ಇನ್ನಷ್ಟು ಹನಿಗಳು...

ಇನ್ನಷ್ಟು ಹನಿಗಳು...

ಕವನ

ಎಲ್ಲಾ ಒಂದೇ ಶಿವಾ 

ದೇವರು

ಬಹಳ

ಬುದ್ಧಿವಂತ;

ಈ ಜಗದಲಿ

ಬಡವ 

ಶ್ರೀಮಂತರನಿಟ್ಟ....

 

ಭೇದವಿಲ್ಲದೆ

ಸಂಸಾರವೆಂಬ

ಅಗಾಧ

ಸಾಗರದಲಿ

ಎಲ್ಲರನೂ

ತೇಲಿ ಬಿಟ್ಟ!

***

ಆಪರೇಷನ್ ಅಂತ್ಯ 

ಆಪರೇಷನ್...

ಆಪರೇಷನ್...

ಎಂದು

ಕೂಗಾಡುವಿರೇಕೆ

ಓ ನಮ್ಮ

ರಾಜಕಾರಣಿಗಳೇ...

 

ಅದು ನಡೆದು

ಪೇಷೆಂಟ್

ಸತ್ತುದನು

ಕಣ್ಣಾರೆ ನೋಡಿಯೂ

ಬುದ್ಧಿ 

ಕಲಿಯಲಿಲ್ಲವೇಕೆ?

***

ಗಂಡ-ಹೆಂಡಿರ ಜಗಳ....

ಗಂಡ-ಹೆಂಡಿರ

ಜಗಳ-

ಗುಡುಗು-ಮಿಂಚುಗಳ

ನಡುವೆ

ಹದ ಮಳೆಯನು

ಸುರಿಸುವಂತಿರಬೇಕು....

 

ಸಿಡಿಲು

ಚಂಡಮಾರುತಗಳ

ತಂದು

ಜೀವನವೆಂಬ

ಕೋಟೆಯ

ಛಿದ್ರ ಮಾಡಬಾರದು!

***

ಚಂದ್ರಯಾನ 3 

ಯಶಸ್ವೀ

ಉಡಾವಣೆ

ಭಾರತೀಯರ ಹೆಮ್ಮೆ

ಭಾರತೀಯ ವಿಜ್ಞಾನಿ

ಗಳಿಗೆ ಸಾವಿರ ಸೆಲ್ಯೂಟ್

***

ಜಗಡಂಗುರ...

ಕೇಳ್ರಪ್ಪೋ... ಕೇಳ್ರೀ...

ಕೇಳ್ರಪ್ಪೋ... ಕೇಳ್ರೀ..

ಯಶಸ್ವೀ ಚಂದ್ರಯಾನ

ಪೂರೈಸಿದ ಭಾರತೀಯರು-

ತಮ್ಮ ಕಿರೀಟಕೆ

ಸಾಧನೆಯ ಗರಿ

ಸಿಕ್ಕಿಸಿಕೊಂಡಿರುವಾಗಲೇ...

ಮತ್ತೊಂದು ಮಹೋನ್ನತ

ಸಾಧನೆಗೆ ಹೆಜ್ಜೆ

ಇಟ್ಟಿದಾರಂತ್ರಪ್ಪೋ...

 

ಕೇಳ್ರಪ್ಪೋ...ಕೇಳ್ರೀ...

ಅವರ ಮುಂದಿನ ಸಾಧನೆ-

ಸೂರ್ಯಯಾನಾ...!

ಆದಿತ್ಯನೆಂಬೋ ಗಂಡುಗಲಿಯನು

ಸೂರ್ಯನ ಬಳಿ

ಕಳಿಸಲಿದ್ದಾರಂತೆ...

ಮತ್ತೊಮ್ಮೆ ಜಗಕಚ್ಚರಿ

ತರಲಿದ್ದಾರಂತೇ...

ಕೇಳ್ರಪ್ಪೋ...ಕೇಳ್ರೀ...

ಕೇಳ್ರಪ್ಪೋ...ಕೇಳ್ರೀ...

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್