ಒಂದಿಷ್ಟು ಹನಿಗಳು...

ಒಂದಿಷ್ಟು ಹನಿಗಳು...

ಕವನ

ನಾನು; ನಾವು...

'ನಾನು,ನಾನು'

ಎಂದರೆ ನಲುಗಿ

ಹೋಗುವಿರಿ;

'ನಾವು,ನಾವು'

ಎಂದರೆ ಮೇಲೆದ್ದು

ವಿಜೃಂಭಿಸುವಿರಿ....

 

ಈ ಸತ್ಯವನರಿತ

ರಾಜಕಾರಣಿಗಳೇ-

ಹಣ ಹೊಡೆಯುವಾಗ-

'ನಾನು'

ಮತಗಳಿಸುವಾಗ

'ನಾವು' ಎಂದುಬಿಡುವಿರಿ!

***

ಭಾಗ್ಯಾದಾ ಲಕ್ಷ್ಮೀ...

ಭಾಗ್ಯಾದ ಲಕ್ಷ್ಮೀ

ಬಾರಮ್ಮಾ...

ನಮ್ಮ ಮನೆಯನು

ಬಿಟ್ಟು ಎಲ್ಲಿಗೂ

ಹೋಗದೇ

ಇರಮ್ಮಾ...

 

ಎಂದೊಕ್ಕೊರಲಿನಲಿ

ಎಲ್ಲಾ ಭಕ್ತರೂ

ಭಜಿಸಿದರೂ

ಆಕೆ ಚಂಚಲೆ;

ಜಗತ್ತನ್ನೇ 

ಸುತ್ತುತಿರುವಳಮ್ಮಾ!

***

ದುರಂತ 

ಜೀವ

ಉಳಿಸುವ

ಆಸ್ಪತ್ರೆಯಲ್ಲೇ-

ಜೀವ

ಕಾಪಾಡುವವರ

ಕ್ರೂರ ಹತ್ಯೆ...

 

ಇಂತಹ ಸ್ಥಳಗಳಲ್ಲೇ

ದೇವರಿಗೇ

ಸುರಕ್ಷತೆ 

ಇಲ್ಲವೆಂದರೇ-

ಇನ್ನು ಸಾಮಾನ್ಯ

ಹೆಣ್ಣುಗಳ ಕಥೆ?

***

ಸೈನಿಕರ ಮುಷ್ಕರ 

ಓ ಜಗತ್ತಿನ

ಸೈನಿಕರೇ-

ಯಾವ

ಯುದ್ಧವನು

ಮಾಡಲೂ

ತೆರಳದಿರಿ...

 

ಮಾನವ

ಕಲ್ಯಾಣದ ಹೊರತು;

ಬೇರೆಲ್ಲಾ

ಯುದ್ಧಗಳಿಗೂ

ಮುಷ್ಕರ

ಹೂಡಿಬಿಡಿ!

***

ಬೆಂಗಾವಲು 

ಹೆಚ್ ಡಿ ಕೆ-

ನನ್ನ ವಿರುದ್ಧ

ತನಿಖೆಗೆ

ರಾಜ್ಯಪಾಲರ

ಒಪ್ಪಿಗೆಯೇ

ಬೇಡಾ...

 

ಕೇಂದ್ರದ

ಭೀಷ್ಮನೇ

ಎನ್ನ

ಬೆಂಗಾವಲಿಗಿರುವಾಗ

ಹೆದರಿಕೆ ಏಕೋ

ಮೂಢಾ!

***

ವಿಭ್ರಮೆ 

ಸಿ ಎಂ-

ನನ್ನ ರಾಜಕೀಯ

ಮುಗಿಸುವುದು

ವಿರೋಧ

ಪಕ್ಷಗಳ

ಮಹಾ ಭ್ರಮೆ...

 

ಈ ಅಹಂಕಾರ

ಎಂಬ

ಪೆಟ್ರೋಲೇ

ರಾಜಕೀಯ

ವಾಹನದ 

ಚಲನಾ ವಿಭ್ರಮೆ!

 -ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್