ಎರಡು ಹನಿಗಳು

ಎರಡು ಹನಿಗಳು

ಕವನ

ಬೆಳಗೆದ್ದು

ಪೂಜಿಸಲು

ಕಾದಿರುವೆ

ಭಾಸ್ಕರನೆ..

ಮೋಡಗಳು

ನಿನ್ನ

ಮರೆ ಮಾಡಿ

ಕೂತಿರಲು..

ಪಶು ಪಕ್ಷಿಗಳು

ನಿನ್ನ ಆಗಮನಕೆ

ಕಾದಿರಲು..

ದುಷ್ಟರೂ

ಅಟ್ಟಹಾಸವ

ಮೆರೆದಿರಲು..

ಶಿಷ್ಟರ ರಕ್ಷಕನೇ

ಮತ್ತೊಮ್ಮೆ

ಧರೆಗಿಳಿದು ಬಾರೋ..

***

ಬಾನಲಿ

ಕರಿಮುಗಿಲ

ಕಟ್ಟಿರಲು

ಸುಳಿಗಾಳಿ

ಜೋರಾಗಿ

ಬೀಸಿರಲು

ಸಾಗರದ

ತುಂಬೆಲ್ಲ

ಅಲೆಗಳೆದ್ದಿರಲು

ಹವಾಮಾನ

ಇಲಾಖೆ

ಗಾಳಿಯ

ಮುನ್ಸೂಚನೆ

ಕೊಟ್ಟಿರಲು..

ಮೀನುಗಾರಿಕೆ

ಸಂಘ,ಇಲಾಖೆಗಳು

ಎಚ್ಚರಿಕೆ

ನೀಡಿರಲು..

ಮೀನುಗಾರ

ಸಮುದ್ರಕ್ಕೆ

ಇಳಿದಿರಲು..

ಹುಂಬು

ಧೈರ್ಯವ

ಬಿಟ್ಟು

ನಾವೆಲ್ಲರೂ

ದಡಕ್ಕೆ

ತೆರಳಬೇಕು..

***

-’ಕಡಲಕವಿ’ ಶಿವಾನಂದ ಬಿ ಮೊಗೇರ, ಭಟ್ಕಳ

ಚಿತ್ರ್