೆಲ ಮಾಧ್ಯಮಗಳಿಗೆ ಇಂತವರು ಕಾಣುವುದಿಲ್ಲ,ಅಷ್ಟಕ್ಕೂ ಅವಳೇನು ಮಂತ್ರಿಯು ಅಲ್ಲ, ಇಲ್ಲ ಶ್ರೀಮಂತರ ಮಗಳು ಅಲ್ಲ.ತೀರ ಅವಳ ಹಿಂದೆ ಯಾವ ರಾಜಕೀಯ ಪಕ್ಷಗಳು ಇಲ್ಲ, ಧರ್ಮಗಳು ಇಲ್ಲ! ಅವಳು ಸಾಮನ್ಯ ಮಣಿಪುರಿ ಬುಡಕಟ್ಟಿನ ಮಗಳು! ೪-೫ ದಿನದಿಂದ ಉಪವಾಸ ಕುಳಿತ ತೆಲಂಗಾಣ ಹೋರಾಟಗಾರರ ಬಗ್ಗೆ ವರದಿಯಾಗುತ್ತಿದೆ (ಅದು ತಪ್ಪು ಎಂದು ಹೇಳುತ್ತಿಲ್ಲ), ಇನ್ನ ಕೆಲ ರಾಜಕಾರಣಿಗಳು ಉಪವಾಸ ಅಂತ ಮಾಡುವ ನಾಟಕಗಳು ರೆಕ್ಕೆ ಪುಕ್ಕ ಕಟ್ಟಿಕೊಂಡು ಹಾರಾಡುತ್ತವೆ. ಮಾಧ್ಯಮಗಳೇ ತನ್ನ ಧ್ಯೇಯ ,ನಂಬಿಕೆಗಾಗಿ ಬಡಿದಾದುತ್ತಿರುವ ಇಂತವರನ್ನು ನೋಡಿ ಪ್ಲೀಸ್.
ಇನ್ನ ನಾವು! ನಿಜ ಹೇಳಿ,ನಮ್ಮಲ್ಲಿ ಅದೆಷ್ಟು ಜನರಿಗೆ ಈಶಾನ್ಯ ಭಾರತದ ಬಗ್ಗೆ ಗೊತ್ತು? ನಮಗೆ ಗೊತ್ತಿರುವುದೊಂದೇ ಕಾಶ್ಮೀರ! ಅದು ಬಿಟ್ಟರೆ ಮಂದಿರ,ಮಸೀದಿ,ಚರ್ಚು! ಇಷ್ಟೇ ನಾ? ಆ ಜೀವಗಳಿಗೆ ಬೆಲೆ ಇಲ್ವಾ? ರಸ್ತೆಯಲ್ಲಿ ಅವರನ್ನ ಕಂಡಾಕ್ಷಣ 'ಚಿಂಗಿ' ಅನ್ನುವ ನಮಗೆ ಅವರು ಭಾರತೀಯರು ಅನ್ನುವುದು ಗೊತ್ತಿಲ್ಲವೇ? ಯೋಚಿಸಬೇಕಾದ ಕಾಲ ಬಂದಿದೆ. ಇತ್ತೀಚಿಗೆ ಚೀನಿಗಳು ಅರುಣಾಚಲ ನಮ್ಮದು ಅಂದಾಕ್ಷಣ ಮೈ ಕೊಡವಿ ಎದ್ದ ಸರ್ಕಾರಕ್ಕೆ, ಅರುಣಾಚಲ ಎಂಬ ರಾಜ್ಯವಿರುವುದು ಭಾರತದಲ್ಲೇ ಅಂತ ತೋರಿಸಲು ಅವರೇ ಬರಬೇಕಾಯಿತು! ಅರುಣಾಚಲ ನಮ್ಮ ಅವಿಭಾಜ್ಯ ಅಂಗ, ಮಣಿಪುರ,ನಾಗಲ್ಯಾಂಡ್ ನಮ್ಮದು ಅನ್ನುವ ಸರ್ಕಾರಕ್ಕೆ, ಅಲ್ಲಿರುವ ನಮ್ಮವರ ಪಾಡು ಗೊತ್ತಿಲ್ಲವೇ? ನಮ್ಮದು ಅಂತ ಬೋಬ್ಬಿಡುವವರು ನಮ್ಮವರಿಗಾಗಿ ಏನು ಮಾಡಿದ್ದೇವೆ? ಏನು ಮಾಡುತಿದ್ದೇವೆ ಅನ್ನುವುದನ್ನು ಹೇಳಬೇಕಾಗಿದೆ. ಮಣಿಪುರದ ರಕ್ತ ಸಿಕ್ತ ಅಧ್ಯಾಕ್ಕೆ ಕೆಲ ತಿಂಗಳ ಹಿಂದೆ ಇಬ್ಬರು ಯುವಕರ ಹಾಗು ಒಬ್ಬ ತುಂಬು ಗರ್ಭಿಣಿಯ ಬಲಿ ಸೇರ್ಪಡೆಯಾಯಿತು.ಅಂದಿನಿದ ತನಿಖೆಗೆ ಆಗ್ರಹಿಸಿ ಬಂದ್ ಆಗಿರುವ ಶಾಲಾ ಕಾಲೇಜುಗಳು ಇನ್ನು ತೆರೆಯುತ್ತಿಲ್ಲ,ಅಂದ ಮೇಲೆ ಅಲ್ಲಿ ಸರ್ಕಾರವಿದೆಯ? ಇದ್ದರು ಏನು ಮಾಡುತ್ತಿದೆ? ಆಡಳಿತ ನಡೆಸಲು ಸಾಧ್ಯವಾಗದಿದ್ದರೆ, ಅದನ್ನ ಒಂದು ರಾಜ್ಯವಾಗಿ ನಡೆಸಿಕ್ಕೊಳ್ಳಲು ಸಾಧ್ಯವಾಗದಿದ್ದರೆ ಇನ್ಯಾವ ಪುರುಷಾರ್ಥಕ್ಕಾಗಿ ಅದನ್ನ ಭವ್ಯ ಭಾರತದ ಅವಿಭಾಜ್ಯ ಅಂಗವೆನ್ನಬೇಕು?
ಗಾಂಧೀ ಜಯಂತಿಯಂದು ಮಹಾತ್ಮನ ಗುಣಗಾನ ಮಾಡಿ,ನಮ್ಮದು ಅಹಿಂಸೆ,ಶಾಂತಿಗೆ ಬೆಲೆ ಕೊಡುವ ದೇಶ ಎನ್ನುವ ಮಾಹಾನ್ ನಾಯಕರೇ, ಇದೆ ಅಹಿಂಸೆ,ಶಾಂತಿಯ ಸಿದ್ದಾಂತ ನಂಬಿ ಹತ್ತು ವರ್ಷದಿಂದ ಹೋರಾಡುತ್ತಿರುವ ಆ ಹೆಣ್ಣು ಮಗಳ, ಮತ್ತೊಂದಿಷ್ಟು ಮುಗ್ದ ಜನರ ಕಡೆಯೂ ಒಮ್ಮೆ ದೃಷ್ಟಿ ಹಾಯಿಸಿ.ಇಲ್ಲ ಬಂದೂಕಿನಿಂದಲೇ ಪರಿಹಾರವೆಂದರೆ 'ಕಣ್ಣಿಗೆ ಕಣ್ಣು ಎಂಬ ಸಿದ್ದಾಂತ ಜಗತ್ತನ್ನೇ ಕುರುಡಾಗಿಸುತ್ತದೆ!' ಅನ್ನುವ ಮಹಾತ್ಮರ ಮಾತನ್ನ ನೆನಪಿಡಿ!
(ಚಿತ್ರ ಕೃಪೆ:http://www.wri-irg.org)