ಉಗಾದಿ -೨೦೦೫

ಉಗಾದಿ -೨೦೦೫

ಬರಹ
ಅತ್ತ ವ್ಯಾಟಿಕನ್ ಸುದ್ದಿ! ಇತ್ತ ವ್ಯಾಟ್ ಸುದ್ದಿ!! ಈ ನಡುವೆ ಅಲ್ಲಲ್ಲಿ ನೆಲ ನಡುಕ, ಜಲ ಪ್ರಳಯ! ನೆಲವೂ ಸುರಕ್ಷಿತವಲ್ಲ! ಜಲವೂ ಸಲಹುದಿಲ್ಲ!! ದೇವನೊಬ್ಬನಿದ್ದಾನೆಂದರೆ ಆತನ ಧೂತರೂ ನಮ್ಮನ್ನು ನಡುಗಡ್ಡೆಯಲಿ ನಿಲ್ಲಿಸಿ ದೈವಾಧೀನರಾದರು ಅಲ್ಲೆಲ್ಲ 'ಅಂತಿಮ ಯಾತ್ರೆ....' ಇಲ್ಲಿ ಅಶಾಂತಿಯ ಮಧ್ಯೆ 'ಬಸ್' ನ 'ಶಾಂತಿಯ ಯಾತ್ರೆ..' ಈ ಮಧ್ಯೆ ಅಂದೆಂದೋ ಕೈಗೊಂಡ 'ದಂಡೀಯಾತ್ರೆ' ಯ ಮರು ಆಚರಣೆ! ಇದೆಲ್ಲದರ ಗೊಡವೆ ಬೇಡ ನಾವು ನಾವಾಗಿರೋಣಾ ಎಂದರೆ... ಈ 'ದೇಹ' ದ ತುಂಬಾ ನೋವು... ನೋವಿನ ಆಗರ. ಹೇಳಲುಬಾರದು.. ಅನುಭವಿಸಲಾಗದು... ಆದರೂ ಬದುಕಬೇಕು ಈ 'ಎಲ್ಲ' ದರ ಎಲ್ಲಾ 'ಧರ' ಗಳ ನಡುವೆ ಬಾಳಿ... ಏನಾದರೂ ಸಾಧಿಸಬೇಕು... ಸಾಧುವಾಗಬೇಕು... ಸಜ್ಜನರೊಂದಿಗೆ ಸೇರಿ ಬೆಲ್ಲವಾಗಬೇಕು... ಬೇವು ಮೆದ್ದು 'ಮಧು ಮೇಹ'ಕೆ ಕಡಿವಾಣ ಹಾಕಬೇಕು! ಸಂಕೇತ್ ಗುರುದತ್ತ