ಎತ್ತ ಸಾಗಿದೆ , ಎನಿತು ನಮ್ಮ ಹೆಮ್ಮೆಯ ನಾಡು,
ಕವನ
ಎತ್ತ ಸಾಗಿದೆ ಎನಿತು ನಮ್ಮ ಹೆಮ್ಮೆಯ ನಾಡು,
ಸ್ವಾವಲಂಬಿಗಳಿಲ್ಲದೆ ಸೊರಗಿದ ಸಿರಿ ಬೀಡು
ಭ್ರಸ್ಟರೇ ಬೆನ್ನೆಲಬು ಈಗ ನಮ್ಮೀ ನಾಡಿಗೆ
ವಿಧ್ಯಾವಂತರು ಪರದೇಶದ ಪಾಲಗುತಿಹರು ಸಿರಿವಂತಿಕೆಗೆ
ಬ್ರಸ್ಟ ರಾಜಕೀಯ ಹಂದರಾ ಏಲ್ಲೇ ಮೀರಿ ಸಾಗಿದೆ
ನಮ್ಮ ಮೂರ್ಖತನವೇ ಇಲ್ಲಿ ನಮ್ಮನಾಳಿ ನಗುತಿದೆ
ಮುತ್ಸದ್ದಿಗಳು ಮನೆ ಸೇರಿ ಮೌನವಾಗಿ ಕುಳಿತಿರಲು
ಮೂರ್ಖರೇ ಚುಕ್ಕಾಣಿ ಹಿಡಿದು ನಮ್ಮನೆಲ್ಲಾ ಮುನ್ನೆಡೆಸುತಿಹರು
ಅಂಗೈ ಹುಣ್ಣಿಗೆ ಕನ್ನಡಿ ಏಕೆ ಹುಡುಕುತಿಹೆವು ?
ಇಸ್ಟೆಲ್ಲಾ ಹಗರಣಗಳನು ಸಹಿಸಿ ಯಾವ ಅನಹುತಕ್ಕೆ ಕಾಯುತಿಹೆವು ?
ದೇಶದ ಅವನತಿ ಮೋಜಿನ ಸಂಗತಿ ಆಗುತಿದೆ ಯುವಶಕ್ತಿಗೆ ಇಲ್ಲಿ
ಮರುದಿನಾ ಎಲ್ಲವನು ಮರೆತು ಸಾಗುತಿದೆ ಜೀವನ ದೈನಂದಿನ ಚಟುವಟಿಕೆಯಲ್ಲಿ
ಎಲ್ಲವನ್ನೂ ಕಲಿಸಿದ ಶಿಕ್ಷಣ ಸ್ವಾಭಿಮಾನ ಏಕೆ ಕಲಿಸಲ್ಲಿಲ್ಲಾ?
ಸ್ವಾಭಿಮಾನಿಗಳಾಗಿದ್ದರೆ ಹೀಗೆ ಭಂಡ ಬಾಳು ಬದುಕುತ್ತಿರಲ್ಲಿಲ್ಲಾ
ಎಲ್ಲರಿಗೂ ಬೇಕು ವಿದೇಶದಲ್ಲಿ ಕೆಲಸ,
ಹೊತ್ತಿ ಉರಿಯುತ್ತಿರುವಾಗಲೂ ತನ್ನ ತಾಯಿ ದೇಶ
ನಾಚಿಕೆಯಾಗಬೇಕು ನಮ್ಮೀ ಬಾಳಿಗೆ ,ನಮ್ಮನೆಲ್ಲಾ ಎಚ್ಚರಿಸಲು
ಮತ್ತೊಬ್ಬ ವಯೋವ್ರುದ್ದ ಮಹಾತ್ಮ(ಅಣ್ಣಾ ಹಝಾರೆ)ನೇ ಬರಬೇಕಾಯಿತು ನಮ್ಮಲ್ಲಿಗೆ
ಇನ್ನಾದರು ಏಚ್ಚೆತ್ತುಕೊಳ್ಳಿ, ಇಲ್ಲವಾದರೆ ನಮ್ಮ ಮುಖವೇ ಹಿಡಿಸದಾದಿತು ನಮಗೆ ಕನ್ನಡಿಯಲ್ಲಿ
ಬ್ರಸ್ಟ ಮುಕ್ತ ಸಮಾಜ ಮರಿಚಿಕೆಯಾಗದಿರಲಿ ಮುಂದಿನ ಪಿಳಿಗೆಗೆ,
ಶಫತ ಗೈದು ಮುನ್ನೆಡೆಯಿರಿ ದಿನವೂ ಭಾರತಾಂಬೆಗೆ
ಮಹಾಂತೇಶ(ಮಾನು)
Comments
ಉ: ಎತ್ತ ಸಾಗಿದೆ , ಎನಿತು ನಮ್ಮ ಹೆಮ್ಮೆಯ ನಾಡು,
In reply to ಉ: ಎತ್ತ ಸಾಗಿದೆ , ಎನಿತು ನಮ್ಮ ಹೆಮ್ಮೆಯ ನಾಡು, by prasannakulkarni
ಉ: ಎತ್ತ ಸಾಗಿದೆ , ಎನಿತು ನಮ್ಮ ಹೆಮ್ಮೆಯ ನಾಡು,