ಉದ್ಧಾರ
ಕವನ
ಈಗಿನ
ಬಹುತೇಕ
ಜವಾಬ್ದಾರಿಯುತ
ಸ್ಥಾನದಲ್ಲಿರುವವರು
ಕಲಿತು
ನಿಯತ್ತಿನಲ್ಲಿ
ಜನಸಾಮಾನ್ಯರ
ಮೇಲೆ
ಪ್ರಯೋಗಿಸಿದ್ದು
ಎರಡೇ
ಅಸ್ತ್ರ
ಒಂದು
ದಾದಾಗಿರಿ !
ಆದರೆ
ಇನ್ನೊಂದು
ಪೊಲೀಸ್ ಗಿರಿ !!
***
ಗಝಲ್
ನಾನೆ ಎನುವ ಭಾವವೇಕೆ ಪ್ರೀತಿ ನನ್ನ ಒಲವು
ಬಾನ ನಡುವೆ ತೇಲಿಯಿರುವ ಚಂದ್ರ ನಿನ್ನ ಒಲವು
ಮನದ ಮೂಲೆಯಲ್ಲಿ ತಾಳ ತಪ್ಪಿತೇಕೆಯಿಂದು
ತನುವು ಮುರುಟಿ ಬಾಡದಿರಲು ಬದುಕೆ ಬಣ್ಣ ಒಲವು
ಬೆಟ್ಟ ಗುಡ್ಡದೊಳಗೆ ಸದ್ದು ಎನಿತು ಕೇಳಿ ಆಯಿತು
ಚಿತ್ತ ಕದಡಿ ಹೋಗದಿರಲು ಹೃದಯ ಹೊನ್ನ ಒಲವು
ಸೌಮ್ಯ ಇರದ ತಾಣದಲ್ಲಿ ಸುಖವು ಇರಲು ಸಾಧ್ಯವೆ
ಸುಮವು ಬಿರಿದು ನಲಿಯುವಾಗ ರಶ್ಮಿ ಕಣ್ಣ ಒಲವು
ಪುರುಷ ತತ್ವ ಎದ್ದು ಬರುತ ಸವಿಯ ನುಡಿದ ಈಶ
ಕರುಣೆ ಇರುವ ಭೂಮಿಯೊಳಗೆ ಮೋಹ ರನ್ನ ಒಲವು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
