ಉಳ್ಳಾಲದ ಗೇರು ಮೇಳಕ್ಕೆ ಬನ್ನಿ…

ಉಳ್ಳಾಲದ ಗೇರು ಮೇಳಕ್ಕೆ ಬನ್ನಿ…

ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕಾಪಿಕಾಡ್-ಉಳ್ಳಾಲ ಇಲ್ಲಿ ‘ಗೇರು ಮೇಳ ಮತ್ತು ವಿಚಾರ ಸಂಕಿರಣ'ವು ಇದೇ ಬರುವ ಬುಧವಾರ ಮಾರ್ಚ್ 6, 2024ರಂದು ಜರುಗಲಿದೆ. ಆ ದಿನ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್ ಸಿ ಜಗದೀಶ್ ಇವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳ್ಳಾಲ ಕೇಂದ್ರದ ಸಂಶೋಧನಾ ನಿರ್ದೇಶಕರಾದ ಡಾ ಬಿ ಎಂ ದುಷ್ಯಂತ ಕುಮಾರ್ ವಹಿಸಲಿದ್ದು ಹಲವಾರು ಗಣ್ಯ ವ್ಯಕ್ತಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಗೇರು ಬೆಳೆಯಲ್ಲಿ ಆದ ಪ್ರಗತಿ ಹಾಗೂ ಹೊಸ ಗೇರು ತಳಿಗಳ ಬಗ್ಗೆ ತಿಳಿಸಿಕೊಡಲಿದ್ದಾರೆ.

ದಿನವಿಡೀ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಗೇರು ತಳಿಗಳು, ಗೇರು ಬೇಸಾಯ, ಗೊಬ್ಬರಗಳನ್ನು ನೀಡುವ ವಿಧಾನ, ಕೀಟ-ರೋಗ ನಿಯಂತ್ರಣ, ಗಿಡಗಳ ಸವರುವಿಕೆ, ಆಕಾರ ಕೊಡುವಿಕೆ, ಗೇರು ಸಸಿಮಡಿ ನಿರ್ವಹಣೆ, ಮಣ್ಣು ಪರೀಕ್ಷೆ, ನೀರು ನಿರ್ವಹಣೆ, ಸಂರಕ್ಷಣೆ, ಪೊದೆ ಮೆಣಸು, ಗೇರು ಹಣ್ಣಿನ ಸಂಸ್ಕರಣೆ, ಮೌಲ್ಯವರ್ಧನೆ ಮೊದಲಾದ ವಿಷಯಗಳ ಬಗ್ಗೆ ತರಬೇತಿ ಮತ್ತು ತಾಂತ್ರಿಕ ಮಾಹಿತಿ ನೀಡಲಾಗುವುದು. ಇದರ ಜೊತೆಗೆ ವಿವಿಧ ವಸ್ತು ಪ್ರದರ್ಶನಗಳ ಮಳಿಗೆಗಳಿದ್ದು ಕೃಷಿ ಸಂಬಂಧಿ ವಸ್ತುಗಳು ದೊರೆಯಲಿವೆ. ಕೃಷಿ ಪತ್ರಿಕೆಗಳು, ತರಕಾರಿ ಬೀಜಗಳು, ಗೇರು ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳು ದೊರೆಯಲಿದ್ದು ಕೃಷಿಕರು ಹಾಗೂ ಕೃಷಿ ಆಸಕ್ತರು ಭಾಗವಹಿಸಬೇಕೆಂದು ಕೃಷಿ, ತೋಟಗಾರಿಕೆ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಮಾರುತೇಶ್ ಎ ಎಂ ಅವರು ಮನವಿ ಮಾಡಿಕೊಂಡಿದ್ದಾರೆ.

-ಪ್ರವೀಣ್ ಕುಂಪಲ

ಚಿತ್ರ : ಗೇರು ಮೇಳದಲ್ಲಿ ಮಳಿಗೆಯೊಂದರ ಸಂದರ್ಶನ