ಎಷ್ಟು ಜನರಿಗೆ ಗೊತ್ತು ಲಕ್ಷ್ಮಣರಾವ್ ಹೊಯ್ಸಳ ?

ಎಷ್ಟು ಜನರಿಗೆ ಗೊತ್ತು ಲಕ್ಷ್ಮಣರಾವ್ ಹೊಯ್ಸಳ ?

ಬರಹ

ಎಷ್ಟು ಜನರಿಗೆ ಗೊತ್ತು ಲಕ್ಷ್ಮಣರಾವ್ ಹೊಯ್ಸಳ ?


ಈ ಕವಿಯ ಬಗ್ಗೆ ಜನರಿಗೆ ಹೆಚ್ಚು ಮಾಹಿತಿ ಇರುವುದಿಲ್ಲ.

ಶಿಶು ಸಾಹಿತ್ಯಕ್ಕೆ ಈ ಕವಿಯ ಕೊಡುಗೆ ಅಪಾರ.

( ರಾಜರತ್ನಂ ಸಮಕಾಲೀನರು).

 

ಶಾಲಾ ಉಪಾಧ್ಯಾಯರಾಗಿ ಮಕ್ಕಳ ಬಗ್ಗೆ ಹೆಚ್ಚು ಆಸಕ್ತಿ ತೋರುತಿದ್ದ ಇವರು ಮಕ್ಕಳಗಾಗಿಯೇ ಸರಳವಾಗಿ ತಮ್ಮ ಕವಿತೆ ಮೂಲಕ ಪಾಠವನ್ನು ಹೇಳುತಿದ್ದರು.

ಅ ಕಾಲದಲ್ಲಿ ಮಕ್ಕಳಿಗೆ ಪುಸ್ತಕದ ಶಿಸ್ತಿನ ಬಗ್ಗೆ ಈ ರೀತಿ ಹೇಳಿದ್ದಾರೆ
" ಪುಸ್ತಕ ಮಾತನು ಹೇಳುತಿದೆ , ಚಿತ್ತದಿಂದ ಕೇಳು ಮಗು
 ಒಳ್ಳೆಯ ಕಡೆಯಲ್ಲಿ ಇಡು ನನ್ನ , ಬೀರು ಪೆಟ್ಟಿಗೆ ಬಲು ಚನ್ನ .............."

ಅ ಕಾಲದಲ್ಲಿ ಮಕ್ಕಳು ಇದನ್ನು ರೈಮ್ಸ್ ರೂಪದಲ್ಲಿ ಹೇಳುತ್ತಿದ್ದರು.


ನಮ್ಮ ಕನ್ನಡದ ಪದ್ಯಗಳು ಎಷ್ಟು ಅರ್ಥಪೂರ್ಣ .
ಇಂಗ್ಲಿಷ್ ನ ರೈಮ್ಸ್ ನಲ್ಲಿ ಅರ್ಥವೇ ಬೇರೆ ಇರುತ್ತದೆ.
ಉ.ದ : Rain rain go away, Come again another day .Little Johnny wants to play ........

ನಮ್ಮ ಕನ್ನಡ ಪದ್ಯ,ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ ........(ಇದು ಹೊಯ್ಸಳರ ಕೃತಿಯಲ್ಲ)


ಮಳೆ ಬರದೆ ಹೋದರೆ ಏನಾಗುತ್ತದೆ  ಎಂದು ಮಕ್ಕಳಿಗೆ ತಿಳಿಸುವ ಬಗೆ ಹೀಗೆ .

ಹೊಯ್ಸಳರು ಇನ್ನೂ ಅನೇಕ ಕವಿತೆಗಳನ್ನು ರಚಿಸಿದ್ದಾರೆ.

ಬಂದಾ ಬಂದಾ ಸಂತಮಣ್ಣ ,ತಟ್ಟು ಚಪ್ಪಾಳೆ ಪುಟ್ಟ ಮಗು, ಧರೆಯಲೆಲ್ಲೇ  ಇರಲಿ ನಾನು ಮರೆಲಾರೆ ಮಧುಗಿರಿ


ನೊಬೆಲ್ ಪ್ರಶಸ್ತಿ ವಿಜೇತ ರಬಿಂದ್ರನಾಥ ಟ್ಯಾಗೋರರಿಗೆ ಕನ್ನಡವನ್ನು ಹೇಳಿಕೊಟ್ಟು, ಅವರಿಂದ ಬಂಗಾಲಿಯನ್ನು ಕಲಿತಿದ್ದರು.

 ನನ್ನ ತಾತನ ಬಗ್ಗೆ ನನಗೆ  ತಿಳಿದಿರುವುದು ಇಷ್ಟೇ, ನಾನು ಅವರನ್ನು ಎಂದು ನೋಡಲಿಲ್ಲ :(