ಏರು ಕಾಂತಿ

ಏರು ಕಾಂತಿ

ಕವನ

ಏರು ಯೌವನ

ಕಡಲ ತೀರದಿ

ಕಾಂತಿ ಹೊಮ್ಮುವ ಸುಮವನ

ಹೀಗೆ ಬಂದಿಹ

ಚೈತ್ರ ಚಂದನ

ತನುವ ಮನದಲಿ ಹೂಮನ

 

ಗೆಲುವಿನೊಳಗಣ

ಮಧುವ ಹೂಬನ

ಜೀವ ಭಾವನ ತಾನನ

ಬಯಕೆ ಮೂಡಣ

ಸೃಷ್ಠಿ ಚೇತನ

ಬಾಳ ಲತೆಯಲಿ ಸಿಂಚನ

 

ನೋವ ಮರೆಯುತ

ಮಧುರ ಚಿಂತನ

ಬದುಕಿನಾಚೆಗೆ ಹೊಸತನ

ಹುರುಪಿನಾಳದ

ಚೆಲುವ ಬಂಧನ

ಗೆಲುವಿನೊಳಗಡೆ ಸಿಹಿತನ

 

ಒಲವಿನಾಳದ

ಜೇನ ಸವಿಯ

ಸವಿದು ಸಾಗಲು ಪಾವನ

ಸೊಬಗ ಸನಿಹದ

ಚೆಲುವೆ ಯಮಲಳ

ಯಶದ ಬೆಸುಗೆಗೆ ಚುಂಬನ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್