ಒಂದಿಷ್ಟು ಹನಿಗಳು...

ಒಂದಿಷ್ಟು ಹನಿಗಳು...

ಕವನ

ರಾಜಕೀಯ...

ತಮ್ಮ ತಮ್ಮ

ಪಕ್ಷದ

ಎಂ ಪಿ

ಎಂಎಲ್ಎ ಗಳಿಗೇ

ಭಾರೀ

ಅನುದಾನ...

 

ವಿರೋಧ

ಪಕ್ಷದ

ಪರಮ

ಪಾಪಿಗಳಿಗೆ

ಉಳಿದಿರುವುದು

ಬರೀ ರೋದನ!

***

ಬಿಸಿ-ಹಸಿ ಸುಳ್ಳು 

ಬಿಸಿ ಬಿಸಿಯಾದ

ಹಸಿ ಹಸಿ ಸುಳ್ಳು-

ಈ ನಮ್ಮ

ಚುನಾವಣಾ

ಅಭ್ಯರ್ಥಿಗಳ

ಆಸ್ತಿ ಘೋಷಣೆ...

 

ಮೂಗು

ಮುಚ್ಚಿಕೊಂಡು

ನಕ್ಕು- ಓಟು

ಹಾಕುವುದೊಂದೇ

ನಮ್ಮ ಪಾಲಿಗಿರುವ

ವ್ಯರ್ಥ ಬವಣೆ!

***

ಜಾಣತನ 

ರಾಜಕೀಯದಲಿ

ಹಣ ಮಾಡುವ

ವಿಷಯ

ಅಲ್ಲ

ಅಷ್ಟು

ದೊಡ್ಡತನ...

 

ಮಾಡಿದ

ಸಂಪತ್ತನು

ಉಳಿಸಿಕೊಳ್ಳಲು

ಅತ್ತಿಂದಿತ್ತ

ಹಾರಾಡುವುದೇ

ಜಾಣತನ!

***

ಇತಿಹಾಸ ಮತ್ತು ಸತ್ಯ! 

ವರ್ತಮಾನ

ಎಂದೂ

ವಾಸ್ತವ

ಅಂಶಗಳನ್ನು

ಬಿತ್ತರಿಸಲಾರದು

ಬೆಪ್ಪರಾ...

 

ಸತ್ಯಕ್ಕಾಗಿ

ನೀವು

ಇತಿಹಾಸವನ್ನೇ

ಕಾಯ್ದು

ತತ್ತರಿಸಬೇಕಾದೀತು

ಎಚ್ಚರಾ!

***

ದ್ವಾರಕೀಶ್ 

ಕನ್ನಡದ

ಚಾರ್ಲಿ ಚಾಪ್ಲಿನ್;

ಸಿನಿಮಾರಂಗದ

ಹಾಸ್ಯ ನಟ-

ಕರ್ನಾಟಕದ ಕುಳ್ಳಾ

ದ್ವಾರಕೀಶಾ....

 

ದೇವತೆಗಳನು

ಮನರಂಜಿಸಲು

ಸ್ವರ್ಗ ಲೋಕಕೇ

ಪಯಣ...

ಅಲ್ಲೂ ಬಿಡಲಾರೆ

ನಿನ್ನ ತಮಾಶಾ!

***

ಜೋಡೆತ್ತು 

ಜನರ

ಮುಂದೆ

ಮಾಜೀ

ಜೋಡೆತ್ತುಗಳ

ಜೋರು

ವಾಕ್ಸಮರಾ...

 

ಮುಂದೆ 

ಒಂದೇ

ಬಂಡಿಯನ್ನು

ಎಳೆಯಲು

ಹೋದಾವು

ನೋಡಿ-ಬೆಪ್ಪರಾ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್