ಒಂದಿಷ್ಟು ಹನಿಗಳು...

ಒಂದಿಷ್ಟು ಹನಿಗಳು...

ಕವನ

ಕುರುಕ್ಷೇತ್ರ 

ಜಗದಲಿ

ಈ 

ಜೀವನವೇ

ಒಂದು

ದೊಡ್ಡ

ಕುರುಕ್ಷೇತ್ರ... 

 

ನಮ್ಮೆಲ್ಲರ

ಹೋರಾಟದ

ಸೋಲು-ಗೆಲುವು

ಇಲ್ಲಿ

ನಿಮಿತ್ತ

ಮಾತ್ರ!

***

ದುರಂತ! 

ಇತಿಹಾಸದಿಂದ

ಈ 

ಮನುಜ

ಕಲಿಯಲಾರ

ಎಂದೂ

ಪಾಠ...

 

ಮತ್ತೆ

ಅದೇ

ಅರಿಷ್ಡ್ವರ್ಗಗಳ

ಅಧೀನನಾಗಿ

ಆಡುತಿರುವ

ಆಟ!

***

ಕನ್ನಡ ತಾಯೇ 

ಕನ್ನಡ ಮಕ್ಕಳಿಗೆ

ಬುದ್ಧಿಕೊಟ್ಟು

ನೀನು

ಕಾಯೇ

ಓ ನನ್ನ

ಕನ್ನಡ ತಾಯೇ...

 

ನಿನ್ನನವಮಾನ

ಗೊಳಿಸಿದವರಿಗೆ

ಬುದ್ಧಿಯ

ಕಲಿಸು;

ನೀ ಜಗದ

ಮಾಯೇ!

***

ಹರಿಕಾರ...! 

ವಿಚಿತ್ರ

ಸುದ್ಧಿ-

ದಕ್ಷಿಣ

ಕೊರಿಯಾ

ರೋಬೊ

ಆತ್ಮಹತ್ಯೆ...!

 

ಆತ್ಮಹತ್ಯೆಯ

ಮಹಾ

ಹರಿಕಾರ-

ಇದ ತಯಾರಿಸಿದವ

ಮಾನವನಲ್ಲವೇ

ಮತ್ತೇ?

***

ನಡುಪಂಥೀಯ..

ಅಭಿಮಾನದ

ಪಂಥಗಳ

ಸೆಲೆಯೊಂದು

ಅಂತರ್ಗತವಾಗಿ

ಹರಿಯುತಿದೆ

ಸತತಾ...

 

ನೀ ಎಡವೋ

ಇಲ್ಲಾ ಬಲವೋ?

ಎಂದು ಕೇಳುತಿದೆ-

ಎರಡೂ ಅಲ್ಲದ

ನಡುಪಂಥೀಯರನು

ನಗುತಾ!

***

ಸಂತ-ದುಷ್ಟ ಪಂಥ 

ಅರಿಷ್ಡ್ವರ್ಗಗಳೆಲ್ಲಾ

ಒಂದು

ಪರಿಮಿತಿಯಲ್ಲಿದ್ದರೆ-

ಅವನಾಗುವ

ಈ ಲೋಕದ

ಸಂತ...

 

ಮಿತಿ

ಮೀರಿದರೆ

ಆಗ

ಅವ ಹಿಡಿಯುವ

ಈ ಲೋಕದ

ದುಷ್ಟ ಪಂಥ!

-ಕೆ. ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್