ಒಂದಿಷ್ಟು ಹನಿಗಳು…
ಕವನ
ಶಾಂತಿಯ ಹೊನಲು
ಘನಘೋರ
ಯುದ್ಧಗಳಲಿ
ಸಾಯುವುದು
ಅಮಾಯಕರಾದ
ಸಾಮಾನ್ಯ
ಜೀವಗಳು...
ಈ ನಾಯಕರನು
ಮೊದಲು
ತಳ್ಳಿಬಿಡಿ;
ಆಗ ಆಗುವುದು
ಇಡೀ ವಿಶ್ವ
ಶಾಂತಿಯ ಹೊನಲು!
***
ಜನಪ್ರಿಯತೆಯ ಹಳಿ
ದಿಲ್ಲಿ ನಾರಿಯರಿಗೆ
2500 ರೂ
ಅಸ್ತು;
ಬಿಜೆಪಿ
ಸರ್ಕಾರದ
ತೀರ್ಮಾನ...
ಕಾಂಗ್ರೆಸ್ ರೈಲು-
ಹಳಿ ತಪ್ಪಿತ್ತು...
ಈಗ ಬಿಜೆಪಿಯೂ
ಅದೇ ಹಳಿ ಮೇಲೆ
ಚಲಿಸುತ್ತಿದೆ..
ಇದು ಸರೀನಾ?
***
ಜೀವನ ಪ್ರಸಾಧನಗಳು
ನಿಜ ಜೀವನದ
ಸುಗಂಧ
ಸೌಂದರ್ಯ
ಪ್ರಸಾಧನಗಳು-
ಪ್ರೀತಿ, ಪ್ರೇಮ, ವಿಶ್ವಾಸ
ನಂಬಿಕೆ, ಭಯ, ಭಕುತಿ...
ಇವುಗಳ
ನಾವು ಧರಿಸಿ
ವ್ಯವಹರಿಸಿದರೆ
ನಿಜಕೂ
ಜೀವನದಲಿ
ದೊರೆವುದು ಮುಕುತಿ!
***
ವಿಸ್ಮಯದ ಜಗತ್ತು
ಈ ಜಗದ
ಆಧ್ಯಾತ್ಮದಲಿ
ದೇವರನು;
ವಿಜ್ಞಾನದಲಿ
ಎಲೆಕ್ಟ್ರಾನನು-
ಕಂಡವರಿಲ್ಲ...
ಆದರೆ
ಇವೆರಡರಿಂದ
ಈ ವಿಶ್ವದಲಿ
ಅದೇನು
ಸೋಜಿಗ
ವಿಸ್ಮಯವೆಲ್ಲ...!
***
ಯುಗಾದಿಗೆ ಸಿಹಿ ಸುದ್ದಿ...
ರಾಜ್ಯ ಜನತೆಗೆ
ಸಿಹಿ ಸುದ್ದಿ-
ಯುಗಾದಿ
ಹೋಳಿಗೆಗೆ
ತಗ್ಗಿದ
ತೊಗರಿ ಬೇಳೆ...
ಹೋಳಿಗೆ
ತಿಂದೂ ತಿಂದು
ಜನರ
ಸಕ್ಕರೆ ಕಾಯಿಲೆ
ಹೆಚ್ಚಬಹುದೇ
ನಾಳೆ...?
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
