ಇನ್ನಷ್ಟು ಹನಿಗಳು...
ರಾಜಕೀಯ ಹೊಂದಾಣಿಕೆ
ಈ ರಾಜಕೀಯದಲ್ಲಿ
ಕಾರ್ಯಾಭಿಲಾಶೆಗೆ
ಒಂದಾದವರು-
ಎಂದೂ
ಹಾಲೂ-ಜೇನಾಗಿ
ಬೆರೆಯದ ಚಾಣಾಕ್ಷರು...
ಅವರು
ಬೆರೆತದ್ದು
ನೀರು-ಸೀಮೇಎಣ್ಣೆಯಂತೆ;
ಬೇಡವೆನಿಸಿದಾಗ
ಶೋಧಿಸಿ ಬೇರೆಯಾಗುವ
ಬುದ್ಧಿವಂತರು!
***
ಪ್ರಜಾಪ್ರಭುತ್ವದ ಮೌಲ್ಯ
ನಮ್ಮದು
ಮೌಲ್ಯಯುತ
ಪ್ರಜಾಪ್ರಭುತ್ವ-
ಇಲ್ಲಿ ಬರೀ
ಅಧಿಕಾರಕಾಗಿ
ಸಾಫ್ಟ್ ಕಚ್ಛಾಟ...
ಮಿಲಿಟರೀ
ಆಡಳಿತದ
ರಾಷ್ಟ್ರಗಳನು
ನೋಡಿ-
ಅಲ್ಲಿ ಅಧಿಕಾರಕಾಗಿ
ಕ್ರೂರ ಕೊಚ್ಛಾಟ!
***
ಭೂತ-ಪ್ರೇತ....
ಆ ಎಳೆ
ಮಗುವನ್ನು
ಕರುಣೆಯಿಲ್ಲದೆ,
ಕೊಂದದ್ದು
ಆ ಹೆತ್ತಮ್ಮನಲ್ಲ;
ಅದೊಂದು ಪ್ರೇತ...
ಆಕೆ ಧಿಕ್ಕರಿಸಿ
ಆ ಗಂಡನೊಂದಿಗೆ
ಮಾಡಿಕೊಂಡಿದ್ದ
ಆ ಡೈವೋರ್ಸ್
ಎಂಬ
ಮಹಾಭೂತ!
***
ಭಾರತೀಯರು ನಾವು ಒಂದೇ...
ಆಮೇಲೆ ಸಿದ್ಧಾಂತವೆಂದೇ...
ಕಾಂಗ್ರೆಸ್ ನಿಂದ
ತಿರಸ್ಕಾರ-
ಅಯೋಧ್ಯೆಯಲ್ಲಿ
ನಡೆಯಲಿರುವ
ರಾಮಲಲ್ಲಾ
ಪ್ರಾಣ ಪ್ರತಿಷ್ಠಾನ...
ಅಯ್ಯೋ...
ಭಾರತೀಯರೇ-
ತೋರಿಸಿ
ಮೊದಲು
ನಾವು ಒಂದೇ ಎಂಬ
ಸಂಸ್ಕೃತಿ-ಅಭಿಮಾನ!
***
ಕುರೂಪ-ಸುರೂಪ
ಪ್ರತಿ ದಿನವೂ
ನೋಡುತ್ತಿದ್ದರೆ
ಆ ಸುರ
ಸುಂದರಿಯೂ
ಕಾಣುವಳು
ಕುರೂಪ...
ಅಪರೂಪಕ್ಕೊಮ್ಮೆ
ನೋಡಿದರೆ
ಆ ಮುದಿ
ಕತ್ತೆಯಲ್ಲೂ
ಕಾಣುವಿರಿ
ಸುರೂಪ!
***
ಅಪೇಕ್ಷೆ.....
ಏನೂ ಕೇಳದಿರ
ವಿಧೇಯ
ಸತಿ ಸಾವಿತ್ರಿಯಂತಹ
ಹೆಂಡತಿಯನು
ಬಯಸುವನು
ಯಜಮಾನ...
ಹೆಂಡತಿಗೆ ಇರಬೇಕು
ಮೂಕ ಬಸವ
ಪ್ರಶಾಂತ ಹೃದಯೀ
ಗಂಡನೆಂಬ ಪ್ರಾಣಿ
ಬಿಟ್ಟ- ಸಿಟ್ಟು
ಬಿಗುಮಾನ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
