ಒಂದಿಷ್ಟು ಹನಿಗಳು...
ಕವನ
ಅಚ್ಛೇ/ಗ್ಯಾರಂಟಿ
ಅವರದ್ದು
ಅಚ್ಛೇ ದಿನ್
ನಿಮ್ಮದು
ಗ್ಯಾರಂಟಿ ದಿನ್
ಮತದಾರನಿಗೆ ಬರೀ
ಹೇಳಿಕೆಯ ಫನ್...
ಇವರಿಬ್ಬರ
ಜಗಳದಲಿ
ಕರ್ನಾಟಕಕ್ಕೆ
ಯಾರೂ
ಕೊಡುತ್ತಿಲ್ವೇ
ಕುಡಿಯಲು ನೀರನ್!
***
ಖಾಲೀ ಚೊಂಬು!
ಈಗ ಕರ್ನಾಟಕದ
ಓಟಿನ
ರಾಜಕೀಯದಲಿ
ಸ್ಟೀಲ್
ಚೊಂಬಿನದ್ದೇ
ಢಣ ಢಣ ಸದ್ದು...
ಹಣವನು
ತಿಜೋರಿಯಲಿ ತುಂಬಿ;
ಖಾಲಿ ಚೊಂಬ
ತೋರಿಸುತ-
ಮತದಾರನಿಗೆ
ಅರೆಯುತಿಹರು ಮದ್ದು!
***
ಜಾದೂ...ಜಾದೂ...
ಚೊಂಬನ್ನೇ
ಅಕ್ಷಯ ಪಾತ್ರೆ
ಮಾಡ್ತೇವೆ-
ಹೊಸ ದಿವ್ಯಾಸ್ತ್ರ!
ರಾಜಕೀಯ ಭೀಷ್ಮ
ದೇವೇಗೌಡರು....
ಕರ್ನಾಟಕದ
ಚಾಣಾಕ್ಷ
ರಾಜಕಾರಣಿ...!
ಮಾಡಿದರೂ
ಮಾಡಬೌದು
ಛಲದಂಕ ಮಲ್ಲರು!
***
ಎಚ್ಚರಾ...
ಉದ್ವೇಗದ
ಮಾತುಗಳಿಂದ
ಈ ಜೀವನ
ನಡೆಯಲಾರದು
ರಾಜಕಾರಣಿಗಳೇ
ಎಚ್ಚರ...
ಸಹಜ
ಜೀವನದ
ಮಾತುಗಳರಳಿ
ಬರಲಿ ಆಗ-
ಎಲ್ಲರ ಬಾಳು
ಸುಂದರ!
***
ಗೆಲುವು-ಸೋಲು
ಮನುಷ್ಯ
ತಾನು ಯಾವ
ದುರ್ಗುಣಗಳಿಂದ
ಜಯಿಸಿದ್ದೇನೆ
ಎಂದು ಹೆಮ್ಮೆ
ಪಡುತ್ತಾನೋ....
ಅವಶ್ಯ
ಆ ಗುಣಗಳೇ
ಆತನನ್ನು-
ಕೊನೆಗಾಲದಲ್ಲಿ
ತಿರುಗುಬಾಣವಾಗಿ
ಮುಳುಗಿಸಿಬಿಡುತ್ತವೆ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
