ಎರಡು ಸುದ್ದಿಗಳು, ದೇಶದ ಹಿತಕ್ಕೆ ಮಾರಕ
ನಿನ್ನೆ, ದಂತೆವಾಡದಲ್ಲಿ ನಕ್ಸಲರು ಭಿಕರ ದಾಳಿ ನಡೆಸಿ ಅಮಾಯಕರನ್ನು ಹತ್ಯೆಗೈದ ಸುದ್ದಿ. ಈ ಸುದ್ದಿ ಪ್ರಕಟವಾಗುತಿದ್ದರೆ, ಅತ್ತ ಗೃಹಮಂತ್ರಿಗಳು, ಒಂದು ವರ್ಷ ಪೂರೈಸ್ದ ಸಂಧರ್ಭದ ಬಗ್ಗೆ , "ಯಾವುದೇ ದೊಡ್ಡ ಭಯೋತ್ಪಾದನೆ ಚಟುವಟಿಕೆ ನಡೆದಿಲ್ಲ " ಎಂದು ಖುಶಿಯಾಗಿ NDTV ಗೆ ಸಂದರ್ಶನದಲ್ಲಿ ಹೇಳುತ್ತಿದ್ದರು. ಈ ನಕ್ಸಲ ಸಮಸ್ಯೆಗೆ ಪರಿಹಾರಕ್ಕೆ ಇನ್ನೂ ಹೆಚ್ಚಿನ ಬಲ ಬೇಕೆಂದು ಪ್ರಧಾನಿಗಳ ಬಳಿ ಚರ್ಚೆ ನಡೆಸುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಗುಡ್ ಲಕ್ ಹೇಳಬೇಕು ಅವರಿಗೆ, ಸತ್ತವರ ಕುಟುಂಬಕ್ಕೆ? ಅಲ್ಲಿರುವ ಪೋಲಿಸ್ ಸಿಬ್ಬಂದಿಗೆ? ಈ ನಕ್ಸಲ್ ಸಮಸ್ಯೆಗೆ ಒಂದು ಶಾಶ್ವತ ಪರಿಹಾರ ಕೊಡಲೇ ಬೇಕು ಅನ್ನುವ ಮನಸ್ಸು ಸರ್ಕಾರಕ್ಕೆ ಇದ್ದಂತಿದೆಯೆ? ಪಂಜಾಬ್ ಸಮಸ್ಯೆಗೆ ಪರಿಹಾರ ಕಂಡುಕೊಂಡಂತೆ ಇದಕ್ಕೆ ಯಾಕೆ ಪರಿಹಾರ ಕಂಡುಕೊಳುತ್ತಿಲ್ಲ? ನಕ್ಸಲರನ್ನು ಬೆಂಬಲಿಸಿದ ಗೌರಿ ಲಂಕೇಶ್, ಜಿಕೆಗೊ, ಈ ತಂಡ ಯಾಕೊ ಇನ್ನೂ ಎದ್ದಂತಿಲ್ಲ ಪತ್ರಿಕಾ ಹೇಳಿಕೆ ಕೊಡಕ್ಕೆ.
ಇನ್ನೊಂದು ಸುದ್ದಿ, ಕಾಶ್ಮೀರದಲ್ಲಿ ಭಯೋತ್ಪಾದರ [ಈ ಪದ ಬಳಸಿದರೆ ಕೆಲವರಿಗೆ ಇರುಸು ಮುರುಸು, :)] ಸಂಭಳ ಹೆಚ್ಚು ಮಾಡಿದ್ದಾರಂತೆ! ಅದೂ ೧೦೦%. ಯಾವ ಸರ್ಕಾರಿ /ಖಾಸಗಿ ಕಂಪನಿಯಲ್ಲೂ ಇಷ್ಟು ಹೆಚ್ಚು ಮಾಡುವ ಪರಿ ಇಲ್ಲ. http://thatskannada.oneindia.in/news/2010/05/17/kashmir-terrorists-get-pay-hike.html
ಈ ರೀತಿ ಸಂಬಳ ಹೆಚ್ಚು ಪಡೆದವರು ಅದಕ್ಕೆ ಪ್ರತಫಲವಾಗಿ ಏನು ಮಾಡಬಹುದು? ತಮ್ಮ ಚಟುವಟಿಕೆ ಹೆಚ್ಚಿಸಬಹುದೆ? ಈ ಆಕರ್ಷಕ ಸಂಬಳ ಕಂಡು ಇತರ ದೇಶಭಕ್ತರು [ಆ ದೇಶಕ್ಕೆ] ಇ ಹುದ್ದೆಯಲ್ಲಿ ತೊಡಗಿಸಿಕೊಳ್ಳಬಹುದಲ್ಲವೇ? ಆಗ ಭಾರತಕ್ಕೆ ಏನೆಲ್ಲ ಕಂಟಕ ಒದಗಬಹುದು? ಇನ್ನೇಷ್ಟು ಅಕ್ಷರಧಾಮ, ಮುಂಬೈ ಘಟನೆಗಳು ಕಾದಿವೆಯೋ? ಇದಕ್ಕೆ ಸೂಕ್ತ ಪರಿಹಾರವೆಂದರೆ, ಈ ರೀತಿ ಸಂಬಳ ಪಡೆಯುತ್ತಿರುವವರನ್ನು ಒಂದೆಡೆ ಸೇರಿಸಿ, ೨೦೦% ಹೆಚ್ಚು ಸಂಬಳ ಕೊಟ್ಟು, ರೇಷನ್ ಕಾರ್ಡ್, ಗುರುತುಚೀಟಿ, ಡ್ರೈವಿಂಗ್ ಲೈಸೆನ್ಸ್, ಮನೆ, ಉಚಿತ ಪಡೀತರ, ಇದೆಲ್ಲವನ್ನು ಕೊಟ್ಟು ಬಿಡಬೇಕು.
Comments
ಉ: ದೇಶದ ಹಿತಕ್ಕೆ ಮಾರಕವಾದ ಎರಡು ಸುದ್ದಿಗಳು
ಉ: ಎರಡು ಸುದ್ದಿಗಳು, ದೇಶದ ಹಿತಕ್ಕೆ ಮಾರಕ
ಉ: ಎರಡು ಸುದ್ದಿಗಳು, ದೇಶದ ಹಿತಕ್ಕೆ ಮಾರಕ
In reply to ಉ: ಎರಡು ಸುದ್ದಿಗಳು, ದೇಶದ ಹಿತಕ್ಕೆ ಮಾರಕ by manjunath.hosur
ಉ: ಎರಡು ಸುದ್ದಿಗಳು, ದೇಶದ ಹಿತಕ್ಕೆ ಮಾರಕ